ಭಕ್ತ ಜನರಿಂದ ತುಂಬಿತು ಕಾಡು-ನಾಡು; ನಾಗಾರಾಧನೆಗೆ ಮಳೆ ಕೃಪೆ


Team Udayavani, Aug 6, 2019, 6:30 AM IST

male-krupe

ಉಡುಪಿ: ಪೇಟೆ, ಪಟ್ಟಣ, ಕಾಡು ಗದ್ದೆ ಹಾದಿ, ರಸ್ತೆ ಬದಿ – ಎಲ್ಲೆಲ್ಲೂ ಭಕ್ತ ಜನರ ಗುಂಪು. ಹಸಿರು ಗದ್ದೆ ಸಾಲುಗಳ ನಡುವಿನ ಹಾದಿಯುದ್ದಕ್ಕೂ ತಮ್ಮ ತಮ್ಮ ಮೂಲ ನಾಗನ ಸನ್ನಿಧಿಗೆ ಹೋಗುವ ಧಾವಂತ…ವಾಹನದಲ್ಲಿ ಹೋದವರಿಗೆ ಕಿರಿದಾದ ರಸ್ತೆಗಳು, ವಾಹನ ದಟ್ಟಣೆ, ರಸ್ತೆಗಳಿಲ್ಲದ ಕಾಲು ಹಾದಿಯ ಸವಾಲು. ಆಗೊಮ್ಮೆ ಈಗೊಮ್ಮೆ ಸುರಿದು ಹೋಗುತ್ತಿದ್ದ ಮಳೆಯ ನಡುವೆಯೇ ನಾಗನಿಗೆ ತನು ತಂಬಿಲಕ್ಕೆ ಬೇಕಾದ ಪರಿಕರಗಳ ಖರೀದಿಯ ಸಂಭ್ರಮ…

ತುಳುನಾಡಿನಲ್ಲಿ ಅತ್ಯಂತ ಸಂಭ್ರಮದಿಂದ ಆಚರಿಸಲ್ಪಡುವ ನಾಗರಪಂಚಮಿ ಈ ಬಾರಿಯೂ ಅಪಾರ ಶ್ರದ್ಧಾ ಭಕ್ತಿ ಸಂಭ್ರಮೋಲ್ಲಾಸದಿಂದ ಸೋಮವಾರ ನಡೆಯಿತು. ಹಿರಿಯರು-ಕಿರಿಯರು ಕುಟುಂಬ ಸಮೇತವಾಗಿ ನಾಗಬನಗಳಿಗೆ ತೆರಳಿ ವಿವಿಧ ರೀತಿಯ ಸೇವೆಗಳನ್ನು ಸಮರ್ಪಿಸಿದರು. ತಮ್ಮ ಕುಟುಂಬದ ಮೂಲ ನಾಗನ ಸನ್ನಿಧಾನಕ್ಕೆ ತೆರಳಿದ ಅನಂತರ ತಮ್ಮ ಊರಿನ ಸುಬ್ರಹಣ್ಯ ದೇವಸ್ಥಾನಗಳಿಗೆ ತೆರಳಿದವರು ಹಲವರು. ಇದರಿಂದಾಗಿ ದೇವಸ್ಥಾನಗಳಲ್ಲಿಯೂ ಜನ ಸಂದಣಿಯಿತ್ತು. ಹಲವು ಸುಬ್ರಹ್ಮಣ್ಯ ದೇವಸ್ಥಾನ ಗಳು ಹಾಗೂ ಕೆಲವು ಕುಟುಂಬಿಕರ ಮೂಲ ನಾಗ ಬನಗಳಲ್ಲಿ ಅನ್ನಸಂತರ್ಪಣೆಯೂ ನಡೆಯಿತು. ಜಾಗದ ನಾಗದೇವರಿಗೂ ಹಾಲು-ಬೊಂಡಾಭಿಷೇಕ ನೆರವೇರಿತು.

