ಕೊನೆಗಾಣದ ಕಡಲ ಮಕ್ಕಳ ಸಂಕಟ..

•ಕಾಸರಕೋಡ-ರಾಮನಗರ ಭಾಗದಲ್ಲಿ ಕೈಗೊಳ್ಳಲೇಬೇಕು ತುರ್ತು ಕಾರ್ಯ

Team Udayavani, Aug 4, 2019, 12:32 PM IST

uk-tdy-2

ಹೊನ್ನಾವರ: ಕಾಸರಕೋಡ ರಾಮನಗರ ಪ್ರದೇಶಗಳಲ್ಲಿ ಸಮುದ್ರ ಕೊರೆತ ಉಂಟಾಗಿರುವುದು.

ಹೊನ್ನಾವರ: ಮೂರು ದಶಕಗಳಿಂದ ತಾಲೂಕಿನ ಕಡಲ ತೀರದ ನಿವಾಸಿಗಳಿಗೆ ದುಸ್ವಪ್ನವಾಗಿರುವ ಕಡಲ ಕೊರೆತವೆಂಬ ಸಂಕಟಕ್ಕೆ ಕೊನೆಯೇ ಇಲ್ಲದಾಗಿದೆ. ಈ ವರ್ಷ ತೊಪ್ಪಲಕೇರಿ ಮತ್ತು ಕಾಸರಕೋಡ ಭಾಗದಲ್ಲಿ ಕಡಲ್ಕೊರೆತ ತೀವ್ರವಾಗಿದೆ. ಕಾಸರಕೋಡನ ರಾಮನಗರ, ಜಟಕನ ಮನೆ ಪ್ರದೇಶದ ಸಮುದ್ರ ಕೊರೆತ ತಡೆಗೆ ತುರ್ತು ಕಾಮಗಾರಿ ನಡೆಸಬೇಕಾಗಿದೆ.

