ಚಿಕಿತ್ಸೆಯಲ್ಲಿ ಪಾರದರ್ಶಕತೆ ಸ್ಪಷ್ಟವಿರಲಿ ವೈದ್ಯರ ಕೈಬರಹ


Team Udayavani, Jul 10, 2019, 5:00 AM IST

s-15

ವೈದ್ಯರ ಅಕ್ಷರಗಳು ಸ್ಪಷ್ಟವಾಗಿ ಇರಬೇಕು ಎಂಬ ಆಗ್ರಹ ಕೇಳಿಬರುತ್ತಲೇ ಇರುತ್ತದೆ. ಕೇವಲ ಅಂಗಡಿಯವರಿಗೆ ಮಾತ್ರವಲ್ಲ, ರೋಗಿಗಳಿಗೆ ಮತ್ತು ಅವರ ಕುಟುಂಬದವರಿಗೂ ಸ್ಪಷ್ಟವಾಗಿ ಅರ್ಥಆಗುವಂತೆ ಇರಬೇಕು. ಇದರಿಂದಾಗಿ ಪಾರದರ್ಶಕತೆ ಬೆಳೆಯುತ್ತದೆ.

ನಮ್ಮ ದೇಶದಲ್ಲಿ ರೋಗ ಮತ್ತು ಚಿಕಿತ್ಸೆಯ ವಿಷಯದಲ್ಲಿ ಸಾಮಾನ್ಯ ಜನರಲ್ಲಿ ಜಾಗರೂಕತೆಯ ಸ್ತರ ಮೊದಲಿನಿಂದಲೂ ಕಡಿಮೆಯೇ ಇದೆ. ಬಹಳಷ್ಟು ಜನರು ಆರೋಗ್ಯ ಹದಗೆಟ್ಟ ಮೇಲೆಯೂ ವೈದ್ಯರ ಬಳಿ ಹೋಗದೇ, ವಿವಿಧ ರೀತಿಯ ಅಂದಾಜು ಹಾಕುತ್ತಾ, ಅಂತರ್ಜಾಲದಲ್ಲಿ ಕಾರಣಗಳನ್ನು ಹುಡುಕುತ್ತಾ ಸಮಯ ಹಾಳು ಮಾಡಿಕೊಳ್ಳುತ್ತಾರೆ. ಆಮೇಲೆ ವೈದ್ಯರ ಬಳಿ ತೆರಳಿದ ನಂತರ ರೋಗ ಪತ್ತೆಯಾಗುತ್ತದೆ.

ಇಲ್ಲಿ ಗಮನಿಸಲೇಬೇಕಾದ ಅಂಶವೆಂದರೆ, ವೈದ್ಯರು ರೋಗದ ಬಗ್ಗೆ, ತೆಗೆದುಕೊಳ್ಳ ಬೇಕಾದ ಔಷಧಿಗಳ ಬಗ್ಗೆ ಚೀಟಿ ಬರೆದುಕೊಡುತ್ತಾರಾದರೂ, ಬಹುತೇಕ ಸಂದರ್ಭಗಳಲ್ಲಿ ರೋಗಿಗಳಿಗೆ ಡಾಕ್ಟರ್‌ ಏನು ಬರೆದಿದ್ದಾರೆ ಎನ್ನುವುದು ತಿಳಿಯುವುದೇ ಇಲ್ಲ. ಇದಕ್ಕೆ ಮುಖ್ಯ ಕಾರಣ ವೈದ್ಯರ ಅಸ್ಪಷ್ಟ ಕೈಬರಹ. ಅನೇಕ ಬಾರಿ ಔಷದಧ ಅಂಗಡಿಗಳಲ್ಲಿ ಇರುವವರೂ ವೈದ್ಯರು ಏನು ಬರೆದಿದ್ದಾರೆ ಎನ್ನುವುದನ್ನು ಅರ್ಥಮಾಡಿಕೊಳ್ಳುವಲ್ಲಿ ಗೊಂದಲ ಗೊಳ್ಳುತ್ತಾರೆ. ದವಾಖಾನೆಯ ಬಳಿಯೇ ಇರುವ ಔಷಧದ ಅಂಗಡಿಯಾದರೆ ತೊಂದರೆ ಆಗದು. ಆದರೆ ಅಪ್ಪಿತಪ್ಪಿ ಜನರೇನಾದರೂ ಬೇರೆ ಮೆಡಿಕಲ್ ಶಾಪ್‌ಗಳಿಗೆ ಹೋದರೆಂದರೆ, ಗೊಂದಲ ಎದುರಾಗುವ ಸಾಧ್ಯತೆ ಅಧಿಕವಿರುತ್ತದೆ. ಇದರಿಂದಾಗಿ ಅನೇಕ ರೀತಿಯ ಸಮಸ್ಯೆಗಳು ಎದುರಾಗಬಹುದು, ಪರಿಣಾಮವನ್ನು ಎದುರಿಸಬೇಕಾದವರು ರೋಗಿಗಳೇ. ವೈದ್ಯರು ಏಕೆ ಹೀಗೆ ಬರೆಯುತ್ತಾರೆ ಎನ್ನುವ ಬಗ್ಗೆ ಹಲವು ಕಾರಣಗಳನ್ನು ನೀಡಲಾಗುತ್ತದೆ. ಆದರೆ ಹಾಗೆ ಬರೆಯುವುದು ಸರಿಯಲ್ಲ ಎಂದು ಖುದ್ದು ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ಕೂಡ ಅನೇಕ ಬಾರಿ ಹೇಳಿದೆ.

