ಬ್ರಾಹ್ಮಣನ ಮುಖ್ಯ ಧರ್ಮ ಪ್ರಾಮಾಣಿಕತೆಯಾಗಲಿ


Team Udayavani, Sep 11, 2019, 3:00 AM IST

brahmanan

ಮೈಸೂರು: ನಾವು ಮಾಡುವ ವೃತ್ತಿಯಲ್ಲಿ ಪ್ರಾಮಾಣಿಕತೆ ಇದ್ದರೆ ಅದೇ ನಾವು ಭಗವಂತನಿಗೆ ಮಾಡುವ ದೊಡ್ಡ ಪೂಜೆ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು. ಮಾನಸ ಗಂಗೋತ್ರಿಯ ಸೆನೆಟ್‌ ಭವನದಲ್ಲಿ ವಿಪ್ರ ಪೊಫೆಷನಲ್‌ ಫೋರಂ ವತಿಯಿಂದ ಮಂಗಳವಾರ ಆಯೋಜಿಸಿದ್ದ ವೃತ್ತಿ ನಿರತ ವಿಪ್ರ ಸೌಹಾರ್ದ ನಿಯಮಿತ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.

ಗಾಯತ್ರಿ ಮಂತ್ರ: ನಾವು ಎಷ್ಟೇ ದೊಡ್ಡವರಾದರೂ ಗಾಯತ್ರಿಮಂತ್ರವನ್ನು ಮರೆಯಬಾರದು. ಪ್ರತಿದಿನ 10 ಸಲವಾದರೂ ಗಾಯತ್ರಿ ಮಂತ್ರ ಪಠಿಸಬೇಕು. ಎಲ್ಲರಿಗೂ ಒಳ್ಳೆಯ ವಿದ್ಯೆ, ಬುದ್ಧಿ ಕೊಡು ಎಂಬುದೇ ಗಾಯತ್ರಿಮಂತ್ರದ ಸಾರ. ಗಾಯತ್ರಿಮಂತ್ರ ರಾಷ್ಟ್ರಗೀತೆಯಂತೆ ವಿಶ್ವಗೀತೆ ಇದ್ದಂತೆ. ಈ ನಿಟ್ಟಿನಲ್ಲಿ ಆಧ್ಯಾತ್ಮಿಕ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು. ಸಾಮಾಜಿಕ ಸೇವೆ ನಮ್ಮ ಜೀವನವನ್ನು ಮುಡಿಪಿಡಬೇಕು. ಸ್ವಾರ್ಥ ಜೀವನ ಸಾಗಿಸಿದರೆ ನಾವು ತಿನ್ನುವ ಅನ್ನ ಪಾಪವಾಗಿ ಮಾರ್ಪಡುತ್ತದೆ ಎಂದು ತಿಳಿಸಿದರು.

ಅನಂತಕುಮಾರ್‌ಗೆ ಹೊಗಳಿಕೆ: ಮಾಜಿ ಕೇಂದ್ರ ಸಚಿವ ಅನಂತಕುಮಾರ್‌ ಹೆಗ್ಡೆ ಅವರು ಬ್ರಾಹ್ಮಣ ಮತ್ತು ಹಿಂದೂ ಸಮಾಜದ ಬಗ್ಗೆಯೂ ಅತ್ಯಂತ ನಿಷ್ಠೆಯಿಂಸ ಕೆಲಸ ಮಾಡುತ್ತಾರೆ. ನಿರ್ಭಯವಾಗಿ ವಿಚಾರಗಳನ್ನು ಹೇಳುವ ಧೀರತನ ಉಳ್ಳವರಾಗಿದ್ದಾರೆ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಸದ ಅನಂತ್‌ಕುಮಾತ್‌ ಹೆಗ್ಡೆ ಮಾತನಾಡಿ, ವಿಪ್ರ ಪ್ರೊಫೆಷನಲ್‌ ಫೋರಂನಿಂದ ವೃತ್ತಿ ನಿರತ ವಿಪ್ರ ಸೌಹಾರ್ದ ಸಹಕಾರಿ ಸಂಘ ನಿಯಮಿತವನ್ನು ಸ್ಥಾಪಿಸುತ್ತಿರುವುದು ಸಂತೋಷದ ವಿಷಯ. ಇದು ಕೇವಲ ಆದಾಯ ವೃದ್ಧಿಯನ್ನೇ ಮುಖ್ಯ ಧ್ಯೇಯವಾಗಿಸಿಕೊಳ್ಳದೇ, ವ್ಯವಹಾರ ಮತ್ತು ಜ್ಞಾನದಲ್ಲಿ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಸಾಗುವುದರೊಂದಿಗೆ ಹೊಸತನದ ಕಲ್ಪನೆಯನ್ನೂ ಇಟ್ಟುಕೊಂಡು ಕಾರ್ಯನಿರ್ವಹಿಸಬೇಕು. ಹೊಸ ತಲೆಮಾರಿಗೆ ಅನುಕೂಲವಾಗುವ ಅವಕಾಶಗಳನ್ನು ಸೃಷ್ಟಿ ಮಾಡುವ ಕೆಲಸವನ್ನು ಮಾಡಬೇಕು ಎಂದು ಸಲಹೆ ನೀಡಿದರು.

