ಇನ್ನು ರೈಲ್ವೇ ಟಿಕೆಟ್ ಶುಲ್ಕ ರಿಫಂಡ್ ಗೂ ಮೊದಲು ಒಟಿಪಿ ಬರುತ್ತದೆ!

IRCTC ಅಧಿಕೃತ ಏಜೆಂಟ್ ಮೂಲಕ ಮಾಡಲಾದ ಟಿಕೆಟ್ ಬುಕ್ಕಿಂಗ್ ಗಳಿಗೆ ಮಾತ್ರ ಇದು ಅನ್ವಯ

Team Udayavani, Oct 29, 2019, 6:54 PM IST

Indian-Railways-New-726

ನವದೆಹಲಿ: ನೀವು ಕಾಯ್ದಿರಿಸಿದ ರೈಲ್ವೇ ಟಿಕೆಟ್ ಅನ್ನು ಕ್ಯಾನ್ಸಲ್ ಮಾಡಿದಲ್ಲಿ ಅಥವಾ ತತ್ಕಾಲ್ ನಲ್ಲೇ ಉಳಿದ ಟಿಕೆಟ್ ಗಳಿಗೆ ಹಣ ಹಿಂದಿರುಗಿಸುವ ವಿಧಾನವನ್ನು ಭಾರತೀಯ ರೈಲ್ವೇ ಇನ್ನಷ್ಟು ಪಾರದರ್ಶಕಗೊಳಿಸಿದೆ. ಒಟಿಪಿ ಆಧಾರಿತ ಹಣ ವಾಪಸಾತಿ ವಿಧಾನಕ್ಕೆ ಮಂಗಳವಾರದಂದು ಚಾಲನೆ ನೀಡಿರುವ ಭಾರತೀಯ ರೈಲ್ವೇ ಈ ಮೂಲಕ ನೀವು ಅಧಿಕೃತ ಐ.ಆರ್.ಸಿ.ಟಿ.ಸಿ. ಏಜೆಂಟರ ಮೂಲಕ ಕಾಯ್ದಿರಿಸಿದ ರೈಲ್ವೇ ಟಿಕೆಟ್ ಅನ್ನು ರದ್ದುಗೊಳಿಸಿದರೆ ಅಥವಾ ನಿಮ್ಮ ಪ್ರಯಾಣ ಖಾತ್ರಿಯಾಗದಿದ್ದರೆ ಆ ಸಂದರ್ಭದಲ್ಲಿ ಒಟಿಪಿ ಸಂದೇಶವನ್ನು ಪ್ರಯಾಣಿಕರ ಮೊಬೈಲ್ ಗೆ ಕಳುಹಿಸುವ ವ್ಯವಸ್ಥೆ ಇದಾಗಿದೆ. ಟಿಕೆಟ್ ಶುಲ್ಕವನ್ನು ರಿಫಂಡ್ ಮಾಡುವ ಸಂದರ್ಭದಲ್ಲೇ ಈ ಒಟಿಪಿ ಸಂದೇಶವೂ ಸಹ ಬರುತ್ತದೆ.

ಭಾರತೀಯ ರೈಲ್ವೇಯ ಪಿ.ಎಸ್.ಯು. ಮತ್ತು ಐ.ಆರ್.ಸಿ.ಟಿ.ಸಿ. ಜಂಟಿಯಾಗಿ ಈ ಹೊಸ ವ್ಯವಸ್ಥೆಯನ್ನು ಜಾರಿಗೊಳಿಸಿವೆ. ಐ.ಆರ್.ಸಿ.ಟಿ.ಸಿ. ಅಧಿಕೃತ ಏಜೆಂಟರುಗಳ ಮೂಲಕ ಬುಕ್ಕಿಂಗ್ ಮಾಡಿದ ಟಿಕೆಟ್ ಗಳಿಗೆ ಮಾತ್ರವೇ ಈ ಒಟಿಪಿ ಸಂದೇಶ ಬರುತ್ತದೆ.

ಟಿಕೆಟ್ ಅಲಭ್ಯತೆಯಿಂದ ಅಥವಾ ಇನ್ಯಾವುದೇ ಕಾರಣಗಳಿಂದ ಒಂದು ವೇಳೆ ನಿಮ್ಮ ಉದ್ದೇಶಿತ ರೈಲ್ವೇ ಪ್ರಯಾಣವು ರದ್ದುಗೊಂಡಲ್ಲಿ, ಪ್ರಯಾಣಿಕರು ಅಧಿಕೃತ ಏಜೆಂಟರ ಮೂಲಕ ಟಿಕೆಟ್ ಬುಕ್ಕಿಂಗ್ ಮಾಡುವ ಸಂದರ್ಭದಲ್ಲಿ ನೀಡುವ ಮೊಬೈಲ್ ನಂಬರ್ ಗೆ ಒಟಿಪಿ ಸಂದೇಶವನ್ನು ಕಳುಹಿಸಲಾಗುತ್ತದೆ. ಈ ಒಟಿಪಿ ಸಂದೇಶವನ್ನು ನೀವು ಟಿಕೆಟ್ ಬುಕ್ಕಿಂಗ್ ಮಾಡಿರುವ ಏಜೆಂಟ್ ಅವರಿಗೆ ತೋರಿಸುವ ಮೂಲಕ ನೀವು ನಿಮ್ಮ ಟಿಕೆಟ್ ಹಣವನ್ನು ಮರಳಿ ಪಡೆಯಬಹುದಾಗಿರುತ್ತದೆ.

