ಕೆರೆ ಕುಂಟೆ ಸೇರಿದ ಹೊಲದ ರಾಸಾಯನಿಕ
Team Udayavani, Aug 28, 2019, 9:22 AM IST
ಧಾರವಾಡ: ಮಳೆ ನಿಂತರೂ ಅದರ ಹನಿಗಳು ನಿಲ್ಲಲಿಲ್ಲ ಎನ್ನುವ ಗಾದೆ ಮಾತಿನಂತೆ, ನೆರೆ ನಿಂತರು ಅದರಿಂದಾದ ಹಾನಿಯ ದುಷ್ಪರಿಣಾಮಗಳು ಒಂದೊಂದಾಗಿ ಗೋಚರಿಸುತ್ತಲೇ ಇವೆ.
ನೆರೆಹಾವಳಿಯಿಂದ ಹಳ್ಳಗಳು ಎಬ್ಬಿಸಿದ ಹಾವಳಿಗೆ ಜನ, ಜಾನುವಾರು ಕೊಚ್ಚಿ ಹೋಗಿದ್ದವು. ಬೆಳೆಹಾನಿ, ಮನೆಹಾನಿ ಕೂಡ ಆಗಿದೆ. ಕೆಲವು ಕಡೆಗಳಲ್ಲಿ ಹೊಲಕ್ಕೆ ಹೊಲವೇ ಕೊಚ್ಚಿಹೋಗಿದೆ. ಇದರ ಸಾಲಿಗೆ ಇನ್ನೊಂದು ಹೊಸ ಸೇರ್ಪಡೆ ಜೋರಾದ ಮಳೆ ಹೊಡೆತಕ್ಕೆ ಹೊಲದಲ್ಲಿ ಅನೇಕ ವರ್ಷಗಳಿಂದ ಸಿಂಪರಣೆ ಮಾಡಿದ್ದ ರಾಸಾಯನಿಕ ಗೊಬ್ಬರ, ಕ್ರಿಮಿನಾಶಗಳು, ಕಳೆನಾಶಕದ ಅಂಶವೆಲ್ಲ ಕೊಚ್ಚಿಕೊಂಡು ಬಂದು ಕೆರೆ, ಕುಂಟೆ ಮತ್ತು ಹಳ್ಳದ ನೀರನ್ನು ಸೇರುತ್ತಿದೆ.
ಹೊಲಗಳ ಬದುಗಳಲ್ಲಿ ಹರಿಯುತ್ತಿರುವ ನೀರಿನ ತೇಲು (ಹರಿವು)ಗಳಲ್ಲಿ ರಾಸಾಯನಿಕಗಳನ್ನೊಳಗೊಂಡ ಹೊಲಸು ಜಮಾವಣೆಯಾಗಿದೆ. ಅಷ್ಟೇಯಲ್ಲ, ಇದು ಕಿರು ತೊರೆಗಳ ಮೂಲಕ ಕೆರೆ ಅಥವಾ ಹಳ್ಳಗಳನ್ನು ಸೇರಿ ಸಾಗುತ್ತಿದೆ. ಮೇಲ್ನೋಟಕ್ಕೆ ಇದೇನು ಹಾನಿ ಮಾಡುವ ಅಥವಾ ತೊಂದರೆ ಕೊಡುವ ವಿಚಾರವಲ್ಲ ಎನಿಸಿದರೂ, ರಾಸಾಯನಿಕ ಯುಕ್ತ ನೀರು ಮತ್ತೆ ಅಂತರ್ಜಲ ಮೂಲಗಳಲ್ಲಿ ಬೆರೆಯುತ್ತಿದೆ. ಇನ್ನೊಂದೆಡೆ ಹತ್ತಾರು ವರ್ಷಗಳಿಂದ ರೈತರ ಹೊಲದ ಮಣ್ಣು ಸೇರಿದ್ದ ರಾಸಾಯನಿಕಗಳು ಕೊಚ್ಚಿ ಹೋಗಿದ್ದರಿಂದ ಹೊಲ ಹಸನಾಗಿದೆ ಎನ್ನಬಹುದು. ಇನ್ನು ಗ್ರಾಮ ಮತ್ತು ನಗರ ವಾಸಿಗಳು ಎಲ್ಲೆಂದರಲ್ಲಿ ಬಿಸಾಡಿದ್ದ ಟನ್ಗಟ್ಟಲೇ ಮನೆ ಬಳಕೆ ತಾಜ್ಯ, ಪ್ಲಾಸ್ಟಿಕ್ ವಸ್ತುಗಳು, ಖಾಲಿ ಬಾಟಲಿಗಳು, ನಿರುಪಯುಕ್ತ ವಸ್ತುಗಳೆಲ್ಲವೂ ತೇಲಿ ಕೆರೆಕುಂಟೆ ಸೇರಿಕೊಂಡಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad; ಶಾಂತಿ ಕದಡುವವರ ವಿರುದ್ಧ ಕ್ರಮಕ್ಕೆ ಸಿಎಂಗೆ ಪತ್ರ: ಹೊರಟ್ಟಿ
Hubli: ಪಂಚಮಸಾಲಿ ವಕೀಲರ ಪರಿಷತ್ತಿನಿಂದ ಸೆ.22ರಿಂದ ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ
B.C.Road ಏನು ಅಫ್ಘಾನಿಸ್ಥಾನ,ಪಾಕಿಸ್ಥಾನದಲ್ಲಿ ಇದೆಯಾ?: ಮುತಾಲಿಕ್ ಕಿಡಿ
Hubli: ರಾಡ್ ಬಿದ್ದು ಎಎಸ್ಐ ಸಾವು ಪ್ರಕರಣದಲ್ಲಿ ಕಾಮಗಾರಿ ಕಂಪನಿಯ 11 ಜನರ ಬಂಧನ
Meet Friends: ಧಾರವಾಡದ ಹಳೆಯ ಗೆಳೆಯರ ಭೇಟಿಯಾದ ತೆಲುಗು ನಟ ಶ್ರೀಕಾಂತ್
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Test Cricket : ಮೆಂಡಿಸ್ದ್ವಯರಿಂದ ಚೇತರಿಸಿಕೊಂಡ ಶ್ರೀಲಂಕಾ
Udupi: ಭಿಕ್ಷುಕರ ಪರಿಹಾರ ಕೇಂದ್ರಕ್ಕೆ ಜಿಲ್ಲಾಡಳಿತದಲ್ಲಿ ಭಿಕ್ಷೆ ಬೇಡಬೇಕಾದ ಸ್ಥಿತಿ
Daily Horoscope: ಮನೋಬಲವನ್ನು ಹೆಚ್ಚಿಸಿ ಕೊಂಡಷ್ಟೂ ಹೆಚ್ಚು ಅನುಕೂಲ
Health Department: ಮಂಗನ ಕಾಯಿಲೆ ಆತಂಕ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷ ನಿಗಾ
Karnataka; ರಾಜ್ಯಪಾಲರ ಅಧಿಕಾರಕ್ಕೆ ರಾಜ್ಯ ಸರಕಾರ ಅಂಕುಶ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.