ಕಾರ್ಕಳಕ್ಕೂ ಕಾಲಿರಿಸಿತೇ “ಟ್ವಿಸ್ಟರ್‌’!

ಹಾಲಿವುಡ್‌ನ‌ "ಟ್ವಿಸ್ಟರ್‌' ಸಿನೆಮಾವನ್ನು ನೆನಪಿಸುವಂತಿದೆ ಕಾರ್ಕಳದ ಘಟನೆ

Team Udayavani, Aug 1, 2019, 1:55 PM IST

suli-gali

ಹಾಲಿವುಡ್‌ನ‌ “ಟ್ವಿಸ್ಟರ್‌’ ಸಿನೆಮಾವನ್ನು ನೋಡದವರಿಲ್ಲ. 1996ರ ಈ ಸ್ಟೀವನ್‌ ಸ್ಪೀಲ್‌ಬರ್ಗ್‌ ಸಿನೆಮಾ ಅಮೆರಿಕದಲ್ಲಿ ಟೊರ್ನಾಡೋ ಒಂದರ ಅಧ್ಯಯನದ ಕಥೆಯ ಎಳೆಯನ್ನು ಹೊಂದಿರುವಂಥದ್ದು. ಆ ವರ್ಷದ ದ್ವಿತೀಯ ಅತಿ ಹೆಚ್ಚು ಬಾಕ್ಸ್‌ ಆಫೀಸ್ ಗಳಿಕೆಯ ಸಿನೆಮಾ ಅದು . ಅಕಾಡೆಮಿ ಅವಾರ್ಡ್‌ಗೆ ನಾಮಿನೇಟ್‌ ಆಗಿದ್ದರೂ “ಇಂಡಿಪೆಂಡೆನ್ಸ್‌ ಡೇ’ ಎದುರು ಸೋತಿತ್ತು.

ಪ್ರಶ್ನೆಯೀಗ ಇರುವುದು ನಮ್ಮಲ್ಲೂ “ಟ್ವಿಸ್ಟರ್‌’ ಉಂಟಾಗಲು ಆರಂಭವಾಗಿವೆಯೇ?! ಪ್ರತ್ಯಕ್ಷದರ್ಶಿಗಳ ಹೇಳಿಕೆಗಳನ್ನು ಗಮನಿಸಿದರೆ ಕಾರ್ಕಳದ ಪೆರುವಾಜೆ ದೇವರಕಟ್ಟೆ ಭಾಗದಲ್ಲಿ ಗುರುವಾರ ಬೆಳಗ್ಗೆ ಸಂಭವಿಸಿದ್ದು ಸಣ್ಣ ಪ್ರಮಾಣದ ಒಂದು ಟೋರ್ನಾಡೊ ಎನ್ನಿಸುತ್ತದೆ. ಗದ್ದೆಯ ನೀರು 200 ಮೀಟರ್‌ನಷ್ಟು ಎತ್ತರಕ್ಕೆ ಚಿಮ್ಮುವುದು, ನವಿಲು
ಜತೆಯಲ್ಲಿ ತೇಲಾಡುವುದು ಮುಗಿಲು ಆಲಿಕೆಯಂತೆ ಗಿರಗಿರ ತಿರುಗುತ್ತಾ ನೆಲವನ್ನು ಸ್ಪರ್ಶಿಸುವ ಟೊರ್ನಾಡೊದಲ್ಲಿ ಮಾತ್ರ ಸಾಧ್ಯ . ‘ಟ್ವಿಸ್ಟರ್‌” ಸಿನಿಮಾದಲ್ಲಿ ದನಗಳು ಕಾರಿನ ಮುಂದೆಯೇ ತೇಲಾಡುತ್ತ ಹೋಗುವ ದೃಶ್ಯವನ್ನು ನೆನಪಿಸಿಸಕೊಳ್ಳಿ!

ಟೊರ್ನಾಡೊ ಎಲ್ಲಿ ಹೆಚ್ಚು?
ಟೊರ್ನಾಡೊಗಳು ಹೆಚ್ಚಾಗಿ ಉಂಟಾಗುವುದು ಉತ್ತರ ಅಮೆರಿಕ, ದಕ್ಷಿಣ ಆಫ್ರಿಕಾ , ಯೂರೋಪ್ ಗಳಲ್ಲಿ . ಬಾಂಗ್ಲಾಮತ್ತು ಅದಕ್ಕೆ ಹೊಂದಿಕೊಂಡ ಭಾರತದ ಪೂರ್ವ ಭಾಗದಲ್ಲೂ ಟೊರ್ನಾಡೊಗಳು ಉಂಟಾಗುವುದು ಕಂಡುಬಂದಿದೆ. ಟೊರ್ನಾಡೊಕ್ಕೆ ಹೋಲಿಸಬಹುದಾದ ಸುಂಟರಗಾಳಿಗಳು ನಮ್ಮಲ್ಲೂ ಉಂಟಾಗುತ್ತವೆ. ಆದರೆ ಟೊರ್ನಾಡೊಗಳು ಹೆಚ್ಚು
ತೀವ್ರವಾದವು; ಹಾನಿಯೂ ಹೆಚ್ಚು.

