ಭರತನಾಟ್ಯ, ರೂಪಕದಲ್ಲಿ ಕಿರಿ-ಹಿರಿ ಪ್ರತಿಭೆಗಳ ಮಿಂಚು


Team Udayavani, Jun 21, 2019, 5:00 AM IST

1

ಸೊಗಸಾದ ನಾಟ್ಯ, ಅದಕ್ಕೆ ತಕ್ಕ ಲಾಸ್ಯ, ಸುಂದರ ಮುಖವರ್ಣಿಕೆ, ಉತ್ತಮ ವೇಷ, ಮಕ್ಕಳ ಅದ್ಭುತ ಅಭಿನಯ ಇವು ಅಷ್ಟೂ ಪ್ರೇಕ್ಷಕರನ್ನು ಕದಲದಂತೆ ನಿಲ್ಲಿಸಿದ್ದು ಪುತ್ತೂರು ವೈಷ್ಣವಿ ನಾಟ್ಯಾಲಯದ ಬೆಳ್ಳಾರೆ ಶಾಖೆಯ ವಾರ್ಷಿಕೊತ್ಸವದ ನೃತ್ಯಸಂಭ್ರಮದಲ್ಲಿ. 3 ನೇ ತರಗತಿಯಿಂದ ಪದವಿ ವಿದ್ಯಾರ್ಥಿಗಳ ವರೆಗಿನ ತಂಡವನ್ನು ತರಬೇತುಗೊಳಿಸಿ, ಭರತನಾಟ್ಯ, ಜನಪದ ನೃತ್ಯ ಮತ್ತು ಅಯಪ್ಪ ಸ್ವಾಮಿಯ ರೂಪಕವನ್ನು ಸೊಗಸಾಗಿ ಪ್ರಸ್ತುತ ಪಡಿಸಿ ರಂಗದಲ್ಲಿ ಮಿನುಗುವಂತೆ ಮಾಡಿದ ಕೀರ್ತಿ ಗುರುಗಳಾದ ವಿ| ಯೋಗೀಶ್ವರಿ ಜಯಪ್ರಕಾಶ್‌ ಅವರದ್ದು. ನಿರೂಪಣೆ ಮತ್ತು ನಟುವಾಂಗದಲ್ಲಿ ಕೂಡ ಮಿಂಚಿದ ಯೋಗಿಶ್ವರಿ ತನ್ನ ಸ್ವರ ಮಾಧುರ್ಯದಿಂದ ಚಕಿತಗೊಳಿಸಿದರು.

ಪ್ರಥಮವಾಗಿ ಮೂಡಿಬಂದ ಅಹದಿ ರಾಗ, ಆದಿ ತಾಳದ ಪುಷ್ಪಾಂಜಲಿ ಮತ್ತು ಗಣಪತಿ ಸ್ತುತಿಯಲ್ಲಿ ಸೀನಿಯರ್‌ ವಿದ್ಯಾರ್ಥಿಗಳು ಮನ ಸೆಳೆದರು. ಅನಂತರ ರೇವತಿ ರಾಗದ ಭೋ ಶಂಭೋ ನೃತ್ಯಕ್ಕೆ ಜ್ಯೂನಿಯರ್‌ ವಿದ್ಯಾರ್ಥಿಗಳಿಗೆ ಸಭಿಕರು ಶರಣಾಗಬೇಕಾಯಿತು. ಗಣಪತಿ ಹಾಡು, ಆನೆ ಬಂತಮ್ಮ, ಗಜವದನ ಬೇಡುವೆ, ಕೃಷ್ಣನ ಕುರಿತ ಹರಿ ಆಡಿದನೆ ನೃತ್ಯಗಳು ಮುದ್ದು ಮಕ್ಕಳ ಮುಗ್ಧ ಭಾವಾಭಿವ್ಯಕ್ತಿಗೆ ಹಿಡಿದ ಕೈಗನ್ನಡಿಯಾಗಿತ್ತು. ಮಾಳಿಕೆ ರಾಗದ ರಂಜನಿ ಮಾಲ, ಸಾರಥಿ ರಾಗದ ಜತಿಸ್ವರ, ಕೃಷ್ಣನ ಕೊಳಲಿನ ಸ್ವರವೆ ಪ್ರಮುಖವಾಗಿರುವ ವೃಂದಾವನೆ ವೇಣುವಾಜೆ ನೃತ್ಯಗಳು ಅಪೇಕ್ಷೆಗೆ ಮೀರಿದ್ದಾಗಿತ್ತು. ಸುಬ್ರಹ್ಮಣ್ಯನ ಕುರಿತ ಕೌಸ್ತುಂ, ಭಜೇ ಮೃದಂಗ್‌ ಎನ್ನುವ ಮರಾಠಿ ಭಜನ್‌, ಶಿವನ ಕುರಿತ ತಮಿಳು ನೃತ್ಯಗಳಿಗೆ ಪ್ರೇಕ್ಷಕರು ತಲೆದೂಗಿದರು.

