![kambala2](https://www.udayavani.com/wp-content/uploads/2025/02/kambala2-1-415x249.jpg)
![kambala2](https://www.udayavani.com/wp-content/uploads/2025/02/kambala2-1-415x249.jpg)
Team Udayavani, Aug 1, 2019, 7:01 PM IST
ಕಾಸರಗೋಡು: ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿದೇಶಕ್ಕೆ ಸಾಗಿಸಲು ಯತ್ನಿಸಿದ 11 ಲಕ್ಷ ರೂ. ಮೌಲ್ಯದ ವಿದೇಶಿ ಕರೆನ್ಸಿಯನ್ನು ವಶಪಡಿಸಲಾಗಿದೆ. ಇಬ್ಬರು ಪ್ರಯಾಣಿಕರಿಂದ ಯು.ಎಸ್. ಡಾಲರ್, ಯುಎಇ ದಿರಂ, ಸೌದಿ ರಿಯಾಲ್, ಯುರೋ ವಶಪಡಿಸಲಾಯಿತು.
ಪುದುಚ್ಚೇರಿ ಮುಲ್ಲು ಫಾರೂಕ್ ಆಲ್ವಿಕೋಯ, ಪಾದೂರು ಮೊಕೇರಿ ನಿವಾಸಿ ರೌಫ್ ಚಾಲುಪರಂಬತ್ನನ್ನು ಕಸ್ಟಂಸ್ ಅಧಿಕಾರಿಗಳು ಮತ್ತು ಸಿ.ಐ.ಎಸ್.ಎಫ್. ಅಧಿಕಾರಿಗಳು ನಡೆಸಿದ ತಪಾಸಣೆಯಲ್ಲಿ ವಿದೇಶಿ ಕರೆನ್ಸಿ ಪತ್ತೆಯಾಯಿತು.
ಬುಧವಾರ ಬೆಳಗ್ಗೆ 9.30 ಕ್ಕೆ ಏರ್ ಇಂಡಿಯಾ ಎಕ್ಸ್ಪ್ರೆಸ್ನಲ್ಲಿ ಅಬುದಾಬಿಗೆ ತೆರಳಲು ವಿಮಾನ ನಿಲ್ದಾಣಕ್ಕೆ ತಲುಪಿದ ಆಲ್ವಿಕೋಯ ನಿಂದ 30,210 ಯು.ಎ.ಇ. ದಿರಂ, 700 ಸೌದಿ ರಿಯಾಲ್, 380 ಯುರೋ, 50 ಯು.ಎಸ್. ಡಾಲರ್ ವಶಪಡಿಸಿಕೊ ಳ್ಳಲಾಯಿತು. ರಾತ್ರಿ 7.30ಕ್ಕೆ ಗೋ ಏರ್ ವಿಮಾನದಲ್ಲಿ ದುಬೈಗೆ ತೆರಳಲು ವಿಮಾನ ನಿಲ್ದಾಣಕ್ಕೆ ಬಂದಿದ್ದ ರೌಫ್ನ್ನು ತಪಾಸಣೆ ಮಾಡಿದಾಗ 25,130 ಯು.ಎ.ಇ. ದಿರಂ ಪತ್ತೆಯಾಗಿದ್ದು, ವಶಪಡಿಸಿಕೊಳ್ಳಲಾಯಿತು.
ಇಬ್ಬರನ್ನೂ ಕಸ್ಟಂಸ್ ವಿಭಾಗಕ್ಕೆ ಹಸ್ತಾಂತರಿಸಲಾಗಿದೆ. ಸೋಮವಾರ ಗೋ ಏರ್ ವಿಮಾನದಲ್ಲಿ ದುಬೈಗೆ ಪ್ರಯಾಣಿಸಲು ಬಂದಿದ್ದ ಕೂತುಪರಂಬದ ಖಾಲಿದ್ ಆಬಿದ್ನಿಂದ ಸಿಐಎಸ್ಎಫ್ ಅಧಿಕಾರಿಗಳು 7,200 ಡಾಲರ್ ವಶಪಡಿಸಿಕೊಂಡಿದ್ದರು.
You seem to have an Ad Blocker on.
To continue reading, please turn it off or whitelist Udayavani.