ಹೇಗೆ ಉಂಟಾಗುತ್ತದೆ ಟೊರ್ನಾಡೊ?
ಒಂದು ಕೇಂದ್ರ ಬಿಂದುವಿನಲ್ಲಿ ಹಠಾತ್‌ ಉಂಟಾದ ವಾಯುಭಾರ ಕು‌ಸಿತದಿಂದಾಗಿ ಸುತ್ತಲಿನ ಗಾಳಿ ಆಲಿಕೆಯಂತೆ ಸುತ್ತುತ್ತಾ ಮೋಡ ಮತ್ತು ನೆಲವನ್ನು ಸಂಧಿಸುವುದು ಟೊರ್ನಾಡೊ . ಇದು ಸುತ್ತುವ ವೇಗ ತಾಸಿಗೆ 180 ಕಿ.ಮೀ. ವರೆಗೂ ಇರಬಹುದು . ಇವು ಭೂಮಿಯ ಉತ್ತರ ಗೋಳಾರ್ಧದಲ್ಲಿ ಅಪ್ರದಕ್ಷಿಣವಾಗಿಯೂ ದಕ್ಷಿಣ ಗೋಳಾರ್ಧದಲ್ಲಿ ಪ್ರದಕ್ಷಿಣವಾಗಿಯೂ ಸುತ್ತುತ್ತವೆ. ತಾನು ಸಾಗುವ ದಾರಿಯುದ್ದಕ್ಕೂ ಎದುರು ಸಿಕ್ಕಿದ ಎಲ್ಲವನ್ನೂ ತನ್ನೊಳಗೆ ಸೇರಿಸಿಕೊಂಡು ಗಿರಗಿರ ತಿರುಗುತ್ತಾ ಕೆಲವು ಕಿ.ಮೀ. ದೂರ ಸಾಗಿ ಮಾಯವಾಗುತ್ತವೆ.

ಈ ತಿರುಗುವ ವೇಗ, ಅದರೊಳಗಿನ ಹವಾಮಾನ ಸ್ಥಿತಿಗತಿ ಎಷ್ಟು ಸಂಕೀರ್ಣವಾಗಿರುತ್ತದೆ ಎಂದರೆ ಅದರೊಳಗೆ ಸಿಲುಕಿದ ಹುಲ್ಲುಕಡ್ಡಿ ಕೂ‌ಡ ಲೋಹದ ಸೂಜಿಯಂತೆ ನಾಟುತ್ತದಂತೆ!

ಪ್ರಕೃತಿಯ ವಿಸ್ಮಯಗಳು ಎಲ್ಲೂ, ಯಾವುದೇ ಕ್ಷಣದಲ್ಲೂ ಸಂಭವಿಸಲು ಸಾಧ್ಯ. ಕಾರ್ಕಳದಲ್ಲಿ ಗುರುವಾರ ಬೆಳಗ್ಗೆ ಘಟಿಸಿದ್ದು ಅಂಥ ವಿಚಿತ್ರಗಳಲ್ಲಿ ಒಂದಾದ ಟೋರ್ನಾಡೊವೇ ಎಂಬ ಕುತೂಹಲಭರಿತ ಪ್ರಶ್ನೆಗೆ ಹವಾಮಾನ ತಜ್ಞರು ಉತ್ತರ ಹೇಳಬೇಕು.

ಟಾಪ್ ನ್ಯೂಸ್

canada

Canada ವಲಸಿಗರಿಗೆ ನಿಯಂತ್ರಣ: ಭಾರತೀಯರಿಗೆ ಸಂಕಷ್ಟ ಸಾಧ್ಯತೆ

Vimana 2

Immigration process;ಬೆಂಗಳೂರು ವಿಮಾನ ನಿಲ್ದಾಣದಲ್ಲಿನ್ನು ಕ್ಷಣಗಳಲ್ಲೇ ವಲಸೆ ಪ್ರಕ್ರಿಯೆ!

Prajwal Revanna ಜತೆ ಒಪ್ಪಿತ ಲೈಂಗಿಕ ಕ್ರಿಯೆ: ವಕೀಲರ ವಾದ

Prajwal Revanna ಜತೆ ಒಪ್ಪಿತ ಲೈಂಗಿಕ ಕ್ರಿಯೆ: ವಕೀಲರ ವಾದ

DarshanBellary Jail ಸಿಬಂದಿ ವಿರುದ್ಧ ಆಯೋಗಕ್ಕೆ ದರ್ಶನ್‌ ದೂರು?

