![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Jul 19, 2019, 12:02 PM IST
ಹಳೇಬೀಡು ಮೇವು ಕೇಂದ್ರಕ್ಕೆ 14 ಟನ್ ಮೇವು ಹೆಚ್ಚುವರಿಯಾಗಿ ಪೂರೈಕೆಯಾಗಿರುವುದಕ್ಕೆ ರೈತರು ಸಂತಸ ವ್ಯಕ್ತಪಡಿಸಿದ್ದಾರೆ.
ಹಳೇಬೀಡು: ಪಟ್ಟಣದ ಮೇವು ಕೇಂದ್ರಕ್ಕೆ 14 ಟನ್ಗೂ ಹೆಚ್ಚು ಮೇವು ಹೆಚ್ಚುವರಿಯಾಗಿ ಪೂರೈಕೆಯಾಗಿರುವುದಕ್ಕೆ ರೈತರ ಮೊಗದಲ್ಲಿ ಸಂತಸ ಮೂಡಿದೆ.
ದಿನಂಪ್ರತಿ ರೈತರು ಮೇವಿಗಾಗಿ ಪಟ್ಟಣದ ಸಮೀಪದ ಬಂಡಾರಿಕಟ್ಟೆ ಗ್ರಾಮದ ಬಳಿಯಿರುವ ಬಯಲು ರಂಗಮಂದಿರದ ಬಳಿ ಕಾಯುತ್ತಿದ್ದ ರೈತರಿಗೆ ಗುರುವಾರ ಖುಷಿಯ ದಿನವಾ ಗಿತ್ತು. ಉದಯವಾಣಿ ಪತ್ರಿಕೆ ಯಲ್ಲಿ ಮೇವು ಅಭಾವದ ಬಗ್ಗೆ ವಿಸ್ತೃತ ವರದಿ ಮಾಡಲಾಗಿದ್ದು, ವರದಿಯ ಫಲಶೃತಿ ಪರಿಣಾಮ ಗುರುವಾರದಂದು ಹೆಚ್ಚುವರಿಯಾಗಿ ಮೇವು ಕೇಂದ್ರಕ್ಕೆ ಮೇವು ಬಂದಿರುವುದನ್ನು ಕಂಡ ರೈತರು ಸಂತೋಷ ಪಟ್ಟರು.
ಮೂರು ಇಲಾಖೆಗಳ ಸಹಯೋಗ: ಕಂದಾಯ ಇಲಾಖೆ, ಪಶುಪಾಲನೆ, ಗ್ರಾಮಪಂಚಾಯಿತಿ ಸಹಯೋಗದೊಂದಿಗೆ ರೈತರಿಗೆ ಮೇವು ವಿತರಿಸಲಾಗುತ್ತಿದೆ. ಕಂದಾಯ ಇಲಾಖೆ ಮೇವನ್ನು ಸಂಗ್ರಹಣೆ, ಸರಬರಾಜು. ಮಾಡಿದರೆ, ಗ್ರಾಮಪಂಚಾಯಿತಿ, ಹಾಗೂ ಪಂಚಾಯಿತಿ ಅಭಿವೃದ್ಧಿಅಧಿಕಾರಿಗಳು ಮೇಲ್ವಿಚಾರಣೆ ಮಾಡುತ್ತಾರೆ. ಪಶುಪಾಲನೆ ಇಲಾಖೆ ಟೋಕನ್ ವಿತರಣೆ, ಜಾನುವಾರುಗಳ ದೃಢೀಕರಣ, ಮೇವು ಗುಣ ಮಟ್ಟ ಪರಿಶೀಲನೆ ಮಾಡಿ ವಿತರಣೆ ಮಾಡುವ ಕಾರ್ಯ ಮಾಡಲಾಗುತ್ತಿದೆ.
