ಕಾಶ್ಮೀರಿ ಹಿಂದೂಗಳ ಬದುಕಿನಲ್ಲಿ ಮೂಡಿದ ಭರವಸೆಯ ಕಿರಣ


Team Udayavani, Aug 6, 2019, 3:00 AM IST

kashmiri-hindu

ಇಂದು ಕಾಶ್ಮೀರ ಪಂಡಿತ ಸಮುದಾಯದ ವ್ಯಕ್ತಿಯೊಬ್ಬ ತನ್ನ ಬೇರುಗಳನ್ನು ಹುಡುಕಿಕೊಂಡು ಪೂರ್ವಜರು ವಾಸವಾಗಿದ್ದ ಸ್ಥಳಕ್ಕೆ ಹೊರಟರೆ ಹೆಜ್ಜೆ ಹೆಜ್ಜೆಗೂ ಸವಾಲುಗಳನ್ನು-ಬೆದರಿಕೆಗಳನ್ನು ಎದುರಿಸಬೇಕಾಗುತ್ತ ದೆ. ಒಂದು ಕಾಲದಲ್ಲಿ ನಮ್ಮದೇ ನೆರೆಹೊರೆಯಾಗಿದ್ದವರು ಇಂದು ನಮ್ಮನ್ನು ಶತ್ರುಗಳಂತೆ ಕಾಣುತ್ತಾರೆ. ಕಾರಣ ನಮ್ಮ ಜಮೀನು, ಆಸ್ತಿ -ಮನೆಗಳನ್ನು ಅವರು ವಶಪಡಿಸಿಕೊಂಡಿದ್ದಾರೆ. ಪಂಡಿತರೇನಾದರೂ ವಾಪಸ್ಸು ಬಂದರೆ ಹಿಂದಿರುಗಿ ಕೊಡಬೇಕಾಗಬಹುದೆಂಬ ಸ್ವಾರ್ಥ ಚಿಂತನೆ. ಕಾಶ್ಮೀರದ ಎಷ್ಟೋ ಮಂದಿರಗಳು ಮಸೀದಿಗಳಾಗಿವೆ. ಕಾಶ್ಮೀರದ ಶೈವ ಸಂಸ್ಕೃತಿಯ ಮೇರು ಶಿಖರ ಅಭಿನವ ಗುಪ್ತರು ತಮ್ಮ ಅಂತಿಮ ದಿನದಲ್ಲಿ ಪ್ರವೇಶಿಸಿ ಸಮಾಧಿಯಾದ “ಭೈರವ ಗುಹೆ’ ಯಾವುದೋ ಪೀರರ ಮಸೀದಿಯಾಗಿದೆ.

1980ರ ದಶಕದ ದ್ವಿತೀಯಾರ್ಧದ ದಿನಗಳು ಕಾಶ್ಮೀರ ಕಣಿವೆಯಲ್ಲಿ ವಾಸವಾಗಿದ್ದ ಪಂಡಿತ ಸಮುದಾಯದ ನಮಗೆ ಅತ್ಯಂತ ಕರಾಳವಾಗಿದ್ದವು. ದಶಕಗಳಿಂದ ವ್ಯವಸ್ಥಿತವಾಗಿ ನಡೆದುಬಂದ ದೌರ್ಜನ್ಯದ ಚರಮಘಟ್ಟ ತಲುಪುವ ಸಂದರ್ಭ ನಿರ್ಮಾಣವಾಗಿತ್ತು. ಜಮ್ಮು ಕಾಶ್ಮೀರ ಲಿಬರೇಶನ್‌ ಫ್ರಂಟ್‌ ಮತ್ತು ಇಸ್ಲಾಮಿಕ್‌ ಉಗ್ರವಾದದ ಅಟ್ಟಹಾಸ ದಿಂದಾಗಿ ಸುಮಾರು 6 ಲಕ್ಷ ಕಾಶ್ಮೀರಿ ಪಂಡಿತ ಸಮುದಾಯ ತಮ್ಮ ಮನೆ, ಉದ್ಯೋಗ, ವ್ಯವಹಾರ, ಆಸ್ತಿಪಾಸ್ತಿಗಳನ್ನು, ಮಂದಿರ, ಶ್ರದ್ಧಾಕೇಂದ್ರಗಳನ್ನೆಲ್ಲ ಬಿಟ್ಟು ಪ್ರಾಣ ಕೈಯಲ್ಲಿ ಹಿಡಿದು ಓಡಬೇಕಾಯಿತು.

