ಮಾರ್ಜಾಲ ಮತ್ಸ್ಯ!

ಒಂದು ಮೀನಿನ ಕತೆ !

Team Udayavani, Oct 27, 2019, 5:00 AM IST

z-1

ಕ್ಯಾಟ್‌ಫಿಶ್‌ ಎಂದಾಕ್ಷಣ ಎಲ್ಲರೂ ಯೋಚಿಸುವುದು, ಇದೇನಿದು ಬೆಕ್ಕಿನಂತೆ ಇರುವ ಮೀನೇ? ಈ ಮೀನಿಗೆ ಬೆಕ್ಕಿನಂತಹ ವಿಶಿಷ್ಟವಾದ ಮೀಸೆ ಇರುವುದರಿಂದಲೇ ಇದಕ್ಕೆ ಕ್ಯಾಟ್‌ಫಿಶ್‌ ಎಂಬ ಹೆಸರು ಬಂದಿದೆ.ಸೈಲ್ಲೂರಿ ಫಾರ್ಮೀಸ್‌ ಪ್ರಬೇಧದ ಸೈಲ್ಯೂರಿಡೀ ಕುಟುಂಬಕ್ಕೆ ಸೇರಿದ ಈ ಮೀನುಗಳು ಸಿಹಿನೀರಿನಲ್ಲಿ ಹೆಚ್ಚಾಗಿ ಬದುಕುತ್ತವೆ. ಓಂಪಾಕ್‌ ಬೈಮ್ಯಾಕ್ಯುಲೇಟಸ್‌ಎಂಬುದು ಇದರ ವೈಜ್ಞಾನಿಕ ಹೆಸರಾಗಿದ್ದು, ಮೀಸೆಮೀನು, ಗೊಡ್ಲೆ, ದೊಮ್ಮೆ ಮೀನು ಎಂದೂ ಇದನ್ನು ಕರೆಯಲಾಗುತ್ತದೆ. ಏಷ್ಯಾದ ಅಫ್ಘಾನಿಸ್ತಾನ, ಚೀನ, ಭಾರತ, ಥಾಯ್ಲೆಂಡ್‌ ದೇಶಗಳಲ್ಲಿ ಕಂಡುಬರುವುದರೊಂದಿಗೆ ಕರ್ನಾಟಕದ ಕಾವೇರಿ ನದೀಪಾತ್ರ ಮತ್ತು ಒಳನಾಡಿನ ಅನೇಕ ಕೆರೆಗಳಲ್ಲಿ ಇದು ಕಂಡುಬರುತ್ತದೆ.

