![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Sep 13, 2019, 7:30 PM IST
ಹೈದರಾಬಾದ್ : ಗಿಡಗಳನ್ನು ತಿನ್ನುತ್ತಿದ್ದ ಆರೋಪದ ಮೇಲೆ ಆಡುಗಳನ್ನು ಬಂಧಿಸಿದ ಘಟನೆ ತೆಲಂಗಾಣದ ಹುಜುರಾಬಾದ್ ನ ಕರೀಮ್ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ .
ಹೌದು.! ಇಂಥದೊಂದು ಘಟನೆ ಕೇಳುವುದಕ್ಕೆ ತಮಾಷೆ ಅನ್ನಿಸಿದ್ರೂ ನಡೆದಿರುವುದು ನಿಜ. ನಗರದ ಸ್ಥಳೀಯರಿಬ್ಬರು ತಮ್ಮ ಆಡುಗಳನ್ನು ಮೇಯಲು ಬಿಟ್ಟಿದ್ದರು. ಈ ವೇಳೆಯಲ್ಲಿ ಆಡುಗಳು ಮೇಯುತ್ತಾ ಪರಿಸರ ಕಾಳಜಿವುಳ್ಳ ಸ್ವಯಂ ಸೇವಾ ಸಂಸ್ಥೆಯಲ್ಲಿದ್ದ ನೂರಾರು ಗಿಡಗಳನ್ನು ತಿಂದು ಹಾಕಿದೆ. ಇದನ್ನು ನೋಡಿದ ಸಂಸ್ಥೆಯ ಸಿಬ್ಬಂದಿ ಆಡುಗಳು ಸುಮಾರು 150 ಗಿಡಗಳನ್ನು ತಿಂದು ಹಾಕಿದೆ ಎಂದು ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಾರೆ. ಪೊಲೀಸರು ಬಂದು, ಮೇಯುತ್ತಿದ್ದ ಆಡುಗಳನ್ನು ಬಂಧಿಸಿ ಠಾಣಾ ಮುಂಭಾಗದಲ್ಲಿ ಕಟ್ಟಿ ಹಾಕಿದ್ದಾರೆ. ಪೊಲೀಸರು ಆಡುಗಳನ್ನು ಸಾಕಿದ ದೋರ್ನಕೊಂಡ ರಾಜಯ್ಯ ಅವರನ್ನು ಠಾಣೆಗೆ ಕರೆಸಿಕೊಂಡು ಸ್ಥಳೀಯ ಆಡಳಿತಕ್ಕೆ 1000 ರೂಪಾಯಿಯ ದಂಡ ಕಟ್ಟಲು ಹೇಳಿದ್ದಾರೆ.
ಪೊಲೀಸರು ದಂಡ ಕಟ್ಟಿದ ಮೇಲೆಯೇ ಆಡುಗಳನ್ನು ಬಿಟ್ಟು ಕಳುಹಿಸಿದ್ದಾರೆ. ನಾವು ಆಡುಗಳನ್ನು ಬಂಧಿಸಿಲ್ಲ,ಕಾನೂನಿನಲ್ಲಿ ಪ್ರಾಣಿಗಳನ್ನು ಬಂಧಿಸುವ ಅಥವಾ ದಂಡಿಸುವ ಯಾವುದೇ ನಿಯಮಗಳಿಲ್ಲ ಹಾಗೂ ಇನ್ಮುಂದೆ ಸಾರ್ವಜನಿಕ ಸ್ಥಳದಲ್ಲಿ ಈ ರೀತಿ ಆಡುಗಳನ್ನು ಮೇಯಿಸಲು ಬಿಡಬಾರದು ಎಂದು ಎಚ್ಚರಿಕೆಯ ಹೇಳಿಕೆ ಕೊಟ್ಟಿದ್ದಾರೆ ಹುಜುರಾಬಾದ್ ಪೊಲೀಸ್ ಇನ್ಸ್ಪೆಕ್ಟರ್ ವಸಮ್ ಶೆಟ್ಟಿ ಮಾಧವಿ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
You seem to have an Ad Blocker on.
To continue reading, please turn it off or whitelist Udayavani.