ಸ್ವ ಸಾಮರ್ಥ್ಯ ಅರಿತವ ಒಳ್ಳೆಯ ಕೆಲಸಗಾರ

ಮಠದ ಬೆಳಕು

Team Udayavani, Aug 3, 2019, 5:00 AM IST

z-5

ಅನೇಕರು ತಮ್ಮ ಶಕ್ತಿಯ ಪರಿಮಿತಿಯನ್ನು ಅರಿಯದೇ ಆಸೆಗಳನ್ನು ಕಟ್ಟಿಕೊಳ್ಳುತ್ತಾರೆ. ಕೆಲಸಗಳನ್ನು ಕೈಗೆತ್ತಿಕೊಳ್ಳುತ್ತಾರೆ. ಆಮೇಲೆ ತೃಪ್ತಿದಾಯಕ ಫ‌ಲ ಸಿಗದೇ, ಚಿಂತೆಗೊಳಗಾಗಿ, ಆರೋಗ್ಯ ಕೆಡಿಸಿಕೊಳ್ಳುತ್ತಾರೆ. ಪ್ರತಿಯೊಬ್ಬನಲ್ಲೂ ಒಂದು ವಿಶೇಷ ಶಕ್ತಿ ಇರುತ್ತದೆ. ಯಾವುದರಲ್ಲಿ ತನಗೆ ಶಕ್ತಿಯಿದೆ, ಎಷ್ಟು ಶಕ್ತಿ ಇದೆ ಎಂದು ನೋಡಿಕೊಂಡು ಮುಂದುವರಿದರೆ ತೃಪ್ತಿದಾಯಕ ಸಾಧನೆಯೂ ಆಗುತ್ತದೆ, ಆರೋಗ್ಯವೂ ಕೆಡುವುದಿಲ್ಲ.

ಭಗವಂತನ ಸೃಷ್ಟಿಯಲ್ಲಿ ವಿದ್ಯೆ- ಅವಿದ್ಯೆ ಎರಡೂ ಇದೆ. ವಿದ್ಯೆ ಎಂದರೆ, ಅರಿವು. ಅವಿದ್ಯೆ ಎಂದರೆ, ಆ ಅರಿವಿಗೆ ಬರುವ ಸಂಕೋಚ. ಅರಿವೇ ಸಂಕೋಚಕ್ಕೊಳಪಟ್ಟಾಗ ಅವಿದ್ಯೆ ಎನಿಸುತ್ತದೆ. ತನ್ನ ಅವಿದ್ಯೆಯ ಬಗ್ಗೆ ಅರಿವು ಬಂದರೆ, ಅದುವೇ ವಿದ್ಯೆ. ಅವಿದ್ಯೆಯ ಅರಿವು ವಿದ್ಯೆ. ವಿದ್ಯೆಗೆ ಸಂಕೋಚವುಂಟಾದರೆ ಅವಿದ್ಯೆ. ತನ್ನ ಶಕ್ತಿಯ ಬಗ್ಗೆ ತಪ್ಪು ಗ್ರಹಿಕೆ ಮಾಡಿಕೊಂಡರೆ ಅದು ಅವಿದ್ಯೆ. ತನ್ನ ಶಕ್ತಿ ಅಲ್ಪವೇ ಆಗಿದ್ದರೂ ಅದರ ಪರಿಮಿತಿಯನ್ನು ಸರಿಯಾಗಿ ಗ್ರಹಿಸುವಿಕೆಯೇ ಸರಿಯಾದ ಅರಿವು. ಆದ್ದರಿಂದ ಅದು ವಿದ್ಯೆ.

ಪರಮಾತ್ಮನ ಕುರಿತ ಅರಿವು ವಿದ್ಯೆ. ಆತನ ಬಗ್ಗೆ ತಿಳಿವಳಿಕೆ ಅಭಾವ ಇದ್ದರೆ, ಅವಿದ್ಯೆ. ಪರಮಾತ್ಮನನ್ನು ಕುರಿತು ವಿವಿಧ ಹಂತದಲ್ಲಿ ಸಾಕ್ಷಾತ್ಕಾರಗಳಿರುತ್ತವೆ. ಅವೆಲ್ಲವೂ ವಿದ್ಯೆಯ ಲೆಕ್ಕಕ್ಕೆ ಬರುತ್ತವೆ. ಕಟ್ಟಕಡೆಗೆ ಬರುವ ಅದ್ವಿತೀಯ- ಸಚ್ಚಿದಾನಂದ- ಪರಮಾತ್ಮನ ಸಾಕ್ಷಾತ್ಕಾರವೇ ವಿದ್ಯೆ. ಇದು ವೇದಾಂತಿಗಳ ಅಭಿಮತ. ಆ ಸಾಕ್ಷಾತ್ಕಾರದ ಪೂರ್ವಭಾವಿಯಾಗಿ ಬರುವ ವಿವಿಧ ಹಂತದ ಸಾಕ್ಷಾತ್ಕಾರಗಳು ಇವೆ. ಕಟ್ಟ ಕಡೆಯ ಸಾಕ್ಷಾತ್ಕಾರಕ್ಕೆ ದಾರಿಯಾಗುವುದು ವಿದ್ಯೆ. ವಿವಿಧ ಹಂತದ ಸಾಕ್ಷಾತ್ಕಾರಗಳು ಸಾಧಕನಲ್ಲಿ ಶಕ್ತಿ ತುಂಬುತ್ತವೆ. ಅವನಲ್ಲಿ ಉತ್ಸಾಹ, ಏಕಾಗ್ರತೆ ಮುಂತಾದ ಶಕ್ತಿಗಳು ಉಂಟಾಗುವಂತೆ ಮಾಡುತ್ತವೆ.

