978 ಸರ್ಕಾರಿ ಕಟ್ಟಡಗಳಿಗೆ ಧಕ್ಕೆ 32.21 ಕೋಟಿ ರೂ.ನಷ್ಟ


Team Udayavani, Aug 30, 2019, 11:37 AM IST

hv-tdy-1

ಹಾವೇರಿ: ನೆರೆ ಹಾಗೂ ಅತಿವೃಷ್ಟಿಯಿಂದ ಜಿಲ್ಲೆಯಲ್ಲಿ ಶಾಲೆ, ಅಂಗನವಾಡಿ, ಆರೋಗ್ಯ ಕೇಂದ್ರ, ಸಮುದಾಯ ಭವನ ಸೇರಿದಂತೆ ಒಟ್ಟು 978 ಸರ್ಕಾರಿ ಕಟ್ಟಡಗಳಿಗೆ ಧಕ್ಕೆಯಾಗಿದ್ದು, 32.21 ಕೋಟಿ ರೂ.ಗಳಷ್ಟು ನಷ್ಟ ಸಂಭವಿಸಿದೆ.

ಜಿಪಂ ಅಧೀನದಲ್ಲಿರುವ 952 ಸರ್ಕಾರಿ ಕಟ್ಟಡಗಳಿಗೆ ಧಕ್ಕೆಯಾಗಿದ್ದು, 29.55 ಕೋಟಿ ರೂ.ಗಳಷ್ಟು ನಷ್ಟ ಸಂಭವಿಸಿದರೆ, ಲೋಕೋಪಯೋಗಿ ಇಲಾಖೆ ಅಧೀನದಲ್ಲಿ ಬರುವ 26 ಕಟ್ಟಡಗಳು ಕುಸಿದು 2.66 ಕೋಟಿ ರೂ.ಗಳಷ್ಟು ಹಾನಿ ಸಂಭವಿಸಿದೆ.

ಜಿಲ್ಲೆಯ ಒಟ್ಟು 653 ಪ್ರಾಥಮಿಕ ಶಾಲೆಗಳ 1444 ಕೊಠಡಿಗಳು ನೆರೆ ಮತ್ತು ಮಳೆಯಿಂದ ಕುಸಿದಿದ್ದು, 26.64 ಕೋಟಿ ರೂ.ಗಳಷ್ಟು ನಷ್ಟ ಸಂಭವಿಸಿದೆ. ಒಟ್ಟು 275 ಅಂಗನವಾಡಿ ಕಟ್ಟಡಗಳು ಕುಸಿದಿದ್ದು, 2.75ಕೋಟಿ ರೂ.ಗಳಷ್ಟು ಹಾನಿಯಾಗಿದೆ. 24 ವಿವಿಧ ಭವನಗಳಿಗೆ ಧಕ್ಕೆಯಾಗಿದ್ದು, 14ಲಕ್ಷ ರೂ.ಗಳಷ್ಟು ಹಾನಿಯಾಗಿದೆ.

ಸರ್ಕಾರಿ ಕಟ್ಟಡಗಳಿಗೆ ಉಂಟಾದ ಹಾನಿಗೆ ಸಂಬಂಧಿಸಿ ಹಾವೇರಿ ತಾಲೂಕಿನಲ್ಲಿ 594ಲಕ್ಷ ರೂ., ರಾಣಿಬೆನ್ನೂರು ತಾಲೂಕಿನಲ್ಲಿ 201ಲಕ್ಷ ರೂ., ಬ್ಯಾಡಗಿ ತಾಲೂಕಿನಲ್ಲಿ 198ಲಕ್ಷ ರೂ., ಹಿರೇಕೆರೂರು ತಾಲೂಕಿನಲ್ಲಿ 505ಲಕ್ಷ ರೂ., ಸವಣೂರು ತಾಲೂಕಿನಲ್ಲಿ 532ಲಕ್ಷ ರೂ., ಶಿಗ್ಗಾವಿ ತಾಲೂಕಿನಲ್ಲಿ 581ಲಕ್ಷ ರೂ., ಹಾನಗಲ್ಲ ತಾಲೂಕಿನಲ್ಲಿ 382ಲಕ್ಷ ರೂ.ಗಳಷ್ಟು ನಷ್ಟ ಸಂಭವಿಸಿದ್ದು, ಒಟ್ಟು 29.55ಕೋಟಿ ರೂ.ಗಳಷ್ಟು ನಷ್ಟವಾಗಿದ್ದು 15.42ಕೋಟಿ ರೂ.ಗಳ ಪರಿಹಾರ ನಿರೀಕ್ಷಿಸಲಾಗಿದೆ.

