![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jun 24, 2019, 3:00 AM IST
ಕೆಲ ದಿನಗಳ ಹಿಂದಷ್ಟೇ ನಟ ನೀನಾಸಂ ಸತೀಶ್ ಅವರು, ನಿರ್ಮಾಪಕ ಉದಯ್ ಮೆಹ್ತಾ ನಿರ್ಮಾಣದ “ಬ್ರಹ್ಮಚಾರಿ’ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ ಎಂಬ ಸುದ್ದಿ ಕುರಿತು ಹೇಳಲಾಗಿತ್ತು. ಅದಾದ ಬಳಿಕ ಆ ಚಿತ್ರದಲ್ಲಿ ನೀನಾಸಂ ಸತೀಶ್ ಅವರಿಗೆ ಜೋಡಿಯಾಗಿ ಅದಿತಿ ಪ್ರಭುದೇವ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಕೂಡ ಹೊರಬಿದ್ದಿತ್ತು.
ಈಗ ಹೊಸ ಸುದ್ದಿಯೆಂದರೆ, “ಬ್ರಹ್ಮಚಾರಿ’ ಚಿತ್ರದ ಟೀಸರ್ ಹೊರಬಂದಿದೆ. ಹೌದು, ಇತ್ತೀಚೆಗೆ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಹಿರಿಯ ಕಲಾವಿದ ದತ್ತಣ್ಣ ಅವರು ಚಿತ್ರದ ಟೀಸರ್ ಬಿಡುಗಡೆ ಮಾಡಿ, ಚಿತ್ರದ ಕುತೂಹಲ ಮತ್ತು ಆ ಪಾತ್ರದೊಳಗೆ ಸಾಕಷ್ಟು ಮಜ ಇರುವ ಬಗ್ಗೆ ಹೇಳಿಕೊಂಡರು. ಇನ್ನು, “ಬ್ರಹ್ಮಚಾರಿ’ ಚಿತ್ರದ ಟೀಸರ್ ಬಿಡುಗಡೆಗೆ ಕಾರಣವೂ ಇತ್ತು.
ನೀನಾಸಂ ಸತೀಶ್ ಅವರ ಹುಟ್ಟುಹಬ್ಬ ಕೂಡ ಇದ್ದುದರಿಂದ ಅಂದೇ, ನಿರ್ಮಾಪಕ ಉದಯ್ ಕೆ.ಮೆಹ್ತಾ ಅವರು “ಬ್ರಹ್ಮಚಾರಿ’ ಚಿತ್ರದ ಟೀಸರ್ ಲಾಂಚ್ ಮಾಡುವ ಯೋಚನೆ ಮಾಡಿದ್ದರು. ಹಾಗಾಗಿ, ಅಂದು ಅದ್ಧೂರಿಯಾಗಿಯೇ ಚಿತ್ರದ ಟೀಸರ್ ಹೊರಬಂದಿದೆ. ಈ ಚಿತ್ರದ ಶೀರ್ಷಿಕೆ ಎಷ್ಟು ಕುತೂಹಲ ಕೆರಳಿಸಿದೆಯೋ, ಅಷ್ಟೇ ಕುತೂಹಲ ಚಿತ್ರದ ಅಡಿಬರಹದಲ್ಲೂ ಇದೆ.
ಅದೇನೆಂದರೆ, “100% ವರ್ಜಿನ್’ ಎಂಬುದು. ಇಲ್ಲೊಂದು ವಿಶೇಷ ಮನರಂಜನೆ ಪ್ಯಾಕೇಜ್ ಇದೆ ಎಂಬುದನ್ನು ನಿರ್ದೇಶಕ ಚಂದ್ರಮೋಹನ್ ಅವರು ಹೇಳಿಬಿಟ್ಟಿದ್ದಾರೆ. ಇಲ್ಲೂ ಸಹ ತರಹೇವಾರಿ ಪಾತ್ರಗಳು ಕಾಣಿಸಿಕೊಳ್ಳಲಿವೆ. ಸದ್ಯಕ್ಕೆ ಟೀಸರ್ ಹೊಸದೊಂದು ಕುತೂಹಲ ಹುಟ್ಟುಹಾಕಿದ್ದು, ಚಿತ್ರದಲ್ಲೂ ನಾನಾ ವಿಶೇಷಗಳು ತುಂಬಿರಲಿವೆ ಎಂಬುದನ್ನು ಚಿತ್ರತಂಡ ಹೆಮ್ಮೆಯಿಂದ ಹೇಳಿಕೊಂಡಿದೆ.
ನಿರ್ಮಾಪಕ ಉದಯ್ ಕೆ. ಮೆಹ್ತಾ ಅವರು ಈಗಾಗಲೇ ಚಿರಂಜೀವಿ ಸರ್ಜಾ ಅಭಿನಯದ “ಸಿಂಗ’ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಆ ಚಿತ್ರದಲ್ಲೂ ಅದಿತಿ ಪ್ರಭುದೇವ ಅವರೇ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈಗ “ಬ್ರಹ್ಮಚಾರಿ’ ಚಿತ್ರದಲ್ಲೂ ಅವರು ನಾಯಕಿ. ಇನ್ನು, ಇದೇ ಮೊದಲ ಬಾರಿಗೆ ಸತೀಶ್ ನೀನಾಸಂ ಹಾಗು ಅದಿತಿ ಪ್ರಭುದೇವ ಅವರು ತೆರೆ ಹಂಚಿಕೊಳ್ಳುತ್ತಿದ್ದಾರೆ. ಅದೇನೆ ಇರಲಿದ, “ಬ್ರಹ್ಮಚಾರಿ’ ಚಿತ್ರದಲ್ಲಿ ಹಾಸ್ಯವೇ ಪ್ರಧಾನ ಎಂಬುದು ನಿರ್ದೇಶಕರ ಮಾತು.
Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್
Mallu Jamkhandi: ʼವಿದ್ಯಾ ಗಣೇಶʼ ನಂಬಿ ಬಂದವರು
Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನಂಜಯ – ಧನ್ಯತಾ: ಮದುವೆ ಬಳಿಕ ನವ ಜೋಡಿ ಹೇಳಿದ್ದೇನು?
Devil Teaser: ಚಾಲೆಂಜ್.. ಹೂಂ.. ಟೀಸರ್ನಲ್ಲೇ ʼಡೆವಿಲ್’ ಲುಕ್ ಕೊಟ್ಟ ʼದಾಸʼ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ
You seem to have an Ad Blocker on.
To continue reading, please turn it off or whitelist Udayavani.