ಬೆದರಿಕೆ, ಕೊಲೆ, ಕಿಡ್ನಾಪ್‌, ನಮ್ಮ ಸಹೋದರಿಯರ ಮೇಲೆ ಅತ್ಯಾಚಾರ…ನಾವು ನಮ್ಮದೇ ಜನ್ಮಭೂಮಿಯಲ್ಲಿ ಎದುರಿಸಿದ ದೌರ್ಜನ್ಯಗಳು ಒಂದೆರಡಲ್ಲ. 1989-90ರ ಈ ಘಟನೆಯನ್ನು “ಕಾಶ್ಮೀರಿ ಹಿಂದುಗಳ ಎಕ್ಸಾಡಸ್‌’ ಎಂದು ಇತಿಹಾಸ ಗುರುತಿಸುತ್ತದೆ. ನಮ್ಮೆಲ್ಲರ ಮನೆ ಜಮೀನು ಆಸ್ತಿಪಾಸ್ತಿಗಳ ಮೇಲೆ ಅಂದು ಪ್ರತ್ಯೇಕತಾವಾದಿಗಳು ಮತ್ತು ಇಸ್ಲಾಮಿಕ್‌ ತೀವ್ರವಾದಿಗಳು ಹಿಡಿ ತ ಸಾಧಿಸಿದರು. ಸರ್ಕಾ ರದ ಲೆಕ್ಕದ ಪ್ರಕಾರ, ವಲಸೆ ಬಂದದ್ದು 62 ಸಾವಿರ ಕಾಶ್ಮೀರಿ ಪಂಡಿತ ಕುಟುಂಬಗಳು. ಆದರೆ ಪ್ರಾಣ ಕಳೆದುಕೊಂಡವರೆಷ್ಟೋ?

ತಮ್ಮ ಪೂರ್ವಜರು ಬದುಕಿದ ಭೂಮಿಯನ್ನು ಬಿಟ್ಟಿರಲಾರದೇ ಅಲ್ಲೇ ಉಳಿ ದು, ಉಗ್ರರ ಅಟ್ಟಹಾಸಕ್ಕೆ ಪ್ರಾಣ ಕಳೆದುಕೊಂಡು ಅಲ್ಲಿಯೇ ಮಣ್ಣಾದವರೆಷ್ಟೋ ಮಂದಿ. ಇಂದಿಗೂ ಸದಾ ಭಯದ ನೆರಳಲ್ಲೇ ಕಾಶ್ಮೀರದಲ್ಲಿ ಬದುಕಿರುವ ಹಿಂದುಗಳ ಸಂಖ್ಯೆ ಸಾವಿರವನ್ನು ದಾಟುವುದಿಲ್ಲ. ಅನಿವಾರ್ಯವಾಗಿ ವಲಸೆ ಬಂದವರ ಲ್ಲಿ ಕೆಲವು ಪರಿವಾರಗಳು ದೇಶದ ವಿವಿಧ ಭಾಗಗಳಲ್ಲಿ ಹೊಸದಾಗಿ ಬದುಕು ಕಟ್ಟಿಕೊಂಡರೆ ಹೆಚ್ಚಿನ ಕುಟುಂಬಗಳು ದೆಹಲಿ ಮತ್ತು ಜಮ್ಮುವಿನ ನಿರಾಶ್ರಿತರ ಶಿಬಿರಗಳಲ್ಲಿ ವಾಸವಾಗಿವೆ. ಇಲ್ಲಿ ನೆಲೆಯಾದವರ ದಯನೀಯ ಸ್ಥಿತಿಯನ್ನು ನೋಡಿ ಯೇ ಅರಿಯಬೇಕು. ಯಾವ ಮಾನವ ಹಕ್ಕು ಹೋರಾಟಗಾರರಿಗೂ ನಿರಾಶ್ರಿತರ ಶಿಬಿರಗಳಲ್ಲಿ ಎರಡು ತಲೆಮಾರಿನಿಂದ ಶೋಚನೀಯ ಬದುಕು ನಡೆಸುತ್ತಿರುವವರು ಕಣ್ಣಿಗೆ ಬಿದ್ದಿಲ್ಲ ಎನ್ನುವುದು ವಾಸ್ತವ.