ಶಾಲಾ ಕೊಠಡಿ ಹಾನಿ: ಹಾವೇರಿ ತಾಲೂಕಿನ 97 ಪ್ರಾಥಮಿಕ ಶಾಲೆಗಳಿಗೆ ಸಂಬಂಧಪಟ್ಟ 265 ಕೊಠಡಿಗಳು, ರಾಣಿಬೆನ್ನೂರು ತಾಲೂಕಿನ 42 ಪ್ರಾಥಮಿಕ ಶಾಲೆಗಳಿಗೆ ಸಂಬಂಧಿಸಿ 91, ಬ್ಯಾಡಗಿ ತಾಲೂಕಿನ 47 ಪ್ರಾಥಮಿಕ ಶಾಲೆಗಳಿಗೆ ಸಂಬಂಧಪಟ್ಟ 87, ಹಿರೇಕೆರೂರು ತಾಲೂಕಿನ 113 ಪ್ರಾಥಮಿಕ ಶಾಲೆಗಳಿಗೆ ಸಂಬಂಧಿಸಿ 226, ಸವಣೂರು ತಾಲೂಕಿನ 80 ಪ್ರಾಥಮಿಕ ಶಾಲೆಗಳಿಗೆ ಸಂಬಂಧಿಸಿ 251, ಶಿಗ್ಗಾವಿ ತಾಲೂಕಿನ 132 ಪ್ರಾಥಮಿಕ ಶಾಲೆಗಳಿಗೆ ಸಂಬಂಧಿಸಿ 272, ಹಾನಗಲ್ಲ ತಾಲೂಕಿನ 140 ಪ್ರಾಥಮಿಕ ಶಾಲೆಗಳಿಗೆ ಸಂಬಂಧಿಸಿ 252 ಕೊಠಡಿಗಳಿಗೆ ನೆರೆ, ಮಳೆ ನೀರಿನಿಂದ ಹಾನಿಯಾಗಿದೆ. ಶಾಲಾ ಕೊಠಡಿಗಳಿಗೆ ಸಂಬಂಧಿಸಿ 26.64 ಕೋಟಿ ರೂ.ಗಳಷ್ಟು ಹಾನಿಯಾಗಿದ್ದು 12.51ಕೋಟಿ ರೂ. ಪರಿಹಾರ ನಿರೀಕ್ಷಿಸಲಾಗಿದೆ.

ಅಂಗನವಾಡಿಗೆ ಹಾನಿ: ಜಿಲ್ಲೆಯ 275 ಅಂಗನವಾಡಿ ಕೊಠಡಿಗಳಿಗೆ ಹಾನಿಯಾಗಿದೆ. ಹಾವೇರಿ ತಾಲೂಕಿನ 57 ಅಂಗನವಾಡಿಗಳಿಗೆ ಸಂಬಂಧಿಸಿ 63.30ಲಕ್ಷ ರೂ., ರಾಣಿಬೆನ್ನೂರು ತಾಲೂಕಿನ 48 ಅಂಗನವಾಡಿಗಳಿಗೆ ಸಂಬಂಧಿಸಿ 19.64ಲಕ್ಷ ರೂ., ಬ್ಯಾಡಗಿ ತಾಲೂಕಿನ 19 ಅಂಗನವಾಡಿಗಳಿಗೆ ಸಂಬಂಧಿಸಿ 23 ಲಕ್ಷ ರೂ., ಹಿರೇಕೆರೂರು ತಾಲೂಕಿನ 70 ಅಂಗನವಾಡಿಗಳಿಗೆ ಸಂಬಂಧಿಸಿ 53.24ಲಕ್ಷ ರೂ., ಸವಣೂರು ತಾಲೂಕಿನ 19 ಅಂಗನವಾಡಿಗಳಿಗೆ ಸಂಬಂಧಿಸಿ 28ಲಕ್ಷ ರೂ, ಶಿಗ್ಗಾವಿ ತಾಲೂಕಿನ 23 ಅಂಗನವಾಡಿಗಳಿಗೆ ಸಂಬಂಧಿಸಿ 34 ಲಕ್ಷ ರೂ., ಹಾನಗಲ್ಲ ತಾಲೂಕಿನ 39 ಅಂಗನವಾಡಿಗಳಿಗೆ ಸಂಬಂಧಿಸಿ 56ಲಕ್ಷ ರೂ.ಗಳಷ್ಟು ಹಾನಿಯಾಗಿದೆ. ಒಟ್ಟು 2.77 ಕೋಟಿ ರೂ.ಗಳಷ್ಟು ಹಾನಿ ಅಂದಾಜಿಸಲಾಗಿದ್ದು 2.76ಲಕ್ಷ ರೂ.ಗಳಷ್ಟು ಪರಿಹಾರ ನಿರೀಕ್ಷಿಸಲಾಗಿದೆ.