ಮೂಡುತ ರವಿ ರಂಗು ಚೆಲ್ಲೆ„ತೆ ಭಾವಗೀತೆಗೆ ಹಾಕಿದ ಹೆಜ್ಜೆ ಮತ್ತು ಸುಗ್ಗಿಕಾಲ ಹಿಗ್ಗಿ ಬಂದಿತೋ, ಚೆಲುವಯ್ಯ ಚೆಲುವೋ ಕೋಲಾಟದ ನೃತ್ಯದ ಯಶಸ್ಸಿಗೆ ಚಪ್ಪಾಳೆಯೇ ಸಾಕ್ಷಿಯಾಯಿತು. ಆನಂದ ತಾಂಡವೇಶ್ವರ‌ ಎಂಬ ಶಿವನೃತ್ಯ, ನಂದಾಗೋಪ ನಂದನಾ ವೇಣುಲೋಲ ಎಂಬ ಲಘು ಶಾಸ್ತ್ರೀಯ ನೃತ್ಯ, ಹನುಮಂತ ದೇವ ನಮೋ ಎಂಬ ಸಣ್ಣ ರೂಪಕ ಮನಸೂರೆಗೊಂಡಿತು.

ಕೊನೆಗೆ ಮೂಡಿಬಂದ ಅಯ್ಯಪ್ಪನ ನೃತ್ಯ ರೂಪಕವಂತೂ ವಿದ್ಯಾರ್ಥಿಗ‌ಳ ನಾಟ್ಯ ಪ್ರತಿಭೆಯ ಜೊತೆಗೆ ಭಾವಪೂರಿತ ಅಭಿನಯ ಚತುರತೆಗೆ ಮಾರು ಹೋಗಬೇಕಾಯಿತು. ಕವಯತ್ರಿ ಅಶ್ವಿ‌ನಿ ಕೋಡಿಬೈಲು ರಚನೆಯ ಈ ರೂಪಕಕ್ಕೆ ರಾಗ ಸಂಯೋಜನೆ ಮಾಡಿ ಹಾಡಿದ ವಿ|ವೆಳ್ಳಿಕ್ಕೋತ್‌ ವಿಷ್ಣು ಭಟ್‌ ಪ್ರಶಂಶೆಗೆ ಪಾತ್ರರಾದರು. ಸರಳ ಸುಂದರ ಸಂಯೋಜನೆಯ ರೂಪಕದಲ್ಲಿ ಅಯ್ಯಪ್ಪನಾಗಿ ಬಂದ ಸ್ನೇಹಾ ಭಟ್‌ ಉತ್ತಮ ನಾಟ್ಯ ಚಾತುರ್ಯವನ್ನು ಮೆರೆದರು. ಮಹಿಷಿಯಾಗಿ ಹೇಮಸ್ವಾತಿ ನೃತ್ಯಾಭಿನಯ ಮಂತ್ರಮುಗ್ಧಗೊಳಿಸಿತು. ಶಿವ ಮತ್ತು ಮೋಹಿನಿಯಾಗಿ ದೇವಿಕಾ ಮತ್ತು ಅವನಿ ತಾವೇನು ಕಮ್ಮಿ ಇಲ್ಲ ಎಂಬುದನ್ನು ನಿರೂಪಿಸಿದರು. ಪಂದಲದ ರಾಜನಾಗಿ ಕವನಾ, ರಾಣಿಯಾಗಿ ಅಭಿಜ್ಞಾ ಮತ್ತು ಮಂತ್ರಿಯಾಗಿ ಬಂದ ರಕ್ಷಿತಾ ಇವರು ಸರಳ ಶುದ್ಧ ಭಾವಭಿನಯದಿಂದ ಮನಗೆದ್ದರು. ಋಷಿಮುನಿಗಳು, ನರ್ತಕಿಯರು, ಅಯ್ಯಪ್ಪ ಮತ್ತು ಸುಬ್ರಹ್ಮಣ್ಯನ ಬಾಲ್ಯದ ತುಂಟಾಟವನ್ನು ಶರ್ಮಿಳಿ ಮತ್ತು ಶರಧಿ ಸೊಗಸಾಗಿ ಪ್ರಸ್ತುತ ಪಡಿಸಿದರು. ಭಸ್ಮಾಸುರನಾಗಿ ಅಂಕಿತಾ ಕೂಡ ತನ್ನ ಪಾತ್ರವನ್ನು ಸ್ಮರಣೀಯವಾಗಿಸಿದರು.

