72.4 ಕೋ. ರೂ. ವೆಚ್ಚದಲ್ಲಿ 24×7 ಶುದ್ಧ ನೀರು ಪೂರೈಕೆ: ಶಾಸಕ ಮಠಂದೂರು


Team Udayavani, Jun 29, 2019, 5:00 AM IST

2

ಪುತ್ತೂರು: ಎಡಿಬಿ ಪ್ರಾಯೋ ಜಿತ 72.4 ಕೋಟಿ ರೂ. ವೆಚ್ಚದ 2ನೇ ಹಂತದ ಸಮಗ್ರ ಕುಡಿಯುವ ನೀರು ಸರಬರಾಜು ಯೋಜನೆ ಪ್ರಗತಿಯಲ್ಲಿದ್ದು, ಕಾಮಗಾರಿ ಪೂರ್ಣಗೊಂಡ ಬಳಿಕ ನಗರ ದಲ್ಲಿ ದಿನದ 24 ತಾಸು ಶುದ್ಧ ಕುಡಿಯುವ ನೀರು ಪೂರೈಸಲಾಗುವುದು ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ನಗರಸಭೆ ಸಭಾಂಗಣದಲ್ಲಿ ಶುಕ್ರವಾರ ನಡೆದ ನಾನಾ ಸವಲತ್ತುಗಳ ವಿತರಣೆ ಸಮಾರಂಭದಲ್ಲಿ ಅವರು ಮಾತನಾಡಿ ದರು. ನಗರದಲ್ಲಿ 60 ಸಾವಿರಕ್ಕೂ ಅಧಿಕ ಜನಸಂಖ್ಯೆ ಇದ್ದು, ಪ್ರಸ್ತುತ ಉಪ್ಪಿನಂಗಡಿ ಕುಮಾರಧಾರಾದಿಂದ ದಿನನಿತ್ಯ 6.5 ಎಂಎಲ್ಡಿ ನೀರು ಹಾಗೂ ಕೊಳವೆ ಬಾವಿಯಿಂದ ನೀರು ಪೂರೈಸಲಾಗು ತ್ತಿದ್ದರೂ, ಬೇಡಿಕೆಗೆ ತಕ್ಕಂತೆ ಪೂರೈಕೆಯ ಕೊರತೆ ಇದೆ ಎಂದರು.

ಒಳಚರಂಡಿ ಯೋಜನೆ ಅನುಷ್ಠಾನಕ್ಕೆ ಆಗ್ರಹ
ನಗರಕ್ಕೆ ಒಳಚರಂಡಿ ಯೋಜನೆ ಅನು ಷ್ಠಾನಿಸುವ ಸಲುವಾಗಿ ಬೆಂಗಳೂರಿನಲ್ಲಿ ನಡೆದ ನಗರಾಭಿವೃದ್ಧಿ ಮತ್ತು ಪೌರಾಡಳಿತ ಸಚಿವಾಲಯದ ಉನ್ನತ ಮಟ್ಟದ ಸಭೆಯಲ್ಲಿ ಬೇಡಿಕೆ ಇರಿಸಿದ್ದಾರೆ. ಸುಮಾರು 125 ಕೋಟಿ ರೂ. ಅನುದಾನದ ಅಗತ್ಯವಿದೆ. ಭೂಸ್ವಾಧೀನ ಆಗಬೇಕಾಗುತ್ತದೆ. ನಗರದ ಜನ ಸಹಕರಿಸಿದರೆ ಯೋಜನೆ ಅನುಷ್ಠಾನ ಸಾಧ್ಯ ಎಂದವರು ತಿಳಿಸಿದರು.

