ಮಾನಸಿಕ ಆಘಾತ ಅನಾರೋಗ್ಯಕ್ಕೆ ಕಾರಣ


Team Udayavani, Jul 15, 2019, 4:00 PM IST

27

ಜೀವನದಲ್ಲಿ ನಡೆದ ಘಟನೆಗಳನ್ನು ಮರೆಯುವುದು ಅಷ್ಟು ಸುಲಭದ ವಿಷಯವಲ್ಲ. ಅದರಲ್ಲೂ ಆಘಾತಕಾರಿ ಘಟನೆಗಳು ಮನುಷ್ಯನ ಮಾನಸಿಕ ಆರೋಗ್ಯವನ್ನು ಹಾಳುಗೆಡವುತ್ತದೆ. ಕೆಲವು ಈ ಘಟನೆಗಳಿಂದ ಬಹುಬೇಗನೇ ಹೊರಬಂದರೇ ಇನ್ನೂ ಕೆಲವರು ಅವುಗಳನ್ನು ನೆನಪಿಸಿಕೊಳ್ಳತ್ತಾ ಅದರಲ್ಲೇ ದಿನ ಕಳೆಯುತ್ತಾರೆ. ಈ ಸಮಸ್ಯೆಯನ್ನು ಪೋಸ್ಟ್‌ ಟ್ರಾಮಾಟಿಕ್‌ ಸ್ಟ್ರೆಸ್‌ ಡಿಸಾರ್ಡರ್‌ ಎಂದು ಕರೆಯುತ್ತಾರೆ. ಇದು ಬಗೆಹರಿಯದ ಕಾಯಿಲೆಯೇನಲ್ಲ. ನಮ್ಮ ಮಾನಸಿಕ ಆರೋಗ್ಯವನ್ನು ಉತ್ತಮಪಡಿಸಿಕೊಂಡರೆ ಈ ಸಮಸ್ಯೆಯಿಂದ ಹೊರಬರಬಹುದು.

ಯಾವುದಾದರೊಂದು ಘಟನೆ ಒಬ್ಬ ವ್ಯಕ್ತಿಯ ಜೀವನದಲ್ಲಿ ದೊಡ್ಡ ಮಟ್ಟದಲ್ಲಿ ಬದಲಾವಣೆಯನ್ನು ತರಲು ಸಾಧ್ಯವಿದೆ. ಆ ಘಟನೆ ಸಂತೋಷ ಅಥವಾ ದುಃಖವನ್ನು ತರಬಹುದು. ಇವೆರಡನ್ನು ಹೊರತುಪಡಿಸಿ ಆ ಘಟನೆ ವ್ಯಕ್ತಿಯ ಮಾನಸಿಕ ತೊಂದರೆಗೂ ಕಾರಣವಾಗಬಹುದು. ಅಂದರೆ ಘಟನೆಯನ್ನೇ ಯೋಚಿಸಿ, ಹೆದರಿ ಆತಂಕವನ್ನೂ ಸೃಷ್ಟಿಸಬಹುದು.

ಗಾಯಗಳು, ಕಾರು ಅಪಘಾತಗಳು, ಭೂಕಂಪಗಳು , ಮಕ್ಕಳ ದುರುಪಯೋಗ ಇಂತಹ ಘಟನೆಗಳು ತರುವ ಆಘಾತ ಅಥವಾ ಒತ್ತಡ ವನ್ನು ಪಿ.ಟಿ.ಎಸ್‌.ಡಿ(ಪೋಸ್ಟ್‌-ಟ್ರಾಮಾಟಿಕ್‌ ಸ್ಟ್ರೆಸ್‌ ಡಿಸಾರ್ಡರ್‌) ಎನ್ನಬಹುದು. ಆದರೆ ಆಘಾತದ ಪರಿಣಾಮಗಳು ನಿಧಾನವಾಗಿ ವ್ಯಕ್ತಿಯ ಆರೋಗ್ಯದ ಮೇಲೆ ಗಂಭೀರ ಪರಿಣಾಮವನ್ನು ಬೀರಬಲ್ಲದು. ಆಘಾತ ಅನುಭವಿಸಿದವರಿಗೆ ಪಿ.ಟಿ.ಎಸ್‌.ಡಿ. ಬಗ್ಗೆ ಗೊತ್ತಿರುವುದಿಲ್ಲ. ಆದರೆ ಅದನ್ನು ಸೂಕ್ಷ್ಮವಾಗಿ ಗಮನಿಸಿ ಸೂಕ್ತ ಸಮಯದಲ್ಲಿ ಪರಿಹಾರವನ್ನು ಕಂಡುಕೊಳ್ಳಬೇಕಾಗುತ್ತದೆ.

