ಬಡ್ಸ್‌ ಶಾಲೆಗಳಿಗೆ ಕನ್ನಡ ಅರಿಯದ ಶಿಕ್ಷಕಿಯರ, ಶುಶ್ರೂಷಕರ ನೇಮಕ

ಸಾಮಾಜಿಕ ನ್ಯಾಯ ಇಲಾಖೆಯಿಂದಲೇ ಅನ್ಯಾಯ

Team Udayavani, Jul 9, 2019, 11:08 AM IST

buds

ಕಾಸರಗೋಡು: ಕೇರಳ ಸರಕಾರದ ಆಧೀನದಲ್ಲಿ ಸಾಮಾಜಿಕ ನ್ಯಾಯ ಇಲಾಖೆ (ಸೋಶಿಯಲ್‌ ಜಸ್ಟಿಸ್‌ ಡಿಪಾರ್ಟ್‌ ಮೆಂಟ್‌) ಎಂಬುದೊಂದಿದೆ. ಸಮಾಜದ ಎಲ್ಲ ವರ್ಗಗಳಿಗೆ ನ್ಯಾಯವನ್ನೊದಗಿಸಬೇಕಾದುದು ಈ ಇಲಾಖೆಯ ಜವಾಬ್ದಾರಿ. ಮಹಿಳೆಯರು ಹಾಗೂ ಮಕ್ಕಳ ಕ್ಷೇಮ, ಅಂಗನವಾಡಿಗಳ ನಿರ್ವಹಣೆ, ಎಂಡೋಸಲ್ಫಾನ್‌ ಬಾಧಿತ ಮಕ್ಕಳ ಕಲ್ಯಾಣಕ್ಕಾಗಿ ಬಡ್ಸ್‌ ಶಾಲೆಗಳ ಸ್ಥಾಪನೆ ಮತ್ತು ನಿರ್ವಹಣೆ ಮೊದಲಾದವುಗಳನ್ನು ಈ ಇಲಾಖೆ ಕೈಗೊಳ್ಳುತ್ತದೆ.

ತಾರತಮ್ಯ
ಆದರೆ ಸಮಾಜಕ್ಕೆ ನ್ಯಾಯವನ್ನೊದಗಿಸಬೇಕಾದ ಈ ಇಲಾಖೆಯಿಂದಲೇ ಭಾಷಾ ಅಲ್ಪಸಂಖ್ಯಾಕ ಕನ್ನಡ ಮಕ್ಕಳಿಗೆ ಅನ್ಯಾಯವಾಗುತ್ತಿರುವುದು ದಿಗ್ಭ್ರಾಂತಿ ಹುಟ್ಟಿಸಿದೆ. ಅದರಲ್ಲೂ ಎಂಡೋಸಲ್ಫಾನ್‌ ಸಂತ್ರಸ್ತ ಮಕ್ಕಳ ಶಿಕ್ಷಣದ ವಿಷಯದಲ್ಲಿ ಭಾಷಾ ಅಲ್ಪಸಂಖ್ಯಾಕರ ಬಗ್ಗೆ ತಾರತಮ್ಯ ನಡೆಸಲಾಗುತ್ತಿದೆ. ಈಚೆಗೆ ಕನ್ನಡ ಪ್ರದೇಶದ ಬಡ್ಸ್‌ ಶಾಲೆಗಳಿಗಾಗಿ ಕನ್ನಡದ ಒಂದು ಅಕ್ಷರವೂ ಅರಿಯದ ಸ್ಥಳೀಯ ಭಾಷೆಗಳಾದ ಕನ್ನಡ, ತುಳು ಅರ್ಥವಾಗದ, ಮಾತನಾಡಲು, ಓದಲು, ಬರೆಯಲು ಬಾರದ ಶಿಕ್ಷಕಿಯರನ್ನು ಹಾಗೂ ಶುಶ್ರೂಷಕಿಯರನ್ನು ಆಯ್ಕೆ ಮಾಡಲಾಗಿದೆ.

