ಹಳ್ಳಿ ದಸರಾಗೆ ಶ್ರೀನಿವಾಸ ಅಗ್ರಹಾರ ಸಜ್ಜು

ಪ್ರವಾಸಿಗರಿಗೆ ಎತ್ತಿನ ಗಾಡಿಗಳಲ್ಲಿ ಜಾಲಿ ರೈಡ್‌

Team Udayavani, Sep 30, 2019, 4:21 PM IST

MANDYA-TDY-2

ಮಂಡ್ಯ: ಅ.3 ರಿಂದ ಮೂರು ದಿನಗಳ ಕಾಲ ನಡೆಯುವ ಶ್ರೀರಂಗಪಟ್ಟಣ ದಸರಾ ಮಹೋತ್ಸವ ಪ್ರಯುಕ್ತ ಹಳ್ಳಿ ದಸರಾಗೆ ಆಯ್ಕೆ ಮಾಡಲಾಗಿರುವ ಶ್ರೀನಿವಾಸ ಅಗ್ರಹಾರದಲ್ಲಿ ಭರದ ಸಿದ್ಧತೆಗಳು ನಡೆಯುತ್ತಿವೆ.

ಭತ್ತ ನಾಟಿ ಹಾಗೂ ರಾಗಿ ಬಿತ್ತನೆಗೆ ಜಮೀನುಗಳನ್ನು ಆಯ್ಕೆ ಮಾಡಲಾಗಿದೆ. ಪ್ರವಾಸಿಗರು ಗ್ರಾಮೀಣ ಶೈಲಿಯ ಸಸ್ಯಾಹಾರಿ ಹಾಗೂ ಮಾಂಸಾಹಾರಿ ಭೋಜನ ಸವಿಯಲು 16 ಕಂಬಗಳ ಮೂರು ಮನೆಗಳನ್ನು ಆಯ್ಕೆ ಮಾಡಲಾಗಿದೆ. ಶ್ರೀನಿವಾಸ ಅಗ್ರಹಾರದಿಂದ ಶ್ರೀ ನಿಮಿಷಾಂಭ ದೇವಸ್ಥಾನ, ಕರೀಘಟ್ಟ ಹಾಗೂ ಶ್ರೀರಂಗನಾಥ ದೇವಸ್ಥಾನದವರೆಗೆ ಪ್ರವಾಸಿಗರು ಸಂಚರಿಸಲು ಅನುಕೂಲವಾಗುವಂತೆ 20 ಎತ್ತಿನ ಗಾಡಿಗಳನ್ನು ಸಜ್ಜುಗೊಳಿಸಲಾಗಿದೆ.

ಪ್ರವಾಸಿಗರಿಗೆ ರಂಜನೆ: ಶ್ರೀರಂಗಪಟ್ಟಣ ದಸರಾ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಎತ್ತಿನ ಗಾಡಿಯಲ್ಲಿ ಜಾಲಿ ರೈಡ್‌ ನಡೆಸುವುದಕ್ಕೆ ಈ ಬಾರಿಯ ದಸರೆಯಲ್ಲಿ ಮುಕ್ತ ಅವಕಾಶ ಕಲ್ಪಿಸಿದೆ. ಎತ್ತುಗಳ ಕೊರಳಿಗೆ ಗಂಟೆ ಕಟ್ಟಿ, ಎತ್ತಿನ ಗಾಡಿಯನ್ನು ಬಾಳೆ ಕಂದು, ಮಾವಿನ ಸೊಪ್ಪು, ಹೂವು, ಬಲೂನ್‌ಗಳಿಂದ ಅಲಂಕರಿಸಿ ಪ್ರವಾಸಿಗರನ್ನು ಅದರೊಳಗೆ ಕೂರಿಸಿಕೊಂಡು ಸಂಚರಿಸಲು ವ್ಯವಸ್ಥೆ ಮಾಡಿದೆ.