ಒಂದು ಕಹಿ ಘಟನೆಯ ನಂತರ ಬದಲಾಗಿರುವ ಭಾವನಾತ್ಮಕ ಆರೋಗ್ಯದ ಮೊದಲಿನ ಚಿಹ್ನೆಗಳನ್ನು ಗುರುತಿಸಲು ಸಾಧ್ಯವಾಗುತ್ತದೆ, ಆಘಾತಕಾರಿ ಘಟನೆ ನಡೆದ ಒಂದು ತಿಂಗಳ ಅನಂತರವೂ ಮಾನಸಿಕ ಆರೋಗ್ಯದ ಮೇಲೆ ಆಘಾತದ ಪರಿಣಾಮಗಳನ್ನು ಗುರುತಿಸಬಹುದು. ಈ ಸಂದರ್ಭದಲ್ಲಿ ವೃತ್ತಿಪರ ಸಲಹೆಗಾರರಿಂದ ಸಲಹೆ ಪಡೆಯುವುದು ಸೂಕ್ತ ದಾರಿಯಾಗಿದೆ. ಇದು ಮಾನಸಿಕ ಆರೋಗ್ಯವನ್ನು ಸರಿಯಾಗಿ ಇಟ್ಟುಕೊಳ್ಳಲು ಪರಿಣಾಮಕಾರಿ ಮಾರ್ಗವಾಗಿದೆ.

ಸಂಬಂಧಗಳು, ವೈಯಕ್ತಿಕ ಮೌಲ್ಯ, ಆತಂಕಗಳು, ಆರೋಗ್ಯದ ಮೇಲೆ ತೀವ್ರ ಪರಿಣಾಮವನ್ನು ಬೀರಿರುತ್ತವೆ. ಈ ಬಗ್ಗೆ ಅರಿವಿದ್ದರೂ ಘಟನೆಯ ಪ್ರಾಮುಖ್ಯವನ್ನು ಅವರು ಗುರುತಿಸುವುದಿಲ್ಲ. ಅವರು ಯಾವಾಗಲೂ ಭಯ ಅಥವಾ ಅಸಹಾಯಕತೆಯಿಂದ ಪ್ರತಿಕ್ರಿಯೆ ನೀಡುತ್ತಾರೆ. ಕೆಲವರು ಬಹು ಬೇಗ ಗುಣ ಹೊಂದುವುದಿಲ್ಲ. ಅಂಥವರು ಹೆಚ್ಚಾಗಿ ಭಯ ಮತ್ತು ದುಃಖದಿಂದ ಬಳಲುತ್ತಾರೆ. ಅವರು ಪ್ರಪಂಚವನ್ನು ಸಹಜವಾಗಿ ನೋಡುವುದಿಲ್ಲ. ಅಂಥವರು ಅಲ್ಪಾವಧಿಯ ಕೌನ್ಸೆಲಿಂಗಿನಿಂದ ಬೇಗ ಗುಣವಾಗಿ ಬೆಳವಣಿಗೆ ಹೊಂದುವ ಸಾಧ್ಯತೆ ಇರುತ್ತದೆ.

