![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Jul 18, 2019, 5:00 AM IST
ಪಾಟ್ನಾ: ಪ್ರಧಾನಿ ನರೇಂದ್ರ ಮೋದಿ ಅವರು ಮೇ 28ರಂದು ಪ್ರಮಾಣ ವಚನ ಸ್ವೀಕರಿಸುವ 2 ದಿನಗಳ ಮೊದಲು ಬಿಹಾರದಲ್ಲಿರುವ ಆರ್ಎಸ್ಎಸ್ನ ಎಲ್ಲ ನಾಯಕರ ಬಗ್ಗೆ ಮಾಹಿತಿ ಸಂಗ್ರಹಿಸಲು ಆದೇಶ ನೀಡಲಾಗಿತ್ತು. ಈ ಬಗ್ಗೆ ಆ ರಾಜ್ಯದ ಪೊಲೀಸ್ ಮಹಾನಿರ್ದೇಶಕರು ಜಿಲ್ಲೆಗಳಲ್ಲಿರುವ ಡೆಪ್ಯುಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸರಿಗೆ ಆದೇಶ ರವಾನಿಸಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ.
ಆರ್ಎಸ್ಎಸ್ ಸೇರಿದಂತೆ 18 ಸಂಘಟನೆಗಳ ವಿವಿಧ ಹಂತದ ಪದಾಧಿಕಾರಿಗಳ ಹೆಸರು, ವಿಳಾಸ ಮತ್ತು ಇತರ ವಿವರ ಸಂಗ್ರಹಿಸುವಂತೆ ಸೂಚಿಸಲಾಗಿತ್ತು. ಈ ಬಗೆಗಿನ ಟಿಪ್ಪಣಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ದರ್ಭಾಂಗಾ ಟೌನ್ನ ಬಿಜೆಪಿ ಶಾಸಕ ಸಂಜಯ್ ಸರಾವಗಿ “ಚುನಾವಣೆ ನಡೆದು ಸರಕಾರ ಅಧಿಕಾರ ಸ್ವೀಕರಿಸುವ ಸಂದರ್ಭದಲ್ಲಿ ಜೆಡಿಯು ಜತೆಗಿನ ಮೈತ್ರಿಯಲ್ಲಿ ಎಲ್ಲೋ ಲೋಪವಾಗಿತ್ತು. ನಿತೀಶ್ ಕುಮಾರ್ ಅವರಿಗೆ ಬೇಸರವಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಕುಸಿದು ಬಿದ್ದು ರಾಷ್ಟ್ರಪತಿ ಆಡಳಿತ ಜಾರಿಯಾಗಲು ಬಯಸುತ್ತಿದ್ದಾರೆ’ ಎಂದು ಹೇಳಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಮುಖ್ಯಮಂತ್ರಿ ನಿತೀಶ್ ಕುಮಾರ್ರನ್ನು ಬಿಜೆಪಿ ಒತ್ತಾಯಿಸಿದೆ. ವರದಿ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಬಿಜೆಪಿ ಎಂಎಲ್ಸಿ ಸಚ್ಚಿದಾನಂದ ರೈ, “ಸಿಎಂ ನಿತೀಶ್ ಅವರ ಉದ್ದೇಶದ ಬಗ್ಗೆ ಪಕ್ಷವು ಅತ್ಯಂತ ಜಾಗರೂಕರಾಗಿರಬೇಕು’ ಎಂದಿದ್ದಾರೆ. ಇದು ಈಗ ಬಿಹಾರ ಆಡಳಿತಾರೂಢ ಮಿತ್ರಪಕ್ಷಗಳ ನಡುವೆ ಎಲ್ಲವೂ ಸರಿಯಿಲ್ಲ ಎಂಬುದನ್ನು ತೋರಿಸಿದೆ ಮಾತ್ರವಲ್ಲ, ಬಿಜೆಪಿ- ಜೆಡಿಯು ನಡುವೆ ವೈಮನಸ್ಸು ಮೂಡಿಸಿದೆ.
ಜಾಲತಾಣಗಳಲ್ಲಿ ಡಿವೈಎಸ್ಪಿಗಳಿಗೆ ನೀಡಲಾಗಿದ್ದ ಟಿಪ್ಪಣಿ ವೈರಲ್
ವಿವರಣೆ ನೀಡುವಂತೆ ಬಿಹಾರ ಸಿಎಂ ನಿತೀಶ್ಗೆ ಬಿಜೆಪಿ ಒತ್ತಾಯ
18 ಸಂಘಸಂಸ್ಥೆಗಳ ನಾಯಕರ ಕುರಿತ ಮಾಹಿತಿ ಸಂಗ್ರಹಿಸಲು ಸೂಚನೆ ನೀಡಿದ್ದ ಸರಕಾರ
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
You seem to have an Ad Blocker on.
To continue reading, please turn it off or whitelist Udayavani.