ಅತ್ತೆಗೊಂದು ಕಾಲ ಸೊಸೆಗೊಂದು ಕಾಲ…


Team Udayavani, Oct 9, 2019, 4:05 AM IST

attegondu

ಅತ್ತೆ-ಮಾವ, ಸೊಸೆಯನ್ನು ವಾತ್ಸಲ್ಯದಿಂದ ನಡೆಸಿಕೊಂಡರೆ, ಭವಿಷ್ಯದಲ್ಲಿ ಅವರಿಗೂ ಸೊಸೆಯಿಂದ ಮಗಳ ಪ್ರೀತಿಯೇ ದಕ್ಕುತ್ತದೆ. ಅದರ ಬದಲು, ಸೊಸೆಗೆ ಇವರು ಎರಡೇಟು ಹಾಕಿ ಶಕ್ತಿ ತೋರಿಸಿದರೆ, ಮುಂದೊಮ್ಮೆ ಆಕೆ ಮಾತೇ ಆಡಿಸದೆ ಬಾಕಿ ತೀರಿಸುತ್ತಾಳೆ!

ತಂದೆ-ತಾಯಿಯರನ್ನು ನೋಡಿಕೊಳ್ಳದ ಮಗ-ಸೊಸೆಯರ ಬಗೆಗಿನ ಸಾಕಷ್ಟು ಕತೆಗಳು, ವೃದ್ಧರ ಬವಣೆಗಳನ್ನು ಬಿಂಬಿಸುವ ಚಿತ್ರಗಳು, ಧಾರಾವಾಹಿಗಳನ್ನು ನೋಡುತ್ತಿರುತ್ತೇವೆ. ನಮ್ಮದೇ ಪರಿಚಿತರ, ಬಂಧುಗಳ ಮನೆಯಲ್ಲಿ ಇಂಥ ಘಟನೆಗಳು, ನಡೆಯುತ್ತಿರಬಹುದು. ಇದರ ಮೂಲಕಾರಣ ಏನಿರಬಹುದು ಅಂತ ಯಾವಾಗಲೂ ನನ್ನಲ್ಲಿ ಪ್ರಶ್ನೆ ಇತ್ತು. ಆದರೆ, ಕೆಲವೊಂದಷ್ಟು ಘಟನೆಗಳು ಆ ಪ್ರಶ್ನೆಯನ್ನು ಮತ್ತೂಂದು ದೃಷ್ಟಿಕೋನದಿಂದ ನೋಡುವಂತೆ ಮಾಡಿದವು.

ಆಶಾ, 18 ವರ್ಷಕ್ಕೇ ಓದು ನಿಲ್ಲಿಸಿ ಗಂಡನ ಮನೆ ಸೇರಿದಳು. ಮನೆಯಲ್ಲಿ ವರದಕ್ಷಿಣೆಗಾಗಿ ಕಿರುಕುಳ. ಹೊಟ್ಟೆ ತುಂಬ ಊಟ-ತಿಂಡಿಯೂ ಇಲ್ಲ. ಕೆಲಸಗಳು ಮಾಡಿದಷ್ಟೂ ಮುಗಿಯವು. ಮಕ್ಕಳ ಲಾಲನೆ ಪಾಲನೆಗೂ ಕೂಡುಕುಟುಂಬದಲ್ಲಿ ಸಮಯವಿಲ್ಲ. ಕಡೆಗೊಂದು ದಿನ ಇವಳ ಅತ್ತೆ ಮಾವಂದಿರು ಹಾಸಿಗೆ ಹಿಡಿದರೆ, ಅವರ ಬಗ್ಗೆ ಯಾವ ಪ್ರೀತಿ, ಕನಿಕರ ಇವಳಲ್ಲಿ ಮೂಡಲು ಸಾಧ್ಯ? ಇವಳೇಕೆ ಅವರ ಸೇವೆ ಮಾಡಬೇಕು?

ಲಕ್ಷ್ಮೀಗೆ 22ನೇ ವಯಸ್ಸಿನಲ್ಲಿ ಮದುವೆಯಾಯ್ತು. ಎರಡು ವರ್ಷದೊಳಗೆ ಮುದ್ದಾದ ಮಗಳಿಗೆ ತಾಯಿಯಾದಳು. ಚಿಕ್ಕ ಚೊಕ್ಕ ಸಂಸಾರ. ಮಗುವಿಗೆ ಒಂದು ವರ್ಷವಾಗುವುದರೊಳಗೆ ಗಂಡ ಅಪಘಾತದಲ್ಲಿ ತೀರಿಕೊಂಡ. ಅವಳ ಅತ್ತೆ-ಮಾವ ಸಾಕಷ್ಟು ವಿದ್ಯಾವಂತರಾಗಿದ್ದೂ, ಸೊಸೆಗೆ ದೊರಕಬೇಕಾಗಿದ್ದ ದುಡ್ಡೆಲ್ಲವನ್ನೂ ಕಿತ್ತುಕೊಂಡು, ಮದುವೆಯಲ್ಲಿ ಅವಳ ತಾಯಿ ಮನೆಯವರು ನೀಡಿದ್ದ ಬಂಗಾರವನ್ನೂ ಎಗರಿಸಿ, ತಮ್ಮ ಮೂಲಮನೆಗೆ ಮರಳಿದರು.

