ಮಳೆಕೊಯ್ಲಿನಿಂದ ಬಾವಿಯ ಹಳದಿ ನೀರು ಸಮಸ್ಯೆ ನಿವಾರಣೆ!

ಮನೆ ಮನೆಗೆ ಮಳೆಕೊಯ್ಲು ಉದಯವಾಣಿ ಅಭಿಯಾನ

Team Udayavani, Aug 4, 2019, 5:30 AM IST

2807KDLM16PH2-NAVADA

ಕುಂದಾಪುರ: ಮಳೆಕೊಯ್ಲು ಮಾಡಿದವರ ಅನುಭವಗಳನ್ನು ಇತರರಿಗೆ ಪ್ರೇರಣೆಯಾಗಲಿ ಉದಯವಾಣಿ ಪ್ರತಿದಿನ ಮಳೆಕೊಯ್ಲು ಕುರಿತು ಸರಣಿ ಲೇಖನಗಳನ್ನು ಪ್ರಕಟಿಸುತ್ತಿದೆ. ಮಳೆಕೊಯ್ಲು ಮಾಡಿ ಕುಡಿಯುವ ನೀರಿನ ಸಮಸ್ಯೆ ನಿವಾರಿಸಿಕೊಂಡೆವು ಎಂದು ಹೇಳುವ ಅನೇಕರು ಸಿಕ್ಕಿದ್ದಾರೆ. ಆದರೆ ಮಳೆಕೊಯ್ಲಿನಿಂದ ಬಾವಿಯಲ್ಲಿ ಶುದ್ಧ ನೀರು ದೊರೆಯುತ್ತಿದೆ, ಬಾವಿಯಲ್ಲಿ ಈವರೆಗೆ ಉಂಟಾಗುತ್ತಿದ್ದ ಹಳದಿ ನೀರು, ಕೆಂಪು ನೀರಿನ ಸಮಸ್ಯೆ ನಿವಾರಣೆಯಾಗಿದೆ ಎನ್ನುವವರು ಕೂಡ ಇದ್ದಾರೆ. ಕೋಣಿಯ ಶಶಿಕಾಂತ್‌ ಎಸ್‌.ಕೆ. ಅವರು ಕೆಂಪು ನೀರಿನ ಸಮಸ್ಯೆ ನಿವಾರಣೆಯಾದುದನ್ನು ಹೇಳಿದ್ದರು. ಈ ಬಾರಿ ಹಳದಿ ನೀರಿನ ಸಮಸ್ಯೆ ನಿವಾರಣೆಯಾದ ಉದಾಹರಣೆಯಿದೆ.ಇದರರ್ಥ ಮಳೆಕೊಯ್ಲು ಕೇವಲ ನೀರಿಂಗಿಸಲು ಅಷ್ಟೇ ಅಲ್ಲ, ಬಾವಿಯಲ್ಲಿ ನೀರು , ನೆರೆಹೊರೆಯ ಬಾವಿಯಲ್ಲೂ ಅಂತರ್ಜಲ ಹೆಚ್ಚುತ್ತದೆ. ಬೇಸಗೆಯಲ್ಲಿ ಉಂಟಾ ಗುವ ಹಳದಿ, ಕೆಂಪು ನೀರಿನ ಸಮಸ್ಯೆಯೂ ನಿವಾರಣೆ ಯಾಗುತ್ತದೆ, ಮಾತ್ರವಲ್ಲ ಖಾಯಿಲೆ ಪ್ರಮಾಣವೂ ಕಡಿಮೆಯಾಗಿದೆ ಎನ್ನುವ ಧನಾತ್ಮಕ ಅಂಶಗಳಿವೆ.

