ಕೌಶಲಗಳಲ್ಲೇ ಯಾತ್ರೆಯ ದರ್ಶನ


Team Udayavani, Oct 5, 2019, 3:07 AM IST

koushala

ಸಾಹಿತ್ಯದ ಆಯಾ ಪ್ರಾಕಾರಗಳಿಗೆ ಅದರದ್ದೇ ಆದ ಅನನ್ಯತೆ ಇದೆ. ಅದನ್ನು ಅದರದೇ ಕ್ರಮದಲ್ಲಿ ಪರಿಕಿಸಿದರೆ ಅದರ ವಿನ್ಯಾಸದಲ್ಲೇ ರೂಪು ತಳೆಯುತ್ತದೆ ಮತ್ತು ರಸಾಸ್ವಾದವನ್ನೂ ನೀಡುತ್ತದೆ. ಉದಾಹರಣೆಗೆ, ಕಾವ್ಯ ಇದ್ದದ್ದು ವಾಚನಕ್ಕೆ. “ಕಾವ್ಯವಾಚನ’ ಎಂದೇ ಕರೆದು ರೂಢಿ. ಅದನ್ನು ಗಮಕದಲ್ಲಿ ಹಾಡುತ್ತೀರೋ, ಲಯಬದ್ಧವಾಗಿ ಓದುತ್ತೀರೋ ಅದು ನಿಮಗೆ ಬಿಟ್ಟಿದ್ದು. ನಾಟಕ ನೋಟಕ್ಕೆ ಸಂಬಂಧಿಸಿದ್ದು. ಕಾಳಿದಾಸ ಅದನ್ನು “ದೃಶ್ಯಯಜ್ಞ’ ಎಂದಿದ್ದಾನೆ.

ನಾಟಕ ಇರುವುದು ವಾಚನಕ್ಕೆ ಅಲ್ಲದಿದ್ದರೂ ರಂಗಕ್ಕೆ ದೃಶ್ಯಗಳನ್ನು ಅಳವಡಿಸುವ ಪೂರ್ವದಲ್ಲಿ ವಾಚನ ಮಾಡುವುದು ಬೇರೆ ಸಂಗತಿ. ಮೇಘದೂತವನ್ನು ಕಾವ್ಯವಾಗಿಸಿದ ಕಾಳಿದಾಸನೇ “ಶಾಕುಂತಲ’ ವನ್ನು ನಾಟಕವಾಗಿ ಕಟ್ಟಿದ. ಇದರ ಅರ್ಥ ಯಾವುದು? ಯಾವ ಫಾರ್ಮ್ ತೆಗೆದುಕೊಳ್ಳುತ್ತವೆ? - ಎಂದು ಕವಿಗೆ ಗೊತ್ತು. ಗೊತ್ತಿರಬೇಕು, ಕೂಡ. ಹಾಗೆ ತಿಳಿದಿದ್ದರೆ ಮಾತ್ರವೇ ಆಯಾ ಕೃತಿಗೆ ಅನನ್ಯತೆ ದೊರಕಿಸಿಕೊಡಲು ಸಾಧ್ಯವಾಗುತ್ತದೆ.

ಆದರೆ, ಇದು ಬೇರೆ ಕಾಲ; ಪರ್ವ ಕಾಲ. ಪ್ರಯೋಗಗಳ ಕಾಲ. ಕೃತಿ- ಕಾವ್ಯವೋ ಕಾದಂಬರಿಯೋ, ಕಥೆಯೋ ಅದನ್ನು ರಂಗಕ್ಕೆ ಅಳವಡಿಸುವ ಸಾಹಸಕ್ಕಿಳಿಯುವ ಕಾಲ. ಈ ಕಾರ್ಯದಲ್ಲಿ ಯಶಸ್ಸು ಗಳಿಸಿದವರಿದ್ದಾರೆ, ಸೋತ ಮತ್ತು ಸೋಲುತ್ತಿರುವವರೂ ಇದ್ದಾರೆ. ಈಚೆಗೆ ಅದಮ್ಯ ರಂಗಸಂಸ್ಕೃತಿ ಟ್ರಸ್ಟ್‌ನವರು ಕೆ.ಎಚ್‌. ಕಲಾಸೌಧದಲ್ಲಿ ಮಹಾಕವಿ ಕಾಳಿದಾಸನ “ಮೇಘದೂತ’ ಕಾವ್ಯವನ್ನು ರಂಗಕ್ಕೆ ಅಳವಡಿಸಿದ್ದರು.