ಹೀಗೆ ಮಾಡಿ
ಪ್ರೀತಿಪಾತ್ರರೊಂದಿಗೆ, ಸಾಕುಪ್ರಾಣಿಗಳ ಜೊತೆ ಬೆರೆಯುವುದರಿಂದ, ವ್ಯಾಯಾಮ, ಯೋಗ ಮುಂತಾದವುಗಳನ್ನು ಮಾಡುವುದರಿಂದ ನಾವು ಆಘಾತಗಳಿಂದ ಬೇಗ ಚೇತರಿಸಿಕೊಳ್ಳಬಹುದು. ಆರಂಭಿಕ ಹಂತದಲ್ಲೇ ಈ ಸಮಸ್ಯೆ ಅರಿವಿಗೆ ಬಂದಲ್ಲಿ ಅದನ್ನು ಮರೆಯುವ ಸಲುವಾಗಿ ಇತರ ಚಟುವಟಿಕೆಗಳಲ್ಲಿ ವ್ಯಕ್ತಿಯನ್ನು ಸಕ್ರೀಯವಾಗಿ ಭಾಗವಹಿಸುವಂತೆ ಮಾಡಬೇಕಾಗುತ್ತದೆ. ಆಗ ಸ್ವಲ್ಪ ಮಟ್ಟಿಗೆ ನಿಯಂತ್ರಣಕ್ಕೆ ಬರಲು ಸಾಧ್ಯವಿದೆ.ಆ ಮೂಲಕ ನೆಮ್ಮದಿಯಾಗಿ ಬದುಕಬಹುದು.

ಪಿ.ಟಿ.ಎಸ್‌.ಡಿ ಲಕ್ಷಣಗಳು
·ಖನ್ನತೆ, ನಿರಾಸಕ್ತಿ ಮತ್ತು ತತ್‌ಕ್ಷಣ ಕೋಪಗೊಳ್ಳುವಿಕೆ
·ಸಂಭವಿಸಿದ ಆಘಾತಕಾರಿ ಘಟನೆಗಳನ್ನು ನೆನೆಪು
·ನಿದ್ರಾಹೀನತೆ
·ಕೆಟ್ಟ ಕನಸುಗಳು
·ಒತ್ತಡ ನಿಭಾಯಿಸಲು ಮಾದಕದ್ರವ್ಯದ ಸೇವನೆ
·ಏಕಾಂಗಿತನ
·ಸಂಬಂಧಗಳಲ್ಲಿ ಬಿರುಕು

ಪಿ.ಟಿ.ಎಸ್‌.ಡಿ ಕಾರಣಗಳು
·ಪಿ.ಟಿ.ಎಸ್‌.ಡಿ ಯಿಂದ ಬಳಲುತ್ತಿರುವವರು ಕೆಲವು ಘಟನೆಗಳಿಂದ ಮಾನಸಿಕವಾಗಿ ಕುಗ್ಗಿರಬಹುದು.
·ಲೈಂಗಿಕ ದುರ್ಬಳಕೆ ಅಥವಾ ಭಾವನಾತ್ಮಕ ನಿಂದನೆಗಳು ಮನಸ್ಸಿನಲ್ಲಿ ಮನಸ್ಸಿಗೆ ಆಘಾತವನ್ನು ತಂದಿರಬಹುದು.
·ರಸ್ತೆ ಅಪಘಾತಗಳು ಅಥವಾ ಇನ್ನಿತರ ಅಪಘಾತಗಳಿಂದ ತಮ್ಮ ಹತ್ತಿರದ ವ್ಯಕ್ತಿಗಳನ್ನು ಕಳೆದುಕೊಳ್ಳುವಿಕೆ
·ಗುಣಮುಖವಾಗದ ಗಂಭೀರ ಆರೋಗ್ಯ ಸಮಸ್ಯೆಗಳು
·ಹೆರಿಗೆ ಸಮಯದ ನೋವು
·ಪಿ.ಟಿ.ಎಸ್‌.ಡಿ ಸಮಸ್ಯೆಗೆ ಒಳಗಾದವರಿಗೆ ಇತರರನ್ನು ನಂಬುವ ಮತ್ತು ಅರ್ಥಪೂರ್ಣ ಸಂಬಂಧಗಳಲ್ಲಿ ತೊಡಗಿಸಿಕೊಳ್ಳಲು ಕಷ್ಟವಾಗಬಹುದು.