ಗಟ್ಟಿಗರಾಗಿ: ಬ್ರಾಹ್ಮಣ ಸಮುದಾಯ ಏನೇ ಮಾಡಿದರೂ ಅದು ಜಗತ್ತಿನ ಒಳಿತಾಗಿರುತ್ತದೆ. ಇವರು ಇಲ್ಲ ಸಲ್ಲದ ಹಕ್ಕುಗಳಿಗಾಗಿ ಎಂದೂ ಹೋರಾಡುವುದಿಲ್ಲ. ನಾವು ನಂಬಿಕೊಂಡಿರುವ ವಿಚಾರಗಳಿಗೆ ಬದ್ಧರಾಗಿ ಬದುಕು ನಡೆಸುತ್ತಾ ಬಂದಿದ್ದೇವೆ. ರಾಜಕೀಯ, ಸಮಾಜಿಕ, ಆಧ್ಯಾತ್ಮಿಕ, ಧಾರ್ಮಿಕ ಕ್ಷೇತ್ರದಲ್ಲಿ ಬದ್ಧತೆ ಮತ್ತು ಧ್ಯೇಯವನ್ನಿಟ್ಟುಕೊಂಡಿದ್ದೇವೆ. ಅದು ಹೀಗೆಯೇ ಮುಂದುವರೆಯಬೇಕು. ಹಣ ಬರುವುದಕ್ಕಿಂತ ಮುಂಚೆ ಎಲ್ಲವೂ ಸರಿ ಇರುತ್ತದೆ. ಆದರೆ ಹಣ ಬಂದ ನಂತರ ನಾವು ಹಾಳಾಗುತ್ತೇವೆ. ಇಲ್ಲ ಹೋಳಾಗುತ್ತೇವೆ. ಹಾಗಾಗಿ ನೇತೃತ್ವ ವಹಿಸಿಕೊಂಡವರು ಗಟ್ಟಿಗರಾಗಿರಬೇಕು ಎಂದು ಹೇಳಿದರು.

ಗುರಿ, ಉತ್ಸಾಹ: ನಮ್ಮ ಬದುಕು ಮತ್ತು ನಿಲುವಿನ ಬಗ್ಗೆ ಹೆಮ್ಮೆ ಇಟ್ಟುಕೊಂಡಿರಬೇಕು. ಯಾರಲ್ಲಿ ಗುರಿ ಮತ್ತು ಗೆರೆ ದಾಟುವ ಉತ್ಸಾಹ ಇರುತ್ತದೋ ಅವರು ಇತಿಹಾಸ ಸೃಷ್ಟಿಸುತ್ತಾರೆ. ಇಂದು ಅನೇಕ ಅವಕಾಶಗಳಿವೆ. ಅವುಗಳನ್ನು ಸದ್ಬಳಕೆ ಮಾಡಿಕೊಂಡು ಹೊಸ ಹೊಸ ಆವಿಷ್ಕಾರಗಳ ಮೂಲಕ ಯುವ ಸಮುದಾಯಕ್ಕೆ ತಲುಪುವಂತಹ ಯೋಜನೆಗಳನ್ನು ರೂಪಿಸಬೇಕು. ಇಂದು ಇಡೀ ಜಗತ್ತೆ ಭಾರತವನ್ನು ಒಪ್ಪಿಕೊಂಡಿದೆ.