ಮಲಯಾಳಿಗರಿಗೆ ನೇಮಕಾತಿ ಆದೇಶ
ಕೇರಳ ಸರಕಾರದ ಸಮಾಜ ಕಲ್ಯಾಣ ಇಲಾಖೆ ದಿನಾಂಕ 2-5-2019ರಂದು ಹೊರಡಿಸಿದ ನೇಮಕಾತಿ ಅಧಿಸೂಚನೆಯ ಪ್ರಕಾರ ಕಾಸರಗೋಡು ಜಿಲ್ಲೆಯಲ್ಲಿ ಎಂಡೋಸಲ್ಫಾನ್‌ ಸಂತ್ರಸ್ತರಾದ ದೈಹಿಕ ಮತ್ತು ಮಾನಸಿಕ ವೈಕಲ್ಯ ವುಳ್ಳ ಮಕ್ಕಳ ಪಾಲನೆ ಮತ್ತು ಶಿಕ್ಷಣಕ್ಕಾಗಿ ಎಲ್ಲ ಪಂಚಾಯತ್‌ಗಳಲ್ಲಿ ಸ್ಥಾಪಿಸಲಾಗುವ ಬಡ್ಸ್‌ ಶಾಲೆಗಳಿಗೆ ತರಬೇತುದಾರರನ್ನು (ಶಿಕ್ಷಕಿಯರನ್ನು ಹಾಗೂ ಶುಶ್ರೂಷಕರನ್ನು) ಆಯ್ಕೆ ಮಾಡಲು ದಿನಾಂಕ 15-6-2019ರಂದು ರ್‍ಯಾಂಕ್‌ ಪಟ್ಟಿ ಪ್ರಕಟವಾಗಿದ್ದು 27-6-2019ರಂದು ನೇಮಕಾತಿ ಆದೇಶವನ್ನೂ ನೀಡಲಾಗಿದೆ.

ಅಂಗನವಾಡಿ ಪಠ್ಯಪುಸ್ತಕ ಸಿದ್ಧವಾದರೂ ವಿತರಣೆಯಲ್ಲಿ ವಿಳಂಬ
ಕನ್ನಡ ಸಂಘಟನೆಗಳ ನಿರಂತರ ಪ್ರಯತ್ನದ ಫಲವಾಗಿ ಕನ್ನಡ ಪ್ರದೇಶದ ಅಂಗನವಾಡಿಗಳಿಗೆ ವಿತರಿಸಲು ಕನ್ನಡ ಪಠ್ಯಪುಸ್ತಕಗಳು ಹಾಗೂ ಕೈಪಿಡಿಗಳು ತಯಾರಾಗಿದ್ದರೂ ಅವುಗಳನ್ನು ವಿತರಿಸದೆ ವಿಳಂಬ ನೀತಿಯನ್ನು ಅನುಸರಿಸ ಲಾಗುತ್ತಿದೆ. ಸಾಮಾಜಿಕ ನ್ಯಾಯ ಇಲಾಖೆಯ ಕೈಕೆಳಗಿನ ಜಿಲ್ಲಾ ಶಿಶು ಕಲ್ಯಾಣ ವಿಭಾಗದ ಕಚೇರಿಯಲ್ಲಿ ಕನ್ನಡ ಪಠ್ಯಪುಸ್ತಕಗಳು ಕೊಳೆಯುತ್ತಿವೆ. ಅವುಗಳನ್ನು ಅಂಗನವಾಡಿಗಳಿಗೆ ವಿತರಿಸಲು ಇನ್ನೂ ಮುಹೂರ್ತ ಕೂಡಿಬಂದಿಲ್ಲ.

ಕನ್ನಡಿಗ ಅಭ್ಯರ್ಥಿಗಳಿದ್ದರೂ ಇಲಾಖೆ ತಾತ್ಸಾರ
ಎಂಡೋ ಸಂತ್ರಸ್ತ ಮಕ್ಕಳಲ್ಲಿ ಹೆಚ್ಚಿನವರ ಮಾತೃ ಭಾಷೆ ಕನ್ನಡ ತುಳು ಆಗಿರುತ್ತದೆ. ರ್‍ಯಾಂಕ್‌ ಪಟ್ಟಿ ಯಲ್ಲಿ ಕನ್ನಡ ಉದ್ಯೋಗಾರ್ಥಿಗಳು ಇದ್ದರೂ ಅವರನ್ನು ಕಡೆಗಣಿಸಿ ಮಲಯಾಳ ಮಾತ್ರ ತಿಳಿದ ಕನ್ನಡ ತುಳು ಅರಿಯದವರಿಗೆ ನೇಮಕಾತಿ ಆದೇಶ ನೀಡಲಾಗಿದೆ. ಎಂಡೋ ಸಂತ್ರಸ್ತ ಮಕ್ಕಳ ಜತೆ ವ್ಯವಹರಿಸಲು, ಅವರಿಗೆ ಶಿಕ್ಷಣವನ್ನು ನೀಡಲು, ಪಾಲನೆ ಮಾಡಲು ಶಿಕ್ಷಕಿಯರಿಗೆ ಮಕ್ಕಳ ಮಾತೃ ಭಾಷೆ ಅರಿವು ಅನಿವಾರ್ಯ. ಕನ್ನಡ ಬಾರದವ ರನ್ನು ಆರಿಸಿದ್ದರಿಂದ ಸಂತ್ರಸ್ತ ಮಕ್ಕಳ ಪೋಷಕರು ಆತಂಕಕ್ಕೀಡಾಗಿದ್ದಾರೆ. ಸರಕಾರ ತತ್‌ಕ್ಷಣ ಮಧ್ಯ ಪ್ರವೇಶಿಸಿ ಕನ್ನಡ ಪ್ರದೇಶದ ಬಡ್ಸ್‌ ಶಾಲೆಗಳಲ್ಲಿ ಕನ್ನಡ ತಿಳಿದ ಶಿಕ್ಷಕಿಯರು ಹಾಗೂ ಶುಶ್ರೂಷಕಿ ಯರನ್ನೇ ನೇಮಿಸ ಬೇಕೆಂದು ಒತ್ತಾಯಿಸಿದ್ದಾರೆ.