ಪರಮಾತ್ಮನಿಗೆ ಅಥವಾ ಅವನ ಬೇರೆ ರೂಪಗಳಾಗಿರುವ ದೇವತೆಗಳಿಗೆ ವಿದ್ಯೆ- ಅವಿದ್ಯೆ ಹಿಡಿತದಲ್ಲಿ ಇರುತ್ತವೆ. ಪರಮಾತ್ಮನ ಶಕ್ತಿಗಳಲ್ಲಿ ಧರ್ಮ- ಅಧರ್ಮ, ಜ್ಞಾನ- ಅಜ್ಞಾನಗಳು, ವೈರಾಗ್ಯ- ಅವೈರಾಗ್ಯಗಳು, ಐಶ್ವರ್ಯ- ಅನೈಶ್ವರ್ಯಗಳು ಇರುತ್ತವೆ. ಅದೇ ರೀತಿ, ತಪಸ್ವಿಗಳಾದ ಮಹಾತ್ಮರಿಗೆ ವಿದ್ಯೆ- ಅವಿದ್ಯೆಗಳ ಮೇಲೆ ಹಿಡಿತ ಇರುತ್ತದೆ. ಅವಿದ್ಯೆ ಶಕ್ತಿ ಕುಂಠಿತಗೊಳಿಸಿದರೆ, ವಿದ್ಯೆ ಶಕ್ತಿಯನ್ನು ತುಂಬುತ್ತದೆ. ತನ್ನ ಸಾಮರ್ಥ್ಯವನ್ನು ಪ್ರಾಮಾಣಿಕವಾಗಿ ಅರಿತವನು ಒಳ್ಳೆಯ ಕೆಲಸಗಾರ.

– ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ, ಶ್ರೀ ಸ್ವರ್ಣವಲ್ಲೀ ಮಹಾ ಸಂಸ್ಥಾನ, ಸೋಂದಾ, ಶಿರಸಿ

