“ಹಲಸು ಮೌಲ್ಯವರ್ಧನೆ ಪ್ರಯೋಗ ನಡೆಯಲಿ’
Team Udayavani, Jul 13, 2019, 5:00 AM IST
ಕಲ್ಲಡ್ಕ: ಬಡವರ ಹಸಿವು ನೀಗಿಸುವ ಹಣ್ಣು ಎಂದೇ ಖ್ಯಾತಿ ಪಡೆದ ಹಲಸು ಯಾವುದೇ ರಾಸಾಯನಿಕದ ಬಳಸದ ಪ್ರಕೃತಿದತ್ತ ಪರಿಪೂರ್ಣ ಆಹಾರ. ಹಲಸಿನ ವೈವಿಧ್ಯದ ಮೇಲೆ ಇನ್ನಷ್ಟು ಸಂಶೋಧನೆ ಆಗಬೇಕಾಗಿದೆ. ಅದರ ಮೌಲ್ಯವರ್ಧನೆ ಪ್ರಯೋಗ ನಡೆಯಬೇಕು ಎಂದು ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಹೇಳಿದರು.
ಜು. 12ರಂದು ಕಲ್ಲಡ್ಕ ಶ್ರೀರಾಮ ಪದವಿ ಮಹಾವಿದ್ಯಾಲಯದ ದಶಮಾ ನೋತ್ಸವ ಪ್ರಯುಕ್ತ ಆಯೋಜಿಸಿದ ಹಲಸು ಮೇಳ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಅವರು ಮಾತನಾಡಿದರು. ಪುತ್ತೂರು ವಿವೇಕಾನಂದ ವಿದ್ಯಾ ವರ್ಧಕ ಸಂಘದ ಆಡಳಿತ ಮಂಡಳಿ ಸದಸ್ಯ ಸೇಡಿಯಾಪು ಜನಾರ್ಧನ ಭಟ್ ಮಾತನಾಡಿ, ಹಲಸು ಆಹಾರಕ್ಕೆ ಮಾತ್ರವಲ್ಲ ಆರೋಗ್ಯಕ್ಕೂ ಪೂರಕ ವಾದುದು. ಹಲಸಿನ ಮರದ ಚಕ್ಕೆ ಹೋಮಕ್ಕೆ, ಎಲೆಯನ್ನು ಮಡಚಿ ಅಕ್ಕಿಯ ತಿಂಡಿ ಬೇಯಿಸುತ್ತಾರೆ. ಹಲಸಿನ ಎಲೆಯಲ್ಲಿ ನೀಡುವ ದನದ ತುಪ್ಪ ವಾತ ಮುಂತಾದ ರೋಗ ಶಮನ ಕಾರಿ ಎಂದು ಗುರುತಿಸಲಾಗಿದೆ. ಹಲಸಿನ ಹಣ್ಣಾದಾಗ ಸೊಳೆ ತಿನ್ನಲು, ಕಾಯಿ ಸೊಳೆ ಇದ್ದಾಗ ಉಪ್ಪಿನಲ್ಲಿ ಹಾಕಲು ಉಪಯೋಗ ಆಗುತ್ತದೆ. ರಚ್ಚೆ ಜಾನುವಾರುಗಳಿಗೆ ಉತ್ತಮ ಆಹಾರ. ಮಯಣ ಇಲ್ಲದ, ಬೀಜ ಇಲ್ಲದ, ಹಳದಿ-ಬಿಳಿ-ಕೆಂಪು ಮಿಶ್ರ ಬಣ್ಣದ ಸೊಳೆಗಳಿರುವ ಹಣ್ಣು ಲಭ್ಯವಿದೆ ಎಂದರು.
