ಕಡಿಮೆ ಖರ್ಚಿನಲ್ಲಿ ಸಾವಯವ ಗೊಬ್ಬರ


Team Udayavani, Aug 11, 2019, 5:00 AM IST

d-24

ವಿವಿಧ ರೀತಿಯ ಸಾವಯವ ಗೊಬ್ಬರಗಳನ್ನು ಕಡಿಮೆ ಖರ್ಚಿನಲ್ಲಿ ಹಿತ್ತಿಲಿನಲ್ಲಿಯೇ ತಯಾರಿಸಿ ಕೃಷಿಗೆ ಬಳಸ ಬಹುದು. ಇದರಿಂದ ಬೆಳೆಗಳ ಉತ್ಪಾದನ ವೆಚ್ಚವು ಕಡಿಮೆಯಾಗುವುದು.

ಪೈಪ್‌ ಕಾಂಪೋಸ್ಟ್‌
ಪೈಪ್‌ ಕಾಂಪೋಸ್ಟ್‌ ಸರಳವಾದ ಜೈವಿಕ ಗೊಬ್ಬರ ತಯಾರಿಕಾ ವಿಧಾನ. ಮನೆಯಲ್ಲಿ ಉತ್ಪತ್ತಿಯಾಗುವ ತರಕಾರಿ, ಮಾಂಸದ ತ್ಯಾಜ್ಯ ಸಹಿತ ಇತರ ಮಾಲಿನ್ಯಗಳು ಮಣ್ಣಿ ನೊಡನೆ ಸೇರಿ ಕೊಳೆತು ಕ್ರಿಮಿಗಳು, ಬ್ಯಾಕ್ಟೀರಿಯಾಗಳು ಉತ್ಪಾದನೆ ಯಾಗಿ ಸಾಂಕ್ರಾಮಿಕ ರೋಗ ಗಳಿಗೆ ಕಾರಣ  ವಾ ಗುತ್ತವೆ. ಅದನ್ನು ತಡೆಯಲು ಮನೆಯಲ್ಲಿ ಪ್ರತಿ ದಿನ ಉತ್ಪತ್ತಿಯಾಗುವ ತ್ಯಾಜ್ಯದ ಸುಲಭ ವಿಲೇವಾರಿಗೆ ಪೈಪ್‌ ಕಾಂಪೋಸ್ಟ್‌ ವಿಧಾನ ಬಹಳ ಉಪಯುಕ್ತ.

ಇದರಿಂದ ಲಭಿಸಿದ ಸಾವಯವ ಗೊಬ್ಬರವನ್ನು ಮನೆಯ ಹೂ, ತರಕಾರಿ ಸಹಿತ ಇನ್ನಿತರ ಬೆಳೆಗಳಿಗೆ ಬಳಸಬಹುದು. ತ್ಯಾಜ್ಯಗಳನ್ನು ತೆರೆದ ಸ್ಥಳದಲ್ಲಿ ಎಸೆಯದೆ ಇಂತಹ ಕಾಂಪೋಸ್ಟ್‌ ಮಾಡುವುದರಿಂದ ಸೊಳ್ಳೆ ಇನ್ನಿತರ ಜೀವಿಗಳಿಂದ ಹರಡುವ ಸಾಂಕ್ರಾಮಿಕ ರೋಗಗಳಿಂದಲೂ ಮುಕ್ತರಾಗಬಹುದು. ಪೈಪ್‌ ಕಾಂಪೋಸ್ಟ್‌ ವ್ಯವಸ್ಥೆ ಅಳವಡಿಸಲು ಒಟ್ಟು ಒಂದೆರಡು ಸಾವಿರ ರೂ. ವೆಚ್ಚ ತಗಲುತ್ತದೆ.

ಅಡಿಕೆ ಸಿಪ್ಪೆಯಿಂದ ಗೊಬ್ಬರ
ಅಡಿಕೆ ಸಿಪ್ಪೆಯಿಂದ ಗೊಬ್ಬರ ತಯಾರಿಸಿ ಬಳಸಿದರೆ ಕೈತೋಟಗಳಿಗೆ ಬಹಳಷ್ಟು ಪೋಷಕಾಂಶಗಳು ದೊರೆಯುತ್ತವೆ. ಇದು ಹಟ್ಟಿ ಗೊಬ್ಬರಕ್ಕಿಂತ ಹೆಚ್ಚು ಉಪಯುಕ್ತ. ಹೆಚ್ಚು ಪೋಷಕಾಂಶ ಇರುವುದರಿಂದ ಬೆಳೆಗಳಿಗೂ ಹೆಚ್ಚು ಉಪಯುಕ್ತ. ಇದರಲ್ಲಿ ನಾರಿನಂಶವೂ ಅಧಿಕವಾಗಿರುವುದರಿಂದ ಮಣ್ಣಿನಲ್ಲಿ ನೀರಿನಂಶ ಸಮೃದ್ಧವಾಗಿರುವಂತೆ ಮಾಡುತ್ತದೆ.