ಭವನಗಳಿಗೆ ಧಕ್ಕೆ: ಹಾವೇರಿ ತಾಲೂಕಿನಲ್ಲಿ ಮೂರು ಭವನಗಳಿಗೆ ಧಕ್ಕೆಯಾಗಿದ್ದು 1.50ಲಕ್ಷ ರೂ.ಗಳಷ್ಟು ಹಾನಿಯಾಗಿದೆ. ಬ್ಯಾಡಗಿ ತಾಲೂಕಿನಲ್ಲಿ ನಾಲ್ಕು ಭವನಗಳಿಗೆ ಹಾನಿಯಾಗಿದ್ದು 1.20ಲಕ್ಷರೂ.ಗಳಷ್ಟು ನಷ್ಟು ಹಾನಿಯಾಗಿದೆ. ಸವಣೂರು ತಾಲೂಕಿನಲ್ಲಿ ಒಂದು ಭವನಕ್ಕೆ ಧಕ್ಕೆಯಾಗಿ ಎರಡು ಲಕ್ಷ ರೂ.ಗಳಷ್ಟು ನಷ್ಟವಾಗಿದೆ. ಶಿಗ್ಗಾವಿ ತಾಲೂಕಿನಲ್ಲಿ ಎಂಟು ಭವನಗಳಿಗೆ ಹಾನಿಯಾಗಿದ್ದು 3.10ಲಕ್ಷ ರೂ. ನಷ್ಟವಾಗಿದೆ. ಹಾನಗಲ್ಲ ತಾಲೂಕಿನಲ್ಲಿ ಎಂಟು ಭವನಗಳಿಗೆ ಧಕ್ಕೆಯಾಗಿ 6.20ಲಕ್ಷ ರೂ.ಗಳಷ್ಟು ಸಂಭವಿಸಿದೆ. ಒಟ್ಟಾರೆ ಜಿಲ್ಲೆಯಲ್ಲಿ ಒಟ್ಟು 24 ಸಮುದಾಯ ಭವನಗಳಿಗೆ 14ಲಕ್ಷ ರೂ.ಗಳಷ್ಟು ನಷ್ಟವಾಗಿದ್ದು 14ಲಕ್ಷ ರೂ.ಗಳಷ್ಟು ಪರಿಹಾರ ನಿರೀಕ್ಷಿಸಲಾಗಿದೆ.

ಪಿಡಬ್ಲ್ಯೂಕಟ್ಟಡ ಹಾನಿ: ಲೋಕೋಪಯೋಗಿ ಇಲಾಖೆ ಅಧೀನದಲ್ಲಿ ಬರುವ ಅಂಗನವಾಡಿ, ಮಹಿಳಾ ಮಂಡಲ, ಸಮುದಾಯ ಭವನ, ಯುವ ಕೇಂದ್ರ ಸೇರಿದಂತೆ ಒಟ್ಟು 26 ಕಟ್ಟಡಗಳು ಹಾನಿಗೊಳಗಾಗಿವೆ. ಹಿರೇಕೆರೂರು ತಾಲೂಕಿನಲ್ಲಿ ಆರು, ಶಿಗ್ಗಾವಿ ತಾಲೂಕಿನಲ್ಲಿ ಐದು, ಹಾನಗಲ್ಲ ತಾಲೂಕಿನಲ್ಲಿ ಏಳು ಕಟ್ಟಡಗಳಿಗೆ ಸಂಬಂಧಿಸಿ 2.66 ಕೋಟಿ ರೂ.ಗಳಷ್ಟು ಹಾನಿ ಸಂಭವಿಸಿದೆ.

