ಪ್ರಧಾನಿ ಮೋದಿಯ ವಾರಣಾಸಿ ಇನ್ಮುಂದೆ ಹಣ್ಣು, ತರಕಾರಿ ರಫ್ತು ಕೇಂದ್ರ; ಏನಿದು ಬ್ರ್ಯಾಂಡ್ ಕಾಶಿ
Team Udayavani, Aug 28, 2019, 5:40 PM IST

ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿನಿಧಿಸುತ್ತಿರುವ ವಾರಣಾಸಿ ಲೋಕಸಭಾ ಕ್ಷೇತ್ರ ಶೀಘ್ರದಲ್ಲಿಯೇ ಹಣ್ಣು-ಹಂಪಲು ಮತ್ತು ತರಕಾರಿ ರಫ್ತು ಮಾಡುವ ಪ್ರಮುಖ ಕೇಂದ್ರವಾಗಿ ಗುರುತಿಸಿಕೊಳ್ಳಲಿದೆ.
ಈ ನಿಟ್ಟಿನಲ್ಲಿ ವಾರಣಾಸಿಯ ರೈತರಿಗೆ ಯುರೋಪ್, ಗಲ್ಫ್, ಸಿಂಗಾಪೂರ್ ದೇಶಗಳಿಗೆ ರಫ್ತು ಮಾಡುವ ಹಣ್ಣು ಹಂಪಲು, ತರಕಾರಿ ಗುಣಮಟ್ಟ ಹೇಗಿರಬೇಕು, ಯಾವ ಶ್ರೇಣಿಯಲ್ಲಿ ಬೆಳೆಯಬೇಕು ಎಂಬ ಬಗ್ಗೆ ತರಬೇತಿ ನೀಡುವುದಾಗಿ ವಾಣಿಜ್ಯ ಇಲಾಖೆ ಘೋಷಿಸಿದೆ.
ವಾರಣಾಸಿಯಲ್ಲಿ ಬೆಳೆಯುವ ಹಣ್ಣು ಹಂಪಲು, ತರಕಾರಿ ಇನ್ಮುಂದೆ ಬನಾರಸ್ ಬ್ರ್ಯಾಂಡ್ ಕಾಶಿ ಅಥವಾ ಬ್ರ್ಯಾಂಡ್ ಕಾಶಿ ಎಂದೇ ಪ್ರಸಿದ್ಧಿಯಾಗುವಂತೆ ಎಲ್ಲಾ ಸಿದ್ಧತೆ ನಡೆಸಲಾಗಿದೆ ಎಂದು ವರದಿ ತಿಳಿಸಿದೆ. ಹಣ್ಣು, ತರಕಾರಿ ರಫ್ತು ಕಾರ್ಯಕ್ರಮ ಕೃಷಿ ರಫ್ತು ನಿಯಮದ ಅನುಸಾರವೇ ನಡೆಯಲಿದೆ. ಇದರಿಂದ ವಿದೇಶದ ಮಾರುಕಟ್ಟೆಗೆ ರಫ್ತು ಮಾಡುವ ರೈತರಿಗೆ ಲಾಭ ಪಡೆಯಲು ಸಹಕಾರಿಯಾಗುತ್ತದೆ ಎಂದು ವರದಿ ವಿವರಿಸಿದೆ.
ರಫ್ತು ನೀತಿಯ ಮುಖ್ಯ ಉದ್ದೇಶವೇನೆಂದರೆ ಭಾರತದ ರಫ್ತು ಮಾರುಕಟ್ಟೆಯನ್ನು ವಿಶ್ವದಲ್ಲಿಯೇ ದ್ವಿಗುಣಗೊಳಿಸುವುದು ಈ ಮೂಲಕ ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ರಫ್ತು ಪ್ರಮಾಣವನ್ನು ಆದಷ್ಟು ಶೀಘ್ರವಾಗಿ ಹೆಚ್ಚಿಸುವುದಾಗಿದೆ ಎಂದು ಹೇಳಿದೆ.
ಭಾರತದಲ್ಲಿ ಬೆಳೆದ ಹಣ್ಣುಗಳನ್ನು ಹೆಚ್ಚಾಗಿ ರಫ್ತು ಮಾಡುವ ದೇಶಗಳಲ್ಲಿ ನೆದರ್ಲ್ಯಾಂಡ್, ಅಮೆರಿಕ, ಜಪಾನ್ ಮತ್ತು ಯುಎಇ ಸೇರಿದೆ. 2018-19ರಲ್ಲಿ ಭಾರತದಿಂದ ರಫ್ತಾಗುವ ಪ್ರಮಾಣ ಶೇ.8ರಷ್ಟಿದೆ. ಹಣ್ಣುಗಳ ರಫ್ತು ಪ್ರಮಾಣ ಶೇ.12ರಷ್ಟಿದೆ ಎಂಬುದು ವಾಣಿಜ್ಯ ಸಚಿವಾಲಯದ ಅಂಕಿ-ಅಂಶವಾಗಿದೆ. ಅದೇ ರೀತಿ ಈ ಹಿಂದಿನ ವರ್ಷದಲ್ಲಿ ಭಾರತದಿಂದ ರಫ್ತಾಗುವ ತರಕಾರಿ ಶೇ.0.3ರಷ್ಟು ಎಂದು ತಿಳಿಸಿದೆ.
ಹಣ್ಣು ಹಂಪಲು, ತರಕಾರಿ ರಫ್ತು ಮಾಡುವ ಮೂಲಕ ದೇಶದ ತರಕಾರಿ, ಹಣ್ಣು ಹಂಪಲು ಉತ್ಪಾದನೆಯ ಪ್ರಮಾಣವನ್ನೂ ಹೆಚ್ಚಿಸಬಹುದಾಗಿದೆ. ಆ ನಿಟ್ಟಿನಲ್ಲಿ ರೈತರು ತಮ್ಮ ಬೆಳೆಯನ್ನು ಲಾಭದಾಯಕವಾಗುವ ನಿಟ್ಟಿನಲ್ಲಿ ಬೆಳೆಸಬೇಕೇ ವಿನಃ, ಸಬ್ಸಿಡಿಗಳ ಮೇಲೆ ಅವಲಂಬಿತರಾಗಬಾರದು ಎಂದು ಕೃಷಿ ಸಚಿವರು ಈ ಸಂದರ್ಭದಲ್ಲಿ ಮನವಿ ಮಾಡಿಕೊಂಡಿದ್ದಾರೆ.
ವಾರಣಾಸಿ ತರಕಾರಿ ರಫ್ತು; 2 ಹಂತದಲ್ಲಿ ಯೋಜನೆ ಜಾರಿ
ವಾರಣಾಸಿಯನ್ನು ತರಕಾರಿ ಮತ್ತು ಹಣ್ಣುಹಂಪಲು ರಫ್ತು ಕೇಂದ್ರವನ್ನಾಗಿ ಮಾಡಲು ಸರಕಾರ ಎರಡು ಹಂತಗಳಲ್ಲಿ ಯೋಜನೆ ಜಾರಿ ಮಾಡಲಿದೆ ಎಂದು ಹೇಳಿದೆ. ಮೊದಲ ಹಂತದಲ್ಲಿ ರೈತರಿಗೆ ರಫ್ತು ಮಾಡುವ ಹಣ್ಣು, ತರಕಾರಿ ಪ್ಯಾಕೇಜ್ ಮಾಡುವ ಪ್ರಾಥಮಿಕ ತರಬೇತಿ ಹಾಗೂ ಜಿಲ್ಲೆಗಳಲ್ಲಿರುವ ರೈತರು ಗುಣಮಟ್ಟದ ರಫ್ತು ತರಕಾರಿ, ಹಣ್ಣು ಹೇಗೆ ಬೆಳೆಸಬೇಕೆಂಬ ಬಗ್ಗೆ ಅರಿವು ಮೂಡಿಸಲಾಗುತ್ತದೆ.
ಎರಡನೇ ಹಂತದಲ್ಲಿ ರಫ್ತು ಮಾಡುವ ತರಕಾರಿ, ಹಣ್ಣುಗಳ ಕುರಿತು ಪ್ರಚಾರ ಮಾಡುವ ಬಗ್ಗೆ ತಿಳಿಸಲಾಗುವುದು. ಅಲ್ಲದೇ ವಿಮಾನ ನಿಲ್ದಾಣದ ಸಮೀಪ ಆ್ಯಗ್ರೋ ಪ್ರೋಸೆಸಿಂಗ್ ಪಾರ್ಕ್ ಸ್ಥಾಪಿಸಲಾಗುವುದು ಎಂದು ವರದಿ ತಿಳಿಸಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nita Ambani: ಬೆಂಗಳೂರಿನ ಪ್ರತಿಷ್ಠಿತ ಕೈಮಗ್ಗ ಮಳಿಗೆಗೆ ಭೇಟಿ ನೀಡಿದ ನೀತಾ ಅಂಬಾನಿ