ನಮ್ಮ ನೆಲದಿಂದ ಹೊರದಬ್ಬಲ್ಪಟ್ಟು ಮೂರು ದಶಕಗಳು ಕಳೆದಿವೆ. ಈ ನಡುವೆ ಕಾಶ್ಮೀರಿ ಪಂಡಿತರನ್ನು ವಾಪಸ್ಸು ಕಣಿವೆಗೆ ಕಳುಹಿಸುವ ಮಾತುಗಳು ಆಗಾಗ ಕೇಳಿ ಬಂದಿವೆ. ಆದರೆ ಕೇಂದ್ರ ಸರ್ಕಾರದ ಮುಂದೆ ಪ್ರತಿಬಾರಿ ಇಂತಹ ಪ್ರಸ್ತಾಪ ಬಂದಾಗಲೆಲ್ಲ ಕಾಶ್ಮೀರ ಕಣಿವೆಯ ಪ್ರಬಲ ಹಿತಾಸಕ್ತಿಗಳು, ಸ್ವಾರ್ಥ ರಾಜಕಾರಣಿಗಳು ಮತ್ತು ಪ್ರತ್ಯೇಕತಾವಾದಿಗಳು ಒಂದಲ್ಲ ಒಂದು ಕ್ಯಾತೆ ತೆಗದು ಇದಕ್ಕೆ ಅಡ್ಡಗಾಲು ಹಾಕುತ್ತಾ ಬಂದವು. ಕಾಶ್ಮೀರಿ ಪಂಡಿತರ ಕಲ್ಯಾಣದ ಹೆಸರಿನಲ್ಲಿ ಘೋಷಣೆಯಾದ ಪ್ಯಾಕೇಜುಗಳು ಅವರಿಗೆ ತಲುಪಲೇ ಇಲ್ಲ.

ಇಂದು ಕಾಶ್ಮೀರ ಪಂಡಿತ ಸಮುದಾಯದ ವ್ಯಕ್ತಿಯೊಬ್ಬ ತನ್ನ ಬೇರುಗಳನ್ನು ಹುಡುಕಿಕೊಂಡು ಪೂರ್ವಜರು ವಾಸವಾಗಿದ್ದ ಸ್ಥಳಕ್ಕೆ ಹೊರಟರೆ ಹೆಜ್ಜೆ ಹೆಜ್ಜೆಗೂ ಸವಾಲುಗಳನ್ನು-ಬೆದರಿಕೆಗಳನ್ನು ಎದುರಿಸಬೇಕಾಗಿದೆ. ಒಂದು ಕಾಲದಲ್ಲಿ ನಮ್ಮದೇ ನೆರೆಹೊರೆಯಾಗಿದ್ದವರು ಇಂದು ಶತ್ರುಗಳಂತೆ ಕಾಣುತ್ತಾರೆ. ಕಾರಣ ನಮ್ಮ ಜಮೀನು, ಆಸ್ತಿ ಮನೆಗಳನ್ನು ಅವರು ಕಬಾ ಮಾಡಿಕೊಂಡಿದ್ದಾರೆ. ಪಂಡಿತರೇನಾದರೂ ವಾಪಸ್ಸು ಬಂದರೆ ಹಿಂದಿರುಗಿ ಕೊಡಬೇಕಾಗಬಹುದೆಂಬ ಸ್ವಾರ್ಥ ಚಿಂತನೆ. ಕಾಶ್ಮೀರದ ಎಷ್ಟೋ ಮಂದಿರಗಳು ಮಸೀದಿಗಳಾಗಿವೆ. ಕಾಶ್ಮೀರದ ಶೈವ ಸಂಸ್ಕೃತಿಯ ಮೇರು ಶಿಖರ ಅಭಿನವ ಗುಪ್ತರು ತಮ್ಮ ಅಂತಿಮ ದಿನದಲ್ಲಿ ಪ್ರವೇಶಿಸಿ ಸಮಾಧಿಯಾದ “ಭೈರವ ಗುಹೆ’ ಯಾವುದೋ ಪೀರರ ಮಸೀದಿಯಾಗಿದೆ.