ಕುಟುಂಬ ಸಮ್ಮಿಲನ

‘ನಾವು ವರುಷಕ್ಕೊಮ್ಮೆ ನಾಗಬನದಲ್ಲಿಯಾದರೂ ಒಂದಾಗುತ್ತೇವೆ. ನಮ್ಮ ಒಂದು ಕುಟುಂಬ ಮಾತ್ರವಲ್ಲದೆ ನಮ್ಮ ಸಮುದಾಯದ ಹಲವು ಕುಟುಂಬಗಳ ಸಮ್ಮಿಲನಕ್ಕೆ ನಾಗಬನ ಕಾರಣ ವಾಗುತ್ತಿದೆ. ದೇವರ ದರ್ಶನ, ಸೇವಾ ಭಾಗ್ಯದ ಜತೆಗೆ ಇಡೀ ಕುಟುಂಬದ ಬಹುತೇಕ ಮಂದಿಯನ್ನು ಭೇಟಿಯಾಗುವ ಅವಕಾಶವೂ ದೊರೆಯಿತು’ ಎಂದು ಉದ್ಯಾವರ ಸಮೀಪ ನಾಗನಿಗೆ ತನು ಅರ್ಪಿಸಿ ಉಡುಪಿಯತ್ತ ಆಗಮಿಸಿದ ಕೇಶವ ಕೋಟ್ಯಾನ್‌ ತಮ್ಮ ಖುಷಿ ಹಂಚಿಕೊಂಡರು.

ಉಡುಪಿ ಭಾಗದಲ್ಲಿ ಉಡುಪಿ ಶ್ರೀಕೃಷ್ಣ ಮಠದ ಸುಬ್ರಹ್ಮಣ್ಯ ದೇವರ ಗುಡಿ, ಸಗ್ರಿ, ಮುಚ್ಲುಕೋಡು, ಮಾಂಗೋಡು, ಅರಿತೋಡು, ಬಡಗುಪೇಟೆ, ಕಿದಿಯೂರು ಹೊಟೇಲ್ ಸಮೀಪದ ನಾಗಬನ ಸೇರಿದಂತೆ ವಿವಿಧೆಡೆ ನಾಗರಪಂಚಮಿ ಆಚರಿಸಲಾಯಿತು. ನಾಗರಪಂಚಮಿ ಪ್ರಯುಕ್ತ ಶಾಲಾ ಕಾಲೇಜುಗಳಿಗೆ ರಜೆ ಇತ್ತು. ಶ್ರೀಕೃಷ್ಣ ಮಠದ ರಥಬೀದಿ ಆಸುಪಾಸು ಸೇರಿದಂತೆ ನಗರದಲ್ಲಿ ಆಭರಣ, ಬಟ್ಟೆ ಇತ್ಯಾದಿಗಳ ಖರೀದಿ ಭರಾಟೆಯೂ ಕಂಡು ಬಂತು. ಕೆಲವು ಹೊಟೇಲ್ ಅಂಗಡಿ ಹಾಗೂ ಇತರ ವಾಣಿಜ್ಯ ಮಳಿಗೆಗಳು ಮುಚ್ಚಿದ್ದವು. ‘ಶಾಲೆಗಳಿಗೆ ಇಲಾಖೆ ರಜೆ ಘೋಷಿಸಿಲ್ಲ. ಆದರೆ ವರ್ಷದ 4 ವಿವೇಚನಾ ರಜೆಗಳಲ್ಲಿ ನಾಗರಪಂಚಮಿಯೂ ಒಂದಾಗಿತ್ತು. ಹಾಗಾಗಿ ಬಹುತೇಕ ಎಲ್ಲ ಶಾಲೆಯವರು ಕೂಡ ರಜೆ ನೀಡಿದ್ದರು’ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಪೂಜೆ ವೇಳೆ ‘ಪರಿಸರ ಸಹ್ಯ’ ಸಲಹೆ

ಕೆಲವು ನಾಗಬನಗಳಲ್ಲಿ ಪೂಜಾ ತಯಾರಿ ತರಾತುರಿಯ ನಡುವೆಯೂ ಕೆಲವು ಅರ್ಚಕರು ಪರಿಸರ ಸಹ್ಯವಾದ ನಾಗರ ಪಂಚಮಿಗಾಗಿ ಸಲಹೆಗಳನ್ನು ನೀಡುತ್ತಿದ್ದುದು ಕಂಡು ಬಂತು. ‘ನಾಗಬನಗಳಿಗೆ ಸಾಧ್ಯವಾದಷ್ಟು ದೇಸಿ ದನಗಳ ಅಥವಾ ಮನೆಯಲ್ಲಿ ಸಾಕಿದ ದನಗಳ ಹಾಲನ್ನೇ ತನ್ನಿ. ಪ್ಯಾಕೆಟ್ ಹಾಲು ಕಡಿಮೆ ಮಾಡಿ. ಹಣ್ಣು ಕಾಯಿ, ಹೂ ಮತ್ತಿತರ ಪೂಜಾ ಪರಿಕರಗಳನ್ನು ಪ್ಲಾಸ್ಟಿಕ್‌ ಕೈ ಚೀಲಗಳಲ್ಲಿ ತರಬೇಡಿ. ತಂದರೂ ದಯವಿಟ್ಟು ನಿಮ್ಮೊಂದಿಗೆ ತೆಗೆದುಕೊಂಡು ಹೋಗಿ…’ ಎಂಬಿತ್ಯಾದಿಯಾಗಿ ಭಕ್ತರಲ್ಲಿ ಮನವಿ ಮಾಡಿದರು.

