![Mangaluru: ರಾಹುಲ್ ಗಾಂಧಿಯನ್ನು ಪೇಜಾವರ ಶ್ರೀ ಟೀಕಿಸಿದ್ದು ಸರಿಯಲ್ಲ : ಪದ್ಮರಾಜ್](https://www.udayavani.com/wp-content/uploads/2024/07/padmaraj-415x291.jpg)
ರಾಜಧಾನಿಯಲ್ಲಿ ಸಂಭ್ರಮದ ದೀಪಾವಳಿ
Team Udayavani, Oct 29, 2019, 3:05 AM IST
![rajadhaniyalli](https://www.udayavani.com/wp-content/uploads/2019/10/rajadhaniyalli-620x327.jpg)
ಬೆಂಗಳೂರು: ನಗರದಲ್ಲಿ ಬೆಳಕಿನ ಹಬ್ಬ ದೀಪಾವಳಿಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಹಬ್ಬದ ಮೊದಲೆರಡು ದಿನ ಮನೆಗಳ ಹೊಸ್ತಿಲಲ್ಲಿ ಬಣ್ಣ ಬಣ್ಣದ ರಂಗೋಲಿ ಹಾಕಿ, ಬಾಳೆಕಂಬ, ತೋರಣ ಅಲಂಕರಿಸಿ, ಸಂಜೆಯಾಗುತ್ತಲೇ ಬೆಳಕಿನ ಸಂಕೇತವಾದ ದೀಪಗಳನ್ನು ಹಚ್ಚಿ ದೀಪಾವಳಿಯನ್ನು ಸಂಭ್ರಮಿಸಿದರು. ಈ ಬಾರಿ ದೀಪಾವಳಿ ಅಮವಾಸ್ಯೆ ಎರಡು ದಿನ ಬಂದಿದ್ದು, ಅನುಕೂಲಕ್ಕೆ ತಕ್ಕಂತೆ ಎರಡೂ ದಿನಗಳು ಮನೆಗಳಲ್ಲಿ, ವ್ಯಾಪಾರ ವಹಿವಾಟು ಮಾಡುವ ಸ್ಥಳಗಳಲ್ಲಿ ಲಕ್ಷ್ಮೀ ಪೂಜೆ ನಡೆದವು. ಪೂಜೆ ಬಳಿಕ ಪಟಾಕಿ ಹೆಚ್ಚಿ ಖುಷಿಪಟ್ಟರು.
ಭಾನುವಾರ ಸಂಜೆ ಹೆಚ್ಚು ಸಮಯ ನಗರದೆಲ್ಲೆಡೆ ಮಳೆಯಾಗಿದ್ದರಿಂದ ಪಟಾಕಿ ಹೊಡೆಯಲು ಕಾದಿದ್ದವರಿಗೆ ನಿರಾಸೆಯಾಯಿತು. ಹೀಗಾಗಿಯೇ, ಸೋಮವಾರ ಸಂಜೆಯಾಗುತ್ತಲೇ ಪಟಾಕಿ ಸದ್ದು ಜೋರಿತ್ತು. ಇನ್ನು ಹಬ್ಬದ ಕೊನೆಯ ದಿನ ಮಂಗಳವಾರ ಬಲಿಪಾಡ್ಯಮಿ ಇರುವುದರಿಂದ ಹೆಚ್ಚಿನ ಮಂದಿ ಪಟಾಕಿ ಸದ್ದು ಕೇಳುವ ಸಾಧ್ಯತೆಗಳಿವೆ.
ಮಾರುಕಟ್ಟೆ ವಹಿವಾಟು ಜೋರು: ಹಬ್ಬ ಹಾಗೂ ಲಕ್ಷ್ಮೀ ಪೂಜೆ ಹಿನ್ನೆಲೆ ಸೋಮವಾರವೂ ಕೂಡಾ ಬೆಳಗ್ಗೆಯಿಂದಲೇ ನಗರದ ಬಹುತೇಕ ಮಾರುಕಟ್ಟೆಗಳು ವ್ಯಾಪಾರ ವಹಿವಾಟು ಜೋರಿತ್ತು. ಭಾನುವಾರ ಜೋರು ಮಳೆಯಾದ ಪರಿಣಾಮ ಹೂವಿನ ದರ ತುಸು ಕಡಿಮೆಯಾಗಿತ್ತು. ಕೆ.ಆರ್.ಮಾರುಕಟ್ಟೆ, ಮಲ್ಲೇಶ್ವರ ಮಾರುಕಟ್ಟೆ, ಗಾಂಧಿ ಬಜಾರ್ನಲ್ಲಿ ಜನದಟ್ಟಣೆ ಹೆಚ್ಚಿತ್ತು. ಜತೆಗೆ ಸೋಮವಾರವೂ ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ, ಮೆಲ್ಸೇತುವೆ ಕೆಳಗೆ ಬಾಳೆಕಂಬ, ಮಾವಿನಸೊಪ್ಪು, ಹೂವಿನ ವ್ಯಾಪಾರ ನಡೆಯಿತು.
ಟಾಪ್ ನ್ಯೂಸ್
![Mangaluru: ರಾಹುಲ್ ಗಾಂಧಿಯನ್ನು ಪೇಜಾವರ ಶ್ರೀ ಟೀಕಿಸಿದ್ದು ಸರಿಯಲ್ಲ : ಪದ್ಮರಾಜ್](https://www.udayavani.com/wp-content/uploads/2024/07/padmaraj-415x291.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![11-bng](https://www.udayavani.com/wp-content/uploads/2024/07/11-bng-150x90.jpg)
Bengaluru: ಅಕ್ರಮ ಆಸ್ತಿ: ಬೆಸ್ಕಾಂ ಎಇಇಗೆ 3 ವರ್ಷ ಸಜೆ,1 ಕೋಟಿ ರೂ. ದಂಡ ವಿಧಿಸಿದ ಕೋರ್ಟ್
![10-bng](https://www.udayavani.com/wp-content/uploads/2024/07/10-bng-150x90.jpg)
Bengaluru: ಶೋಕಿಲಾಲನಿಗೆ ನಕಲಿ ಎ.ಕೆ.47 ಕೊಡಿಸಿದ್ದ ವ್ಯಕ್ತಿಗೆ ನೋಟಿಸ್
![9-crime](https://www.udayavani.com/wp-content/uploads/2024/07/9-crime-150x90.jpg)
Bengaluru: ಬೈಕ್ಗೆ ಲಾರಿ ಡಿಕ್ಕಿ : ರಿಯಲ್ ಎಸ್ಟೇಟ್ ಏಜೆಂಟ್ ಸಾವು
![8-bng](https://www.udayavani.com/wp-content/uploads/2024/07/8-bng-150x90.jpg)
Bengaluru: ಹಳೇ ದ್ವೇಷಕ್ಕೆ ವ್ಯಕ್ತಿ ಕೊಲೆ ಪ್ರಕರಣ: ಇಬ್ಬರು ಆರೋಪಿಗಳ ಬಂಧನ
![7-bng](https://www.udayavani.com/wp-content/uploads/2024/07/7-bng-150x90.jpg)
Bengaluru: ವಿಚಾರಣಾಧೀನ ಕೈದಿಯ ಗುದದ್ವಾರದಲ್ಲಿ 2 ಮೊಬೈಲ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.