ಫಿಟ್‌ ಇಂಡಿಯಾ ಆಂದೋಲನ ಮಹೋನ್ನತ ಆಶಯ


Team Udayavani, Aug 30, 2019, 5:36 AM IST

f-41

ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಘೋಷಿಸಿದ ಫಿಟ್‌ ಇಂಡಿಯಾ ಆಂದೋಲನಕ್ಕೆ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರೀಯ ಕ್ರೀಡಾ ದಿನವಾಗಿರುವ ಗುರುವಾರ ಚಾಲನೆ ನೀಡಿದ್ದಾರೆ. ದೇಶದ ಭವಿಷ್ಯ ಆರೋಗ್ಯಕರವಾಗಿರಲು ಜನರು ದೈಹಿಕ ಕ್ಷಮತೆ ಹೊಂದಿರುವುದು ಅಗತ್ಯ. ಹೀಗಾಗಿ ಫಿಟ್‌ ಇಂಡಿಯಾ ಆಂದೋಲನ ಈ ಹೊತ್ತಿನ ಅಗತ್ಯ ಎಂದಿದ್ದಾರೆ ಮೋದಿ. ದೈಹಿಕ ಕ್ಷಮತೆ ಎನ್ನುವುದು ನಮ್ಮ ಸಂಸ್ಕೃತಿಯಲ್ಲೇ ಹಾಸು ಹೊಕ್ಕಾಗಿತ್ತು. ಆದರೆ ಮನುಷ್ಯ ಆಧುನಿಕನಾಗುತ್ತಾ ಹೋದಂತೆ ಈ ಸಂಸ್ಕೃತಿ ನಮ್ಮ ಬದುಕಿನಿಂದ ದೂರವಾದದ್ದು ದುರದೃಷ್ಟಕರ.

ಬಹುತೇಕ ಭಾರತೀಯರು ಫಿಟ್‌ನೆಸ್‌ ಬಗ್ಗೆ ಬಹಳ ಕಾಳಜಿ ಹೊಂದಿದ್ದಾರೆ, ಆದರೆ ಫಿಟ್‌ ಆಗಿರಲು ಮಾಡುವ ಪ್ರಯತ್ನ ಶೂನ್ಯ ಎನ್ನುವುದು ತಮಾಷೆಯ ಹೇಳಿಕೆಯಾಗಿದ್ದರೂ ಇದರಲ್ಲಿ ವಾಸ್ತವವೂ ಇದೆ. ಶೇ. 64 ಭಾರತೀಯರು ವ್ಯಾಯಾಮ ಮಾಡುವುದೇ ಇಲ್ಲ ಎಂಬುದಾಗಿ ಇತ್ತೀಚೆಗೆ ನಡೆಸಿದ ಸಮೀಕ್ಷೆಯೊಂದರಲ್ಲಿ ವ್ಯಕ್ತವಾಗಿರುವ ಅಂಶ ಈ ಮಾತನ್ನು ಪುಷ್ಟೀಕರಿಸುತ್ತದೆ.

ಬದಲಾದ ಜೀವನಶೈಲಿಯೇ ನಮ್ಮ ದೈಹಿಕ ಕ್ಷಮತೆ ಕುಸಿಯಲು ಕಾರಣ. ಅಡುಗೆ ಮಾಡುವುದು, ಬಟ್ಟೆ ಒಗೆಯುವುದು, ಕೊನೆಗೆ ಪಾತ್ರೆಗಳನ್ನು ತೊಳೆಯುವಂಥ ಮಾಮೂಲು ಗೃಹಕೃತ್ಯಗಳನ್ನು ಮಾಡಲೂ ಈಗ ಯಂತ್ರಗಳು ಬಂದಿವೆ. ಹೀಗಾಗಿ ಮನುಷ್ಯನ ದೈಹಿಕ ಚಟುವಟಿಕೆ ಕಡಿಮೆಯಾಗುತ್ತಿದೆ. ಇದರ ಪರಿಣಾಮವೇ ಬೊಜ್ಜು, ಮಧುಮೇಹದಂಥ ಜೀವನಶೈಲಿಗೆ ಸಂಬಂಧಿಸಿದ ಕಾಯಿಲೆಗಳ ಕಾಟ. ಮಧುಮೇಹದಲ್ಲಿ ಭಾರತಕ್ಕೆ ಜಗತ್ತಿನಲ್ಲೇ ಪ್ರಥಮ ಸ್ಥಾನ ಇದೆ ಎನ್ನುವುದು ಫಿಟ್‌ನೆಸ್‌ನ್ನು ನಾವು ಎಷ್ಟು ಹಗುರವಾಗಿ ಪರಿಗಣಿಸಿದ್ದೇವೆ ಎನ್ನುವುದನ್ನು ತಿಳಿಸುತ್ತದೆ. 14 ಕೋಟಿಗೂ ಹೆಚ್ಚು ಮಂದಿ ಬೊಜ್ಜು ಮತ್ತು ಅದಕ್ಕೆ ಸಂಬಂಧಪಟ್ಟ ಕಾಯಿಲೆಯಿಂದ ನರಳುತ್ತಿದ್ದಾರೆೆ.ಮಾನಸಿಕ ಒತ್ತಡ, ಥೈರಾಯ್ಡ ಸಮಸ್ಯೆ, ಸಂಧಿವಾತ ಇತ್ಯಾದಿ ಕಾಯಿಲೆಗಳಿಗೂ ದೈಹಿಕ ಚಟುವಟಿಕೆಗಳಿಗೂ ನೇರ ಸಂಬಂಧವಿದೆ. ದೇಶದ ಪ್ರಧಾನಿಯೇ ಈ ಅಗತ್ಯ ಮನಗಂಡು ದೇಶವಾಸಿಗಳಿಗೆ ಸ್ಫೂರ್ತಿಯಾಗಿರುವುದು ಉತ್ತಮ ನಡೆ.