ಟಾಪ್ ನ್ಯೂಸ್

-pumpwell

Rain: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ; ಕೆಲವೆಡೆ ಹಾನಿ

gold

Guruvayur Devaswam ಒಡೆತನದಲ್ಲಿ 1,085 ಕೆ.ಜಿ. ಚಿನ್ನ!

nitish-kumar

Budget ಆರ್ಥಿಕ ಸಹಾಯ: ಕೇಂದ್ರವನ್ನು ಶ್ಲಾಘಿಸಿದ ಬಿಹಾರ ಸಿಎಂ

Kharge 2

Kharge ಟೀಕೆ; ಹಳಸಿದ ಭಾಷಣದಿಂದ ವೈಫ‌ಲ್ಯ ಮರೆಮಾಚಲು ಸಾಧ್ಯವಿಲ್ಲ

BELLARE-MALE

Rain: ಪುತ್ತೂರು, ಸುಳ್ಯ, ಬೆಳ್ಳಾರೆ: ಕೆಲವಡೆ ಹಾನಿ ಉಕ್ಕಿ ಹರಿದ ಗೌರಿ ಹೊಳೆ; ಸಂಚಾರ ಬಂದ್‌

DANDIA-DANCE

Udupi Ucchila Dasara: ಸಾರ್ವಜನಿಕ ದಾಂಡಿಯಾ, ಗರ್ಭಾ ನೃತ್ಯ ಸಂಭ್ರಮ

siddanna-2

Guarantee ಯೋಜನೆಗಳಿಂದ ಕರ್ನಾಟಕ ನಂ. 1: ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

dw

Padubidri: ರಸ್ತೆ ಅಪಘಾತ; ಗಾಯಾಳು ಸಾವು

13

Malpe: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

10

Panaji: ಮಲ್ಪೆಯ ಎರಡು ಮೀನುಗಾರಿಕಾ ಬೋಟ್‌ಗಳನ್ನು ವಶಪಡಿಸಿಕೊಂಡ ಗೋವಾ ಸರಕಾರ!

9

Malpe: 8 ಜಿಲ್ಲಾಡಳಿತದಿಂದ ತಡೆಬೇಲಿ ತೆರವು 8ವಾಟರ್‌ ಸ್ಪೋರ್ಟ್ಸ್ ಮತ್ತೆ ಆರಂಭ

8

Udupi: ಸಾಲು-ಸಾಲು ರಜೆ; ನವರಾತ್ರಿ ಸಂಭ್ರಮ; ಎಲ್ಲೆಡೆ ವಾಹನ ದಟ್ಟಣೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

-pumpwell

Rain: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ; ಕೆಲವೆಡೆ ಹಾನಿ

gold

Guruvayur Devaswam ಒಡೆತನದಲ್ಲಿ 1,085 ಕೆ.ಜಿ. ಚಿನ್ನ!

nitish-kumar

Budget ಆರ್ಥಿಕ ಸಹಾಯ: ಕೇಂದ್ರವನ್ನು ಶ್ಲಾಘಿಸಿದ ಬಿಹಾರ ಸಿಎಂ

Kharge 2

Kharge ಟೀಕೆ; ಹಳಸಿದ ಭಾಷಣದಿಂದ ವೈಫ‌ಲ್ಯ ಮರೆಮಾಚಲು ಸಾಧ್ಯವಿಲ್ಲ

attack

Public place ಮೂತ್ರ ವಿಸರ್ಜಿಸಬೇಡ ಎಂದಿದ್ದಕ್ಕೆ ವ್ಯಕ್ತಿ ಮೇಲೆ ಹಲ್ಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.