ನೇರವಾಗಿ ಸಮುದ್ರ ಸೇರುತ್ತಿದ್ದ ಶರಾವತಿಗೆ ಹೆದ್ದಾರಿ ಸೇತುವೆ ನಿರ್ಮಾಣವಾಯಿತು. ಶರಾವತಿ ಟೇಲರೀಸ್‌ ಅಣೆಕಟ್ಟು ನಿರ್ಮಾಣವಾಯಿತು. ಕಾಡು ನಾಶದಿಂದ ಸಂಗಮದಲ್ಲಿ ಹೂಳು ತುಂಬಿತು. ಮತ್ತೆ ರೇಲ್ವೆ ಸೇತುವೆ ನಿರ್ಮಾಣವಾಗಿದೆ, ಹೆದ್ದಾರಿಗೆ ಇನ್ನೊಂದು ಸೇತುವೆ ಬಂದಿದೆ. ಇದರಿಂದ ಶರಾವತಿ ಸಮುದ್ರ ಸೇರದೆ ತೆವಳತೊಡಗಿತು. ಬಲಕ್ಕೆ ಸರಿಯುತ್ತ ಹೋಯಿತು. ಇದರಿಂದ ಉಂಟಾದ ಸಮುದ್ರ ಕೊರೆತ ಮಲ್ಲುಕುರ್ವೆ ಎಂಬ ಕಂದಾಯ ಗ್ರಾಮವನ್ನು ಬಲಿಪಡೆಯಿತು. ಆಗ ಸಮುದ್ರ ಕೊರೆತ ತಡೆಗೋಡೆ ಕಾಮಗಾರಿ ಆರಂಭವಾಗಿತ್ತು. ಊರು ಸೂರೆ ಹೋದ ಮೇಲೆ ದಿಡ್ಡಿಬಾಗಿಲು ಹಾಕಿದಂತೆ ಪಾವಿನಕುರ್ವೆ ಕೊರೆತ ಆರಂಭವಾದ ಮೇಲೆ ಕಾಸರಕೋಡ ಕಡೆ ಕೊರೆತ ಆರಂಭವಾಯಿತು. ಹೂಳು ತುಂಬಿ ಮೀನುಗಾರಿಕಾ ಬೋಟ್‌ಗಳು ಅಳವೆಯ ಹೊಯ್ಗೆ ದಿನ್ನೆಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ನೂರಾರು ಬೋಟ್‌ಗಳು ಘಾಸಿಗೊಂಡವು. 15ಕ್ಕೂ ಹೆಚ್ಚು ಜನ ಬಲಿಯಾದರು. ಮೀನುಗಾರರ ಸತತ ಹೋರಾಟ ಅಳವೆ ಕಾಮಗಾರಿಗೆ ಕೇಂದ್ರ ಸರ್ಕಾರದ 300ಕೋಟಿ ರೂ. ಬಂತು. ಈ ಹಣ ಬಳಕೆಯಾಗಿದ್ದರೆ ಕಡಲ ಕೊರೆತ ಕಡಿಮೆಯಾಗುತ್ತಿತ್ತು. ಕಾಮಗಾರಿ ಆರಂಭವಾಗುವ ಮೊದಲು ಹಿಂದಿನ ಬಿಜೆಪಿ ಸರ್ಕಾರದಲ್ಲಿ ಬಂದರು ಮಂತ್ರಿಗಳಾಗಿದ್ದ ಪಾಲೇಮಾರ್‌ ಆಂಧ್ರದ ಬಂಡವಾಳದಾರರ ಹೊನ್ನಾವರ ಪೋರ್ಟ್‌ ಕಂಪನಿಗೆ ಅಳವೆ ಸಹಿತ 100ಎಕರೆ ಭೂಮಿಯನ್ನು ಟೊಂಕದಲ್ಲಿ ಬಿಟ್ಟುಕೊಟ್ಟಿತ್ತು. ಅಳವೆ ನಿರ್ಮಾಣದ ಹಣ ಮರಳಿ ಹೋಯಿತು. ಮೀನುಗಾರರು ಬೀದಿಯಲ್ಲಿ ಬಿದ್ದರು. ಕಂಪನಿ ಈಗ ಧಕ್ಕೆ ನಿರ್ಮಾಣ ಆರಂಭಿಸಿದೆ. ಅಳವೆ ಹೂಳು ತೆಗೆದು ನಿರ್ಮಾಣ ಆರಂಭಮಾಡಿಲ್ಲ. ಬೋಟ್‌ಗಳು 5ನೇ ತಾರೀಖೀನಿಂದ ಸಮುದ್ರಕ್ಕಿಳಿಯಲಿವೆ. ಮುಂದೇನೋ ಗೊತ್ತಿಲ್ಲ.

ಈ ಮಧ್ಯೆ ಗಾಳಿ ಜೋರಾಗಿ ಸಮುದ್ರ ಕೊರೆತ ತೀವ್ರವಾಗಿದೆ. ಹಿಂದೆ ಕಟ್ಟಿದ್ದ ತಡೆಗೋಡೆಗಳ ಕಲ್ಲನ್ನು ಸಮುದ್ರ ಕಬಳಿಸಿ, ಭೂಮಿ ಸ್ವಾಹಾ ಮಾಡುತ್ತಿದೆ. ರಾಮನಗರದಲ್ಲಿ ನೆಲೆಸಿದವರು ಬಹುಪಾಲು ಮಲ್ಲುಕುರ್ವೆ, ಪಾವಿನಕುರ್ವೆ ನಿರಾಶ್ರಿತರು. ತುಂಬ ಹೋರಾಡಿ ಕೆಲವರು ಪಟ್ಟ ಪಡೆದಿದ್ದಾರೆ. ಇಕೋ ಬೀಚಿನಿಂದ ಸುಮಾರು 2ಕಿಮೀ ಶರಾವತಿ ಸಂಗಮದವರೆಗೆ ಅಲ್ಲಲ್ಲಿ ತಡೆಗೋಡೆ ಕುಸಿದು ರಸ್ತೆ ಮುರಿದು ನೀರು ನುಗ್ಗಿದೆ. ಸರ್ಕಾರ ಬಿಡುಗಡೆ ಮಾಡಿರುವ ಹಣ ಯಾತಕ್ಕೂ ಸಾಲದು. 3 ವರ್ಷದಿಂದ ಹಣಬಿಡುಗಡೆಗಾಗಿ ಕಾಯುತ್ತಿರುವ ತೊಪ್ಪಲಕೇರಿಯವರು ಪ್ರಧಾನಿಯವರೆಗೆ ದೂರು ಸಲ್ಲಿಸಿದ್ದಾರೆ. ಈವರೆಗೆ ಯಾವ ಪ್ರಗತಿಯೂ ಆಗಿಲ್ಲ.