ನೆರೆ ಸೃಷ್ಟಿಸಿದ ಆವಾಂತರದಿಂದ ಸರ್ಕಾರಿ ಕಟ್ಟಡಗಳಿಗೂ ಅಪಾರ ಪ್ರಮಾಣದಲ್ಲಿ ಹಾನಿಯಾಗಿದ್ದು, ಇವೆಲ್ಲವುಗಳಿಗೆ ಶೀಘ್ರ ಪರಿಹಾರ ಬಿಡುಗಡೆಯಾಗಿ ದುರಸ್ತಿ ಕಾರ್ಯವಾಗಬೇಕಿದೆ.

ನೆರೆ-ಅತಿವೃಷ್ಟಿಯಿಂದ ಶಾಲೆ, ಅಂಗನವಾಡಿ ಸೇರಿದಂತೆ ಇತರ ಸರ್ಕಾರಿ ಕಟ್ಟಡಗಳಿಗೂ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಜಿಪಂ ವ್ಯಾಪ್ತಿಯ 952 ಸರ್ಕಾರಿ ಕಟ್ಟಡಗಳಿಗೆ ಸಂಬಂಧಿಸಿ 29.55ಕೋಟಿ ರೂ.ಗಳಷ್ಟು ಹಾನಿ ಅಂದಾಜಿಸಿದ್ದು, 15.42ಕೋಟಿ ಪರಿಹಾರ ನಿರೀಕ್ಷಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಅದೇ ರೀತಿ ಲೋಕೋಪಯೋಗಿ ವ್ಯಾಪ್ತಿಯ 26 ಸರ್ಕಾರಿ ಕಟ್ಟಡಗಳಿಗೂ ಹಾನಿಯಾಗಿದ್ದು, 2.66 ಕೋಟಿ ರೂ. ಹಾನಿಯಾಗಿದೆ. ಸಮಗ್ರ ಹಾನಿ ವರದಿಯನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ.

ಭವನಗಳಿಗೆ 14 ಲಕ್ಷ ರೂ.ಗಳಷ್ಟು ನಷ್ಟ:

ನೆರೆ-ಅತಿವೃಷ್ಟಿಯಿಂದ ಶಾಲೆ, ಅಂಗನವಾಡಿ ಸೇರಿದಂತೆ ಇತರ ಸರ್ಕಾರಿ ಕಟ್ಟಡಗಳಿಗೂ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ಜಿಪಂ ವ್ಯಾಪ್ತಿಯ 952 ಸರ್ಕಾರಿ ಕಟ್ಟಡಗಳಿಗೆ ಸಂಬಂಧಿಸಿ 29.55ಕೋಟಿ ರೂ.ಗಳಷ್ಟು ಹಾನಿ ಅಂದಾಜಿಸಿದ್ದು, 15.42ಕೋಟಿ ಪರಿಹಾರ ನಿರೀಕ್ಷಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಅದೇ ರೀತಿ ಲೋಕೋಪಯೋಗಿ ವ್ಯಾಪ್ತಿಯ 26 ಸರ್ಕಾರಿ ಕಟ್ಟಡಗಳಿಗೂ ಹಾನಿಯಾಗಿದ್ದು, 2.66 ಕೋಟಿ ರೂ. ಹಾನಿಯಾಗಿದೆ. ಸಮಗ್ರ ಹಾನಿ ವರದಿಯನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ. ಎನ್‌. ತಿಪ್ಪೇಸ್ವಾಮಿ, ಪ್ರಭಾರಿ ಅಪರ ಜಿಲ್ಲಾಧಿಕಾರಿ, ಹಾವೇರಿ
•ಎಚ್.ಕೆ. ನಟರಾಜ