ಹಲವು ಜಿಲ್ಲೆಗಳಿಂದ ಮೇವು ಪೂರೈಕೆ: ಹೋಬಳಿಯ 5 ಪಂಚಾಯಿತಿ ಕೇಂದ್ರಗಳಿಗೆ ಮಲೆಬೆನ್ನೂರು, ಶಿವಮೊಗ್ಗ, ಭದ್ರಾವತಿ, ನಂಜನಗೂಡು, ಮಂಡ್ಯ, ಮುಂತಾದ ಕಡೆಗಳಿಂದ ರಾಗಿ, ಭತ್ತ, ಜೊಳದ ಸೆಪ್ಪೆ, ಮೇವು ತರಿಸಿ ಮೇವು ವಿತರಿಸಲಾಗುತ್ತಿದೆ.
ಮಳೆಗಾಲವಾಗಿದ್ದ ಕಾರಣ ಶಿವಮೊಗ್ಗ, ಭದ್ರಾವತಿ ಭಾಗಗಳಲ್ಲಿ ಹೆಚ್ಚು ಮಳೇಯಾಗಿರುವ ಕಾರಣ ಮೇವು ತಡವಾಗಿ ಬಂದಿದೆ. ನಿಗದಿಯಂತೆ ರೈತರ ಅವಶ್ಯಕತೆಗೆ ತಕ್ಕಂತೆ ಪ್ರತಿದಿನ ಮೇವು ತರಿಸಿ ಮೇವು ವಿತರಣೆ ಮಾಡಲಾಗುತ್ತದೆ.
ಇಲ್ಲಿಯವರೆಗೆ 240 ಟನ್ ಮೇವು ವಿತರಣೆ ಮಾಡಲಾಗಿದೆ. 980 ಮಂದಿ ಇದರ ಪ್ರಯೋಜನ ಕೂಡ ಪಡೆದು 6,995 ರಾಸುಗಳಿಗೆ ಮೇವು ಪೂರೈಕೆ ಮಾಡಲಾಗಿದೆ.
ಗುಣ ಮಟ್ಟವಿಲ್ಲದ ಮೇವನ್ನು ವಾಪಸ್ ಕಳುಹಿಸಿ ಉತ್ತಮ ಮೇವನ್ನು ತರಿಸಿ ರೈತಬಾಂಧವರಿಗೆ ವಿರತಣೆ ಮಾಡಲಾಗುತ್ತಿದೆ ಎಂದು ಪಶುಪಾಲನಾ ವೈದ್ಯಾಧಿಕಾರಿ ಡಾ.ಎಂ. ವಿನಯ್ ಅವರು ತಿಳಿಸಿದ್ದಾರೆ.
R. Ashok: ನವೆಂಬರ್ ಬಳಿಕ ಕಾಂಗ್ರೆಸ್ನಲ್ಲಿ ಜ್ವಾಲಾಮುಖಿ ಸ್ಫೋ*ಟ: ಅಶೋಕ್
R. Ashok: ಮೈಸೂರು ಕೇಸ್ನಲ್ಲಿ ಪೊಲೀಸರೇ ಅಪರಾಧಿಗಳಾಗ್ತಾರೆ; ಆರ್.ಅಶೋಕ್
ಇಂದು ಎತ್ತಿನಹೊಳೆ ವೈಮಾನಿಕ ಪರಿವೀಕ್ಷಣೆ ನಡೆಸುವ ಡಿಸಿಎಂ
Arsikere: ಮದುವೆಗೆ ಪ್ರಿಯತಮೆ ನಿರಾಕರಣೆ; ಯುವಕ ಸಾವು
ಕಾಂಗ್ರೆಸ್ಗೆ 136 ಸ್ಥಾನವಿದ್ದರೂ ಜೆಡಿಎಸ್ ಶಾಸಕರ ಸೆಳೆಯೋ ದುಸ್ಥಿತಿ: ಎಚ್.ಡಿ.ರೇವಣ್ಣ
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.