ಹಳದಿ ನೀರಿನ ಸಮಸ್ಯೆ
ಕುಂದಾಪುರ ಪುರಸಭೆ ವ್ಯಾಪ್ತಿಯ ನಾವಡರ ಕೇರಿಯ ನಾಗೇಶ್‌ ನಾವಡ ಅವರು ಮೂರು ವರ್ಷಗಳ ಹಿಂದೆ ಮಳೆಕೊಯ್ಲು ಅಳವಡಿಸಿದ್ದಾರೆ. ಅವರಿಗೆ ಹೇಳಿಕೊಳ್ಳುವಂತಹ ನೀರಿನ ಸಮಸ್ಯೆ ಇರಲಿಲ್ಲ. ಆದರೆ ಅನೇಕ ಸಂಘ ಸಂಸ್ಥೆಗಳಲ್ಲಿ ಸಮಾಜಮುಖೀ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಅವರು ಮಳೆಕೊಯ್ಲು ಮೂಲಕ ಜನಸೇವೆ ಜತೆಗೆ ಜಲಸೇವೆಗೆ ಮುಂದಾದರು. ಎಲ್ಲರೂ ಅಳವಡಿಸುವಂತೆ ಡ್ರಮ್‌ ಪದ್ಧತಿಯಲ್ಲಿಯೇ ಮಳೆಕೊಯ್ಲುವಿಗೆ ಸಿದ್ಧತೆ ನಡೆಸಿದರು. ತಾರಸಿ ಮೇಲೆ ಬಿದ್ದ ಮಳೆನೀರು ಒಂದೇ ಕಡೆ ಪೈಪ್‌ಗೆ ಹೋಗುವಂತೆ ಮಾಡಲು 1,500 ಚ.ಅಡಿಯ ತಾರಸಿಗೆ ನೀಲಿ ಟರ್ಪಾಲು ಹಾಕಿದರು. ಅದರ ಮೂಲಕ ಒಂದೇ ಕಡೆ ಕಲೆತ ನೀರು ಒಂದೇ ಪೈಪ್‌ನಲ್ಲಿ ನೀರು ಶುದ್ಧ ಮಾಡುವ ಡ್ರಮ್‌ಗೆ ಬೀಳುವಂತೆ ಮಾಡಿದರು. ಆ ಡ್ರಮ್ಮಿನಲ್ಲಿ ನೀರು ಶುದ್ಧವಾಗಿ ಬಾವಿಗೆ ಹರಿಯಬಿಟ್ಟರು. ಇಲ್ಲೂ ಇನ್ನೊಂದು ಬುದ್ಧಿ ಮತ್ತೆ ಉಪಯೋಗಿಸಿದರು.

ಬಹುತೇಕ ಜನರು ಬಾವಿಗೆ ಮೇಲಿನಿಂದ ಪೈಪ್‌ ಬಿಟ್ಟು ಡ್ರಮ್‌ನ ನೀರು ಮೇಲಿಂದ ಬೀಳುವಂತೆ ಮಾಡುತ್ತಾರೆ. ಇದರಿಂದ ಬಾವಿಯಲ್ಲಿ ಕೆಸರಿನ ಅಂಶ ಇದ್ದರೆ ನೀರು ಬಿದ್ದು ಬಾವಿ ನೀರು ರಾಡಿಯಾಗುತ್ತದೆ ಎಂದು ಆರೋಪವಿದೆ. ಇದು ಮನೆ ಟ್ಯಾಂಕಿಗೆ ತುಂಬಿಸಿದಾಗ ಕೊಳೆನೀರಿನಂತೆ ನಳ್ಳಿ ಮೂಲಕ ಹರಿದು ಬರುತ್ತದೆ ಎನ್ನುವುದು ಸಾಮಾನ್ಯ ಆರೋಪ. ಇದಕ್ಕಾಗಿ ನಾಗೇಶ ನಾವಡರು ಮಾಡಿನ ನೀರು ನೆಲಕ್ಕೆ ಬೀಳಲು ಉಪಯೋಗಿಸುವ ಪೈಪ್‌ ಮಾದರಿಯ ತೆಳುವಾದ ಪ್ಲಾಸ್ಟಿಕ್‌ನ್ನು ಪೈಪ್‌ಗೆ ಕಟ್ಟಿ ಅದನ್ನು ಬಾವಿಗೆ ಇಳಿಬಿಟ್ಟರು. ಆಗ ನೀರು ಬಾವಿ ನೀರಿಗೆ ಮೆಲ್ಲನೆ ಇಳಿದು ಹರಿಯಿತು. ಇಷ್ಟಾದ ಬಳಿಕ ಈ ನೀರು ಟ್ಯಾಂಕ್‌ ಸೇರುವ ಮುನ್ನ ಇನ್ನೊಂದು ಫಿಲ್ಟರ್‌ ಅಳವಡಿಸಿದರು. ಎರಡು ಹಂತದಲ್ಲಿ ಶುದ್ಧಗೊಂಡ ನೀರು ಟ್ಯಾಂಕಿ ಸೇರಿದ ಕಾರಣ ಶುದ್ಧತೆಯ ಚಿಂತೆಯಿಲ್ಲ. ಇದೆಲ್ಲ ಮಾಡಿದ ಪರಿಣಾಮ ಸನಿಹದ ಮೂರ್ನಾಲ್ಕು ಬಾವಿಗಳಲ್ಲಿ ಅಂತರ್ಜಲದ ಪ್ರಮಾಣ ಹೆಚ್ಚಾಗಿದೆ. ಮಳೆಗಾಲದಲ್ಲಿ ಸಾಮಾನ್ಯವಾಗಿ ಬರುವ ರೋಗಗಳ ಸಂಖ್ಯೆ ಕಡಿಮೆಯಾಗಿದೆ. ನಮ್ಮ ಮನೆಯಲ್ಲಿ ಅನಾರೋಗ್ಯ ಪೀಡಿತರಾಗುವ ಸಮಸ್ಯೆ ನಿವಾರಣೆಯಾಗಿದೆ ಎನ್ನುತ್ತಾರೆ ನಾಗೇಶ್‌ ನಾವಡ ಅವರು.