ಟಾಪ್ ನ್ಯೂಸ್

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

Belagavi: ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

1-horoscope

Horoscope: ಆರಿಸಿದ ಮಾರ್ಗದ ಬಗೆಗೆ ಆತಂಕ ಬೇಡ, ಉದ್ಯೋಗ ಅರಸುತ್ತಿರುವವರಿಗೆ ಶುಭ ವಾರ್ತೆ

MUDA: ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಹೊಸ ಸಂಕಷ್ಟ

MUDA: ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಹೊಸ ಸಂಕಷ್ಟ

canada

Canada ವಲಸಿಗರಿಗೆ ನಿಯಂತ್ರಣ: ಭಾರತೀಯರಿಗೆ ಸಂಕಷ್ಟ ಸಾಧ್ಯತೆ

Vimana 2

Immigration process;ಬೆಂಗಳೂರು ವಿಮಾನ ನಿಲ್ದಾಣದಲ್ಲಿನ್ನು ಕ್ಷಣಗಳಲ್ಲೇ ವಲಸೆ ಪ್ರಕ್ರಿಯೆ!

Prajwal Revanna ಜತೆ ಒಪ್ಪಿತ ಲೈಂಗಿಕ ಕ್ರಿಯೆ: ವಕೀಲರ ವಾದ

Prajwal Revanna ಜತೆ ಒಪ್ಪಿತ ಲೈಂಗಿಕ ಕ್ರಿಯೆ: ವಕೀಲರ ವಾದ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2A Reservation; ವಕೀಲರ ಮೂಲಕ ಸರ್ಕಾರ ಹಕ್ಕೊತ್ತಾಯ ಮಾಡುತ್ತೇವೆ: ಪಂಚಮಸಾಲಿ ಶ್ರೀ

2A Reservation; ವಕೀಲರ ಮೂಲಕ ಸರ್ಕಾರ ಹಕ್ಕೊತ್ತಾಯ ಮಾಡುತ್ತೇವೆ: ಪಂಚಮಸಾಲಿ ಶ್ರೀ

1-bus

Haveri; ಖಾಸಗಿ ಬಸ್ ಪಲ್ಟಿ: 15ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ

ಮಕ್ಕಳಿಗೆ ಉತ್ತಮ ಶಿಕ್ಷಣ-ಸಂಸ್ಕಾರ ‌ಕಲಿಸಿ: ಚೌಡಯ್ಯ ಸ್ವಾಮೀಜಿ

ಮಕ್ಕಳಿಗೆ ಉತ್ತಮ ಶಿಕ್ಷಣ-ಸಂಸ್ಕಾರ ‌ಕಲಿಸಿ: ಚೌಡಯ್ಯ ಸ್ವಾಮೀಜಿ

ಮಕ್ಕಳನ್ನು ಮೊಬೈಲ್‌ನಿಂದ ದೂರವಿಡಬಲ್ಲ ದು ಕ್ರೀಡೆ-ಮಮತಾ ಆರೆಗೊಪ್ಪ

pramod muthalik

Haveri; ಮುಸ್ಲಿಮರನ್ನು ಬಹಿಷ್ಕರಿಸಿ, ಅವರ ಜತೆ ಯಾವುದೇ ವ್ಯವಹಾರ ಮಾಡಬೇಡಿ: ಮುತಾಲಿಕ್‌ ಕಿಡಿ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

Belagavi: ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

1-horoscope

Horoscope: ಆರಿಸಿದ ಮಾರ್ಗದ ಬಗೆಗೆ ಆತಂಕ ಬೇಡ, ಉದ್ಯೋಗ ಅರಸುತ್ತಿರುವವರಿಗೆ ಶುಭ ವಾರ್ತೆ

MUDA: ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಹೊಸ ಸಂಕಷ್ಟ

MUDA: ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಹೊಸ ಸಂಕಷ್ಟ

1-japp

Japan ಆ್ಯನಿಮೇಟೆಡ್‌ ರಾಮಾಯಣ ಅ.18ಕ್ಕೆ ಮರು ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.