ಸದುಪಯೋಗಪಡಿಸಿಕೊಳ್ಳಿ
ನಗರ ಬಡತನ ನಿರ್ಮೂಲನಾ ಕೋಶದಿಂದ ನೀಡಲಾಗುವ ನಾನಾ ಯೋಜನೆಗಳ ಚೆಕ್‌ಗಳನ್ನು ವಿತರಿಸಿದ ಶಾಸಕರು, ಸಮಾಜದ ಕಟ್ಟಕಡೆಯ ವ್ಯಕ್ತಿಯು ಸ್ವಾಭಿಮಾನದಿಂದ ಜೀವನ ಸಾಗಿಸಲು ಸರಕಾರ ಪ್ರತೀ ವರ್ಷ ಸಾವಿ ರಾರು ಕೋಟಿ ರೂ. ಖರ್ಚು ಮಾಡು ತ್ತದೆ. ಇದನ್ನು ಫಲಾನುಭವಿಗಳು ಅರಿತು ಕೊಂಡು ಸವಲತ್ತುಗಳ ಸದು ಪಯೋಗ ಮಾಡಿಕೊಳ್ಳಬೇಕು. ಶೇ. 25 ಅನುದಾನ ವನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಮೀಸಲಿಡಲಾಗುತ್ತದೆ. ಇದರ ಉದ್ದೇಶ ಸಮಾಜದಲ್ಲಿ ಆರ್ಥಿಕ, ಸಾಮಾಜಿಕ ಸಮಾನತೆ ತರುವುದಾಗಿದೆ ಎಂದರು.

ಮಾದರಿ ಆಡಳಿತಕ್ಕೆ ಆದ್ಯತೆ
4 ದಶಕಗಳ ಹಿಂದೆ ಉಡುಪಿ ಮತ್ತು ಪುತ್ತೂರು ನಗರಗಳಲ್ಲಿ ಆದರ್ಶಯುತ ಆಡಳಿತ ವ್ಯವಸ್ಥೆ ಇತ್ತು ಮತ್ತು ರಾಜ್ಯಕ್ಕೆ ಇವು ಮಾದರಿಯಾಗಿದ್ದವು. ಅದೇ ಆದರ್ಶವನ್ನು ಈಗ ನಾವು ಮತ್ತೆ ಅನುಷ್ಠಾನಕ್ಕೆ ತರಬೇಕಿದೆ. ಆದರೆ ನಗರಸಭೆಯ ಚುನಾಯಿತ ಪ್ರತಿನಿಧಿಗಳು ಆಡಳಿತ ವ್ಯವಸ್ಥೆ ರಚಿಸಲು ಕಾಯಬೇಕಾದ ಸ್ಥಿತಿ ಇದೆ. ಆ ದಿನ ಬೇಗ ಬರಲಿ ಎಂದು ಆಶಿಸಿದ ಶಾಸಕರು, ಕೇಂದ್ರ ಸರಕಾರದ ಸ್ವಚ್ಛಮೇವ ಜಯತೇ ಘೋಷಣೆಯಂತೆ ಸ್ವಚ್ಛ ನಗರ,ಸ್ವಚ್ಛ ಆಡಳಿತ ಬರಬೇಕಿದೆ ಎಂದರು.

1.5 ಕೋಟಿ ರೂ. ವಿತರಣೆ
ನಗರಸಭೆ ಪೌರಾಯುಕ್ತರಾದ ರೂಪಾ ಶೆಟ್ಟಿ ಮಾತನಾಡಿ, ಎಸ್‌ಎಫ್‌ಸಿ, ನಗರಸಭೆ ಅನುದಾನ ಸೇರಿದಂತೆ ಬಡತನ ನಿರ್ಮೂಲನಾ ಯೋಜನೆ ಯಲ್ಲಿ 2018- 19ನೇ ಸಾಲಿನಲ್ಲಿ ಸುಮಾರು ಒಂದೂವರೆ ಕೋಟಿ ರೂ.ಗಳನ್ನು ವಿತರಿಸಲಾಗಿದೆ ಎಂದು ಹೇಳಿದರು. ಸಮಾಜ ಕಲ್ಯಾಣಾಧಿಕಾರಿ ಗಾಯತ್ರಿ ಮಾತನಾಡಿದರು. ನಗರಸಭೆ ಸಮುದಾಯ ಸಂಘಟನಾಧಿಕಾರಿ ಚಂದ್ರ ಕುಮಾರ್‌ ಸ್ವಾಗತಿಸಿ, ವಂದಿಸಿದರು.