Bellary Jail ಸಿಬಂದಿ ವಿರುದ್ಧ ಆಯೋಗಕ್ಕೆ ದರ್ಶನ್‌ ದೂರು?

ರಾಜಕಾರಣಿಗಳನ್ನು ಹನಿಟ್ರ್ಯಾಪ್‌ ಮಾಡುತ್ತಿದ್ದರಾ ಮುನಿರತ್ನ?

ರಾಜಕಾರಣಿಗಳನ್ನು ಹನಿಟ್ರ್ಯಾಪ್‌ ಮಾಡುತ್ತಿದ್ದರಾ ಮುನಿರತ್ನ?

High Court: ದೇಗುಲಗಳಿಗೆ ವ್ಯವಸ್ಥಾಪನ ಸಮಿತಿ ಬಗ್ಗೆ ಪ್ರಶ್ನಿಸಿದ ಅರ್ಜಿ ವಜಾ

High Court: ದೇಗುಲಗಳಿಗೆ ವ್ಯವಸ್ಥಾಪನ ಸಮಿತಿ ಬಗ್ಗೆ ಪ್ರಶ್ನಿಸಿದ ಅರ್ಜಿ ವಜಾ

R. V. Deshpande: ಡಿಕೆಶಿಗೆ ಸಿಎಂ ಆಗುವ ಅರ್ಹತೆಯಿದೆ

R. V. Deshpande: ಡಿಕೆಶಿಗೆ ಸಿಎಂ ಆಗುವ ಅರ್ಹತೆಯಿದೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Udupi: ಗೀತಾರ್ಥ ಚಿಂತನೆ-40: ದುರ್ಯೋಧನರಿಗಿಂತ ಶಕುನಿಗಳು ಅಪಾಯ

Udupi: ಗೀತಾರ್ಥ ಚಿಂತನೆ-40: ದುರ್ಯೋಧನರಿಗಿಂತ ಶಕುನಿಗಳು ಅಪಾಯ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 3ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ತೃತೀಯ ಬಹುಮಾನ ಗಳಿಸಿದ ರೀಲ್ಸ್

ಮುನಿಯಾಲ್‌ ಇನ್ಸ್ಟಿಟ್ಯೂಟ್‌ ಆಫ್ ಆಯುರ್ವೇದ ಮೆಡಿಕಲ್‌ ಕಾಲೇಜು

Sep.20: ಮುನಿಯಾಲ್‌ ಇನ್ಸ್ಟಿಟ್ಯೂಟ್‌ ಆಫ್ ಆಯುರ್ವೇದ ಮೆಡಿಕಲ್‌ ಕಾಲೇಜು ಘಟಿಕೋತ್ಸವ

Udupi: ಯುಜಿಡಿ ಚೇಂಬರ್‌ ಅವ್ಯವಸ್ಥೆಗಿಲ್ಲ ಪರಿಹಾರ

Udupi: ಯುಜಿಡಿ ಚೇಂಬರ್‌ ಅವ್ಯವಸ್ಥೆಗಿಲ್ಲ ಪರಿಹಾರ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

1-japp

Japan ಆ್ಯನಿಮೇಟೆಡ್‌ ರಾಮಾಯಣ ಅ.18ಕ್ಕೆ ಮರು ಬಿಡುಗಡೆ

canada

Canada ವಲಸಿಗರಿಗೆ ನಿಯಂತ್ರಣ: ಭಾರತೀಯರಿಗೆ ಸಂಕಷ್ಟ ಸಾಧ್ಯತೆ

Vimana 2

Immigration process;ಬೆಂಗಳೂರು ವಿಮಾನ ನಿಲ್ದಾಣದಲ್ಲಿನ್ನು ಕ್ಷಣಗಳಲ್ಲೇ ವಲಸೆ ಪ್ರಕ್ರಿಯೆ!

Prajwal Revanna ಜತೆ ಒಪ್ಪಿತ ಲೈಂಗಿಕ ಕ್ರಿಯೆ: ವಕೀಲರ ವಾದ

Prajwal Revanna ಜತೆ ಒಪ್ಪಿತ ಲೈಂಗಿಕ ಕ್ರಿಯೆ: ವಕೀಲರ ವಾದ

DarshanBellary Jail ಸಿಬಂದಿ ವಿರುದ್ಧ ಆಯೋಗಕ್ಕೆ ದರ್ಶನ್‌ ದೂರು?

Bellary Jail ಸಿಬಂದಿ ವಿರುದ್ಧ ಆಯೋಗಕ್ಕೆ ದರ್ಶನ್‌ ದೂರು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.