ಕರ್ನಾಟಕ ರಾಜ್ಯೋತ್ಸವಕ್ಕೆ ಪರಿಸರಸ್ನೇಹಿ ಬಾವುಟ
ನಗರದ ಶಾಲೆಗಳಲ್ಲಿ ಹಾರಾಡಲಿವೆ ಬೀಜ ಧ್ವಜ !
Team Udayavani, Oct 31, 2019, 4:14 PM IST
ಮಹಾನಗರ : ಪ್ಲಾಸ್ಟಿಕ್ ಬಾವುಟಗಳನ್ನು ತ್ಯಜಿಸಿ ಬಟ್ಟೆಯ ಬಾವುಟ ಗಳನ್ನು ಹಿಡಿದಿದ್ದಾಯಿತು. ಇದೀಗ ಈ ರಾಜ್ಯೋತ್ಸವ ಸಂದರ್ಭ ಮಂಗಳೂರಿನ ಶಾಲೆಗಳಲ್ಲಿ ಬೀಜ ಬಾವುಟಗಳು ಹಾರಾಡಲಿವೆ.
ವಿಶೇಷವೆಂದರೆ, ಬಾವುಟಗಳೇ ಸುಂದರ ಸಸ್ಯಗಳಾಗಿ ರೂಪು ತಳೆದು ಕಡಲನಾಡಿನ ಜನತೆಯ ಉಸಿರಾಟಕ್ಕೆ ಶುದ್ಧ ವಾಯು, ಸೇವನೆಗೆ ಆಹಾರ ಒದಗಿಸಲಿವೆ!
ಪರಿಸರಸ್ನೇಹಿ ಚಟುವಟಿಕೆಗಳನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತಿರುವ ನಗರದ ಇಕೋ ಫ್ರೆಂಡ್ಸ್ ತಂಡವು ಈ ಕರ್ನಾಟಕ ರಾಜ್ಯೋತ್ಸವಕ್ಕೆ ಬೀಜ ಬಾವುಟಗಳನ್ನು ತಯಾರಿಸಿದ್ದು, ಇದೇ ಮೊದಲ ಬಾರಿಗೆ ನಗರದ ಶಾಲೆಗಳಲ್ಲಿ ಬೀಜ ಬಾವುಟವನ್ನು ಅರಳಿಸಲು ಪ್ರೇರಣೆ ನೀಡಿದೆ.
ಬಾವುಟ ತಯಾರಿ
ಕನ್ನಡ ಬಾವುಟದ ಬಣ್ಣವಾದ ಕೆಂಪು, ಹಳದಿ ಬಣ್ಣದ ಪೇಪರ್ಗಳಲ್ಲಿ ಈ ಬಾವುಟಗಳನ್ನು ತಯಾರಿಸಲಾಗಿದೆ. ಬಾವುಟವು 3 ಇಂಚು ಉದ್ದ ಮತ್ತು 2 ಇಂಚು ಅಗಲ ಇರುತ್ತದೆ. ಮುಂದಿನ ಭಾಗದಲ್ಲಿ ಎರಡು ಬಣ್ಣದ ಪೇಪರ್ ಗಳು, ನಡುವೆ ತರಕಾರಿ ಬೀಜಗಳು, ಹಿಂದಿನ ಭಾಗದಲ್ಲಿ ಬಿಳಿ ಬಣ್ಣದ ಬಣ್ಣದ ಪೇಪರ್ಗಳನ್ನು ಅಂಟಿಸಿ ಅದಕ್ಕೆ ಪಿನ್ ಮಾಡಲಾಗಿದೆ. ಪೇಪರ್ಗಳು ಮಣ್ಣಿನಲ್ಲಿ ಸುಲಭವಾಗಿ ಕರಗುವ ಗುಣ ಹೊಂದಿರುವುದರಿಂದ ಮಕ್ಕಳು ಬಾವುಟ ಬಳಕೆ ಮಾಡಿದ ನಂತರ ಈ ಪೇಪರ್ಗಳನ್ನು ಪಾಟ್ ಅಥವಾ ಮಣ್ಣಿನಲ್ಲಿ ನೇರವಾಗಿ ಹಾಕಬಹುದು. ಕೆಲವು ದಿನಗಳ ಅನಂತರ ಈ ಪೇಪರ್ ಮಣ್ಣಿನಲ್ಲಿ ಕರಗಿ ಬೀಜ ಮೊಳಕೆ ಯೊಡೆಯಲು ಆರಂಭಿಸುತ್ತದೆ. ಪ್ರತಿ ದಿನ ನೀರು ಹಾಕುತ್ತಿರಬೇಕು. ಕ್ರಮೇಣ ಮೊಳಕೆಯೊಡೆದ ಬೀಜ ಗಿಡವಾಗಿ ರೂಪು ತಳೆದು ಫಲಭರಿತವಾಗುತ್ತದೆ ಎಂಬುದು ತಂಡದ ಯೋಜನೆ.
