ಸದಾ ಹರಿಯುತಿಹಳು ನಮ್ಮೊಳಗೆ ಕನ್ನಡವೆಂಬ ಗುಪ್ತಗಾಮಿನಿ


Team Udayavani, Aug 21, 2019, 1:30 PM IST

mumbai-tdy-1

ಗೇಟ್ ವೇ ಆಫ್ ಇಂಡಿಯಾ

ಮುಂಬಯಿ ಭಾರತದ ಜೀವಾಳ. ಅನೇಕ ಭಾಷೆ, ಧರ್ಮ, ಸಂಸ್ಕೃತಿಗಳ ಸಂಗಮಸ್ಥಾನ. ಆರ್ಥಿಕ ರಾಜಧಾನಿಯಾದ ಮುಂಬಯಿ ಹಾಗೂ ಕನ್ನಡ ನಾಡಿನ ನಂಟು ಇಂದು ನಿನ್ನೆಯದಲ್ಲ. ಸುಮಾರು ಒಂದೂವರೆ ಸಾವಿರ ವರ್ಷಗಳಿಗೆ ಮಿಕ್ಕಿದ ಇತಿಹಾಸವಿದೆ. ಅನೇಕ ಕಾರಣಗಳಿಂದ ಮುಂಬಯಿಗೆ ವಲಸೆ ಬಂದ ಹೊರನಾಡ ಕನ್ನಡಿಗರು ಬರೀ ದುಡಿಮೆಯಲ್ಲೇ ಮುಳುಗಿಲ್ಲ; ಜತೆಗೆ ಸಾಂಸ್ಕೃತಿಕ ಬೇರಿಗೆ ನೀರುಣಿಸುತ್ತಾ ಇಡೀ ಸಂಸ್ಕೃತಿಯ ವೃಕ್ಷದ ಬೆಳವಣಿಗೆಗೆ ಕಾರಣವಾಗುತ್ತಿದ್ದಾರೆ. ತಮ್ಮ ನಾಡು ನುಡಿಗಳ ಮೇಲಿನ ಅಭಿಮಾನ, ಗೌರವ, ಪ್ರೀತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸುತ್ತಿದ್ದಾರೆ. ತುಸು ಹೆಚ್ಚಿನ ಸಂಖ್ಯೆಯಲ್ಲಿರುವ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಕನ್ನಡಿಗರನಗ್ನೂ ಒಳಗೊಂಡಂತೆ ಕರ್ನಾಟಕದ ವಿವಿಧ ಪ್ರದೇಶಗಳಿಂದ ನೂರಾರು ಹೊಂಗನಸುಗಳನ್ನು ಹೊತ್ತು ಬಂದವರು. ತಮ್ಮ ಅಭಿರುಚಿ, ಆಸಕ್ತಿಗೆ ಅನುಗುಣವಾಗಿ ಈ ಮಹಾನ್‌ ನಗರಿಯ ಅಂಗಣವನ್ನು ಬಳಸಿಕೊಂಡು ಯಾವ ಜಾತಿ, ಮತ ಭೇದವಿಲ್ಲದೇ ತಮ್ಮತನವನ್ನು ಮೆರೆದವರು. ಶೂನ್ಯದಿಂದ ಬಂದು ಅಗಾಧವಾದುದನ್ನು ಸಾಧಿಸಿದವರು.