ಫಿಟ್‌ನೆಸ್‌ ಕುರಿತಾಗಿ ಭಾರತೀಯರು ಹೊಂದಿರುವ ಮನೋಧರ್ಮದಲ್ಲೇ ಲೋಪವಿದೆ. ಈಗಲೂ ನಮ್ಮ ಶಾಲೆಗಳಲ್ಲಿ ಆಟೋಟವನ್ನು ಪಠ್ಯೇತರ ಚಟುವಟಿಕೆ ಎಂದೇ ಪರಿಗಣಿಸಲಾಗುತ್ತಿದೆ. ಇನ್ನೂ ಅದು ಶಿಕ್ಷಣದ ಮುಖ್ಯ ವಾಹಿನಿಗೆ ಸೇರ್ಪಡೆಯಾಗಿಲ್ಲ. ಪಠ್ಯಗಳು ಬಾಕಿ ಉಳಿದಿದ್ದರೆ ದೈಹಿಕ ಶಿಕ್ಷಣದ ಅವಧಿಯನ್ನು ಕಡಿತ ಮಾಡಿ ತರಗತಿಗಳನ್ನು ನಡೆಸುವುದು ನಮ್ಮ ಶಾಲೆಗಳಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪದ್ಧತಿ. ಈಗಿನ ಅಂಕಗಳಿಸುವ ಸ್ಪರ್ಧೆಯಲ್ಲಿ ಮಕ್ಕಳಿಗೆ ಆಟೋಟಗಳು ದುರ್ಲಭವಾಗಿ ಪರಿಣಮಿಸಿವೆ. ಜತೆಗೆ ಟಿವಿ, ಮೊಬೈಲ್‌ನಂಥ “ಟೈಮ್‌ಪಾಸ್‌’ ಮಾಧ್ಯಮಗಳು ಮಕ್ಕಳ ಸಮಯವನ್ನು ಕಬಳಿಸುತ್ತಿದ್ದು, ಇದರ ಪರಿಣಾಮವಾಗಿ ಬಾಲ್ಯದಲ್ಲೇ ಬೊಜ್ಜಿನಂಥ ಕಾಯಿಲೆಗಳು ಬರುತ್ತಿವೆ. ಜನರಲ್ಲೂ ಫಿಟ್‌ನೆಸ್‌ ಬಗ್ಗೆ ಒಂದು ನಕಾರಾತ್ಮಕವಾದ ಭಾವನೆಯಿದೆ.