ಕ್ಯಾಟ್‌ಫಿಶ್‌ ಗರಿಷ್ಠ 30 ಸೆಂ. ಮೀ. ಉದ್ದ ಬೆಳೆಯುವ ಮಧ್ಯಮಗಾತ್ರದ ಮೀನು. ಪಕ್ಕದಿಂದ ಪಕ್ಕಕ್ಕೆ ಚಪ್ಪಟೆಯಾದ ದೇಹವನ್ನು ಹೊಂದಿರುವುದರೊಂದಿಗೆ ಬಾಯಿಯ ಬಳಿ ಎರಡು ಜೊತೆ ಮೀಸೆಗಳು. ಇವುಗಳಲ್ಲಿ ಒಂದು ಜೊತೆ ಮೀಸೆ ಯು ಮೀನಿನ ಗುದದ್ವಾರದ ಈಜುರೆಕ್ಕೆಯವರೆಗೂ ಚಾಚುವಂತೆ ಇರುತ್ತದೆ. ಎದೆಯ ಈಜುರೆಕ್ಕೆಯ ಮೇಲ್ಭಾಗದಲ್ಲಿರುವ ಕಪ್ಪು ಮಚ್ಚೆ, ಕಪ್ಪು ಬಣ್ಣದ ಪಟ್ಟೆಗಳು ಮತ್ತು ಕಪ್ಪು ಅಂಚುಳ್ಳ ಈಜು ರೆಕ್ಕೆ, ಕವಲೊಡೆದ ಬಾಲದ ಈಜುರೆಕ್ಕೆ, ಕ್ಯಾಟ್‌ಫಿಶ್‌ ಮೀನಿನ ಪ್ರಮುಖ ಗುಣಲಕ್ಷಣಗಳು. ಕ್ಯಾಟ್‌ ಫಿಶ್‌ ಭಾರತದೇಶದ ತಳಿ ಅಲ್ಲ. ಇದರ ಮೂಲ ಆಫ್ರಿಕಾದೇಶ. ಈ ಮೀನನ್ನು 1980ರ ದಶಕದಲ್ಲಿ ಜಲಚರ ಸಾಗಾಣಿಕಾ ನೆಪದಲ್ಲಿ ಭಾರತಕ್ಕೆ ತರಲಾಯಿತು. ಈ ಮೀನು ನೀರಿನಲ್ಲಿರುವ ಅಮ್ಲಜನಕವನ್ನು ಬಳಸಿಕೊಳ್ಳುವುದರೊಂದಿಗೆ ವಾತಾವರಣದ ಅಮ್ಲಜನಕವನ್ನೂ ತನ್ನ ಉಸಿರಾಟಕ್ಕಾಗಿ ಬಳಸಿಕೊಳ್ಳುವುದರಿಂದ ವಾತಾವರಣದಲ್ಲಿನ ಆಮ್ಲಜನಕದ ಕೊರತೆಗೂ ಕಾರಣವಾಗುತ್ತದೆ.

ಸಿಹಿನೀರಿನ ಪರಿಸರದಲ್ಲಿ ಅವು ವಾಸಿಸುತ್ತವಾದರೂ ಆಳವಿಲ್ಲದ, ಹರಿಯುವ ನೀರಿನಲ್ಲಿ ಹೆಚ್ಚಾಗಿ ಬದುಕುತ್ತವೆ. ಇವುಗಳು ಕೇವಲ ನೀರಿನ‌ಲ್ಲಷ್ಟೇ ಅಲ್ಲದೆ ಅತ್ಯಂತ ಕಡಿಮೆ ತೇವಾಂಶವಿರುವ ಹಸಿ ಮಣ್ಣಿನಲ್ಲೂ ಹಲವು ತಿಂಗಳು ಗಳ ಕಾಲ ಜೀವಂತವಾಗಿದ್ದು ಮತ್ತೆ ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ನೀರಿರುವೆಡೆಗೆ ಚಲಿಸುವ ವಿಶೇಷ ಗುಣಗಳನ್ನು ಹೊಂದಿವೆ. ಇವು ನೀರಿನ ಸೆಲೆಯಿರುವೆಡೆಗಳಲಿ, ಗುಹೆಗಳ ಒಳಗೂ ವಾಸಿಸಬಲ್ಲವಾದ್ದರಿಂದ ಕೆಸರಿನಲ್ಲಿ ಹೆಚ್ಚಾಗಿ ಜೀವಿಸುತ್ತವೆ. ದಕ್ಷಿಣ ಯುನೈಟೆಡ್‌ ಸೇrಟ್‌ನಲ್ಲಿ ಕ್ಯಾಟ್‌ ಫಿಶ್‌ ಪ್ರಭೇದಗಳನ್ನು ಮಣ್ಣಿನ ಬೆಕ್ಕು, ಪೊಲಿವಾಗ್ಸ್‌ ಅಥವಾ ಚಕ್ಲೆಹೆಡ್ಸ್‌ನಂತಹ ವಿವಿಧ ಪ್ರಾದೇಶಿಕ ಹೆಸರುಗಳಿಂದ ಕರೆಯಲಾಗುತ್ತದೆ. ದಕ್ಷಿಣಕನ್ನಡದ ಕರಾವಳಿಯಲ್ಲಿ ಇದರ ಹೆಸ ರು ಮೊರಂಟೆ ಮೀನು!