ಫ‌ಲಾನುಭವಿಗಳಿಗೆ ಚೆಕ್‌, ಪ್ರಮಾಣಪತ್ರ
ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ನಾನಾ ಯೋಜನೆಗಳ ಚೆಕ್‌ ವಿತರಿಸ ಲಾಯಿತು. ಶೇ. 24.10 ಎಸ್‌ಎಫ್‌ಸಿ ನಿಧಿಯಲ್ಲಿ ಶೌಚಾಲಯ ರಚನೆಗೆ 4 ಜನರಿಗೆ ತಲಾ 15,000 ರೂ., ಜಲ ಸಂಪರ್ಕ ಸಹಾಯಧನವನ್ನು ತಲಾ 6 ಸಾವಿರದಂತೆ ಮೂವರಿಗೆ, ವಿದ್ಯುತ್‌ ಸಂಪರ್ಕಕ್ಕೆ ತಲಾ 13,000 ರೂ.ಗಳಂತೆ 6 ಫಲಾನುಭವಿಗಳಿಗೆ ಚೆಕ್‌ ವಿತರಿಸಲಾ ಯಿತು. ನಗರಸಭೆಯ 24.10 ಶೇಕಡಾ ನಿಧಿಯಡಿ ಪೌರಕಾರ್ಮಿಕರ ಮನೆ ದುರಸ್ತಿಗೆ 20,000 ರೂ.ಗಳಂತೆ ಇಬ್ಬರಿಗೆ, 2016-17ನೇ ಸಾಲಿನ ಶೇ. 24.10 ಎಸ್‌ಎಫ್‌ಸಿ ನಿಧಿಯಲ್ಲಿ ಆಟೋ ರಿಕ್ಷಾ ಖರೀದಿಗೆ ಮೂವರಿಗೆ ಒಟ್ಟು 3 ಲಕ್ಷ ರೂ. ನೀಡ ಲಾಯಿತು. ತಲಾ 2,500 ರೂ.ಗಳಂತೆ 58 ವಿಕಲ ಚೇತನರಿಗೆ ಶೇ. 3 ಎಸ್‌ಎಫ್‌ಸಿ ನಿಧಿಯಲ್ಲಿ ಹಣ ನೀಡಲಾಯಿತು. 8 ಮಂದಿಗೆ ವಾಹನ ಚಾಲನ ಪ್ರಮಾಣಪತ್ರ, 4 ಮಂದಿಗೆ ವಾಹನ ಚಾಲನ ತರಬೇತಿ ಆದೇಶ ವಿತರಿಸಲಾಯಿತು. ತರಬೇತಿಗಾಗಿ 29 ಅರ್ಜಿಗಳು ಬಂದಿರುವುದನ್ನು ಪ್ರಕಟಿಸಲಾಯಿತು. ಡೇ ನಲ್ಮ್ ಯೋಜನೆ ಯ ಅಡಿಯಲ್ಲಿ 2017-18ನೇ ಸಾಲಿ ನಲ್ಲಿ ಬ್ಯೂಟೀಷಿಯನ್‌ ತರಬೇತಿ ಪಡೆದ 10 ಮಂದಿಗೆ ಪ್ರಮಾಣಪತ್ರ ವಿತರಿಸಲಾಯಿತು.

ಟಾಪ್ ನ್ಯೂಸ್

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

dhankar (2)

Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ

Is Ashwin made a hasty decision: Is this how much Kohli is worth in the dressing room?

BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ :‌ ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8-belthangady

Belthangady: ಕ್ರಿಸ್ಮಸ್‌ ಹಬ್ಬಕ್ಕೆ ವಿದ್ಯುತ್ ಅಲಂಕಾರ ಮಾಡುವ ವೇಳೆ ಶಾಕ್: ಬಾಲಕ ಸಾವು

6-ptr

Puttur: ಬಸ್ – ಬೈಕ್‌ ಅಪಘಾತ; ಸವಾರ ಸಾವು

1

Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!

2-bntwl

Bantwala: ಚಾಲಕನ‌ ನಿಯಂತ್ರಣ ತಪ್ಪಿ ಪಲ್ಟಿಯಾದ ಟೆಂಪೋ ಟ್ರಾವೆಲ್

Kallabatti

Bantwala: ಪಂಜಿಕಲ್ಲು: ಅಕ್ರಮ ಕಳ್ಳಬಟ್ಟಿ ಅಡ್ಡೆಗೆ ದಾಳಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-eeee

Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ

rape

Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.