15 ಅಡಿ ಉದ್ದ, 5 ಅಡಿ ಅಗಲ ಮತ್ತು 5 ಅಡಿ ಆಳದ ಹೊಂಡ ನಿರ್ಮಿಸಿ, ಒಣಗಿದ ಅಡಿಕೆ ಸಿಪ್ಪೆ, ತರಗೆಲೆ, ಸೊಪ್ಪು ಕೊಳೆತು ಮಣ್ಣಿನಲ್ಲಿ ಸೇರುವ ಇತರ ತ್ಯಾಜ್ಯಗಳನ್ನು ಹಾಕಬೇಕು. 10 ಕೆಜಿ ಎರೆಹುಳು, 25-30 ಬುಟ್ಟಿ ಒಣ ಸೆಗಣಿ ಹುಡಿ ಹಾಕಿ ಅದಕ್ಕೆ ಚೆನ್ನಾಗಿ ಒದ್ದೆಯಾಗುವಷ್ಟು ನೀರು ಚಿಮುಕಿಸಬೇಕು. ಬಳಿಕ ಅದರಮೇಲೆ ಸುಮಾರು 50-60 ಬುಟ್ಟಿಗಳಷ್ಟು ಕೆಂಪು ಮಣ್ಣು ಹಾಕಿ ಐದಾರು ತಿಂಗಳುಗಳ ಕಾಲ ಹಾಗೇ ಬಿಡಬೇಕು.

ಗುಡ್ಡೆ ಪದ್ಧತಿ
ಗುಡ್ಡೆಯಲ್ಲಿ ಲಭಿಸುವ ವಿವಿಧ ಜಾತಿಯ ಸೊಪ್ಪು, ತರಗೆಲೆ, ಮಣ್ಣು, ನೀರು ಬಳಸಿ ಇದನ್ನು ತಯಾರಿಸಲಾಗುತ್ತದೆ. ಸುಮಾರು 15 ಅಡಿ ಉದ್ದ, 5 ಅಡಿ ಅಗಲ ಮತ್ತು 5 ಅಡಿ ಆಳದ ಹೊಂಡ ನಿರ್ಮಿಸಿ, ಅದಕ್ಕೆ ನೀರು ಚಿಮುಕಿಸಿ, ವಿವಿಧ ಜಾತಿಯ ಸೊಪ್ಪು, ತರಗೆಲೆ, ಮಣ್ಣನ್ನು ಸ್ವಲ್ಪ ಸ್ವಲ್ಪವೇ ಬೇರೆಬೇರೆ ಪದರಗಳಾಗಿ ಹಾಕಿ ನೀರು ಚಿಮುಕಿಸಿ ಕೊಳೆಯುವಂತೆ ಮಾಡಬೇಕು.

ಸಾಮಾನ್ಯ ಕಾಂಪೋಸ್ಟ್‌ ಗೊಬ್ಬರ
ಕೊಳೆತ ತರಕಾರಿ, ತರಕಾರಿ – ಹಣ್ಣುಗಳ ಸಿಪ್ಪೆ, ಉಳಿದ, ಹಳಸಿದ ಆಹಾರ, ಅನ್ನದ ಗಂಜಿ, ಅಕ್ಕಿ, ತರಕಾರಿ ತೊಳೆದ ನೀರು ಇತ್ಯಾದಿ ಅಡುಗೆ ಮನೆ ತ್ಯಾಜ್ಯ ಮತ್ತು ಮನೆ ಪರಿಸರದಲ್ಲಿ ಸಿಗುವ ಹೂವು, ಆಕಳ ಗಂಜಲ, ಹಟ್ಟಿ ತೊಳೆದ ನೀರು, ಹಸಿ ಸೆಗಣಿ ಇತ್ಯಾದಿ ಮಣ್ಣಿನಲ್ಲಿ ಕೊಳೆಯು ತಾಜ್ಯಗಳನ್ನು ಬಳಸಿ ಸಾಮಾನ್ಯ ಕಾಂಪೋಸ್ಟ್‌ ಗೊಬ್ಬರ ತಯಾರಿಸಲಾಗುತ್ತದೆ.