ಶ್ರೀನಿವಾಸ ಅಗ್ರಹಾರದಿಂದ ಶ್ರೀನಿಮಿಷಾಂಬ ದೇಗುಲ, ಕರೀಘಟ್ಟ ಹಾಗೂ ಶ್ರೀರಂಗನಾಥ ಸ್ವಾಮಿ ದೇವಾಲಯದವರೆಗೆ ಎತ್ತಿನಗಾಡಿಯಲ್ಲಿ ಕರೆದೊಯ್ಯಲಾಗುವುದು. ಒಂದೊಂದು ಸ್ಥಳಕ್ಕೆ ಒಂದೊಂದು ರೀತಿಯ ದರ ನಿಗದಿಪಡಿಸಲಾಗಿರುತ್ತದೆ. ಇದರ ಅನುಭವ ಪಡೆಯಲಿಚ್ಚಿಸುವವರು ಹಣ ಪಾವತಿಸಿ ಸಂಚರಿಸಬಹುದು. ಪ್ರವಾಸಿಗರನ್ನು ಹಳ್ಳಿ ದಸರಾದೊಂದಿಗೆ ತೊಡಗಿಸಿಕೊಳ್ಳುವುದು ಇದರ ಹಿಂದಿನ ಪ್ರಮುಖ ಉದ್ದೇಶವಾಗಿದೆ. ಶ್ರೀನಿವಾಸ ಅಗ್ರಹಾರದಿಂದ ಹೊರಡುವ ಸಂಚಾರದ ದಾರಿಯುದ್ದಕ್ಕೂ ಮನೆಗಳ ಎದುರು ಸಗಣಿ ನೀರು ಹಾಕಿ, ಹಾದಿಯನ್ನು ರಂಗೋಲಿಗಳಿಂದ ಸಿಂಗರಿಸಿ ಮೆರುಗು ನೀಡಲಾಗುವುದು.

ಗ್ರಾಮೀಣ ಶೈಲಿಯ ಆಹಾರ ಮೇಳ: ಹಳ್ಳಿ ದಸರಾದಲ್ಲಿ ಅಪ್ಪಟ ಹಳ್ಳಿ ಸೊಗಡಿನ ಆಹಾರವನ್ನು ಹೊರರಾಜ್ಯ ಹಾಗೂ ವಿದೇಶದಿಂದ ಬರುವ ಪ್ರವಾಸಿಗರಿಗೆ ಪರಿಚಯಿಸಲಾಗುತ್ತಿದೆ. ಇದಕ್ಕಾಗಿ 16 ಕಂಬಗಳ ಮೂರು ಮನೆಗಳನ್ನು ಆಯ್ಕೆ ಮಾಡಲಾಗಿದೆ. ರಾಗಿ ಮುದ್ದೆ, ಉಪ್ಪೆಸರು, ಬಸ್ಸಾರು, ಸೊಪ್ಪಿನ ಸಾರು, ತರಕಾರಿ ಸಾಂಬರು, ಮೊಳಕೆ ಕಾಳು ಸಾರು, ಕಳಲೆ ಸಾಂಬಾರು, ಕಡಲೆಕಾಳು, ಹೆಸರುಕಾಳು,ಹುರಳಿಕಾಳುಗಳನ್ನೊಳಗೊಂಡ ಸಾಂಬಾರು, ಅವರೆಕಾಳು ಗೊಜ್ಜು, ಕಡಲೆಕಾಳು ಗುಗ್ಗರಿ, ಮೊಸರು, ಮಜ್ಜಿಗೆ, ಅನ್ನ ಸೇರಿದಂತೆ ನಾನಾ ಮಾದರಿಯ ತಿನಿಸುಗಳನ್ನು ತಯಾರಿಸಿ ನೀಡಲುಸಿದ್ಧತೆ ನಡೆಸಲಾಗಿದೆ.