ಸೊಸೆ – ಮಗುವಿನ ಜವಾಬ್ದಾರಿ ತಮ್ಮದೆಂದು ತಿಳಿಯಲೇ ಇಲ್ಲ. ಆದರೆ, ಲಕ್ಷ್ಮಿಯ ಅದೃಷ್ಟ ಚೆನ್ನಾಗಿತ್ತು. ತಂದೆ-ತಾಯಿ, ಸೋದರಮಾವಂದಿರ ಸಹಕಾರದಿಂದ ಆಕೆ ನೌಕರಿ ಹಿಡಿದು, ತನ್ನ ಜೀವನವನ್ನು ಹೊಸದಾಗಿ ಪ್ರಾರಂಭಿಸಿದಳು. ಈಗ ಕಾಲಚಕ್ರ ಉರುಳಿದೆ, “ನಮಗೆ ವಯಸ್ಸಾಗಿದೆ, ಇದ್ದೊಬ್ಬ ಮಗನ ಹೆಂಡತಿ ನಮ್ಮನ್ನು ನೋಡಿಕೊಳ್ಳಲಿ’ ಅಂತ ಆಕೆಯ ಅತ್ತೆ-ಮಾವ ಇವಳ ಮನೆಗೆ ಬಂದಿದ್ದಾರೆ. ಕಹಿ ನೆನಪುಗಳು ಎದೆಯೊಳಗೇ ಉಳಿದಿರುವಾಗ, ಅತ್ತೆ-ಮಾವನ ಸೇವೆ ಮಾಡಬೇಕೆಂಬ ಮನಸ್ಸು ಲಕ್ಷ್ಮಿಗೆ ಬರಲು ಸಾಧ್ಯವಾ?

ಸುಜಾತಾ ಬಹಳ ಚುರುಕು, ಬುದ್ಧಿವಂತೆ. ವೈದ್ಯಕೀಯ ಪದವಿಯ ನಂತರ ಮದುವೆಯಾಯಿತು. ಮುಂದೆ ಮಕ್ಕಳಾದಾಗ ನೋಡಿಕೊಳ್ಳಲು ಯಾರೂ ಇಲ್ಲವೆಂದು ಕೆಲಸ ಬಿಟ್ಟಳು. ಅತ್ತೆ-ಮಾವ, ತಮ್ಮ ಬೇರೆ ಮಕ್ಕಳಿಗೆ ಬೇಕಾಗುವ ಸೌಲಭ್ಯಗಳನ್ನೆಲ್ಲ ಇವಳ ಗಂಡನಿಂದ ಮಾಡಿಸಿಕೊಳ್ಳುತ್ತಿದ್ದರು. ಹೆಣ್ಮಕ್ಕಳಿಗೆ ಒಡವೆ, ಸೀರೆಗಳನ್ನು ಕೊಳ್ಳುವಾಗ ಸೊಸೆಗೆ ಕೊಡಿಸಲು ಅವರಿಗೆ ಮನಸು ಬರುತ್ತಿರಲಿಲ್ಲ. ಈಗ ಅತ್ತೆಮಾವಂದಿರು ಅಶಕ್ತರಾಗಿದ್ದಾರೆ. ಸುಜಾತಳಿಗೆ ಹಳೆಯದೆಲ್ಲ ಚೆನ್ನಾಗಿ ನೆನಪಿದೆ. ಸೊಸೆ ನಮ್ಮನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಅಂತ ಅವರೀಗ ದೂರುತ್ತಿದ್ದಾರೆ!

ಈ ರೀತಿಯ ಉದಾಹರಣೆ ಗಳು ಸಾಕಷ್ಟಿವೆ. ಇಂಥದ್ದನ್ನೆಲ್ಲ ನೋಡಿ ನೋಡಿ, ಇತ್ತೀಚಿನ ಹುಡುಗಿಯರು ಗಂಡನ ಮನೆಯವರಿಂದ ಸ್ವಲ್ಪ ದೂರವೇ ಇರುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಮುಂಚಿನಂತೆ ಕೂಡು ಕುಟುಂಬಗಳ ಸಂಖ್ಯೆ ಕಡಿಮೆಯಾಗುತ್ತಿರುವುದಕ್ಕೆ, ಮಗ-ಸೊಸೆ ಒಂದು ಕಡೆ, ಅತ್ತೆ-ಮಾವ ಬೇರೊಂದು ಕಡೆ ಅಂತ ಆಗಿರುವುದಕ್ಕೆ, ಸೊಸೆಯನ್ನು ಹೊರಗಿನವರಂತೆ ಕಾಣುವ ಗಂಡನ ಮನೆಯವರ ನಡವಳಿಕೆಯೇ ಕಾರಣ ಅಂದರೂ ತಪ್ಪಲ್ಲ. ಮದುವೆಯಾದ ಹೊಸತರಲ್ಲಿ ಸೊಸೆಯನ್ನು ಮನೆಯವಳಂತೆ ಕಾಣದೆ, ವೃದ್ಧಾಪ್ಯದಲ್ಲಿ ಅವಳಿಂದ ಆರೈಕೆಯನ್ನು ಬಯಸುವುದು ಎಷ್ಟು ಸರಿ? ನೀವೇ ಹೇಳಿ…

* ಡಾ. ಉಮಾಮಹೇಶ್ವರಿ ಎನ್‌.

ಟಾಪ್ ನ್ಯೂಸ್

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.