ದೈಹಿಕ ಕಸರತ್ತುಗಳೆಲ್ಲ ಸೈನ್ಯದಲ್ಲಿದ್ದವರಿಗೆ, ಪೊಲೀಸರಿಗೆ ಮಾತ್ರ ಅಗತ್ಯ ನಾವೇಕೆ ಮಾಡಬೇಕು ಎನ್ನುವುದು ಜನರ ಮನೋಧರ್ಮ. ಕಾರ್ಪೋರೇಟ್‌ ಸಂಸ್ಕೃತಿಯೂ ಜನರಿಗೆ ಸಾಕಷ್ಟು ದೈಹಿಕ ವ್ಯಾಯಾಮಗಳನ್ನು ಪಡೆದುಕೊಳ್ಳಲು ಅವಕಾಶ ಕೊಡುತ್ತಿಲ್ಲ. ಏಕೆ ವ್ಯಾಯಾಮ ಮಾಡುತ್ತಿಲ್ಲ ಎಂಬ ಪ್ರಶ್ನೆಗೆ ಶೇ. 90 ಮಂದಿಯ ಉತ್ತರ ಸಮಯದ ಕೊರತೆ ಎಂಬುದು. ನಿಜವಾಗಿ ನೋಡಿದರೆ ಇದು ಸಮಯದ ಕೊರತೆಯಲ್ಲ ಸಮಯವನ್ನು ಸಮರ್ಪಕವಾಗಿ ಬಳಸುವ ಜಾಣ್ಮೆಯ ಕೊರತೆಯಷ್ಟೆ. ಅದಾಗ್ಯೂ ಈಗೀಗ ಜನರಲ್ಲಿ ಫಿಟ್‌ನೆಸ್‌ ಬಗ್ಗೆ ಅರಿವು ಮೂಡುತ್ತಿರುವುದು ಸಕಾರಾತ್ಮಕ ಬೆಳವಣಿಗೆ. ನಗರಗಳಲ್ಲಿ ಬೆಳಗ್ಗೆ ಮತ್ತು ಸಂಜೆ ಪಾರ್ಕ್‌ಗಳು, ವಾಕಿಂಗ್‌ ಟ್ರ್ಯಾಕ್‌ಗಳು, ವಾಕಿಂಗ್‌ ಮತ್ತು ಜಾಗಿಂಗ್‌ ಮಾಡುವವರಿಂದ ತುಂಬಿರುವುದು ನಗರವಾಸಿಗಳಲ್ಲಿ ಫಿಟ್‌ನೆಸ್‌ ಬಗ್ಗೆ ಸಾಕಷ್ಟು ಅರಿವು ಮೂಡಿರುವುದರ ದ್ಯೋತಕ. ಫಿಟ್‌ ಇಂಡಿಯಾ ಆಂದೋಲನಕ್ಕೆ ದೇಶದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ಮಾಡುವ ಸಾಮರ್ಥ್ಯವಿದೆ. ನಿರ್ದಿಷ್ಟವಾಗಿ ಯುವ ಜನತೆಯನ್ನು ದೈಹಿಕವಾಗಿ ಸದೃಢ ರಾಗಿಸುವ ಮೂಲಕ ಭವಿಷ್ಯದ ಭಾರತವನ್ನು ಆರೋಗ್ಯಕರವಾಗಿ ಕಟ್ಟಬಹುದು. ಇದು ಬರೀ ವ್ಯಕ್ತಿಗತ ದೈಹಿಕ ಆರೋಗ್ಯಕ್ಕೆ ಸಂಬಂಧಿಸಿದ ವಿಚಾರವಲ್ಲ ಬದಲಾಗಿ ಆರೋಗ್ಯ, ಉತ್ಪಾದಕತೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಕಾರಾತ್ಮಕ ಪರಿಣಾಮಗಳನ್ನು ಬೀರುವ ಆಯಾಮಗಳನ್ನೂ ಒಳಗೊಂಡಿದೆ. ಫಿಟ್‌ನೆಸ್‌ ಅನ್ನು ದೈನಂದಿನ ಬದುಕಿನ ಅವಿಭಾಜ್ಯ ಅಂಗವನ್ನಾಗಿಸುವ ಮೂಲಕ ಶಿಕ್ಷಣ ಸಂಸ್ಥೆಗಳು, ಉದ್ಯೋಗದಾತರು ಮತ್ತು ನಿರ್ದಿಷ್ಟವಾಗಿ ಜನರು ಪ್ರಧಾನಿಯ ಮಹೋನ್ನತ ಆಶಯಕ್ಕೆ ದೊಡ್ಡ ಮಟ್ಟದ ಯೋಗದಾನ ನೀಡಬಹುದು.

ಟಾಪ್ ನ್ಯೂಸ್

1-horoscope

Daily Horoscope: ಮನೋಬಲವನ್ನು ಹೆಚ್ಚಿಸಿ ಕೊಂಡಷ್ಟೂ ಹೆಚ್ಚು ಅನುಕೂಲ

Monkey-Pox

Health Department: ಮಂಗನ ಕಾಯಿಲೆ ಆತಂಕ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷ ನಿಗಾ

Karnataka; ರಾಜ್ಯಪಾಲರ ಅಧಿಕಾರಕ್ಕೆ ರಾಜ್ಯ ಸರಕಾರ ಅಂಕುಶ?

Karnataka; ರಾಜ್ಯಪಾಲರ ಅಧಿಕಾರಕ್ಕೆ ರಾಜ್ಯ ಸರಕಾರ ಅಂಕುಶ?