ಯೂರೋಪ್‌, ಅಮೆರಿಕ ದೇಶದಂತಹ ಆರ್ಥಿಕ ಸ್ಥಿತಿ ಕೆಳಮಟ್ಟಕ್ಕೆ ತಲುಪಿದ್ದರೂ, ನಮ್ಮ ದೇಶದ ಆರ್ಥಿಕ ಸ್ಥಿತಿ ಕಣ್ತೆರೆಯುತ್ತಿದೆ. ಜಗತ್ತಿನ ಯಾವುದೇ ರಾಷ್ಟ್ರ ಮಾಡದ ಕೆಲಸವನ್ನು ನಮ್ಮ ಇಸ್ರೋ ವಿಜ್ಞಾನಿಗಳು ಮಾಡಿ ತೋರಿಸಿದ್ದಾರೆ. ಇದು ಕೆಲವರಿಗೆ ವಿಫ‌ಲವಾದರೆ, ನಮಗೆಲ್ಲ ದೊಡ್ಡ ಸಾಧನೆಯಾಗಿದೆ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ವಿಪ್ರ ಪೊಫೆಷನಲ್‌ ಫೋರಂನ ಡಾ.ಎಸ್‌. ಮುರಳಿ, ಎಸ್‌.ವಿ. ವೆಂಕಟೇಶ್‌ ಇದ್ದರು.

ಬ್ರಾಹ್ಮಣರು ಪ್ರಾಮಾಣಿಕರಾಗಿದ್ದರೆ ಮೀಸಲಾತಿ ತನ್ನಷ್ಟಕ್ಕೆ ಹೋಗಲಿದೆ: ಬ್ರಾಹ್ಮಣ ಸಮಾಜ ಎಲ್ಲಾರಂಗದಲ್ಲೂ ಬಲಗೊಳ್ಳಬೇಕು. ರಾಜಕೀಯ, ಔದ್ಯೋಗಿಕ, ಸಾಮಾಜಿಕ, ಅಧಾ¾ತ್ಮಿಕ ರಂಗದಲ್ಲೂ ಬೆಳೆಯಬೇಕು. ಯಾವ ಕ್ಷೇತ್ರದಲ್ಲೂ ಹಿಂದೆ ಬೀಳಬಾರದು. ಬ್ರಾಹ್ಮಣ ಸಮಾಜ ಕೇವಲ ಬ್ರಾಹ್ಮಣರ ಅಭಿವೃದ್ಧಿಗಾಗಿ ಕೆಲಸ ಮಾಡುವುದಿಲ್ಲ. ಬದಲಿಗೆ ರಾಷ್ಟ್ರದ ಹಿತಾಸಕ್ತಿಗಾಗಿ ಕಾರ್ಯ ನಿರ್ವಹಿಸುತ್ತದೆ. ಬ್ರಾಹ್ಮಣನ ಮುಖ್ಯ ಧರ್ಮ ಪ್ರಾಮಾಣಿಕತೆಯಾಗಬೇಕು. ನಾವು ಪ್ರಾಮಾಣಿಕರಾಗಿ ಇದ್ದರೆ ಮೀಸಲಾತಿ ತನ್ನಷ್ಟಕ್ಕೆ ಹೋಗುತ್ತದೆ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಆಶಿಸಿದರು.

ಟಾಪ್ ನ್ಯೂಸ್

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-hunsur

Hunsur: ನೀರಿನ ಹೊಂಡಕ್ಕೆ ಬಿದ್ದು ಮಗು ಸಾವು

Mys-Udgiri-1

Mob Attack: ಉದಯಗಿರಿ ಪೊಲೀಸ್‌ ಠಾಣೆ ಮೇಲೆ ದಾಳಿ: ಆರೋಪಿಯ ಅಂಗಡಿ ಸಿಬಂದಿ ದುಷ್ಕೃತ್ಯ ಶಂಕೆ

24

80 ಸಾವಿರ ಲಂಚ ಸ್ವೀಕರಿಸುವಾಗ ಸಬ್‌ ಇನ್ಸ್‌ಪೆಕ್ಟರ್‌ ಲೋಕ ಬಲೆಗೆ

11

Dr G. Parameshwar: ಉದಯಗಿರಿ ಪ್ರಕರಣ: “ಬುಲ್ಡೋಜರ್‌’ ಕ್ರಮ ಇಲ್ಲಿ ಅಗತ್ಯವಿಲ್ಲ; ಪರಂ

ಉದಯಗಿರಿ ಪ್ರಕರಣ: ಎಷ್ಟೇ ಬಲಾಡ್ಯರಾಗಿದ್ದರೂ ಕ್ರಮ: ಡಾ. ಜಿ. ಪರಮೇಶ್ವರ್‌

ಉದಯಗಿರಿ ಪ್ರಕರಣ: ಎಷ್ಟೇ ಬಲಾಡ್ಯರಾಗಿದ್ದರೂ ಕ್ರಮ: ಡಾ. ಜಿ. ಪರಮೇಶ್ವರ್‌

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

de

Vitla: ಕಾಲು ಜಾರಿ ಕೆರೆಗೆ ಬಿದ್ದು ಯುವಕ ಸಾವು

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.