ಮುಂಬಯಿ ಮಾಯಾನಗರಿ ಇಡೀ ಜಗತ್ತನ್ನು ತನ್ನ ಕಡೆಗೆ ಆರ್ಕಷಿಸಿದರೂ, ಆಧುನಿಕತೆಯ ಗಾಳಿಗೆ ಸಿಲುಕಿ ನಲುಗಲಿಲ್ಲ. ಅಪ್ಪಿ ತಪ್ಪಿಯೂ ನಾವು ನಮ್ಮ ಸಾಂಸ್ಕೃತಿಕ ಧರ್ಮವನ್ನು ಮರೆತಿಲ್ಲ. ಹಾಗಾಗಿ ಅದೊಂದು ಬಹುಶ್ರುತ ತತ್ವವುಳ್ಳ ಬಹುರೂಪಿ ಸಂಸ್ಕೃತಿಯ ನಗರ ಎನ್ನುವುದೇ ಸೂಕ್ತ. ಕರಾವಳಿಯ ಭಾಗದವರು ಇದೇ ನಗರದಲ್ಲಿ ನೆಲೆ ನಿಂತು ತಮ್ಮ ತವರೂರನ್ನು ಮರೆಯದೇ ಅಲ್ಲಿಯ ಅಭಿವೃದ್ಧಿಗಾಗಿ ಕೊಡುಗೆ ನೀಡಿರುವುದು ಉಲ್ಲೇಖನೀಯ. ವಿವಿಧ ಕ್ಷೇತ್ರಗಳಲ್ಲಿನ ಹೊರನಾಡ ಕನ್ನಡಿಗರ ಸಾಧನೆ ಕಂಡು ಕರ್ನಾಟಕದ ಜನತೆ ಬೆರಗು ಪಡುತ್ತಿರುವುದು ಸುಳ್ಳಲ್ಲ. ಮುಂಬಯಿ ಕನ್ನಡಿಗರು ಪ್ರತಿಭಾವಂತರು. ಅವರು ತಮ್ಮ ಕೆಲಸ ಕಾರ್ಯದ ಮಧ್ಯೆಯೂ ವಿವಿಧ ಮನರಂಜನೆ-ಮನೋವಿಕಾಸ ಕ್ಷೇತ್ರಗಳಲ್ಲಿ ಕ್ರಿಯಾಶೀಲರಾದವರು. ಅದರ ಪರಿಣಾಮ ಊರಿನಲ್ಲಿ ನಾಟಕಗಳಲ್ಲಿ ಅಭಿನಯಿಸಿದ ಅನುಭವ, ತಾವು ಕಲಿತ ಸಂಗೀತ, ನೃತ್ಯ, ಯಕ್ಷಗಾನಗಳಲ್ಲಿನ ಆಸಕ್ತಿ ಹೊರನಾಡಿನಲ್ಲೂ ಚಿಗಿತುಕೊಂಡಿತು. ಅದಕ್ಕೆ ಸೂಕ್ತ ಅವಕಾಶಗಳೂ ಸಿಕ್ಕವು. ಸಮುದಾಯ ಸಂಘಗಳು, ಕನ್ನಡಪರ ಸಂಘ ಸಂಸ್ಥೆಗಳೂ ಇದನ್ನು ಬೆಂಬಲಿಸಿ ಪ್ರತಿಭಾ ಅನಾವಾರಣಕ್ಕೆ ವೇದಿಕೆ ಒದಗಿಸಿದವು. ಹಾಗಾಗಿ ರಂಗತಂಡಗಳು ಹುಟ್ಟಿಕೊಂಡವು. ಯಕ್ಷಗಾನ ಮೇಳಗಳು ಹುಟ್ಟಿಕೊಂಡವು. ಅತ್ತ್ಯುತ್ತಮ ರಂಗ ಪ್ರಯೋಗಗಳು ಪ್ರದರ್ಶನಗೊಂಡವು. ರಂಗಭೂಮಿಯಲ್ಲಿ ನಟನೆ, ನಿರ್ದೇಶನದಲ್ಲಿ ಅನೇಕ ನಕ್ಷತ್ರಗಳು ಮಿನುಗಿದವು. ಸಾಹಿತ್ಯ ಕ್ಷೇತ್ರದಲ್ಲಿ ಕೈಗೊಂಡ ಸಾಧನೆ ಸಣ್ಣದಲ್ಲ. ಬಾಲಿವುಡ್‌ನ‌ಲ್ಲೂ ಹಲವು ವಿಭಾಗಗಳಲ್ಲಿ ತುಳು- ಕನ್ನಡಿಗರು ತಮ್ಮ ಪ್ರತಿಭೆ ಪ್ರದರ್ಶಿಸಿದರು. ನಿರ್ದೇಶನ, ನಟನೆ, ತಂತ್ರಜ್ಞಾನ- ಎಲ್ಲ ಕ್ಷೇತ್ರದಲ್ಲೂ ಮುಂಬಯಿ ಕನ್ನಡಿಗರು ಮಿಂಚಿದರು.