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ ಭಟ್ ಕಲ್ಲಡ್ಕ ಉಪಸ್ಥಿತ ರಿದ್ದರು. ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ರಸಾದ ಕಾಯರ್ಕಟ್ಟೆ ಸ್ವಾಗತಿಸಿ, ರಾಜ್ಯಶಾಸ್ತ್ರ ಉಪನ್ಯಾಸಕಿ ಜಯಲಕ್ಷ್ಮೀ ವಂದಿಸಿ, ವಾಣಿಜ್ಯಶಾಸ್ತ್ರ ಉಪನ್ಯಾಸಕಿ ಸ್ವರ್ಣಗೌರಿ ನಿರೂಪಿಸಿದರು.
ಜೀವನ ವಿಜ್ಞಾನ
ಹಲಸಿನ ಪರಿಮಳ ಆಹ್ಲಾದಕರ, ಹಲಸು ಮೇಳದಿಂದಾಗಿ ಜೀವನ ವಿಜ್ಞಾನವನ್ನೂ ಬೋಧಿಸಿದಂತಾಗಿದೆ. ಹಲಸು ಮೇಳ ಕ್ರಾಂತಿಕಾರಕ ಬದಲಾವಣೆ ತರಬಲ್ಲ ಹೆಜ್ಜೆಯಾಗಿದೆ. ಈ ಹಿಂದೆ ನಡೆದ ಹಲಸು ಮೇಳಗಳು ಪೂರಕಶಕ್ತಿಯನ್ನು ಒದಗಿಸಿದೆ.
-ಎಸ್.ಆರ್. ಸತೀಶ್ಚಂದ್ರ
ಕ್ಯಾಂಪ್ಕೋ ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Puttur: ಎಪಿಎಂಸಿ ವಸತಿಗೃಹದಲ್ಲಿ ಅನಧಿಕೃತ ವಾಸ; ಮಹಿಳೆ ಹೊರಕ್ಕೆ
Belthangady: ರಸ್ತೆ ಶೋಚನೀಯ; ನಿರ್ವಹಣೆಯ ಕೊರತೆ; ರಸ್ತೆಯಲ್ಲಿ ಇಂಗು ಗುಂಡಿ ತರಹದ ಹೊಂಡ
Puttur: ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯನಿರ್ವಹಣಾಧಿಕಾರಿ ಅಪಘಾತದಲ್ಲಿ ಮೃತ್ಯು
Aranthodu: ಅರಮನೆಗಯ ಶಿಥಿಲಗೊಂಡ ತೂಗು ಸೇತುವೆಯಿಂದ ಕೆಳಗೆ ಬಿದ್ದು ಮೂವರಿಗೆ ಗಾಯ
Puttur: ಅಪರಿಚಿತರಿಂದ ಬಾಲಕನಿಗೆ ಹಲ್ಲೆ
MUST WATCH
ಹೊಸ ಸೇರ್ಪಡೆ
ED ತನಿಖೆಗೆ ಮುಡಾ ಎಲ್ಲಾ ದಾಖಲೆ ನೀಡಲಿದೆ: ಸಚಿವ ಬೈರತಿ ಸುರೇಶ್ ಹೇಳಿಕೆ
La Tomatina: ಏನಿದು ಲಾ ಟೊಮಾಟಿನಾ ಹಬ್ಬ…ಈ ಹಬ್ಬದ ವಿಶೇಷತೆ ಏನು ಗೊತ್ತಾ?
Police dog; ರೈತನ ಮನೆಯಿಂದ ಕಳವಾಗಿದ್ದ 1.07 ಕೋಟಿ ರೂ.ಹಣ ಪತ್ತೆಗೆ ನೆರವಾದ ಶ್ವಾನ
ಶಿರೂರು ಗುಡ್ಡ ಕುಸಿತ ಪ್ರಕರಣ: ಮೂರು ತಿಂಗಳಾದರೂ ಪತ್ತೆಯಾಗದ ಕಳೇಬರ!
ಭತ್ತದ ಬೆಳೆಗೆ ಕೊಳವೆ ರೋಗ; ರೈತರಿಗೆ ಸಿಗದ ಸೂಕ್ತ ಮಾರ್ಗದರ್ಶನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.