ನಿಷೇಧಿತ ಉದ್ಯಮ
ಕ್ಯಾಟ್‌ಫಿಶ್‌ ಬೆಳೆಸಲು ಸಾಕಾಣಿಕೆದಾರರು ಅನೇಕ ಬಗೆಯತ್ಯಾಜ್ಯ ವಸ್ತುಗಳನ್ನು ಸಾಕುವ ಕೆರೆಅಥವಾ ಹೊಂಡಗಳಿಗೆ ತಂದು ಸುರಿಯಲಾಗುತ್ತದೆ. ಕಸಾಯಿಖಾನೆ, ಚಿಕನ್‌ ಮತ್ತು ಮಟನ್‌ ಅಂಗಡಿಗಳ ತ್ಯಾಜ್ಯಗಳನ್ನು ಮತ್ತು ರೇಷ್ಮೆ ಹುಳುಗಳನ್ನು ಬೇಯಿಸಿ ಈ ಮೀನುಗಳಿಗೆ ಆಹಾರವಾಗಿ ನೀಡಲಾಗುತ್ತದೆ. ಹೀಗಾಗಿ, ಹೊಂಡಗಳ ಸುತ್ತಲಿನ ಪರಿಸರ ಸದಾ ಕೆಟ್ಟ ವಾಸನೆಯಿಂದ ಕೂಡಿರುತ್ತ ದೆ. ಈ ಕಾರಣದಿಂದಾಗಿ ಈ ಮೀನುಗಳ ಸಾಕಣೆ ಮತ್ತು ಮಾರಾಟವನ್ನು 2000 ರಲ್ಲಿ ಕಾನೂನಾತ್ಮಕವಾಗಿ ನಿಷೇಧಿಸಲಾಗಿದೆ.ಕೃಷಿಕರೇನಾದರೂ ಈ ಮೀನನ್ನು ಸೂಕ್ತ ನಿಯಮಾನುಸಾರ ಸಾಕುವುದಿದ್ದಲ್ಲಿ ವಿಶೇಷ ಕಾಳಜಿಯೊಂದಿಗೆ ಅದರಲ್ಲೂ ಭಾರತೀಯ ಮೂಲದ ಕ್ಯಾಟ್‌ಫಿಶ್‌ ತಳಿಯ ಮರಿಗಳನ್ನು ಕೇವಲ ಮೀನುಗಾರಿಕಾ ಇಲಾಖೆಯ ಅಧಿಕೃತ ಕೇಂದ್ರಗಳಿಂದ ಪಡೆದುಕೊಂಡು ಸಾಕಬಹುದಾಗಿದೆ.