ಸಮಸ್ಯೆಯೇ ಇಲ್ಲ
ಬೇಸಗೆಯಲ್ಲಿ ನಮ್ಮನೆ ಬಾವಿಯಲ್ಲಿ ಸುಮಾರು 7 ಅಡಿ ಶುದ್ಧ ನೀರು ಇರುತ್ತದೆ. ಅಕ್ಕಪಕ್ಕದ ಬಾವಿಗಳಿಗೂ ಇಲ್ಲಿ ನೀರಿಂಗಿಸಿ ಪ್ರಯೋಜನವಾಗುತ್ತಿದೆ. ಬಣ್ಣದ ನೀರಿನ ಸಮಸ್ಯೆ ನಿವಾರಣೆಯಾಗಿದೆ. ಹಾಗಾಗಿ ಉದಯವಾಣಿ ಕೈಗೊಂಡ ಮಳೆಕೊಯ್ಲು ಅಭಿಯಾನ ಎಲ್ಲರಿಗೂ ಪ್ರೇರಣೆಯಾಗಲಿ.
-ನಾಗೇಶ್‌ ನಾವಡ, ಕುಂದಾಪುರ

ನೀವೂ ಅಳವಡಿಸಿ, ವಾಟ್ಸಪ್‌ ಮಾಡಿ
ಉದಯವಾಣಿಯ ಅಭಿಯಾನದಿಂದ ಪ್ರೇರಣೆಗೊಂಡು ಕಾರ್ಯಾಗಾರದಲ್ಲಿ ಭಾಗವಹಿಸಿದವರು ಮಳೆ ನೀರು ಕೊಯ್ಲು ಪದ್ಧತಿಯನ್ನು ತಮ್ಮ ಮನೆಗಳಲ್ಲಿ ಅಳವಡಿಸುತ್ತಿರುವುದು ಗಮನಕ್ಕೆ ಬಂದಿದೆ. ಇನ್ನಷ್ಟು ಮಂದಿಯನ್ನು ಜಲ ಸಂರಕ್ಷಣೆ ಯತ್ತ ತೊಡಗಿಸಲು, ನಿಮ್ಮ ಮನೆಯಲ್ಲಿ ಕೈಗೊಂಡ ಮಳೆ ಕೊಯ್ಲು ವ್ಯವಸ್ಥೆಯ ಕುರಿತು ವಿವರಿಸಿ, ಫೋಟೋ ವಾಟ್ಸಪ್‌ನಲ್ಲಿ ಕಳುಹಿಸಿ. ಅವುಗಳನ್ನು ಪ್ರಕಟಿಸಿ ಮತ್ತಷ್ಟು ಜನರನ್ನು ಉತ್ತೇಜಿಸೋಣ. 7618774529