ಇಷ್ಟೆಲ್ಲ ಅತ್ಯಾಚಾರ ಅನಾಚಾರ ನಡೆದದ್ದು ಪ್ರತ್ಯೇಕತಾವಾದಿಗಳು ಮತ್ತು ಜಮ್ಮು ಕಾಶ್ಮೀರ ರಾಜ್ಯದಲ್ಲಿ ಪಟ್ಟಭದ್ರರಾಗಿ ಕಳೆದ ಏಳು ದಶಕಗಳಿಂದ ಅಧಿಕಾರ ಅನುಭವಿಸುತ್ತಿರುವ ಕಾಶ್ಮೀರ ಕಣಿವೆಯ ಕೆಲವು ರಾಜಕೀಯ ಪರಿವಾರಗಳ ನೆರಳಿನಲ್ಲೇ. ಇವರ ಕೈಯಲ್ಲಿ ಸಿಕ್ಕಿ 370ನೇ ವಿಧಿ ದುರಪಯೋಗವಾಗುತ್ತಾ ಬಂದಿದೆ. ದೌರ್ಭಾಗ್ಯವೆಂದರೆ 370ನೇ ವಿಧಿಯನ್ನು ದೇಶದ ಇತರ ಭಾಗಗಳಲ್ಲಿ ಮತಬ್ಯಾಂಕ್‌ ರಾಜಕಾರಣಕ್ಕೆ ಬಳಸಿಕೊಂಡ ಕಾಂಗ್ರೆಸ್‌ ಮತ್ತಿತರ ತಥಾಕಥಿತ ಸೆಕ್ಯುಲರ್‌ ಪಕ್ಷಗಳು 370ನೇ ವಿಧಿ ಮತ್ತು ಆರ್ಟಿ ಕಲ್‌ 35ಎ ಕಾರ ಣ ದಿಂದ ನಡೆದಿರುವ ದೌರ್ಜನ್ಯವನ್ನು ಮಾತ್ರ ಚರ್ಚಿಸಲೂ ಸಿದ್ಧರಾಗಿಲ್ಲ.

ತನ್ನ ಪ್ರಣಾಳಿಕೆಯಲ್ಲಿ 370ನೇ ವಿಧಿಯನ್ನು ಕೊನೆಗೊಳಿಸುವ ಭರವಸೆ ನೀಡಿದ್ದ ಬಿಜೆಪಿ ದೃಢ ಹೆಜ್ಜೆಯನ್ನು ಇಟ್ಟಿದೆ. ಆರ್ಟಿಕಲ್‌ 370 ಮತ್ತು 35ಎ ಕೊನೆಗೊಳ್ಳುವುದರೊಂದಿಗೆ ಕಾಶ್ಮೀರ ಕಣಿವೆ ಪ್ರತ್ಯೇಕತಾವಾದ, ಇಸ್ಲಾಂ ಭಯೋತ್ಪಾದನೆ ಮತ್ತು ಕಾಶ್ಮೀರಿ ಕಣಿವೆಯ ಸ್ವಾರ್ಥ ರಾಜಕಾರಣಿ ಕುಟುಂಬಗಳ ಕಪಿಮುಷ್ಟಿಯಿಂದ ಜಮ್ಮು ಕಾಶ್ಮೀರ ಮುಕ್ತವಾಗುವ ಭರವಸೆ ಮೂಡಿದೆ. ತಮ್ಮ ಬೇರಿನಿಂದ ಕಡಿದುಕೊಂಡು ನಿರಾಶ್ರಿತರಾದ ಪಂಡಿತ ಸಮುದಾಯ ಮತ್ತೆ ತಮ್ಮ ಪೂರ್ವಜರ ಭೂಮಿಗೆ ಮರಳುವ ಕನಸು ಜಾಗೃತಗೊಂಡಿದೆ.

(ಕಾಶ್ಮೀರದಿಂದ ಬಲವಂತವಾಗಿ ಹೊರದಬ್ಬಲ್ಪಟ್ಟು ಬೆಂಗಳೂರಿನಲ್ಲಿ ನೆಲೆಗೊಂಡವರು)

* ದಿಲೀಪ್‌ ಕಾಚ್ರು, ಜಮ್ಮು ಕಾಶ್ಮೀರ ಅಧ್ಯಯನ ಕೇಂದ್ರ

ಟಾಪ್ ನ್ಯೂಸ್

Crime

Sulya: ವಾರಂಟ್‌ ಆರೋಪಿ ಪರಾರಿ

3

BBK11: ಇದು ಬಿಗ್‌ಬಾಸ್‌ ಮನೆ ಪರಪ್ಪನ ಅಗ್ರಹಾರ ಜೈಲಲ್ಲ.. ಜಗದೀಶ್‌ಗೆ ಕಿಚ್ಚನಿಂದ ಪಾಠ

Katapadi

Udupi: ಉದ್ಯಾವರ ಬಳಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ ಮೇಲೆರಿದ ಕಾರು; ಪ್ರಯಾಣಿಕರಿಗೆ ಗಾಯ