ತರಕಾರಿ ಬೀಜಗಳು
ಈ ಬಾರಿ ತರಕಾರಿ ಬೀಜಗಳನ್ನೇ ಬಾವುಟದಲ್ಲಿ ಇಡಲಾಗಿದೆ. ಟೊಮೇ ಟೊ, ಬೆಂಡೆ, ಸೌತೆ ಮತ್ತು ಹರಿವೆ ಬೀಜಗಳನ್ನು ಬಾವುಟದೊಳಗಿಟ್ಟು ಬಾವುಟ ತಯಾರಿಸಲಾಗಿದೆ. ಈ ಬೀಜಗಳು ಬಹುಬೇಗನೆ ಮೊಳಕೆಯೊಡೆಯುವುದರಿಂದ ಮಕ್ಕಳಿಗೂ ಇಷ್ಟವಾಗಬಹುದು ಎನ್ನುವ ಉದ್ದೇಶ ತಂಡದ್ದು.
ಪ್ಲಾಸ್ಟಿಕ್ ತ್ಯಜಿಸಿ ಪರಿಸರ ಉಳಿಸಿ
ರಸ್ತೆ ಬದಿಗಳಲ್ಲಿ, ಕೆಲ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಬಾವುಟಗಳನ್ನು ಮಾರಾಟ ಮಾಡುವುದರಿಂದ ಅದು ರಸ್ತೆಯಲ್ಲಿ ಬಿದ್ದು ಅಥವಾ ಕಸದ ತೊಟ್ಟಿಗಳ ಮೂಲಕ ಭೂಮಿ ಒಡಲನ್ನು ಪರಿಸರಕ್ಕೆ ಹಾನಿ ಉಂಟು ಮಾಡುತ್ತಿದೆ.
ಇದರಿಂದ ಜೀವಸಂಕುಲದ ಮೇಲೆಯೂ ಪರಿಣಾಮ ಉಂಟಾಗುತ್ತದೆ. ಜೈವಿಕ ಕಾಗದ ಬೀಜ ಬಾವುಟಗಳು ಪರಿಸರಕ್ಕೆ ಉತ್ತಮ ಎಂಬ ಉದ್ದೇಶದಿಂದ ಈ ಬೀಜ ಬಾವುಟ ತಯಾರಿಸಲಾಗಿದೆ.