ಹಾಡುಗಾರಿಕೆಯಲ್ಲಿ ವಿ|ವಸಂತ ಕುಮಾರ್‌ ಗೋಸಾಡ, ಮೃದಂಗದಲ್ಲಿ ವಿ| ಗೀತೇಶ್‌ ಕುಮರ್‌ ನೀಲೆಶ್ವರ, ಕೊಳಲಿನಲ್ಲಿ ವಿ| ರಾಜಗೋಪಾಲ್‌ ಕಾಂಞಂಗಾಡ್‌, ಕೀಬೋರ್ಡ್‌ನಲ್ಲಿ ಬಾಬಣ್ಣ ಪುತ್ತೂರು, ರಿದಂ ಪ್ಯಾಡ್‌ನ‌ಲ್ಲಿ ಸಚಿನ್‌ ಪುತ್ತೂರು ಸಹಕರಿಸಿದರು.

ಶಶಿಕುಮಾರ್‌ ಬಿ.ಎನ್‌.

ಟಾಪ್ ನ್ಯೂಸ್

6-ptr

Puttur: ಬಸ್ – ಬೈಕ್‌ ಅಪಘಾತ; ಸವಾರ ಸಾವು

Parliament; Pushing in front of Parliament House; Two MPs injured, allegations against Rahul Gandhi

Parliament; ಸಂಸತ್‌ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್‌ ವಿರುದ್ದ ಆರೋಪ

BBK11: ಕೊನೆಗೂ ಬಿಗ್‌ ಬಾಸ್‌ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್‌ ಸುರೇಶ್

BBK11: ಕೊನೆಗೂ ಬಿಗ್‌ ಬಾಸ್‌ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್‌ ಸುರೇಶ್

ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು

ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್

28 cricketers who said goodbye in 2024; Here is the list

Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ

ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ

Upendra: ʼಯುಐʼಗೆ ಸ್ಯಾಂಡಲ್‌ವುಡ್‌ ಸಾಥ್‌; ಉಪೇಂದ್ರ ಚಿತ್ರ ನೋಡಲು ಕಾತುರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-1

ಪಾಡ್ದನದೆಡೆಗೆ ನಿರಾಸಕ್ತಿ- ಜಾನಪದ ಆಕಾಡೆಮಿ ರಾಜ್ಯಪ್ರಶಸ್ತಿ ಪುರಸ್ಕೃತೆ ಅಪ್ಪಿ ಪಾಣಾರ ಕಳವಳ

19

ಸಂಪ್ರದಾಯಬದ್ಧವಾಗಿ ರಂಗಶಿಸ್ತಿನೊಂದಿಗೆ ಹೊಸತನ ಅಳವಡಿಸಿಕೊಂಡರೆ ತಪ್ಪಿಲ್ಲ

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

Ropesh Shetty: ಹಳ್ಳಿಯ ಸೊಗಡಿನಲ್ಲಿ ರೂಪೇಶ್‌ ಜೈಕಾರ !

1-trrr

Yakshagana: ತೆಂಕುತಿಟ್ಟಿನ “ರಂಗಸ್ಥಳದ ರಾಜ’ʼ ಅರುವ ಕೊರಗಪ್ಪ ಶೆಟ್ಟಿ

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

Idu Entha Lokavayya: “ಕೋಸ್ಟಲ್‌” ನಿಂದ ಕರುನಾಡು!

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

6-ptr

Puttur: ಬಸ್ – ಬೈಕ್‌ ಅಪಘಾತ; ಸವಾರ ಸಾವು

Parliament; Pushing in front of Parliament House; Two MPs injured, allegations against Rahul Gandhi

Parliament; ಸಂಸತ್‌ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್‌ ವಿರುದ್ದ ಆರೋಪ

BBK11: ಕೊನೆಗೂ ಬಿಗ್‌ ಬಾಸ್‌ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್‌ ಸುರೇಶ್

BBK11: ಕೊನೆಗೂ ಬಿಗ್‌ ಬಾಸ್‌ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್‌ ಸುರೇಶ್

ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು

ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು

1

Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.