ರಮೇಶ್ ಸಮಸ್ಯೆ 8ನೇ ಅದ್ಭುತ: ಸತೀಶ್ ಜಾರಕಿಹೊಳಿ
Team Udayavani, Jul 4, 2019, 3:03 AM IST
ಬೆಂಗಳೂರು: “ರಮೇಶ್ ಜಾರಕಿಹೊಳಿ ಸಮಸ್ಯೆ ಏನು ಎನ್ನುವುದು ಇದುವರೆಗೂ ಗೊತ್ತಾಗುತ್ತಿಲ್ಲ. ಅದೊಂದು ಎಂಟನೇ ಅದ್ಭುತವಾಗಿದೆ’ ಎಂದು ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿ, ರಮೇಶ್ ಹಾಗೂ ನನ್ನದು ರಾಜಕೀಯ ಬೇರೆ, ವ್ಯವಹಾರ ಬೇರೆ. ಅವರು ಯಾಕೆ ರಾಜೀನಾಮೆ ನೀಡಿದ್ದಾರೆ ಎನ್ನುವುದು ಗೊತ್ತಿಲ್ಲ. ಈ ಬಗ್ಗೆ ಅವರನ್ನೇ ಕೇಳಬೇಕು. ಸ್ಪೀಕರ್ ರಮೇಶ್ ಕುಮಾರ್ ಅವರು ರಾಜೀನಾಮೆ ತಮಗೆ ತಲುಪಿಲ್ಲ ಅಂತಿದ್ದಾರೆ ಎಂದರು.
ಇದೇ ವೇಳೆ, ಲಖನ್ ಜಾರಕಿಹೊಳಿ “ಥ್ರಿ ಈಡಿಯೆಟ್ಸ್ ‘ಎಂದು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿ, ರಮೇಶ್ ರಾಜೀನಾಮೆಗೆ ಅವರ ಅಳಿಯಂದಿರೇ ಕಾರಣ. ಈ ಹಿಂದೆಯೂ ಇದನ್ನೇ ಹೇಳಿದ್ದೆ ಎಂದರು. ರಮೇಶ್ ಇನ್ನೂ ರಾಜೀನಾಮೆ ನೀಡಿಲ್ಲ. ಅವರು ರಾಜೀನಾಮೆ ನೀಡಿದರೆ ಚುನಾವಣೆ ಮಾಡಬೇಕಾಗುತ್ತದೆ. ಆ ಸ್ಥಾನಕ್ಕೆ ಪಕ್ಷದ ಹೈಕಮಾಂಡ್ ಯಾರ ಹೆಸರನ್ನು ಸೂಚಿಸುತ್ತದೆಯೋ ಅವರನ್ನು ಕಣಕ್ಕಿಳಿಸುತ್ತೇವೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BBK11: ಬಿಗ್ ಬಾಸ್ ಕಾರ್ಯಕ್ರಮದ ನಿರೂಪಕ ಬದಲು: ಸುದೀಪ್ ಜಾಗಕ್ಕೆ ಇವರು ಎಂಟ್ರಿ…
Madikeri: ಕರ್ತವ್ಯನಿರತ ಪೊಲೀಸ್ ಸಿಬ್ಬಂದಿಯನ್ನು ಗಾಯಗೊಳಿಸಿದ ಬಂಟ್ವಾಳ ಮೂಲದ ಚಾಲಕನ ಬಂಧನ
Revenge Strikes: ಇರಾನ್ ಸೇನಾ ನೆಲಗಳ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿ…
Hosapete: ಬಾಲಕನನ್ನು ಅಪಹರಿಸಿ, ಎಚ್.ಎಲ್.ಸಿ. ಕಾಲುವೆಗೆ ಎಸೆದು ಕೊಲೆ: ಆರೋಪಿ ಬಂಧನ
Horoscope: ಗಣೇಶ, ದುರ್ಗೆಯರ ಆರಾಧನೆಯಿಂದ ವಿಘ್ನ ನಿವಾರಣೆ,ಶುಭಕಾರ್ಯ ನಡೆಸುವ ಬಗ್ಗೆ ಚಿಂತನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.