ಇದರ ರಂಗರೂಪ ಪ್ರೊ. ನಾರಾಯಣ ಘಟ್ಟ ಅವರದು. ಕಾವ್ಯದ ವಾಚನಕ್ಕೆ ಕಿವಿಗೊಡುವಾಗ ಕೇಳುಗರಲ್ಲಿ ಚಿತ್ರಗಳು ಕಟ್ಟಿಕೊಳ್ಳುತ್ತವೆ. ಇಲ್ಲಿ ಕಲ್ಪಿಸಿಕೊಳ್ಳಲಿಕ್ಕೆ ಅಡೆತಡೆ ಇಲ್ಲ. ಕವಿಯೂ ಹಾಗೆಯೇ ಮೇಘವೊಂದನ್ನು ಪಾತ್ರವನ್ನಾಗಿ ಕಡೆಯುತ್ತಾನೆ. ಅದಕ್ಕೆ ಮಾತು ದಕ್ಕಿಸಿಕೊಡುತ್ತಾನೆ. ತನ್ನ ಪ್ರತಿಭೆ ಮೆರೆಯುತ್ತಾನೆ. ಪ್ರೊ. ನಾರಾಯಣ ಘಟ್ಟ ಮತ್ತು ನಿರ್ದೇಶಕ ಮಾಲತೇಶ ಬಡಿಗೇರ್‌ ಇಬ್ಬರ ಹೆಣಿಗೆ ಈ “ಮೇಘದೂತ ದರ್ಶನ’.

ರಂಗರೂಪ ಕಾರರು ಸಾಧ್ಯವಾದಷ್ಟೂ ಸಂಸ್ಕೃತದ ಬನಿಯನ್ನ ಕನ್ನಡಕ್ಕೆ ತರುವಲ್ಲಿ ಯಶಸ್ವಿ ಯಾಗಿದ್ದಾರೆ. ಅವುಗಳನ್ನು ದೃಶ್ಯವಾಗಿ ಕಟ್ಟುವಾಗ ಮಾಲತೇಶ ಬಡಿಗೇರ್‌, ಕಾಳಿದಾಸನ ಪಾತ್ರಗಳ ಜೊತೆಗೆ ಆತನ ದೃಶ್ಯ ಜಗತ್ತನ್ನು ರಂಗಪರಿಕರಗಳ ಕಲೆಗಾರಿಕೆಯಲ್ಲಿ ಕಟ್ಟಿದ್ದಾರೆ. ಇದೊಂದು ರೀತಿ ರಂಗರೂಪಕಾರರ ಮತ್ತು ನಿರ್ದೇಶಕರ ಜುಗಲ್‌ಬಂದಿ ಇದ್ದಂತೆ ಕಾಣುತ್ತದೆ. ಇದರ ಪರಿಕ್ರಮ ಕಿವಿ ಮತ್ತು ಕಣ್ಣುಗಳಿಗೆ ಹಿತವಾಗಿತ್ತು.

ಆದರೆ, ನಡುನಡುವೆ ಇಡೀ ಪ್ರಯೋಗವನ್ನು ಹಾಡು ಕುಣಿತಗಳಿಂದಲೇ ಕಟ್ಟುತ್ತಾ ಹೋದದ್ದು ಒಂದೇ ತೆರ ಎಂದು ಅನಿಸತೊಡಗಿತು. ಸ್ಥಾಯಿಭಾವಗಳು ಬೇರೆಬೇರೆಯಾದರೂ ಹಾಡುಗಳು ಮತ್ತು ಅದರ ಲಯ ಅವುಗಳನ್ನು ಪೂರಾ ಆವರಿಸಿ ಕೊಂಡಂತೆ ಅನಿಸಿತು. ಮಾತು ಮತ್ತು ಹಾಡಿನಲ್ಲಿರುವ ವರ್ಣನಾ ಭಾಗಗಳನ್ನು ಮತ್ತೆ ವಿಭಾಗಿಸಿಕೊಂಡು ಮೌನ, ಯಾತನೆ ಮತ್ತು ದುಃಖಕ್ಕೆ ಹಾಡಲ್ಲದ ಒಂದು ಭಾವ ದಕ್ಕಿಸಿಕೊಟ್ಟಿದ್ದರೆ, ನಾಟಕ ಮತ್ತಷ್ಟು ಗಾಢ ಅನಿಸುತ್ತಿತ್ತು. ಆದರೆ, ಒಂದು ಯಕ್ಷನ ವಿರಹ ಲೋಕವನ್ನು ಅಭಿನಯ ಮತ್ತು ತಮ್ಮ ಕಲೆಗಾರಿಕೆಯ ರಂಗಪರಿಕರಗಳ ಚಿತ್ರಗಳಲ್ಲಿ ಕಟ್ಟಿ ಕಾಣಿಸಿದ್ದು, ಬಹಳಕಾಲ ಮನಸ್ಸಿನಲ್ಲಿ ಉಳಿಯುತ್ತವೆ.

* ಎನ್‌.ಸಿ. ಮಹೇಶ್‌

ಟಾಪ್ ನ್ಯೂಸ್

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.