1-megha

Meghalaya ; ಭಾರೀ ಮಳೆಗೆ ಭೂಕುಸಿತ: ಒಂದೇ ಕುಟುಂಬದ 7 ಮಂದಿ ಜೀವಂತ ಸಮಾಧಿ

1-weqwe

Middle East latest; ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ: ಹಮಾಸ್ ಅಧಿಕಾರಿ ಸಾ*ವು

JK-Congress

J-K Election: ಚುನಾವಣೆ ಫ‌ಲಿತಾಂಶಕ್ಕೂ ಮೊದಲೇ 5 ಶಾಸಕರ ನಾಮನಿರ್ದೇಶನ: ಕಾಂಗ್ರೆಸ್‌ ಆಕ್ಷೇಪ

1-frr

Risk; ಚಾರ್ ಮಿನಾರ್ ಕಿಟಕಿಗಳಲ್ಲಿ ನಡೆದು ಅಪಾಯಕಾರಿ ಸಾಹಸ: ವೈರಲ್ ವಿಡಿಯೋ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vaishnodevi-Temple

Famous Goddess Temple: ಗುಹಾಲಯ ಶ್ರೀಮಾತಾ ವೈಷ್ಣೋದೇವಿ ದೇಗುಲ, ಜಮ್ಮು-ಕಾಶ್ಮೀರ

Navaratri 2024: ಜಗತ್ ಪೂಜಿತೆ ನವದೇವಿ ಸ್ವರೂಪಿ

Navaratri 2024: ಜಗತ್ ಪೂಜಿತೆ ನವದೇವಿ ಸ್ವರೂಪಿ

Navaratri Special: ಬೆಳಕಿನ ರೂವಾರಿ ಹೆಣ್ಣು ಯಾಕೆ ಕತ್ತಲೆಗೆ ಹೆದರುತ್ತಿದ್ದಾಳೆ?

Navaratri Special: ಬೆಳಕಿನ ರೂವಾರಿ ಹೆಣ್ಣು ಯಾಕೆ ಕತ್ತಲೆಗೆ ಹೆದರುತ್ತಿದ್ದಾಳೆ?

Haryana: ಯಾರಿಗೆ ಗೆಲುವಿನ ಹರಿವಾಣ? ಬಿಜೆಪಿಗೆ ಆಡಳಿತ ವಿರೋಧ ಅಲೆ ಭೀತಿ

Haryana: ಯಾರಿಗೆ ಗೆಲುವಿನ ಹರಿವಾಣ? ಬಿಜೆಪಿಗೆ ಆಡಳಿತ ವಿರೋಧ ಅಲೆ ಭೀತಿ

Navratri: ಮಾತೃಶಕ್ತಿ ಆರಾಧನೆಯ ನವರಾತ್ರಿ

Navratri: ಮಾತೃಶಕ್ತಿ ಆರಾಧನೆಯ ನವರಾತ್ರಿ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

priyank

Gram Panchayat ನೌಕರರ ಪ್ರತಿಭಟನೆ ವಾಪಸ್‌: ಪ್ರಿಯಾಂಕ್‌ ಖರ್ಗೆ ಅಧ್ಯಕ್ಷತೆಯಲ್ಲಿ ಸಭೆ

Crime

Sulya: ವಾರಂಟ್‌ ಆರೋಪಿ ಪರಾರಿ

jameer

Waqf Boardನಿಂದ ಪ್ರತಿ ಜಿಲ್ಲೆಯಲ್ಲಿ ಪದವಿ ಪೂರ್ವ ಕಾಲೇಜು: ಸಚಿವ ಜಮೀರ್‌

police

Uppinangady: ವರದಕ್ಷಿಣೆಗಾಗಿ ನಿತ್ಯ ಮಾನಸಿಕ, ದೈಹಿಕ ಹಿಂಸೆ: ದೂರು ದಾಖಲು

Exam

PG NEET-2024: ನೋಂದಣಿ ವಿಸ್ತರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.