![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Sep 30, 2019, 5:39 AM IST
ಕಾರ್ಕಳ: ಅತ್ತೂರು ಸಮೀಪದ ಚೇತನಾಹಳ್ಳಿ ಕುಚಿಲಪಾದೆ ಎಂಬಲ್ಲಿ ಶಿಲ್ಪಕಲೆಯ ಕೆಲಸ ಕಾರ್ಯಗಳು ನಿರಂತರವಾಗಿ ನಡೆಯುತ್ತಿರುವುದರಿಂದ ಕಲ್ಲಿನ ಹುಡಿಯಿಂದಾಗಿ ತೊಂದರೆಯಾಗುತ್ತಿದೆ ಎಂದು ಸ್ಥಳೀಯರು ಡಿಸಿಗೆ ದೂರು ನೀಡಿದ್ದಾರೆ.
ಕಳೆದ 5 ವರ್ಷಗಳಿಂದ ಕಲ್ಲಿನ ಕೆತ್ತನೆ ಕಾರ್ಯ ನಡೆಯುತ್ತಿದ್ದು, ಅದು ಹೊರ ಸೂಸುವ ಹುಡಿಯಿಂದಾಗಿ ಅಸ್ತಮಾ, ತುರಿಕೆ ಮೊದಲಾದ ಆರೋಗ್ಯ ಸಮಸ್ಯೆ ಕಂಡುಬಂದಿವೆ. ಬಾವಿ ನೀರಿಗೂ ಕಲ್ಲಿನ ಹುಡಿ ಸೇರುತ್ತಿದೆ. ಶಬ್ದ ಮಾಲಿನ್ಯದಿಂದಲೂ ತೊಂದರೆಯಾಗಿದೆ ಎಂದು ಸ್ಥಳೀಯರು ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.
You seem to have an Ad Blocker on.
To continue reading, please turn it off or whitelist Udayavani.