ಟಾಪ್ ನ್ಯೂಸ್

Stock Market: ಸಾರ್ವಕಾಲಿಕ ದಾಖಲೆ ಬರೆದ ಷೇರುಪೇಟೆ; ಹೂಡಿಕೆದಾರರಿಗೆ 6 ಲಕ್ಷ ಕೋಟಿ ರೂ. ಲಾಭ

Stock Market: ಸಾರ್ವಕಾಲಿಕ ದಾಖಲೆ ಬರೆದ ಷೇರುಪೇಟೆ; ಹೂಡಿಕೆದಾರರಿಗೆ 6 ಲಕ್ಷ ಕೋಟಿ ರೂ. ಲಾಭ

1-frr

Bail ಪಡೆದು ಬಿಡುಗಡೆಯಾದ ಬೆನ್ನಲ್ಲೇ ಮುನಿರತ್ನ ಮತ್ತೆ ಬಂಧನ

Mangaluru: ಕಾಲರಾ ಭೀತಿ… ನಿಗಾ ವಹಿಸಲು ಜಿಲ್ಲಾ ಆರೋಗ್ಯಾಧಿಕಾರಿ ಸೂಚನೆ

Mangaluru: ಕಾಲರಾ ಭೀತಿ… ನಿಗಾ ವಹಿಸಲು ಜಿಲ್ಲಾ ಆರೋಗ್ಯಾಧಿಕಾರಿ ಸೂಚನೆ

1-gttt

Politicians ಜಾತಿ, ಧರ್ಮಗಳ ಮೂಲಕ ನಮ್ಮನ್ನು ಪ್ರತ್ಯೇಕಿಸುತ್ತಿದ್ದಾರೆ: ತುಷಾರ್‌ ಗಾಂಧಿ

1-joshi

Tirupati Laddu; ರಾಜ್ಯದ ಪವಿತ್ರ ಕ್ಷೇತ್ರಗಳ ಪ್ರಸಾದ ಪರೀಕ್ಷಿಸಬೇಕು: ಜೋಶಿ ಆಗ್ರಹ

16-flipkart

Flipkart Big Billion Day ಸೆ. 27 ರಿಂದ ಆರಂಭ

FollowUp:Tirupati Laddoo ವಿವಾದ- ಆಂಧ್ರ ಸಿಎಂ ಬಳಿ ವಿಸ್ತೃತ ವರದಿ ಕೇಳಿದ ಕೇಂದ್ರ ಸರ್ಕಾರ

FollowUp:Tirupati Laddoo ವಿವಾದ- ಆಂಧ್ರ ಸಿಎಂ ಬಳಿ ವಿಸ್ತೃತ ವರದಿ ಕೇಳಿದ ಕೇಂದ್ರ ಸರ್ಕಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malpe: ಪೊಟ್ಟುಕೆರೆ ಅಭಿವೃದ್ಧಿಪಡಿಸಿದರೆ ಶಾಶ್ವತ ನೀರಿನ ಒರತೆ

Malpe: ಪೊಟ್ಟುಕೆರೆ ಅಭಿವೃದ್ಧಿಪಡಿಸಿದರೆ ಶಾಶ್ವತ ನೀರಿನ ಒರತೆ

Udupi ತಮಿಳುನಾಡಿನ ಎಳನೀರು; ಸ್ಥಳೀಯ ಕಾರ್ಮಿಕರ ಕೊರತೆ

Udupi ತಮಿಳುನಾಡಿನ ಎಳನೀರು; ಸ್ಥಳೀಯ ಕಾರ್ಮಿಕರ ಕೊರತೆ

Udupi: ಉಡುಪಿಗೆ ಬರುವುದೆಂದು ವಾರಾಹಿ ನೀರು?; ಶೇ.90 ಕಾಮಗಾರಿ ಪೂರ್ಣ

Udupi: ಉಡುಪಿಗೆ ಬರುವುದೆಂದು ವಾರಾಹಿ ನೀರು?; ಶೇ.90 ಕಾಮಗಾರಿ ಪೂರ್ಣ

Belve ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 108 ಆ್ಯಂಬುಲೆನ್ಸ್‌ ಬೇಕು

Belve ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 108 ಆ್ಯಂಬುಲೆನ್ಸ್‌ ಬೇಕು

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

Kaup ಮೀನುಗಾರ ನೇಣುಬಿಗಿದು ಆತ್ಮಹತ್ಯೆ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Stock Market: ಸಾರ್ವಕಾಲಿಕ ದಾಖಲೆ ಬರೆದ ಷೇರುಪೇಟೆ; ಹೂಡಿಕೆದಾರರಿಗೆ 6 ಲಕ್ಷ ಕೋಟಿ ರೂ. ಲಾಭ

Stock Market: ಸಾರ್ವಕಾಲಿಕ ದಾಖಲೆ ಬರೆದ ಷೇರುಪೇಟೆ; ಹೂಡಿಕೆದಾರರಿಗೆ 6 ಲಕ್ಷ ಕೋಟಿ ರೂ. ಲಾಭ

1-frr

Bail ಪಡೆದು ಬಿಡುಗಡೆಯಾದ ಬೆನ್ನಲ್ಲೇ ಮುನಿರತ್ನ ಮತ್ತೆ ಬಂಧನ

Mangaluru: ಕಾಲರಾ ಭೀತಿ… ನಿಗಾ ವಹಿಸಲು ಜಿಲ್ಲಾ ಆರೋಗ್ಯಾಧಿಕಾರಿ ಸೂಚನೆ

Mangaluru: ಕಾಲರಾ ಭೀತಿ… ನಿಗಾ ವಹಿಸಲು ಜಿಲ್ಲಾ ಆರೋಗ್ಯಾಧಿಕಾರಿ ಸೂಚನೆ

1-gttt

Politicians ಜಾತಿ, ಧರ್ಮಗಳ ಮೂಲಕ ನಮ್ಮನ್ನು ಪ್ರತ್ಯೇಕಿಸುತ್ತಿದ್ದಾರೆ: ತುಷಾರ್‌ ಗಾಂಧಿ

1-joshi

Tirupati Laddu; ರಾಜ್ಯದ ಪವಿತ್ರ ಕ್ಷೇತ್ರಗಳ ಪ್ರಸಾದ ಪರೀಕ್ಷಿಸಬೇಕು: ಜೋಶಿ ಆಗ್ರಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.