ಟಾಪ್ ನ್ಯೂಸ್

BSYadiyurappa

Inquiry: ಗಂಗೇನಹಳ್ಳಿ ಡಿನೋಟಿಫಿಕೇಶನ್‌ ಪ್ರಕರಣ: ಲೋಕಾಯುಕ್ತದಿಂದ ಬಿಎಸ್‌ವೈ ವಿಚಾರಣೆ

CM-Mysore

Press Day: ಸುಳ್ಳು ಸುದ್ದಿಯಿಂದ ಸಮಾಜದ ನೆಮ್ಮದಿ ಹಾಳು: ಸಿಎಂ ಸಿದ್ದರಾಮಯ್ಯ

R.Ashok

Congress Government: ದ್ವೇಷದ ರಾಜಕಾರಣಕ್ಕಷ್ಟೇ ಕಾಂಗ್ರೆಸ್‌ ಸೀಮಿತ: ಆರ್‌. ಅಶೋಕ್‌

Accident-Logo

Road Accident: ಸೌದಿಯಲ್ಲಿ ಅಪಘಾತ: ಉಳ್ಳಾಲದ ತಾಯಿ, ಮಗು ಸಾವು

Kumapala

Legislative Council: ಅಭ್ಯರ್ಥಿ ಆಯ್ಕೆ ಬಗ್ಗೆ ರಾಜ್ಯ ನಾಯಕರಿಂದ ಅಭಿಪ್ರಾಯ ಸಂಗ್ರಹ: ಕುಂಪಲ

Manipal-Police

Police Duty Meeting: ವೃತ್ತಿಪರತೆಗೆ ಕರ್ತವ್ಯಕೂಟ ಸಹಕಾರಿ

ABVP

ABVP Meeting: ದೇಶದ ಕೆಲವು ವಿಶ್ವವಿದ್ಯಾಲಯಗಳಲ್ಲಿ ಸಂಸ್ಕೃತಿ ಹಾನಿಗೆ ಷಡ್ಯಂತ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

ಗಡಿ ನಿರ್ಬಂಧ ತೆರವುಗೊಳಿಸಲು ಆಗ್ರಹ

Malayali

12 ವರ್ಷಗಳಿಂದ ಮನೆಯಲ್ಲೇ ಕೃಷಿ ಮಾಡುವ ತಿರುವನಂತಪುರದ ದಂಪತಿ

ಕಾಸರಗೋಡು: 7 ಮಂದಿಗೆ ಸೋಂಕು

ಕಾಸರಗೋಡು: 7 ಮಂದಿಗೆ ಸೋಂಕು

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ಕಡಿಮೆ ಖರ್ಚಿನಲ್ಲಿ ಅಟೋಮ್ಯಾಟಿಕ್‌ ವೆಂಟಿಲೇಟರ್‌ ಆವಿಷ್ಕರಿಸಿದ ಪ್ರಾಧ್ಯಾಪಕ

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

ನಾಲ್ಕೇ ತಾಸುಗಳಲ್ಲಿ ಮನೆಗೆ ಬಂತು ಅಕ್ಕಿ!

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

BSYadiyurappa

Inquiry: ಗಂಗೇನಹಳ್ಳಿ ಡಿನೋಟಿಫಿಕೇಶನ್‌ ಪ್ರಕರಣ: ಲೋಕಾಯುಕ್ತದಿಂದ ಬಿಎಸ್‌ವೈ ವಿಚಾರಣೆ

CM-Mysore

Press Day: ಸುಳ್ಳು ಸುದ್ದಿಯಿಂದ ಸಮಾಜದ ನೆಮ್ಮದಿ ಹಾಳು: ಸಿಎಂ ಸಿದ್ದರಾಮಯ್ಯ

R.Ashok

Congress Government: ದ್ವೇಷದ ರಾಜಕಾರಣಕ್ಕಷ್ಟೇ ಕಾಂಗ್ರೆಸ್‌ ಸೀಮಿತ: ಆರ್‌. ಅಶೋಕ್‌

Colera

Udupi: ಜಿಲ್ಲೆಯಲ್ಲಿ ಕಾಲರಾ 8 ಪ್ರಕರಣ ಸಕ್ರಿಯ

Accident-Logo

Road Accident: ಸೌದಿಯಲ್ಲಿ ಅಪಘಾತ: ಉಳ್ಳಾಲದ ತಾಯಿ, ಮಗು ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.