ಅದಮಾರು ಮಠ ಪರ್ಯಾಯ ಪೂರ್ವಭಾವಿ: ಶ್ರೀಕೃಷ್ಣ ಮಠದಲ್ಲಿ ಕಟ್ಟಿಗೆ ಮುಹೂರ್ತ


Team Udayavani, Jul 5, 2019, 10:21 AM IST

kattige

ಉಡುಪಿ: ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಪೂರ್ವಭಾವಿಯಾಗಿ ನಡೆಯುವ ಕಟ್ಟಿಗೆ ಮುಹೂರ್ತದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಮುಂಡಾಳ ಸಮಾಜದವರಿಂದ ಸೇವೆ ಸಲ್ಲುತ್ತಿದೆ. ಗುರುವಾರ ನಡೆದ ಅದಮಾರು ಮಠ ಪರ್ಯಾಯದ ಕಟ್ಟಿಗೆ ಮುಹೂರ್ತದಲ್ಲಿ ಮುಂಡಾಳ ಸಮಾಜದ ಪ್ರಮುಖರು ಸೇರಿ ಮುಹೂರ್ತವನ್ನು ನಡೆಸಿಕೊಟ್ಟರು.

ಕಡಿಯಾಳಿ ಕುಂಜಿಬೆಟ್ಟಿನಲ್ಲಿರುವ ಬಬ್ಬುಸ್ವಾಮಿಯು ಹಿಂದಿನ ಕಾಲದಲ್ಲಿ ಶ್ರೀಕೃಷ್ಣ ಮಠದ ಕಟ್ಟಿಗೆರಥವಿರುವ ಜಾಗದಲ್ಲಿತ್ತು. ಕೋಲ ಇತ್ಯಾದಿಗಳು ನಡೆಯುವಾಗ ಸ್ಥಳದ ಕೊರತೆಯಾಗುತ್ತದೆಂದು ಕಡಿಯಾಳಿ ಕುಂಜಿಬೆಟ್ಟಿಗೆ ಸ್ಥಳಾಂತರಗೊಂಡಿತು ಎಂದು ತಿಳಿದು ಬರುತ್ತದೆ. ಇಲ್ಲಿ ಬಬ್ಬುಸ್ವಾಮಿಯನ್ನು ಅರ್ಚಿಸುವ ಮುಂಡಾಳ ಸಮಾಜದವರು ಅದರ ಸಂಕೇತವಾಗಿ ಕಟ್ಟಿಗೆಯ ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಾರೆ.

ಹಿಂದೆ ಕುಂಟಲಕಾಡಿನಿಂದ ಕಟ್ಟಿಗೆಯನ್ನು ತರಲಾಗುತ್ತಿತ್ತು. ಈಗ ಮಠದವರು ವ್ಯವಸ್ಥೆ ಮಾಡುವ ಕಟ್ಟಿಗೆಯ ಮೆರವಣಿಗೆ ನಡೆಯುತ್ತಿದೆ. ನಮ್ಮ ಪೂರ್ವಜರು ಅನಾದಿ ಕಾಲದಿಂದ ಇದನ್ನು ಮಾಡುತ್ತಿದ್ದರು. ನಮ್ಮ ತಾತನವರು ಇದರ ಬಗ್ಗೆ ತಿಳಿಸುತ್ತಿದ್ದರು ಎನ್ನುತ್ತಾರೆ ಗುರಿಕಾರ ಶೇಷು ಮತ್ತು ಒತ್ತು ಗುರಿಕಾರ ವಾಸು ಬಿ. ಅವರು. ಕಟ್ಟಿಗೆ ಮುಹೂರ್ತ ನಡೆಯುವ ಮುನ್ನ ದೇವತಾ ಪ್ರಾರ್ಥನೆ ಬಳಿಕ ಕಟ್ಟಿಗೆಯ ಮೆರವಣಿಗೆ ನಡೆದು ಸಂಪ್ರದಾಯದಂತೆ ಮುಹೂರ್ತ ನಡೆಸಲಾಯಿತು. ಅದಮಾರು ಮಠದ ಪರ್ಯಾಯೋತ್ಸವ ಜ. 18ರಂದು ನಡೆಯಲಿದೆ. ಈಗಾಗಲೇ ಬಾಳೆ ಮುಹೂರ್ತ, ಅಕ್ಕಿ ಮುಹೂರ್ತ ನಡೆದಿದ್ದು ಮೂರನೆಯದಾದ ಕಟ್ಟಿಗೆ ಮುಹೂರ್ತ ಗುರುವಾರ ನಡೆಯಿತು. ಮುಂದೆ ಭತ್ತದ ಮುಹೂರ್ತ ನಡೆಯಲಿದೆ.

ಶ್ರೀಕೃಷ್ಣ ಮಠದಲ್ಲಿ ಅನ್ನ ಸಂತರ್ಪಣೆಗೆ ಬೇಕಾಗುವ ಕಟ್ಟಿಗೆಯನ್ನು ಪೇರಿಸಿಡಲು ಕಟ್ಟಿಗೆ ಸಂಗ್ರಹದ ಮುಹೂರ್ತ ಇದಾಗಿದೆ. ಕಟ್ಟಿಗೆ ಮುಹೂರ್ತಕ್ಕೆ ಮುನ್ನ ಅದಮಾರು ಮಠದಿಂದ ಸುಮಾರು 2,000 ಸಸಿಗಳನ್ನು ಖರೀದಿಸಿ ಮಠದ ಜಾಗ ಮತ್ತು ಆಸಕ್ತ ಸಂಘ ಸಂಸ್ಥೆಗಳ ಆವರಣದಲ್ಲಿ ನೆಡಲಾಗಿದೆ. ಈಗಾಗಲೇ ಇರುವ ಕಟ್ಟಿಗೆ ರಥವನ್ನು ಅದಮಾರು ಮಠದವರು ಖರೀದಿಸಿ ಅದನ್ನೇ ಪರ್ಯಾಯದೊಳಗೆ ಅಲಂಕರಿಸಲಿದ್ದಾರೆ.

ಟಾಪ್ ನ್ಯೂಸ್

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

1-neyge-1

Udayavani-MIC ನಮ್ಮ ಸಂತೆ:ಗಮನ ಸೆಳೆದ ನೇಯ್ಗೆ ಯಂತ್ರ

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.