ಪೇಜಾವರ ಶ್ರೀಗಳ ಬಳಿ ಹೋಗೆವು; ಬೇಕಿದ್ದರೆ ಸಾಣೆಹಳ್ಳಿಗೇ ಬರಲಿ: ಶಿವಾಚಾರ್ಯ ಸ್ವಾಮೀಜಿ
Team Udayavani, Aug 3, 2019, 10:43 AM IST
ಉಡುಪಿ: ಲಿಂಗಾಯತ ಪ್ರತ್ಯೇಕ ಧರ್ಮ. ಅದರ ಬಗ್ಗೆ ಚರ್ಚೆ ಮಾಡುವ ಅಗತ್ಯವಿಲ್ಲ. ಪೇಜಾವರ ಶ್ರೀಪಾದರು ಚರ್ಚೆಗೆ ಕರೆ ನೀಡಿದ್ದರು. ನಾವು ಅವರಿದ್ದಲ್ಲಿಗೆ ಹೋಗುವುದಿಲ್ಲ, ಅವರು ಬೇಕಿದ್ದರೆ ಸಾಣೆಹಳ್ಳಿಗೆ ಬರಲಿ, ಬಹಿರಂಗ ಚರ್ಚೆಗೆ ನಾವು ಸಿದ್ಧ ಎಂದು ಸಾಣೆಹಳ್ಳಿ ಶ್ರೀ ತರಳಬಾಳು ಶಾಖಾ ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಒಂದು ತಿಂಗಳು ರಾಜ್ಯಾದ್ಯಂತ “ಮತ್ತೆ ಕಲ್ಯಾಣ’ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದೇವೆ. ಮುಂದಿನ ತಿಂಗಳು ಪೇಜಾವರ ಶ್ರೀಗಳಿಗೆ ಸಾಣೆಹಳ್ಳಿಗೆ ಬರುವಂತೆ ತಿಳಿಸುವುದಾಗಿ ಹೇಳಿದರು.
ಸ್ಥಾವರ ಶಿವ-ಜಂಗಮ ಶಿವ
ಲಿಂಗಾಯತ ಧರ್ಮ ಮತ್ತು ವೀರಶೈವ ಧರ್ಮ ಒಂದೇ ಅಲ್ಲ. ಒಂದು ಕಾಲಕ್ಕೆ ಅವು ಒಂದೇ ಎಂಬ ಭಾವನೆ ಇತ್ತು. ಶಿವನನ್ನು ಪೂಜಿಸು ವವರೆಲ್ಲ ಲಿಂಗಾಯತರು ಎಂಬ ಪೇಜಾವರ ಶ್ರೀಗಳ ಮಾತು ಒಪ್ಪಲು ಸಾಧ್ಯವಿಲ್ಲ. ಕೆಲವರು ಸ್ಥಾವರ ಶಿವನನ್ನು ಪೂಜಿಸುತ್ತಾರೆ. ಆದರೆ ಲಿಂಗಾಯತರು ಜಂಗಮ ಶಿವನನ್ನು ಇಷ್ಟಲಿಂಗದ ರೂಪದಲ್ಲಿ ತಾವೇ ಮುಟ್ಟಿ ಪೂಜಿಸುತ್ತಾರೆ ಎಂದರು.
ನೀಲಾ ವಂಚನೆ
ಉಡುಪಿಯ “ಮತ್ತೆ ಕಲ್ಯಾಣ’ ಕಾರ್ಯಕ್ರಮದಲ್ಲಿ ಚಿಂತಕಿ ಕೆ. ನೀಲಾ ಭಾಗವಹಿಸದೆ ಇರುವುದಕ್ಕೆ ಡಾ| ಮೋಹನ್ ಆಳ್ವ ಮತ್ತು ಶಾಸಕ ರಘುಪತಿ ಭಟ್ ಭಾಗವಹಿಸುತ್ತಿರುವುದು ಕಾರಣ ಅಲ್ಲ. ಬೇರೆ ಕಾರ್ಯಕ್ರಮ ಇದ್ದು, ಬರುವುದಕ್ಕಾಗುವುದಿಲ್ಲ ಎಂದು ಮೊದಲೇ ಹೇಳಿದ್ದರು. ಈಗ ಮೋಹನ್ ಆಳ್ವ, ರಘುಪತಿ ಭಟ್ ಅವರನ್ನು ಆಹ್ವಾನಿಸಿರುವ ಕಾರಣ ಹೇಳುತ್ತಿದ್ದಾರೆ . ಈ ರೀತಿ ವಂಚನೆ ಸರಿಯಲ್ಲ. ಬಸವ ತಣ್ತೀವನ್ನು ಒಪ್ಪುವ, ಜನಪ್ರಿಯರಾದವರನ್ನು ಆಹ್ವಾನಿಸುವಂತೆ ನಾವು ತಿಳಿಸಿದ್ದೆವು; ಭಟ್, ಡಾ| ಆಳ್ವ ಅವರನ್ನು ನಾವು ಆಹ್ವಾನಿಸಿದ್ದಲ್ಲ ಎಂದು ಸ್ವಾಮೀಜಿ ಹೇಳಿದರು.