ಒಟಿಪಿ ಆಧಾರಿತ ಟಿಕೆಟ್ ಶುಲ್ಕ ಹಿಂದಿರುಗಿಸುವಿಕೆ ವಿಧಾನವು ಹೆಚ್ಚು ಪಾರದರ್ಶಕತೆಯಿಂದ ಕೂಡಿದ್ದಾಗಿದೆ ಎಂದು ನಂಬಲಾಗುತ್ತಿದೆ. ಯಾಕೆಂದರೆ ಈ ವಿಧಾನದಲ್ಲಿ ಪ್ರಯಾಣಿಕರಿಗೆ ತಮ್ಮ ಟಿಕೆಟ್ ಶುಲ್ಕದಲ್ಲಿ ಎಷ್ಟು ಮೊತ್ತ ರಿಫಂಡ್ ಆಗಿ ಏಜೆಂಟರ ಕೈಸೇರಿದೆ ಎಂಬ ನಿಖರವಾದ ಮಾಹಿತಿ ಲಭ್ಯವಾಗುತ್ತದೆ. ಇದರಿಂದಾಗಿ ಟಿಕೆಟ್ ರಿಫಂಡ್ ವಿಚಾರದಲ್ಲಿ ಯಾವುದೇ ರೀತಿಯ ಗೊಂದಲಗಳಿಗೆ ಇಲ್ಲಿ ಅವಕಾಶವಿರುವುದಿಲ್ಲ.

ಈ ವ್ಯವಸ್ಥೆಯ ಉಪಯೋಗವನ್ನು ಪಡೆದುಕೊಳ್ಳಲು ರೈಲ್ವೇ ಪ್ರಯಾಣಿಕರು ತಾವು IRCTCಯ ಅಧಿಕೃತ ಏಜೆಂಟರ ಬಳಿ ಟಿಕೆಟ್ ಕಾಯ್ದಿರಿಸುವ ಸಂದರ್ಭದಲ್ಲಿ ತಮ್ಮ ಸರಿಯಾದ ಮೊಬೈಲ್ ನಂಬರನ್ನು ನೀಡುವುದು ಅಗತ್ಯವಾಗಿರುತ್ತದೆ, ಮಾತ್ರವಲ್ಲದೇ ಏಜೆಂಟರುಗಳು ಈ ಮೊಬೈಲ್ ಸಂಖ್ಯೆಯನ್ನು ಸರಿಯಾಗಿ ರಿಜಿಸ್ಟರ್ ಮಾಡಿಕೊಂಡಿದ್ದಾರೆ ಎಂಬುದನ್ನೂ ಸಹ ಖಚಿತಪಡಿಸಿಕೊಳ್ಳುವುದು ಪ್ರಯಾಣಿಕರ ಜವಾಬ್ದಾರಿಯಾಗಿರುತ್ತದೆ.

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Stock market :ವಿದೇಶಿ ಬಂಡವಾಳ ಹಿಂತೆಗೆತ: ಸತತ 8ನೇ ದಿನವೂ ಸೆನ್ಸೆಕ್ಸ್‌ ಕುಸಿತ

Stock market :ವಿದೇಶಿ ಬಂಡವಾಳ ಹಿಂತೆಗೆತ: ಸತತ 8ನೇ ದಿನವೂ ಸೆನ್ಸೆಕ್ಸ್‌ ಕುಸಿತ

Nirmala-Seetaraman

New Income Tax Bill: ಹೊಸ ಆದಾಯ ತೆರಿಗೆ ಮಸೂದೆ ಮಂಡಿಸಿದ ಕೇಂದ್ರ ವಿತ್ತ ಸಚಿವೆ

RBI-Logo

Less Burden: ಆರ್‌ಬಿಐ ರೆಪೋ ದರ ಕಡಿತದ ಬೆನ್ನಲ್ಲೇ ಗೃಹ ಸಾಲಗಳಿಗೂ ರಿಲೀಫ್

Stock Market: ಷೇರುಪೇಟೆ ಸೂಚ್ಯಂಕ 448 ಅಂಕ ಏರಿಕೆ; ಜಿಗಿತಕ್ಕೆ ಈ 3 ಅಂಶಗಳು ಕಾರಣ!

Stock Market: ಷೇರುಪೇಟೆ ಸೂಚ್ಯಂಕ 448 ಅಂಕ ಏರಿಕೆ; ಜಿಗಿತಕ್ಕೆ ಈ 3 ಅಂಶಗಳು ಕಾರಣ!

gold

Gold-Silver: ಬೆಂಗಳೂರಲ್ಲಿ 10 ಗ್ರಾಂ ಚಿನ್ನಕ್ಕೆ 710 ರೂ. ಇಳಿಕೆ, ಬೆಳ್ಳಿ ಏರಿಕೆ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.