ಹಳ್ಳಿ ಶೈಲಿಯ ಮಾಂಸಾಹಾರಿ ತಿನಿಸುಗಳಿಗೂ ಅವಕಾಶ ದೊರಕಿಸಿದ್ದು, ನಾಟಿಕೋಳಿ ಸಾರು, ಮುದ್ದೆ, ತಲೆಮಾಂಸದ ಸಾರು, ಕಾಲ್‌ಸೂಪ್‌, ಮಾಂಸದ ಸಾರು, ಈರುಳ್ಳಿ-ಬೆಳ್ಳುಳ್ಳಿ ಮಸಾಲೆಯೊಂದಿಗೆ ಹುರಿದ ಮಾಂಸ, ಬಿರಿಯಾನಿ, ಬೋಟಿಗೊಜ್ಜು, ಪಲಾವ್‌, ಚಾಪ್ಸ್‌, ಮೀನು ಸಾಂಬಾರು, ಬೇಯಿಸಿದ ನಾಟಿಕೋಳಿ ಮೊಟ್ಟೆ ಸೇರಿದಂತೆ ಹಲವು ಮಾದರಿಗಳಲ್ಲಿ ರುಚಿಯಾದ ಭೋಜನ ಸಿದ್ಧಪಡಿಸುವುದಕ್ಕೆ ವ್ಯವಸ್ಥೆ ಮಾಡಲಾಗಿದೆ.

ಸಸ್ಯಾಹಾರಿ ಹಾಗೂ ಮಾಂಸಾಹಾರಿ ಭೋಜನ ಪ್ರತ್ಯೇಕ ಮನೆಗಳಲ್ಲಿ ತಯಾರಿಸಲಾಗುತ್ತದೆ. ಒಂದೊಂದು ಊಟಕ್ಕೂ ಒಂದೊಂದು ರೀತಿಯ ಬೆಲೆ ನಿಗದಿಪಡಿಸಿದ್ದು, ದಸರಾ ವೀಕ್ಷಣೆಗೆ ಬರುವ ಪ್ರವಾಸಿಗರು ಅಪ್ಪಟ ಗ್ರಾಮೀಣ ಶೈಲಿಯ ತಿನಿಸುಗಳ ಸವಿಯನ್ನು ಸವಿಯಬಹುದು. ನೆಲದ ಮೇಲೆ ಚಾಪೆ ಹಾಸಿ ಅದರ ಮೇಲೆ ಕುಳಿತು ಊಟ ಮಾಡುವ ಅನುಭವ ಪ್ರವಾಸಿಗರಿಗೆ ದೊರಕಲಿದೆ.

ಭತ್ತ ನಾಟಿ, ರಾಗಿ ಬಿತ್ತನೆ ವ್ಯವಸ್ಥೆ: ಹೊರಗಿನಿಂದ ಬರುವ ಪ್ರವಾಸಿಗರಿಗೆ ಭತ್ತ ನಾಟಿ, ರಾಗಿ ಬಿತ್ತನೆ ಮಾಡುವುದಕ್ಕೂ ಅವಕಾಶ ಮಾಡಿಕೊಡಲಾಗುವುದು. ಇದಕ್ಕಾಗಿ ಜಮೀನುಗಳನ್ನು ಗುರುತಿಸಿದ್ದು, ಭತ್ತ ನಾಟಿ ಮಾಡಲು ಇಚ್ಚಿಸುವವರು ಗ್ರಾಮೀಣ ಶೈಲಿಯ ಬಟ್ಟೆ ತೊಟ್ಟು ಕೆಸರುಗದ್ದೆಗೆ ಇಳಿದು ನಾಟಿ ಮಾಡಬಹುದು.ರಾಗಿ ಹೇಗೆ ಬಿತ್ತನೆ ಮಾಡುವರು ಎನ್ನುವುದನ್ನು ಸ್ವತಃ ತಾವೇ ಅನುಭವ ಪಡೆಯುಬಹುದು.

