ಗುಹಾಸರನ ಅಂತ್ಯ ಇಲ್ಲೇ ಆಗಿದ್ದು!
ಪುರದ ಪುಣ್ಯಂ- ಹರಿಹರ
Team Udayavani, Jun 29, 2019, 10:35 AM IST
ದಾವಣಗೆರೆ ಜಿಲ್ಲೆಯ ಸುಂದರ ತಾಣ. ಪುರಾಣದ ಪ್ರಕಾರ, ಈ ಪ್ರದೇಶವು ಗುಹಾಸುರನೆಂಬ ರಾಕ್ಷಸನ ಅಧೀನದಲ್ಲಿತ್ತು. ಪ್ರಜೆಗಳಿಗೂ, ದೇವತೆಗಳಿಗೂ ಉಪಟಳ ನೀಡಿ, ಆನಂದಿಸುತ್ತಿದ್ದ ಈತನಿಗೆ ಮಂತ್ರಿಯಿಂದ ತನ್ನ ಅಂತ್ಯದ ಸುಳಿವು ಗೋಚರವಾಗುತ್ತದೆ. “ಪರಮಶಕ್ತಿಶಾಲಿಗಳಾದ ಹರಿ ಮತ್ತು ಹರನನ್ನು ನೀನು ಸೋಲಿಸುವುದು ಅಸಾಧ್ಯ. ಅವರಿಬ್ಬರಲ್ಲಿ ಒಬ್ಬರಿಂದ ನಿನ್ನ ಮರಣ ಶತಃಸಿದ್ಧ’ ಎಂದು ಮಂತ್ರಿ ಹೇಳಿದಾಗ, ಸಾವಿನಿಂದ ತಪ್ಪಿಸಿಕೊಳ್ಳುವ ಹಾದಿ ಹುಡುಕುತ್ತಾನೆ. ಕಠಿಣ ತಪಸ್ಸಿನಿಂದ ಬ್ರಹ್ಮನನ್ನು ಓಲೈಸಿಕೊಂಡು, ಆತನಿಂದ ವರ ಪಡೆಯುತ್ತಾನೆ. ಅದರಂತೆ, ಹರಿಯಾಗಲೀ, ಹರನಾಗಲೀ, ಗುಹಾಸುರನನ್ನು ಸೋಲಿಸುವುದು ಅಸಾಧ್ಯವಾಗುತ್ತದೆ. ಪ್ರಜೆಗಳಿಗೆ, ದೇವತೆಗಳಿಗೆ ಇದರಿಂದ ಚಿಂತೆ ಶುರುವಾಗುತ್ತದೆ. ಲೋಕದ ಸಂಕಷ್ಟ ಅರಿತ ವಿಷ್ಣು ಮತ್ತು ಶಿವನು, ಒಂದೇ ರೂಪ ತಾಳಿ ಧರೆಗೆ ಇಳಿದು, ಗುಹಾಸುರನನ್ನು ಸಂಹರಿಸುತ್ತಾರೆ. ಹರಿಹರದಲ್ಲಿ ಇಂದಿಗೂ ಪುರಾಣ ಪ್ರಸಿದ್ಧ ದೇಗುಲವಿದ್ದು, ಶಿವನ ದೇಹದ ಅರ್ಧ ಭಾಗ ಮತ್ತು ವಿಷ್ಣುವಿನ ದೇಹದ ಅರ್ಧಭಾಗದಿಂದ, ಹರಿಹರೇಶ್ವರ ಮೂರ್ತಿ ರೂಪು ತಳೆದಿರುವುದನ್ನು ನೋಡಬಹುದು. ಹೊಯ್ಸಳ ದೊರೆ 2ನೇ ವೀರ ನರಸಿಂಹನ ದಂಡನಾಯಕನಾಗಿದ್ದ ಪೊಲ್ವಾಳನು ಇದರ ನಿರ್ಮಾತೃ ಎಂದು ಶಾಸನಗಳು ಹೇಳುತ್ತವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Stock Market: ಷೇರುಪೇಟೆ ಸೂಚ್ಯಂಕ ಸಾರ್ವಕಾಲಿಕ ದಾಖಲೆ ಏರಿಕೆ, ನಿಫ್ಟಿ ಜಿಗಿತ
Karki Movie: ಹಳ್ಳಿ ಹುಡುಗನ ಹೋರಾಟದ ಹಾದಿ
INDvsBAN: ಟೆಸ್ಟ್ ಮೊದಲ ದಿನವೇ ಪ್ರಮಾದ; ಐಸಿಸಿ ಶಿಕ್ಷೆಯ ಭಯದಲ್ಲಿ ಬಾಂಗ್ಲಾದೇಶ ತಂಡ
Labanon: ಲೆಬನಾನ್ ಪ್ರಯಾಣಿಕರು ಪೇಜರ್ಸ್, ವಾಕಿಟಾಕಿ ಒಯ್ಯುವಂತಿಲ್ಲ: ಕತಾರ್ ಏರ್ ವೇಸ್
Thirthahalli: ಮರವೇರಿ ಕುಳಿತ 13 ಅಡಿ ಉದ್ದದ ಹೆಬ್ಬಾವು… ಸ್ಥಳೀಯರಿಂದ ರಕ್ಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.