“ಯಾರು ಹೇಳಿದ್ದು ಸಿಎಂ ಲಿಂಗಾಯತರೆಂದು?’
ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ, “ಯಡಿಯೂರಪ್ಪ ಲಿಂಗಾಯತ ಅಂತ ಯಾರು ಹೇಳಿದ್ದು?’ ಎಂದು ಮರುಪ್ರಶ್ನಿಸಿದ ಸ್ವಾಮೀಜಿ, ಯಾರು ಲಿಂಗಾಯತ ಧರ್ಮವನ್ನು ಪಾಲಿಸುತ್ತಾನೋ ಅವನೇ ನಿಜವಾದ ಲಿಂಗಾಯತ. ಲಿಂಗಾಯತ ಎಂಬುದು ಒಂದು ತತ್ವ ಸಿದ್ಧಾಂತವೇ ವಿನಾ ಒಂದುಜಾತಿಗೆ ಸೀಮಿತ ಅಲ್ಲ. ಹಾಗಾಗಿ ಯಡಿಯೂರಪ್ಪ ಲಿಂಗಾಯತರಲ್ಲ ಎಂದರು.
“ಬಿಎಸ್ವೈ ದಾರಿಯಲ್ಲಿ ಸಿದ್ದು, ಎಚ್ಡಿಕೆ’
ರಾಜ್ಯ ಸರಕಾರ ಮಠಗಳಿಗೆ ನೀಡುವ ಹಣವನ್ನು ನಾವು ಸ್ವೀಕಾರ ಮಾಡುವುದಿಲ್ಲ. ಯಾವುದಾದರೂ ಯೋಜನೆ ಹಾಕಿಕೊಂಡು ಅದಕ್ಕೆ ಪೂರಕವಾಗಿ ಅನುದಾನ ನೀಡಬೇಕು. ಅದು ಬಿಟ್ಟು ನೇರವಾಗಿ ಮಠಕ್ಕೆ ಹಣ ನೀಡಿದರೆ ನಾವು ತೆಗೆದುಕೊಳ್ಳುವುದಿಲ್ಲ. ಮೊದಲು ಮಠಗಳಿಗೆ ಹಣ ನೀಡಿದ ಯಡಿಯೂರಪ್ಪರನ್ನು ಟೀಕೆ ಮಾಡಿದ ಸಿದ್ದರಾಮಯ್ಯ, ಕುಮಾರಸ್ವಾಮಿ ಕೂಡ ಮುಂದೆ ಅದೇ ಕೆಲಸ ಮುಂದುವರಿಸಿದರು ಎಂದು ಸ್ವಾಮೀಜಿ ಟೀಕಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Bail ಪಡೆದು ಬಿಡುಗಡೆಯಾದ ಬೆನ್ನಲ್ಲೇ ಮುನಿರತ್ನ ಮತ್ತೆ ಬಂಧನ
Mangaluru: ಕಾಲರಾ ಭೀತಿ… ನಿಗಾ ವಹಿಸಲು ಜಿಲ್ಲಾ ಆರೋಗ್ಯಾಧಿಕಾರಿ ಸೂಚನೆ
Politicians ಜಾತಿ, ಧರ್ಮಗಳ ಮೂಲಕ ನಮ್ಮನ್ನು ಪ್ರತ್ಯೇಕಿಸುತ್ತಿದ್ದಾರೆ: ತುಷಾರ್ ಗಾಂಧಿ
Tirupati Laddu; ರಾಜ್ಯದ ಪವಿತ್ರ ಕ್ಷೇತ್ರಗಳ ಪ್ರಸಾದ ಪರೀಕ್ಷಿಸಬೇಕು: ಜೋಶಿ ಆಗ್ರಹ
Flipkart Big Billion Day ಸೆ. 27 ರಿಂದ ಆರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.