ಆಧುನಿಕ ನಾಗಬನಕ್ಕೆ ಹೂಬಳ್ಳಿಗಳ ಮೆರುಗು
Team Udayavani, Aug 4, 2019, 5:54 AM IST
ಬೆಳ್ಮಣ್: ಆಧುನಿಕತೆ ನೆಪದಲ್ಲಿ ನಾಗಬನಗಳ ಮರಗಳನ್ನು ಕಡಿದು ಕಾಂಕ್ರೀಟೀಕರಣಗೊಳಿಸುತ್ತಿರುವ ಕಾಲದಲ್ಲಿ ಮುಂಡ್ಕೂರಿನಲ್ಲೊಂದು ನಾಗ ಬನಕ್ಕೆ ಬಗೆ ಬಗೆಯ ಹೂ-ಬಳ್ಳಿಗಳನ್ನು ಬಿಡಲಾಗಿದೆ. ಕಿನ್ನಿಗೋಳಿ-ಬೆಳ್ಮಣ್ ಮುಖ್ಯ ರಸ್ತೆಯ ಸಂಕಲಕರಿಯದ ಪಕ್ಕ ಕಾಣ ಸಿಗುವ ಈ ನಾಗಬನ ಆಕರ್ಷಣೆಗೆ ಕಾರಣವಾಗಿದೆ.
ಮುಂಡ್ಕೂರಿನ ಈ ಪುರಾತನ ನಾಗಬನವನ್ನು ಕಳೆದ 5 ವರ್ಷಗಳ ಹಿಂದೆ ನವೀಕರಿಸಿದಾಗ ಕಾಂಕ್ರೀಟ್ನಿಂದ ನಿರ್ಮಿಸಲಾಗಿತ್ತು. ಬಳಿಕ ಬೇಸಗೆ ಕಾಲದಲ್ಲಿ ಈ ನಾಗಸನ್ನಿಧಿಯ ನಾಗ ಕಲ್ಲುಗಳಿಗೆ ನೇರ ಬಿಸಿಲು ಬೀಳುವುದನ್ನು ಕಂಡ ಈ ನಾಗ ಮೂಲದ ಮುಂಡ್ಕೂರು ದೊಡ್ಡಮನೆ ಕುಟುಂಬಿಕರಾದ ರೂಪರಾಜ ಶೆಟ್ಟಿ ಎಂಬವರು ಈ ನಾಗಬನಕ್ಕೆ ಹೂಬಳ್ಳಿಗಳನ್ನು ಬಿಡಲು ಆಲೋಚಿಸಿದರು. ಅದರಂತೆ ಬಳ್ಳಿಗಳಲ್ಲಿ ಪರಿಮಳದ ಹೂಗಳು ಅರಳಿದ್ದು ಇಡೀ ಪರಿಸರ ಸುವಾಸನೆಯಿಂದ ಕೂಡಿದೆ. ಇದೇ ಕುಟುಂಬಕ್ಕೆ ಸೇರಿದ ಇನ್ನೊಂದು ನಾಗಬನದಲ್ಲಿಯೂ ಇದೇ ರೀತಿ ಹೂಬಳ್ಳಿಗಳನ್ನು ಬಿಡಲಾಗಿದೆ.
ಈ ಎರಡೂ ನಾಗಬನಗಳ ಹೂಗಿಡ ಗಳ ನಿರ್ವಹಣೆಯನ್ನು ಲಕ್ಷ್ಮೀ ರೈ ಎಂಬವರು ನಡೆಸುತ್ತಿದ್ದು ಬೇಸಗೆಯಲ್ಲಿ ಈ ಬಳ್ಳಿಗಳಿಗೆ ನೀರುಣಿಸುವ ಕಾಯಕ ದಲ್ಲಿ ತೊಡಗುತ್ತಾರೆ. ನಾಗಬನ ಆಧುನಿಕತೆಯ ಸ್ಪರ್ಶ ಕಂಡರೂ ಹೂ ಬಳ್ಳಿಗಳಿಂದ ಕೂಡಿ ತಂಪಾಗಿರುವುದು ಇತರ ನಾಗಬನಗಳಿಗೆ ಮಾದರಿ.
ನಾಗಬನ ಕಡಿಯಬಾರದು
ನಾಗಬನಗಳನನ್ನು ಕಡಿಯುವುದೇ ಅಪರಾಧ, ಕಡಿದರೆ ನಾಗರ ಕಲ್ಲುಗಳಿಗೆ ಬಿಸಿಲು ಬೀಳದಂತೆ ರಕ್ಷಿಸುವುದೂ ನಮ್ಮ ಧರ್ಮ. ಇಲ್ಲಿ ಬಗೆಬಗೆಯ ಹೂಗಳಿಂದ ನಾಗ ಸನ್ನಿಧಿಯ ವಾತಾವರಣ ಪರಿಮಳ ಹಾಗೂ ತಂಪಿನಿಂದ ಕೂಡಿದೆ.
-ಡಾ| ಎನ್.ಎಸ್. ಶೆಟ್ಟಿ , ಅಧ್ಯಕ್ಷರು, ಮುಂಡ್ಕೂರು ದೊಡ್ಡಮನೆ ಫ್ಯಾಮಿಲಿ ಟ್ರಸ್ಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
BJP ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ದ ದೂರು ದಾಖಲು
Attigere: ಶಾಲಾ ಆವರಣದಲ್ಲಿ ಬರೋಬ್ಬರಿ 15 ಅಡಿ ಉದ್ದದ ಕಾಳಿಂಗ ಸರ್ಪ ಸೆರೆ
BJP ದ್ವೇಷದ ರಾಜಕಾರಣಕ್ಕೆ ನಾನೇ ದೊಡ್ಡ ಸಾಕ್ಷಿ: ಶಾಸಕ ವಿನಯ ಕುಲಕರ್ಣಿ ಆಕ್ರೋಶ
Yakshagana: ಶತಾವಧಾನಿ ಗಣೇಶ್ ರಿಗೆ ಉತ್ತರ ಕನ್ನಡ ಜಿಲ್ಲಾ ಯಕ್ಷಶ್ರೀ ಪ್ರಶಸ್ತಿ ಘೋಷಣೆ
Udayavani.com “ನಮ್ಮನೆ ಕೃಷ್ಣ”: ದ್ವಿತೀಯ ಬಹುಮಾನ ಗಳಿಸಿದ ರೀಲ್ಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.