ಟಾಪ್ ನ್ಯೂಸ್

New Year Guidelines: ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಹೈದರಾಬಾದ್ ಪೊಲೀಸರು

New Year Guidelines: ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಹೈದರಾಬಾದ್ ಪೊಲೀಸರು

Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ

Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ

Krantiveer Brigade launched by worshipping the feet of 1008 saints: KS Eshwarappa

Politicss; 1008 ಸಾಧುಸಂತರ ಪಾದಪೂಜೆ‌ ಮೂಲಕ‌ ಕ್ರಾಂತಿವೀರ ಬ್ರಿಗೇಡ್‌ ಗೆ ಚಾಲನೆ: ಈಶ್ವರಪ್ಪ

INDvAUS: Is captain Rohit Sharma standing against to Shami?; Aussie tour difficult for pacer!

INDvAUS: ಶಮಿ ವಿರುದ್ದ ನಿಂತರೇ ನಾಯಕ ರೋಹಿತ್?;‌ ವೇಗಿಗೆ ಆಸೀಸ್‌ ಪ್ರವಾಸ ಕಷ್ಟ!

Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ

Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ

2-bntwl

Bantwala: ಚಾಲಕನ‌ ನಿಯಂತ್ರಣ ತಪ್ಪಿ ಪಲ್ಟಿಯಾದ ಟೆಂಪೋ ಟ್ರಾವೆಲ್

The owner of the betting app promoted by Bollywood actresses is Pakistani!

Betting App; ಬಾಲಿವುಡ್‌ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್‌‌ ಮಾಲಕ ಪಾಕಿಸ್ತಾನಿ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kannada-Sahitya-Sammelana-2024

Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು

14

Kannada Sahitya Sammelana: ಮೊದಲ ಬಾರಿಗೆ ದೃಷ್ಟಿಚೇತನರ ವಿಶೇಷ ಕವಿಗೋಷ್ಠಿ

Suicide 3

Maddur; ಕೆಲಸದ ಒತ್ತಡ: ಎಂಜಿನಿಯರ್‌ ಆತ್ಮಹ*ತ್ಯೆ

Karnataka Congress: ಯಾವುದೇ ಒಪ್ಪಂದ ಆಗಿಲ್ಲ: ಸಿಎಂ ಸಿದ್ದರಾಮಯ್ಯ

Karnataka Congress: ಯಾವುದೇ ಒಪ್ಪಂದ ಆಗಿಲ್ಲ: ಸಿಎಂ ಸಿದ್ದರಾಮಯ್ಯ

13

Mandya: ಬಹುಮಾನ ಗೆದ್ದ ಹಳ್ಳಿಕಾರ್‌ ತಳಿಯ ಎತ್ತು ದಾಖಲೆಯ 13 ಲಕ್ಷ ರೂ.ಗೆ ಮಾರಾಟ!

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

New Year Guidelines: ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಹೈದರಾಬಾದ್ ಪೊಲೀಸರು

New Year Guidelines: ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಹೈದರಾಬಾದ್ ಪೊಲೀಸರು

Lok Adalat: ಲೋಕ್‌ ಅದಾಲತ್‌ನಲ್ಲಿ 38.8 ಲಕ್ಷ  ವ್ಯಾಜ್ಯ ಇತ್ಯರ್ಥ

Lok Adalat: ಲೋಕ್‌ ಅದಾಲತ್‌ನಲ್ಲಿ 38.8 ಲಕ್ಷ  ವ್ಯಾಜ್ಯ ಇತ್ಯರ್ಥ

5

Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ

Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ

Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ

Krantiveer Brigade launched by worshipping the feet of 1008 saints: KS Eshwarappa

Politicss; 1008 ಸಾಧುಸಂತರ ಪಾದಪೂಜೆ‌ ಮೂಲಕ‌ ಕ್ರಾಂತಿವೀರ ಬ್ರಿಗೇಡ್‌ ಗೆ ಚಾಲನೆ: ಈಶ್ವರಪ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.