ನಿನ್ನೂರ ದಾರಿಯಲಿ ಸಾಲು ದೀಪಗಳಂತೆ…


Team Udayavani, Aug 6, 2019, 5:00 AM IST

zz

ಸುಗ್ರೀವಾಜ್ಞೆ ಹೊರಡಿಸು- ಜಾರಿಗೊಳ್ಳಲಿ ಅನುರಾಗ ಶಾಸನ. ಮಡುಗಟ್ಟಿದ ನಿನ್ನೆದೆಯ ಮೋಡದಿಂದ ಮುಸಲಧಾರೆ ಸುರಿಯಲಿ. ಈ ಬಡವನ ಹೊಲದ ಮಣ್ಣು ನೆನೆಯುವಷ್ಟೂ ಸರಾಗವಾಗಿ ಹರಿದಾಡಲಿ.

ಪ್ರಿಯ ಹುಣ್ಣಿಮೆ..
ನಿನ್ನ ಬಗೆಗಿನ ಅಷ್ಟೂ ತುಮುಲಗಳನ್ನು ಅರುಹಿ, ವಿವರಿಸುವ ಯಾವ ಸದ್ವಿವಿವೇಕವೂ ಈಗ ನನ್ನಲ್ಲಿಲ್ಲ. ಒಲವು ಹೂಡಿರುವ ಈ ಚಳವಳಿಗೆ ಕಾರಣ ನಿನ್ನದೇ ಕಣ್ಣೋಟ. ಅದು ಪುಸಲಾಯಿಸಿ, ಬೆಂಬಲ ಸೂಚಿಸುವ ರೀತಿ ನಿನ್ನ ಗಮನಕ್ಕಿರಲಿಕ್ಕಿಲ್ಲ. ಅಂತೆಯೇ, ಈ ಅನಿರೀಕ್ಷಿತ ಆಂದೋಲನದಲ್ಲಿ ನನ್ನ ಕುಮ್ಮಕ್ಕೂ ಇಲ್ಲವೆಂದು ಸ್ಪಷ್ಟೀಕರಿಸುವೆ. ಪ್ರೇಮದ ಉಸಿರು ತಾಕುವುದು ಹೃದಯ-ಹೃದಯಗಳಿಗಲ್ಲವೇ?

ನಿನ್ನ ಸನಿಹದ ತಣ್ಣನೆ ಸ್ಪರ್ಷ, ಮತ್ತೆ ಮತ್ತೆ ನನ್ನನ್ನು ಅವಾಕ್ಕಾಗಿ ಮಾಡಿದೆ. ನಿನ್ನ ಆ ನಗು ಉಂಟು ಮಾಡುವ ಅವಾಂತರಗಳಿಗೆ ಏನೆನ್ನಲಿ..? ದಾಹದ ತೊಳಲಿಕೆಯಲ್ಲಿ ದಣಿದವನಿಗೆ ನಿನ್ನ ಹೃದಯದ ಒರತೆಯಿಂದ ಮೊಗೆದು, ತಿಳಿನೀರನ್ನಾದರೂ ಬಸಿದು ಕುಡಿಸು.

ನಿನ್ನ ಮೊದಲ ನೋಟದಲ್ಲೇ ನನ್ನ ಕನಸುಗಳು ಪ್ರಕಾಶಿಸಿದ್ದು. ಆ ಮಲ್ಲಿಗೆಯ ಘಮಲು ಅಮಲೇರಿಸಿದಾಗ. ಬಿಳಿ ಬಣ್ಣದ ಚಿತ್ತಾರದ ಸೀರೆಯ ನೆರಿಗೆಯ ನಡುವಲ್ಲಿ ಬದುಕು ಕಿಸಕ್ಕೆಂದು ನಕ್ಕೀತು. ಕಾಲೇಜು ಕಾರಿಡಾರಿನಲ್ಲಿ “ಪ್ರೀತಿ’ ಎಂಬ ಮಾಯದ ಬಳ್ಳಿ ಹುಟ್ಟಿದ್ದು ಆಗಲೇ.!! ಹುಟ್ಟಿದ್ದಷ್ಟೇ, ನಿನ್ನ ಅವಜ್ಞೆಯನ್ನು ಮೀರಿ ವಿಕಸಿತಗೊಳ್ಳಲೇ ಇಲ್ಲ ನೋಡು. ಆ ಬಿಗುಮಾನ ಕೊನೆಗಾಣಿಸಿ ನನ್ನ ಬಗ್ಗೆ, ಅಲ್ಲಲ್ಲ… ನಮ್ಮಿಬ್ಬರ ಬಗ್ಗೆ ಒಂದಷ್ಟು ಗಂಭೀರವಾಗಿ ಯೋಚಿಸುವ ತುರ್ತಿದೆ. ಆದುದರಿಂದ ಸುಗ್ರೀವಾಜ್ಞೆ ಹೊರಡಿಸು- ಜಾರಿಗೊಳ್ಳಲಿ ಅನುರಾಗ ಶಾಸನ. ಮಡುಗಟ್ಟಿದ ನಿನ್ನೆದೆಯ ಮೋಡದಿಂದ ಮುಸಲಧಾರೆ ಸುರಿಯಲಿ. ಈ ಬಡವನ ಹೊಲದ ಮಣ್ಣು ನೆನೆಯುವಷ್ಟೂ ಸರಾಗವಾಗಿ ಹರಿದಾಡಲಿ, ಅಲ್ಲಿ ಕೊನೆಯಿಲ್ಲದೆ ನಗಲಿ ಪ್ರೀತಿ ಲತೆಯ ಹೂವು..
ನಿನ್ನೂರ ದಾರಿಯಲ್ಲಿ ಸಾಲು ಸಾಲು ದೀಪಗಳಂತೆ, ಹೌದೇ..? ಹಾಗಿದ್ದರೆ ತಡ ಮಾಡಬೇಡ. ದೀಪ ದೀಪಗಳ ಬೆಳಕ ನುಂಗಿ ನನ್ನೂರ ಎದೆಯ ಕಗ್ಗತ್ತಲ ಹಾದಿಗೆ ಹುಣ್ಣಿಮೆಯಾಗು.
ನಿರೀಕ್ಷಿತ ಪ್ರೇಮಿ

-ನಾಗರಾಜ ಮಗ್ಗದ, ಕೊಟ್ಟೂರು

ಟಾಪ್ ನ್ಯೂಸ್

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.