BJP MLA ಮುನಿರತ್ನ ಜಾಮೀನು ಭವಿಷ್ಯ ಇಂದು ನಿರ್ಧಾರ

BJP MLA ಮುನಿರತ್ನ ಜಾಮೀನು ಭವಿಷ್ಯ ಇಂದು ನಿರ್ಧಾರ

Chandrayaan-4ಕ್ಕೆ 2100 ಕೋಟಿ ರೂ.; ಕೇಂದ್ರದಿಂದ ಅನುದಾನ

Chandrayaan-4ಕ್ಕೆ 2100 ಕೋಟಿ ರೂ.; ಕೇಂದ್ರದಿಂದ ಅನುದಾನ

Drug ಪೆಡ್ಲರ್‌ಗಳಿಗೆ ಇನ್ನು ಆಜೀವ ಜೈಲು; ಬೆಂಗಳೂರು,ಮಂಗಳೂರಲ್ಲಿ ಡ್ರಗ್ಸ್‌ ಹಾವಳಿ ಹೆಚ್ಚಳ

Karnataka Govt.,; ಡ್ರಗ್‌ ಪೆಡ್ಲರ್‌ಗಳಿಗೆ ಇನ್ನು ಆಜೀವ ಜೈಲು

Central Govt; ಏಕ ಚುನಾವಣೆಗೆ ನಾನಾ ಪ್ರಶ್ನೆ: ಹಲವು ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ

Central Govt; ಏಕ ಚುನಾವಣೆಗೆ ನಾನಾ ಪ್ರಶ್ನೆ: ಹಲವು ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

ಮಾದಕ ದ್ರವ್ಯ ಹಾವಳಿ ತಡೆಗೆ ಕಾರ್ಯಪಡೆ ರಚನೆ ಸ್ವಾಗತಾರ್ಹ

Assembly Election: ಜಮ್ಮು-ಕಾಶ್ಮೀರದಲ್ಲಿ ಪ್ರಜಾಪ್ರಭುತ್ವದ ಹಬ್ಬ

Assembly Election: ಜಮ್ಮು-ಕಾಶ್ಮೀರದಲ್ಲಿ ಪ್ರಜಾಪ್ರಭುತ್ವದ ಹಬ್ಬ

Namma-clinic

Karnataka; ಬಸ್‌ ನಿಲ್ದಾಣಗಳಲ್ಲಿ ನಮ್ಮ ಕ್ಲಿನಿಕ್‌ ಸಮುಚಿತ ನಿರ್ಧಾರ

ರೈತರ ಹಿತರಕ್ಷಣೆ ನೆಪದಲ್ಲಿ ಗ್ರಾಹಕರಿಗೆ ಬರೆ ಸಲ್ಲದು

ರೈತರ ಹಿತರಕ್ಷಣೆ ನೆಪದಲ್ಲಿ ಗ್ರಾಹಕರಿಗೆ ಬರೆ ಸಲ್ಲದು

ಪರೀಕ್ಷಾ ಅಕ್ರಮಗಳ ತಡೆಗೆ ಎಸ್‌ಎಸ್‌ಸಿ ಕಠಿನ ನಿಲುವುಪರೀಕ್ಷಾ ಅಕ್ರಮಗಳ ತಡೆಗೆ ಎಸ್‌ಎಸ್‌ಸಿ ಕಠಿನ ನಿಲುವು

ಪರೀಕ್ಷಾ ಅಕ್ರಮಗಳ ತಡೆಗೆ ಎಸ್‌ಎಸ್‌ಸಿ ಕಠಿನ ನಿಲುವು

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

1-horoscope

Daily Horoscope: ಮನೋಬಲವನ್ನು ಹೆಚ್ಚಿಸಿ ಕೊಂಡಷ್ಟೂ ಹೆಚ್ಚು ಅನುಕೂಲ

Monkey-Pox

Health Department: ಮಂಗನ ಕಾಯಿಲೆ ಆತಂಕ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷ ನಿಗಾ

Karnataka; ರಾಜ್ಯಪಾಲರ ಅಧಿಕಾರಕ್ಕೆ ರಾಜ್ಯ ಸರಕಾರ ಅಂಕುಶ?

Karnataka; ರಾಜ್ಯಪಾಲರ ಅಧಿಕಾರಕ್ಕೆ ರಾಜ್ಯ ಸರಕಾರ ಅಂಕುಶ?

BJP MLA ಮುನಿರತ್ನ ಜಾಮೀನು ಭವಿಷ್ಯ ಇಂದು ನಿರ್ಧಾರ

BJP MLA ಮುನಿರತ್ನ ಜಾಮೀನು ಭವಿಷ್ಯ ಇಂದು ನಿರ್ಧಾರ

Chandrayaan-4ಕ್ಕೆ 2100 ಕೋಟಿ ರೂ.; ಕೇಂದ್ರದಿಂದ ಅನುದಾನ

Chandrayaan-4ಕ್ಕೆ 2100 ಕೋಟಿ ರೂ.; ಕೇಂದ್ರದಿಂದ ಅನುದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.