ಹೊನ್ನಾವರ, ಭಟ್ಕಳ ತಾಲೂಕಿನಲ್ಲಿ ಕನಿಷ್ಠ 10ಕಿಮೀ ಪ್ರದೇಶದಲ್ಲಿ ತೀವ್ರ ಸಮುದ್ರ ಕೊರೆತವಿದೆ. ಈ ವರ್ಷ 100ಕೋಟಿ ರೂ. ಮಂಜೂರಾದರೆ ತುರ್ತು ಕಾಮಗಾರಿ ನಡೆಸಬಹುದು. ಮುಂದಿನ ವರ್ಷದಲ್ಲಿ ಇನ್ನೆಲ್ಲಿ ಕೊರೆಯುತ್ತದೆಯೋ ಗೊತ್ತಿಲ್ಲ. ಕಡಲ ತೀರದವರ ಕಣ್ಣೀರು ಸಮುದ್ರದ ಉಪ್ಪುನೀರಿನ ಜೊತೆ ಬೆರೆತು ಹೋಗುತ್ತಿದೆ. ಸಂಪೂರ್ಣ ಸುರಕ್ಷತೆ ಮರೀಚಿಕೆಯಾಗಿದೆ.

 

•ಜೀಯು, ಹೊನ್ನಾವರ

ಟಾಪ್ ನ್ಯೂಸ್

7-mng

Mumtaz Ali; ಮೊಯ್ದೀನ್ ಬಾವ ಸೋದರ ನಾಪತ್ತೆ; ಸೇತುವೆಯಲ್ಲಿ ಕಾರು ಬಿಟ್ಟು ಆತ್ಮಹತ್ಯೆ ಶಂಕೆ !

Bigg Boss Kannada11: ಬಿಗ್‌ ಬಾಸ್‌ ಮನೆಯಿಂದ ಈ ವಾರ ಹೊರಗೆ ಬರುವುದು ಇವರೇ..?

Bigg Boss Kannada11: ಬಿಗ್‌ ಬಾಸ್‌ ಮನೆಯಿಂದ ಈ ವಾರ ಹೊರಗೆ ಬರುವುದು ಇವರೇ..?

6-ucchila

Udupi ಉಚ್ಚಿಲ ದಸರಾ 2024: ಉಡುಪಿ ಮತ್ತು ದ.ಕ. ಜಿಲ್ಲಾಮಟ್ಟದ ಕುಸ್ತಿ ಸ್ಪರ್ಧೆ ಉದ್ಘಾಟನೆ

Hindalga Jail: Inmate assaulted by four undertrials

Hindalga Jail: ಕೈದಿ ಮೇಲೆ ನಾಲ್ವರು ವಿಚಾರಣಾಧೀನ ಕೈದಿಗಳಿಂದ ಹಲ್ಲೆ

Mangaluru: ಮುಮ್ತಾಜ್‌ ಅಲಿ ನಾಪತ್ತೆ; ಮುಂಜಾನೆ ವೇಳೆ ಆಗಿದ್ದೇನು?

Mangaluru: ಮುಮ್ತಾಜ್‌ ಅಲಿ ನಾಪತ್ತೆ; ಮುಂಜಾನೆ ವೇಳೆ ಆಗಿದ್ದೇನು?

Dasara elephants: ದಸರಾ ಆನೆಗಳ ದಾದಾಗಿರಿ ದಿನಗಳು!

Dasara elephants: ದಸರಾ ಆನೆಗಳ ದಾದಾಗಿರಿ ದಿನಗಳು!