ಹಣಕಾಸು ಗಳಿಸಿ ತಮ್ಮ ಜೀವನವನ್ನು ಸುಖಕರ ಮಾಡಿಕೊಳ್ಳುವಷ್ಟಕ್ಕೆ ಮಾತ್ರ ಸೀಮಿತರಾಗದ ಈ ಮುಂಬಯಿ ಕನ್ನಡಿಗರು ತಾವು ನಂಬಿದ ದೈವ ದೇವರುಗಳನ್ನು ಮರೆಯದೇ ಮುಂಬಯಿಯಲ್ಲಿಯೂ ಅಸಂಖ್ಯಾತ ದೇವಸ್ಥಾನಗಳ ನಿರ್ಮಿಸಿದರು. ಭಜನಾ ಮಂಡಳಿಗಳು ಹುಟ್ಟಿಕೊಂಡವು. ಇದು ನಮ್ಮ ಸಂಸ್ಕೃತಿಯನ್ನು ಬೆಳೆಸುವಲ್ಲಿ ಮತ್ತು ಹೊಸ ತಲೆಮಾರಿಗೆ ತಲುಪಿಸುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ.

ಹಲವರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಆಸಕ್ತಿ ತೋರಿದರೂ ಅದಕ್ಕೆ ಸೂಕ್ತ ವಾತಾವರಣ, ವೇದಿಕೆ ಸಿಗಬೇಕು. ಆ ಕೆಲಸವನ್ನು ಸಮರ್ಥವಾಗಿ ನಿರ್ವಹಿಸಿದ್ದು ಇಲ್ಲಿನ ಸಂಘ ಸಂಸ್ಥೆಗಳು. ಕ್ರೀಡಾ ಕ್ಷೇತ್ರದಲ್ಲಿ ಕನ್ನಡದ ಕೀರ್ತಿ ಪತಾಕೆಯನ್ನು ಮುಂಬಯಿ ಮಾತ್ರವಲ್ಲ ದೇಶ ವಿದೇಶಗಳ ಉದ್ದ ಗಲಕ್ಕೂ ಹಾರಿಸಿದರು. ಪತ್ರಿಕೋದ್ಯಮ, ವೈದ್ಯಕೀಯ ಕ್ಷೇತ್ರ, ಶಿಕ್ಷಣ, ಸಾಹಿತ್ಯ, ಚಿತ್ರಕಲೆ, ಪ್ರಕಾಶನ ಸಂಸ್ಥೆ, ರಾಜಕೀಯ, ನ್ಯಾಯಾಂಗ, ಬ್ಯಾಂಕಿಂಗ್‌, ಸಂಘಟನೆ ಇತ್ಯಾದಿ ಕ್ಷೇತ್ರಗಳಲ್ಲೂ ಮುಂಬಯಿ ಕನ್ನಡಿಗರು ಹಿಂದೆ ಉಳಿದಿಲ್ಲ. ಹೀಗೆ ಬಹುಭಾಷಿಕ ನಗರದಲ್ಲಿ ಮುಂಬಯಿ ಕನ್ನಡಿಗರು ತಮ್ಮ ಅಸ್ಮಿತೆಯನ್ನು ಕಾಯ್ದುಕೊಂಡು ಬರುವಲ್ಲಿ ಯಶಸ್ವಿಯಾಗಿದ್ದಾರೆ. ಕನ್ನಡ ಅಸ್ಮಿತೆ ನಮ್ಮ ಹೃನ್ಮನಗಳಲ್ಲಿ ಹರಿಯುತ್ತಲೇ ಇದೆ ; ಅದು ಎಂದಿಗೂ ಬತ್ತದು.