ಅನೇಕ ಕಡೆಗಳಲ್ಲಿ ಈಗ ವೈದ್ಯರು ರೋಗ ಲಕ್ಷಣಗಳ ವಿಚಾರದಲ್ಲಿ ಆಬ್ಸರ್ವೇಶನ್‌ಗಳನ್ನು ಬರೆದಿರುತ್ತಾರೆ. ಅವಕ್ಕಿಂತಲೂ ಮುಖ್ಯವಾಗಿ ಔಷಧ‌ ಪಟ್ಟಿ ಕೊಟ್ಟಿರುತ್ತಾರೆ. ಆದರೆ ಬಹುತೇಕ ಸಂದರ್ಭಗಳಲ್ಲಿ ಅವರೇನು ಬರೆದಿದ್ದಾರೆಂದು ಜನರಿಗೆ ತಿಳಿಯುವುದೇ ಇಲ್ಲ. ಈ ಕಾರಣಕ್ಕಾಗಿಯೇ, ಅಕ್ಷರಗಳು ಸ್ಪಷ್ಟವಾಗಿರಬೇಕು ಎಂಬ ಆಗ್ರಹ ಕೇಳಿಬರುತ್ತಲೇ ಇರುತ್ತದೆ. ಕೇವಲ ಕಾಂಪೌಂಡರ್‌ಗಳಿಗೆ, ಅಂಗಡಿಯವರಿಗೆ ಮಾತ್ರವಲ್ಲ, ರೋಗಿಗಳಿಗೆ ಮತ್ತು ಅವರ ಕುಟುಂಬದವರಿಗೂ ಸ್ಪಷ್ಟವಾಗಿ ಅರ್ಥವಾಗುವಂತೆ ಇರಬೇಕು. ಇದರಿಂದ ಒಂದು ರೀತಿಯ ಪಾರದರ್ಶಕತೆಯೂ ಇರುತ್ತದೆ. ಬಹುಶಃ ಈ ಕಾರಣಕ್ಕಾಗಿ, ಉತ್ತರಪ್ರದೇಶದ ಕಿಂಗ್‌ ಜಾರ್ಜ್‌ ವೈದ್ಯಕೀಯ ಯೂನಿವರ್ಸಿಟಿಯು ತನ್ನಲ್ಲಿ ಕೆಲಸ ಮಾಡುವ ಎಲ್ಲಾ ವೈದ್ಯರೂ ಓಷಧದ ಹೆಸರನ್ನು ದೊಡ್ಡ ಅಕ್ಷರಗಳಲ್ಲಿ ಬರೆಯಬೇಕೆಂದು ಆದೇಶಿಸಿದೆ. ಅಕ್ಷರಗಳು ಅಸ್ಪಷ್ಟವಾಗಿದ್ದರೆ, ಮುಂದೆ ಬೇರೆ ವೈದ್ಯರ ಬಳಿ ಹೋದಾಗ ಅವರಿಗೂ ಗೊಂದಲವಾಗುವ ಅಪಾಯವಿರುತ್ತದೆ ಎಂಬ ಬುದ್ಧಿಮಾತನ್ನೂ ವೈದ್ಯರಿಗೆ ಹೇಳಲಾಗಿದೆ.

ಆದಾಗ್ಯೂ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾದ ನಿಯಮಗಳಲ್ಲಿ, ವೈದ್ಯರು ಸ್ಪಷ್ಟವಾಗಿ, ಕ್ಯಾಪಿಟಲ್ ಅಕ್ಷರಗಳಲ್ಲಿ ಔಷಧ ಮತ್ತು ಪರೀಕ್ಷೆಯ ವಿವರಗಳನ್ನು ಬರೆಯಬೇಕೆಂದು ಸ್ಪಷ್ಟಪಡಿಸಲಾಗಿದೆ. ಖಾಸಗಿ ಆಸ್ಪತ್ರೆಗಳಿಗೆ ಮಾನ್ಯತೆ ನೀಡುವ ಸಮಯದಲ್ಲೂ ಷರತ್ತುಗಳಲ್ಲಿ ಈ ಅಂಶ ಇರುತ್ತದೆ. ಖುದ್ದು ಸರ್ಕಾರಗಳೂ ಅನೇಕ ಬಾರಿ ಈ ವಿಷಯವಾಗಿ ಸ್ಪಷ್ಟ ನಿರ್ದೇಶನಜಾರಿಗೊಳಿಸಿವೆ. ಆದರೆ ಅನೇಕ ವೈದ್ಯರಿಗೇಕೋ ಈ ನಿಯಮಗಳ ಪಾಲನೆ ಅವಶ್ಯ ಎನಿಸುತ್ತಿಲ್ಲ.