ಸಂತೋಷ್‌ ರಾವ್‌

ಟಾಪ್ ನ್ಯೂಸ್

Tragedy: ಜ್ಯೂಸ್ ಕುಡಿದು ಅನಾರೋಗ್ಯಕ್ಕೆ ಒಳಗಾಗಿದ್ದ ಜನಪ್ರಿಯ ಗಾಯಕಿ ನಿಧನ… ಕೊಲೆ ಶಂಕೆ

Tragedy: ಜ್ಯೂಸ್ ಕುಡಿದು ಅನಾರೋಗ್ಯಕ್ಕೆ ಒಳಗಾಗಿದ್ದ ಜನಪ್ರಿಯ ಗಾಯಕಿ ನಿಧನ… ಕೊಲೆ ಶಂಕೆ

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

Belagavi: ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

1-horoscope

Horoscope: ಆರಿಸಿದ ಮಾರ್ಗದ ಬಗೆಗೆ ಆತಂಕ ಬೇಡ, ಉದ್ಯೋಗ ಅರಸುತ್ತಿರುವವರಿಗೆ ಶುಭ ವಾರ್ತೆ

MUDA: ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಹೊಸ ಸಂಕಷ್ಟ

MUDA: ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಹೊಸ ಸಂಕಷ್ಟ

canada

Canada ವಲಸಿಗರಿಗೆ ನಿಯಂತ್ರಣ: ಭಾರತೀಯರಿಗೆ ಸಂಕಷ್ಟ ಸಾಧ್ಯತೆ

Vimana 2

Immigration process;ಬೆಂಗಳೂರು ವಿಮಾನ ನಿಲ್ದಾಣದಲ್ಲಿನ್ನು ಕ್ಷಣಗಳಲ್ಲೇ ವಲಸೆ ಪ್ರಕ್ರಿಯೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಣ್ಣಿಗೆ ಬಟ್ಟೆ ಕಟ್ಟಿಕೊಂಡವಳ ಕಷ್ಟ, ಕೋಪ ಮತ್ತು ಕನವರಿಕೆ

ಕಣ್ಣಿಗೆ ಬಟ್ಟೆ ಕಟ್ಟಿಕೊಂಡವಳ ಕಷ್ಟ, ಕೋಪ ಮತ್ತು ಕನವರಿಕೆ

Gudavi Pakshidhama: ದೂರದೊಂದು ತೀರದಿಂದ… ಸೈಬೀರಿಯಾದಿಂದ ಶಿವಮೊಗ್ಗದ ಗುಡವಿಗೆ!

Gudavi Pakshidhama: ದೂರದೊಂದು ತೀರದಿಂದ… ಸೈಬೀರಿಯಾದಿಂದ ಶಿವಮೊಗ್ಗದ ಗುಡವಿಗೆ!

2

Short Stories: ಸಣ್ಕತೆ ಸಾಮ್ರಾಜ್ಯ: ಪುಟ್‌ ಪುಟ್‌ ಕತೆ, ಪುಟಾಣಿ ಕತೆ…

ಹಸಿರು ವನಸಿರಿ ಸಂಡೂರಿನ ಸಿರಿ

ಹಸಿರು ವನಸಿರಿ ಸಂಡೂರಿನ ಸಿರಿ

Vinayak Torvi: ಸ್ವರ ಸಾಮ್ರಾಟರಿಗೆ ಅಮೃತ ಮಹೋತ್ಸವ 

Vinayak Torvi: ಸ್ವರ ಸಾಮ್ರಾಟರಿಗೆ ಅಮೃತ ಮಹೋತ್ಸವ 

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

2-mudhola

ತಿಮ್ಮಾಪುರ ಮಾತಿಗೆ ಯತ್ನಾಳ‌ ಪರೋಕ್ಷ ಟಾಂಗ್;ನಾನು ಕಾನೂನಿಗೆ ಗೌರವ ನೀಡುವ ನಿಯತ್ತಿನ ನಾಯಿ

Tragedy: ಜ್ಯೂಸ್ ಕುಡಿದು ಅನಾರೋಗ್ಯಕ್ಕೆ ಒಳಗಾಗಿದ್ದ ಜನಪ್ರಿಯ ಗಾಯಕಿ ನಿಧನ… ಕೊಲೆ ಶಂಕೆ

Tragedy: ಜ್ಯೂಸ್ ಕುಡಿದು ಅನಾರೋಗ್ಯಕ್ಕೆ ಒಳಗಾಗಿದ್ದ ಜನಪ್ರಿಯ ಗಾಯಕಿ ನಿಧನ… ಕೊಲೆ ಶಂಕೆ

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

Private ವಿಶ್ವವಿದ್ಯಾನಿಲಯ ಪ್ರತ್ಯೇಕ ಪ್ರವೇಶ ಪರೀಕ್ಷೆ ಇಲ್ಲ

ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

Belagavi: ಕೊಳಲು ನುಡಿಸುತ್ತಿರುವಾಗಲೇ ಮಿದುಳಿನ ಯಶಸ್ವಿ ಶಸ್ತ್ರಚಿಕಿತ್ಸೆ

1-horoscope

Horoscope: ಆರಿಸಿದ ಮಾರ್ಗದ ಬಗೆಗೆ ಆತಂಕ ಬೇಡ, ಉದ್ಯೋಗ ಅರಸುತ್ತಿರುವವರಿಗೆ ಶುಭ ವಾರ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.