ಟಾಪ್ ನ್ಯೂಸ್

Shivamogga: ಮಲೆನಾಡಲ್ಲಿ ಮುಂದುವರೆದ ಕಾಡಾನೆ ಹಾವಳಿ… ಬೆಳೆ ನಾಶ, ರೈತರ ಆಕ್ರೋಶ

Shivamogga: ಮಲೆನಾಡಲ್ಲಿ ಮುಂದುವರೆದ ಕಾಡಾನೆ ಹಾವಳಿ… ಬೆಳೆ ನಾಶ, ರೈತರ ಆಕ್ರೋಶ

Chiranjeevi: 69ರ ವಯಸ್ಸಿನಲ್ಲಿ ಗಿನ್ನಿಸ್ ದಾಖಲೆಗೆ ಸೇರಿತು ಮೆಗಾಸ್ಟಾರ್‌ ಚಿರಂಜೀವಿ ಹೆಸರು

Chiranjeevi: 69ರ ವಯಸ್ಸಿನಲ್ಲಿ ಗಿನ್ನಿಸ್ ದಾಖಲೆಗೆ ಸೇರಿತು ಮೆಗಾಸ್ಟಾರ್‌ ಚಿರಂಜೀವಿ ಹೆಸರು

Manipal: ಮಧ್ಯರಾತ್ರಿ ನಗರಸಭಾ ಪಂಪ್ ಹೌಸ್ ಗೆ ನುಗ್ಗಿದ ಕಾರು… ಮಲಗಿದ್ದ ವ್ಯಕ್ತಿ ಪಾರು

Manipal: ಮಧ್ಯರಾತ್ರಿ ನಗರಸಭಾ ಪಂಪ್ ಹೌಸ್ ಗೆ ನುಗ್ಗಿದ ಕಾರು… ಮಲಗಿದ್ದ ವ್ಯಕ್ತಿ ಪಾರು

Udupi: ಬೆಳ್ಳಂಬೆಳಗ್ಗೆ ದೊಡ್ಡಣಗುಡ್ಡೆ ಆಯುರ್ವೇದ ಆಸ್ಪತ್ರೆಯಲ್ಲಿ ಅಗ್ನಿ ಅವಘಡ…

Udupi: ಬೆಳ್ಳಂಬೆಳಗ್ಗೆ ದೊಡ್ಡಣಗುಡ್ಡೆ ಆಯುರ್ವೇದ ಆಸ್ಪತ್ರೆಯಲ್ಲಿ ಅಗ್ನಿ ಅವಘಡ…

Belagavi: ಈದ್ ಮಿಲಾದ್ ಮೆರವಣಿಗೆ ಮುಗಿಸಿ ಹೋಗುವಾಗ ತಲವಾರ್ ದಿಂದ ಹೊಡೆದಾಟ: ಮೂವರಿಗೆ ಗಾಯ

Belagavi: ಈದ್ ಮಿಲಾದ್ ಮೆರವಣಿಗೆ ಮುಗಿಸಿ ಹೋಗುವಾಗ ತಲವಾರ್ ದಿಂದ ಹೊಡೆದಾಟ: ಮೂವರಿಗೆ ಗಾಯ

Mudhol: ಬಾಲಕಿಗೆ ಲೈಂಗಿಕ‌‌ ಕಿರುಕುಳ… ಫೋಕ್ಸೊ ಪ್ರಕರಣ ದಾಖಲು

Mudhol: ಬಾಲಕಿಗೆ ಲೈಂಗಿಕ‌‌ ಕಿರುಕುಳ… ಫೋಕ್ಸೊ ಪ್ರಕರಣ ದಾಖಲು

Santhekatte-Road

Udupi Santhekatte Road: ನಾಲ್ಕಲ್ಲ, ಕನಿಷ್ಠ ಒಂದು ರಸ್ತೆಯನ್ನಾದರೂ ಕೊಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Shivamogga: ಮಲೆನಾಡಲ್ಲಿ ಮುಂದುವರೆದ ಕಾಡಾನೆ ಹಾವಳಿ… ಬೆಳೆ ನಾಶ, ರೈತರ ಆಕ್ರೋಶ

Shivamogga: ಮಲೆನಾಡಲ್ಲಿ ಮುಂದುವರೆದ ಕಾಡಾನೆ ಹಾವಳಿ… ಬೆಳೆ ನಾಶ, ರೈತರ ಆಕ್ರೋಶ

Chiranjeevi: 69ರ ವಯಸ್ಸಿನಲ್ಲಿ ಗಿನ್ನಿಸ್ ದಾಖಲೆಗೆ ಸೇರಿತು ಮೆಗಾಸ್ಟಾರ್‌ ಚಿರಂಜೀವಿ ಹೆಸರು

Chiranjeevi: 69ರ ವಯಸ್ಸಿನಲ್ಲಿ ಗಿನ್ನಿಸ್ ದಾಖಲೆಗೆ ಸೇರಿತು ಮೆಗಾಸ್ಟಾರ್‌ ಚಿರಂಜೀವಿ ಹೆಸರು

Manipal: ಮಧ್ಯರಾತ್ರಿ ನಗರಸಭಾ ಪಂಪ್ ಹೌಸ್ ಗೆ ನುಗ್ಗಿದ ಕಾರು… ಮಲಗಿದ್ದ ವ್ಯಕ್ತಿ ಪಾರು

Manipal: ಮಧ್ಯರಾತ್ರಿ ನಗರಸಭಾ ಪಂಪ್ ಹೌಸ್ ಗೆ ನುಗ್ಗಿದ ಕಾರು… ಮಲಗಿದ್ದ ವ್ಯಕ್ತಿ ಪಾರು

Udupi: ಬೆಳ್ಳಂಬೆಳಗ್ಗೆ ದೊಡ್ಡಣಗುಡ್ಡೆ ಆಯುರ್ವೇದ ಆಸ್ಪತ್ರೆಯಲ್ಲಿ ಅಗ್ನಿ ಅವಘಡ…

Udupi: ಬೆಳ್ಳಂಬೆಳಗ್ಗೆ ದೊಡ್ಡಣಗುಡ್ಡೆ ಆಯುರ್ವೇದ ಆಸ್ಪತ್ರೆಯಲ್ಲಿ ಅಗ್ನಿ ಅವಘಡ…

Belagavi: ಈದ್ ಮಿಲಾದ್ ಮೆರವಣಿಗೆ ಮುಗಿಸಿ ಹೋಗುವಾಗ ತಲವಾರ್ ದಿಂದ ಹೊಡೆದಾಟ: ಮೂವರಿಗೆ ಗಾಯ

Belagavi: ಈದ್ ಮಿಲಾದ್ ಮೆರವಣಿಗೆ ಮುಗಿಸಿ ಹೋಗುವಾಗ ತಲವಾರ್ ದಿಂದ ಹೊಡೆದಾಟ: ಮೂವರಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.