ರಾಷ್ಟ್ರಾದ್ಯಂತ ಶೈಕ್ಷಣಿಕ ಪಠ್ಯಗಳ ಪೂರೈಕೆಗೆ ಫ್ಲಿಪ್ ಕಾರ್ಟ್ ಮತ್ತು NCERT ಒಪ್ಪಂದ

Stock Market: ಷೇರುಪೇಟೆ ಸೂಚ್ಯಂಕ 400ಕ್ಕೂ ಅಧಿಕ ಅಂಕ ಕುಸಿತ, ನಿಫ್ಟಿಯೂ ಇಳಿಕೆ

Nestle: ಹೊಸ ವರ್ಷಕ್ಕೆ ಮ್ಯಾಗಿ ನೂಡಲ್ಸ್, ಕಿಟ್ಕ್ಯಾಟ್ ಚಾಕ್ಲೆಟ್ ಬೆಲೆ ಏರಿಕೆ?

‘DigiLocker’; ಕ್ಲೇಮ್ ಮಾಡದ ಹೂಡಿಕೆಗೆ ಪರಿಹಾರ?
MUST WATCH
ಹೊಸ ಸೇರ್ಪಡೆ
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್

ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ, ಏನು ಮಾರ್ಗಸೂಚಿ ಇಳಿದೆ ಮಾಹಿತಿ

Lok Adalat: ಲೋಕ್ ಅದಾಲತ್ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ

Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ

Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.