ಸುಮಾರು 10 ಅಡಿ ಉದ್ದ, 5 ಅಡಿ ಅಗಲ ಮತ್ತು 5 ಅಡಿ ಆಳದ ಹೊಂಡ ನಿರ್ಮಿಸಿ, ಪ್ರತಿ ನಿತ್ಯ ಮನೆಗಳಲ್ಲಿ ಉತ್ಪತ್ತಿಯಾದ ಬೇರೆಬೇರೆ ತ್ಯಾಜ್ಯಗಳನ್ನು ಹಾಕಿ ಅವುಗಳ ಮೇಲೆ ಪ್ರತಿ ದಿನ ಸ್ಪಲ ಮಣ್ಣು ಹರಡಬೇಕು. ಬಳಿಕ ಚೆನ್ನಾಗಿ ನೀರು ಚಿಮುಕಿಸಿ ಕೊಳೆಯುವಂತೆ ಮಾಡಬೇಕು.

ತಯಾರಿಸುವ ವಿಧಾನ
ಒಂದು ಮೀ. ಉದ್ದದ 20 ಸೆಂ.ಮೀ. ವ್ಯಾಸದ 2 ಪಿವಿಸಿ ಅಥವಾ ಸಿಮೆಂಟ್‌ ಪೈಪ್‌ ಬಳಸಿ ಕಾಂಪೋಸ್ಟ್‌ ತಯಾರಿಸಲಾಗುತ್ತದೆ. ಎರಡು ಪೈಪ್‌ಗ್ಳನ್ನು ಪ್ರತ್ಯೇಕವಾಗಿ 30 ಸೆಂ.ಮೀ. ಮಣ್ಣಿನ ತಳದಲ್ಲಿ ಹೂಳಬೇಕು. ಈ ಪೈಪ್‌ ಒಳಗಡೆ ನಿತ್ಯ ಮಾಲಿನ್ಯಗಳನ್ನು ಹಾಕಿ ಪ್ರತ್ಯೇಕ ಮುಚ್ಚಳದಿಂದ ಮುಚ್ಚುವುದರ ಜತೆಗೆ ಒಂದಷ್ಟು ಸೆಗಣಿ ನೀರು, ಮಜ್ಜಿಗೆ ನೀರು ಅಥವಾ ಬೆಲ್ಲದ ನೀರು ಯಾ ಸಕ್ಕರೆ ನೀರನ್ನು ಚಿಮುಕಿಸಬೇಕು. ಹೀಗೆ ಒಂದು ತಿಂಗಳಾಗುತ್ತಿದ್ದಂತೆ ಒಂದು ಪೈಪ್‌ ಭರ್ತಿಯಾಗುತ್ತದೆ. ಬಳಿಕ ಎರಡನೇ ಪೈಪ್‌ ತುಂಬುತ್ತಿದ್ದಂತೆ ಮೊದಲಿನ ಪೈಪ್‌ನೊಳಗಿನ ಮಾಲಿನ್ಯ ಗೊಬ್ಬರವಾಗಿ ಮಾರ್ಪಟ್ಟಿರುತ್ತದೆ.

 ಗಣೇಶ ಕುಳಮರ್ವ

ಟಾಪ್ ನ್ಯೂಸ್

Santhe-last

Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ

kambala2

Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ

Arrest

Davanagere: ಪೂಜೆಯಿಂದ ಕಷ್ಟ ಪರಿಹರಿಸುವ ನೆಪದಲ್ಲಿ ಮನೆಯಿಂದ ಕಳವು: ಇಬ್ಬರ ಬಂಧನ

Kodagu-Polcie

Madikeri: ವಿವಿಧ ಕಳವು ಪ್ರಕರಣ: ಕೊಡಗು ಪೊಲೀಸರಿಂದ ಮೂವರ ಸೆರೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Santhe-last

Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ

kambala2

Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ

Suside-Boy

Sulya: ಪಯಸ್ವಿನಿ ನದಿಯಲ್ಲಿ ಯುವಕನ ಶವ ಪತ್ತೆ

Arrest

Davanagere: ಪೂಜೆಯಿಂದ ಕಷ್ಟ ಪರಿಹರಿಸುವ ನೆಪದಲ್ಲಿ ಮನೆಯಿಂದ ಕಳವು: ಇಬ್ಬರ ಬಂಧನ

Kodagu-Polcie

Madikeri: ವಿವಿಧ ಕಳವು ಪ್ರಕರಣ: ಕೊಡಗು ಪೊಲೀಸರಿಂದ ಮೂವರ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.