ಮತ್ತೂಂದು ಅಂಶವೆಂದರೆ, ಕೆಲ ವೈದ್ಯರು ರೋಗಿಗಳಿಗೆ ಔಷಧಗಳನ್ನು ನಿರ್ದಿಷ್ಟ ಅಂಗಡಿಗಳಿಂದಲೇ ಖರೀದಿಸಬೇಕೆಂದು ಹೇಳುತ್ತಾರೆ. ಆ ಅಂಗಡಿಯವರು ಕ್ಷಣಮಾತ್ರದಲ್ಲಿ ಅಕ್ಷರಗಳನ್ನು ಅರ್ಥಮಾಡಿಕೊಂಡು ಔಷಧ ಕೊಟ್ಟುಬಿಡುತ್ತಾರೆ. ಈ ವಿಷಯವೂ ಅನೇಕ ರೋಗಿಗಳಿಗೆ, ಅವರ ಕುಟುಂಬದವರಿಗೆ ಕಿರಿಕಿರಿಯ ವಿಷಯವಾಗಿರುತ್ತದೆ. ಆ ಔಷಧಗಳು ಆ ಔಷಧಾಲಯವನ್ನು ಬಿಟ್ಟು ಬೇರೆ ಕಡೆ ಸಿಗುವುದೇ ಕಠಿಣವಾಗಿರುತ್ತದೆ. ಈ ವಿಷಯದಲ್ಲೂ ಸರ್ಕಾರ ಮತ್ತು ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ, ಕಟ್ಟುನಿಟ್ಟಿನ ನಿರ್ದೇಶನಗಳನ್ನು ನೀಡಬೇಕಾದ ಅಗತ್ಯವಿದೆ.

ಮೇಲ್ನೋಟಕ್ಕೆ ಕೈಬರಹದ ವಿಷಯ ಅಷ್ಟೇನೂ ಗಂಭೀರವಲ್ಲ ಎನಿಸಿದರೂ, ವೈದ್ಯರೆಡೆಗೆ ಜನರಿಗೆ ನಂಬಿಕೆ ಬೆಳೆಯುವುದಕ್ಕೆ, ಪಾರದರ್ಶಕತೆ ಬೆಳೆಯುವುದಕ್ಕೆ ಇಂಥ ಚಿಕ್ಕಪುಟ್ಟ ಬದಲಾವಣೆಗಳೂ ಅತ್ಯವಶ್ಯಕ.

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-editorial

Editorial: ವಿದ್ಯಾರ್ಹತೆಗೆ ದೇಶವ್ಯಾಪಿ ಮಾನ್ಯತೆ, ಹೈಕೋರ್ಟ್‌ ತೀರ್ಪು ನ್ಯಾಯೋಚಿತ

13-editorial

Temperature: ಸಂಪಾದಕೀಯ-ತಾಪಮಾನ ಹೆಚ್ಚಳದ ಆತಂಕ: ಮುಂಜಾಗ್ರತೆಯೇ ಮದ್ದು

ಉಚಿತಗಳ ಆಮಿಷಗಳಿಗೆ ಕಡಿವಾಣ: ಚು.ಆಯೋಗ ಬದ್ಧತೆ ತೋರಲಿ

ಉಚಿತಗಳ ಆಮಿಷಗಳಿಗೆ ಕಡಿವಾಣ: ಚು.ಆಯೋಗ ಬದ್ಧತೆ ತೋರಲಿ

vidhana-Soudha

Editorial: ಪ್ರಾಥಮಿಕ ಶಾಲಾ ಶಿಕ್ಷಕರ ಪಠ್ಯೇತರ ಹೊರೆ ಇಳಿಸಿ

ಮಹಿಳಾ ಆರೋಪಿಗಳ ಬಂಧನ ವೇಳೆ ವಿವೇಚನೆ ಅತ್ಯವಶ್ಯ

ಮಹಿಳಾ ಆರೋಪಿಗಳ ಬಂಧನ ವೇಳೆ ವಿವೇಚನೆ ಅತ್ಯವಶ್ಯ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.