4-health

Childhood: ಬಾಲ್ಯಕಾಲದ ಆಘಾತಗಳು ಮತ್ತು ಆರೋಗ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Heavy Rain: ದಾಂಡೇಲಿಯಲ್ಲಿ ವ್ಯಾಪಕ ಮಳೆ… ಅಂಗಡಿ, ಮನೆಗಳಿಗೆ ನುಗ್ಗಿದ ಕೊಳಚೆ ನೀರು

Heavy Rain: ದಾಂಡೇಲಿಯಲ್ಲಿ ವ್ಯಾಪಕ ಮಳೆ… ಅಂಗಡಿ, ಮನೆಗಳಿಗೆ ನುಗ್ಗಿದ ಕೊಳಚೆ ನೀರು

ಅಂತ್ಯಾರಂಭ ಕೊಂಕಣಿ ಚಲನಚಿತ್ರ ಶೀಘ್ರ ಬಿಡುಗಡೆ: ಡಾ| ಕೆ. ರಮೇಶ್‌ ಕಾಮತ್‌ ನಿರ್ದೇಶನ

ಅಂತ್ಯಾರಂಭ ಕೊಂಕಣಿ ಚಲನಚಿತ್ರ ಶೀಘ್ರ ಬಿಡುಗಡೆ: ಡಾ| ಕೆ. ರಮೇಶ್‌ ಕಾಮತ್‌ ನಿರ್ದೇಶನ

ಶಿರಸಿಗೆ ಶೀಘ್ರ ಬರಲಿದೆ ಸಂಚಾರ ಪೊಲೀಸ್‌ ಠಾಣೆ!

ಶಿರಸಿಗೆ ಶೀಘ್ರ ಬರಲಿದೆ ಸಂಚಾರ ಪೊಲೀಸ್‌ ಠಾಣೆ!

ಕಾರವಾರ: ರಾಷ್ಟ್ರೀಯ-ರಾಜ್ಯ ಹೆದ್ದಾರಿಗಳ ಹೊಂಡ ಮುಚ್ಚಲು ಒತ್ತಾಯ

ಕಾರವಾರ: ರಾಷ್ಟ್ರೀಯ-ರಾಜ್ಯ ಹೆದ್ದಾರಿಗಳ ಹೊಂಡ ಮುಚ್ಚಲು ಒತ್ತಾಯ

ಜಿಲ್ಲೆಯಲ್ಲಿ ಗೋವಾ ಮಾದರಿ ಪ್ರವಾಸೋದ್ಯಮ ಅಭಿವೃದ್ಧಿ- ಸತೀಶ್‌ ಸೈಲ್‌

ಜಿಲ್ಲೆಯಲ್ಲಿ ಗೋವಾ ಮಾದರಿ ಪ್ರವಾಸೋದ್ಯಮ ಅಭಿವೃದ್ಧಿ- ಸತೀಶ್‌ ಸೈಲ್‌

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

2(1)

Mangaluru: ಕಲೆಗೆ ಜೀವ ತಳೆವ ನವದುರ್ಗೆಯರು!

8-shirva

ಕನ್ನಡ ಜ್ಯೋತಿ ರಥ; ಕಾಪು ತಾಲೂಕಿಗೆ ಸ್ವಾಗತ; ಕನ್ನಡ ಅಮೃತ ಭಾಷೆಯಾಗಿ ಬೆಳಗಲಿ: ತಹಶೀಲ್ದಾರ್‌

7-mng

Mumtaz Ali; ಮೊಯ್ದೀನ್ ಬಾವ ಸೋದರ ನಾಪತ್ತೆ; ಸೇತುವೆಯಲ್ಲಿ ಕಾರು ಬಿಟ್ಟು ಆತ್ಮಹತ್ಯೆ ಶಂಕೆ !

Bigg Boss Kannada11: ಬಿಗ್‌ ಬಾಸ್‌ ಮನೆಯಿಂದ ಈ ವಾರ ಹೊರಗೆ ಬರುವುದು ಇವರೇ..?

Bigg Boss Kannada11: ಬಿಗ್‌ ಬಾಸ್‌ ಮನೆಯಿಂದ ಈ ವಾರ ಹೊರಗೆ ಬರುವುದು ಇವರೇ..?

6-ucchila

Udupi ಉಚ್ಚಿಲ ದಸರಾ 2024: ಉಡುಪಿ ಮತ್ತು ದ.ಕ. ಜಿಲ್ಲಾಮಟ್ಟದ ಕುಸ್ತಿ ಸ್ಪರ್ಧೆ ಉದ್ಘಾಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.