ಸದಾ ಕಿವಿಗೆ ನದಿಯ ಜುಳು ಜುಳು ನಾದ ಕೇಳದೆ ತಂಪಾಗಿ ಹರಿವ ನದಿಯನ್ನು ಕಣ್ಮುಂದೆ ತಂದುಕೊಳ್ಳುವುದಾದರೂ ಹೇಗೆ? ಹಚ್ಚಹಸಿರು ಕಾನನವೆಂದೂ ಪುಟಗಟ್ಟಲೆ ಓದಿದರೂ ಒಮ್ಮೆಯಾದರೂ ಆ ಕಲ್ಪನೆಯ ದಟ್ಟ ಕಾನನ ಕಾಣದೇ ಅರ್ಥವಾಗುವುದಾದರೂ ಹೇಗೆ? ಆದರೂ ಭಾಷೆ ಹಾಗಲ್ಲ; ನಮ್ಮೊಳಗೇ ಹರಿವ ಗುಪ್ತಗಾಮಿನಿ. ಅದಕ್ಕೇ ಕನ್ನಡದ ನಾದ ಸದಾ ಕೇಳದಿದ್ದರೂ ಭಾಷೆ ಬಳಸುತ್ತಾ, ಬೆಳೆಯುತ್ತಾ ಹೆಮ್ಮೆ ಪಡುತ್ತಾ ಬದುಕು ಕಟ್ಟುತ್ತಿದ್ದಾರೆ ಮುಂಬಯಿ ಕನ್ನಡಿಗರು. ಅದನ್ನು ಕನ್ನಡ ಅಸ್ಮಿತೆ ಎನ್ನದೆ ಬೇರೇನು ಹೇಳಬೇಕು?

 

•ಡಾ| ಪೂರ್ಣಿಮಾ ಸುಧಾಕರ ಶೆಟ್ಟಿ

ಟಾಪ್ ನ್ಯೂಸ್

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕರ್ನಾಟಕ ಸಂಘ ಕತಾರ್‌: ಮಹಿಳಾ ಮತ್ತು ಮಕ್ಕಳ ಪ್ರತಿಭಾನ್ವೇಷಣೆ-2025

ಕರ್ನಾಟಕ ಸಂಘ ಕತಾರ್‌: ಮಹಿಳಾ ಮತ್ತು ಮಕ್ಕಳ ಪ್ರತಿಭಾನ್ವೇಷಣೆ-2025

ಮನದ ಮಾತು ಎಂದರೇನು:ಅರಿವಿರುವುದು ಗೋಚರ, ಅರಿವಿಲ್ಲದ್ದು ಅಗೋಚರ!

ಮನದ ಮಾತು ಎಂದರೇನು:ಅರಿವಿರುವುದು ಗೋಚರ, ಅರಿವಿಲ್ಲದ್ದು ಅಗೋಚರ!

ಈ ಬಾರಿ ಫ್ಲೋರಿಡಾದ ಲೇಕ್‌ಲ್ಯಾಂಡ್‌ನ‌ಲ್ಲಿ ನಾವಿಕೋತ್ಸವ

ಈ ಬಾರಿ ಫ್ಲೋರಿಡಾದ ಲೇಕ್‌ಲ್ಯಾಂಡ್‌ನ‌ಲ್ಲಿ ನಾವಿಕೋತ್ಸವ

Desi Swara: ವಿಮಾನ ಪ್ರಯಾಣಗಳಲ್ಲಿ ನವರಸಾನುಭವಗಳು ಮತ್ತು ಫ‌ಜೀತಿಯ ಕ್ಷಣ!!

Desi Swara: ವಿಮಾನ ಪ್ರಯಾಣಗಳಲ್ಲಿ ನವರಸಾನುಭವಗಳು ಮತ್ತು ಫ‌ಜೀತಿಯ ಕ್ಷಣ!!

ಲಂಡನ್‌: ವಿಶ್ವದಲ್ಲೇ ಪ್ರಥಮ ಬಾರಿಗೆ “ಪುರಂದರ ನಮನ’

ಲಂಡನ್‌: ವಿಶ್ವದಲ್ಲೇ ಪ್ರಥಮ ಬಾರಿಗೆ “ಪುರಂದರ ನಮನ’

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.