![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Aug 19, 2019, 5:18 AM IST
ಹೊಸದಿಲ್ಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್. ಧೋನಿ ತಮ್ಮ ಸೇನಾ ತರಬೇತಿಯನ್ನು ಮುಗಿಸಿದ್ದಾರೆ. ಮೊನ್ನೆ ನಡೆದ ಸ್ವಾತಂತ್ರ್ಯ ದಿನಾಚರಣೆ ವೇಳೆಯೇ ಅವರು ತಮ್ಮ 2 ವಾರಗಳ ಕಾಶ್ಮೀರ ಕಣಿವೆಯಲ್ಲಿನ ಜವಾಬ್ದಾರಿಯನ್ನು ಮುಗಿಸಿದ್ದಾರೆ.
ಭಾರತದ ಅರೆ ಸೇನಾಪಡೆ ಯಲ್ಲಿ ಗೌರವ ಲೆಫ್ಟಿನೆಂಟ್ ಕರ್ನಲ್ ಆಗಿರುವ ಅವರು, ಏಕದಿನ ವಿಶ್ವಕಪ್ ಮುಗಿಯುತ್ತಿದ್ದಂತೆ ಸೇನಾ ತರಬೇತಿಗೆ ಸೇರಿಕೊಂಡಿದ್ದರು. 106ನೇ ಟಿಎ ಬೆಟಾಲಿಯನ್ ಅನ್ನು ಕೂಡಿಕೊಂಡಿದ್ದ ಅವರು ಕಾಶ್ಮೀರದಲ್ಲಿ ಗಸ್ತು ತಿರುಗು ವುದು, ರಕ್ಷಣೆ, ಪೋಸ್ಟ್ಗಳಿಗೆ ಭೇಟಿ ಮೊದಲಾದ ಇತರೆ ಅಧಿಕಾರಿಗಳು, ಯೋಧರು ಮಾಡುವ ಕೆಲಸವನ್ನು ನಿರ್ವಹಿಸಿದ್ದರು. ಆ. 15ರಂದು ಲಡಾಖ್ನಲ್ಲಿ ಕ್ರಿಕೆಟ್ ಆಡಿ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿದ್ದರು.
ವಿಶ್ವಕಪ್ ಅನಂತರ ಧೋನಿ ನಿವೃತ್ತಿ ಹೇಳುತ್ತಾರೆಂದು ಸುದ್ದಿಯಾಗಿತ್ತು. ಆದರೆ ಸ್ವತಃ ಬಿಸಿಸಿಐ ಅವರ ನಿವೃತ್ತಿ ಸುದ್ದಿಯನ್ನು ತಳ್ಳಿಹಾಕಿದೆ. ಅವರು ಮತ್ತೆ ಭಾರತ ತಂಡಕ್ಕೆ ಆಯ್ಕೆಯಾಗುವುದು ಖಚಿತವಾಗಿದೆ.
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್ ವಿವಾದ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
You seem to have an Ad Blocker on.
To continue reading, please turn it off or whitelist Udayavani.