ಒಬ್ಬಂಟಿಯಾಗಿ ಇರಲು ಬಯಸಬಹುದು. ಆ ಆಘಾತ ಬಿಡದೆ ಕಾಡಬಹುದು. ಇದರಿಂದ ಹೊರ ಬರಲು ಅವರಿಗೆ ಮೊದಲಾಗಿ ಆಪ್ತರು ಸಹಕರಿಸಬೇಕಾಗುತ್ತದೆ. ಆ ಬಳಿಕವೂ ಅವರ ನಡುವಳಿಕೆಯಲ್ಲಿ ಯಾವುದೇ ಬದಲಾವಣೆ ಇಲ್ಲವಾದಲ್ಲಿ ಮಾನಸಿಕ ವೈದ್ಯರನ್ನು ಭೇಟಿಯಾಗಿ ಕೌನ್ಸೆಲಿಂಗ್‌ ಪಡೆಯಬೇಕಾಗುತ್ತದೆ.

ಪ್ರೀತಿಯ ಆರೈಕೆ ಅಗತ್ಯ

ಒಮ್ಮೊಮ್ಮೆ ಆಘಾತದ ಪರಿಣಾಮವು ಸಣ್ಣದಾಗಿರಬಹುದು. ಆದರೆ ಪದೇ ಪದೇ ಅದೇ ಸಮಸ್ಯೆಯಿಂದ ಬಳಲುತ್ತಿರುವುದರಿಂದ ಅದು ಹೆಚ್ಚು ಪರಿಣಾಮ ಬೀರಬಹುದು. ಮೊದಲಾಗಿ ಅವರಿಗೆ ಪ್ರೀತಿಯ ಆರೈಕೆ ಬಹಳ ಮುಖ್ಯ. ಪಿ.ಟಿ.ಎಸ್‌.ಡಿ ಯಿಂದ ಬಳಲುತ್ತಿರುವುದನ್ನು ಸರಿಯಾಗಿ ತಿಳಿಯದೇ ಈ ಕುರಿತು ನಿರ್ಧಾರ ಮಾಡಲು ಸಾಧ್ಯವಿಲ್ಲ.
– ಡಾ| ಶಿವಶಂಕರ್‌ ವೈದ್ಯರು

••••ಪ್ರಜ್ಞಾ ಶೆಟ್ಟಿ

ಟಾಪ್ ನ್ಯೂಸ್

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-health

ಆರೋಗ್ಯದಲ್ಲಿ ಕ್ರಾಂತಿ; ಸ್ತ್ರೀರೋಗ ಮತ್ತು ಪ್ರಸೂತಿ ಶಾಸ್ತ್ರದಲ್ಲಿ ಲ್ಯಾಪರೊಸ್ಕೋಪಿಯ ಮಹತ್ವ

4-

Fasting: ಉಪವಾಸ: ಹೃದಯ ಸಂಬಂಧಿ ಕಾಯಿಲೆ ಮತ್ತು ಮಧುಮೇಹ ಆರೈಕೆ

2-heath

Health: ವಯೋವೃದ್ಧರ ಆರೈಕೆ : ಮುಪ್ಪಿನಲ್ಲಿ ಜೀವನಾಧಾರ

17-tooth-infection

Tooth Infection: ಹಲ್ಲಿನ ಸೋಂಕು-ಸಂಧಿ ನೋವಿಗೆ ಕಾರಣವಾದೀತೇ?

16-

Methylmalonic acidemia: ಮಿಥೈಲ್‌ಮೆಲೋನಿಕ್‌ ಆ್ಯಸಿಡೆಮಿಯಾ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.