5 ಶಾಲೆ; 500 ಬೀಜ ಬಾವುಟ ಹಾರಾಟ ಪ್ರಾಯೋಗಿಕವಾಗಿ ಈ ವರ್ಷ ಬೀಜದ ಬಾವುಟಗಳನ್ನು ತಯಾರಿಸಲಾಗಿದ್ದು, ನಗರದ 5 ಶಾಲೆಗಳ ಮಕ್ಕಳಿಗೆ ಗುರುವಾರ ಬಾವುಟಗಳನ್ನು ಉಚಿತವಾಗಿ ನೀಡಲಾಗುತ್ತದೆ. ಉರ್ವ ಕೆನರಾ ಪ್ರಾಥಮಿಕ ಶಾಲೆ, ಪ್ರೌಢ ಶಾಲೆ, ಉರ್ವ ಸರಕಾರಿ ಶಾಲೆ, ಡೊಂಗರಕೇರಿ ಕೆನರಾ ಶಾಲೆ, ಕದ್ರಿ ಸರಕಾರಿ ಶಾಲೆಗಳಲ್ಲಿ ನ. 1ರ ಕರ್ನಾಟಕ ರಾಜ್ಯೋತ್ಸವದಂದು ಈ ಬಾವುಟಗಳು ಹಾರಾಡಲಿವೆ. ಈಗಾಗಲೇ 600 ಬಾವುಟಗಳನ್ನು ತಯಾರಿಸಲಾಗಿದ್ದು, ಈ ಪೈಕಿ 500 ಬಾವುಟಗಳನ್ನು ತಲಾ 100ರಂತೆ 5 ಶಾಲೆಗಳಿಗೆ ನೀಡಲಾಗುತ್ತದೆ. ಉಳಿದ 100 ಬಾವುಟಗಳನ್ನು ಮಣ್ಣಗುಡ್ಡೆ ಸಾವಯವ ಸಂತೆಯಲ್ಲಿ ಇಟ್ಟು ಸಾರ್ವಜನಿಕರಿಗೆ ಉಚಿತವಾಗಿ ನೀಡಲಾಗುವುದು ಎನ್ನುತ್ತಾರೆ ತಂಡದ ಸದಸ್ಯರು.
ಪರಿಸರ ಸ್ನೇಹಿ ಆಚರಣೆ
ಪರಿಸರಸ್ನೇಹಿ ರಾಜ್ಯೋತ್ಸವ ಆಚರಿಸುವ ಉದ್ದೇಶದಿಂದ ಬೀಜ ಬಾವುಟಗಳನ್ನು ತಯಾರಿಸಲಾಗಿದೆ. 500 ಬಾವುಟಗಳನ್ನು ಶಾಲಾ ಮಕ್ಕಳಿಗೆ ಉಚಿತವಾಗಿ ನೀಡಲಾಗುವುದು. ಮುಂದೆ ಆ. 15ರಂದು ಶಾಲೆ ಗಳಲ್ಲೇ ಬೀಜ ಬಾವುಟ ತಯಾರಿಸುವಂತೆ ಪ್ರೇರೇಪಿಸುವ ಉದ್ದೇಶವಿದೆ.
– ರಾಜೇಶ್, ಇಕೋ ಫ್ರೆಂಡ್ಸ್
ಗ್ರೂಪ್
ಧನ್ಯಾ ಬಾಳೆಕಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಕಿರಿದಾಗುತ್ತಿದೆ ಪಣಂಬೂರು ಬೀಚ್! ಇನ್ನೂ ಖಚಿತವಾಗದ ಕಾರಣ
Biological Park: ಪಿಲಿಕುಳಕ್ಕೆ ಪೆಂಗ್ವಿನ್, ಅನಕೊಂಡ ತರಿಸುವ ಮಹತ್ವದ ನಿರ್ಧಾರ
High Court: ಒಂದೇ ದಿನ 503 ಪ್ರಕರಣ ವಿಚಾರಣೆ ನಡೆಸಿದ ನ್ಯಾ| ನಾಗಪ್ರಸನ್ನ
MSEZ: ಜೆಬಿಎಫ್ಗೆ ಭೂಮಿ ಕೊಟ್ಟವರಿಗೆ ಜಿಎಂಪಿಎಲ್ನಲ್ಲಿ ಉದ್ಯೋಗ
Worship: ಕರಾವಳಿಯೆಲ್ಲೆಡೆ ಅನಂತಪದ್ಮನಾಭ ವ್ರತ ಸಂಪನ್ನ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Ex MLA ವೆಂಕಟರೆಡ್ಡಿ ಮುದ್ನಾಳ ಅಂತಿಮ ದರ್ಶನ ಪಡೆದ ವಿಜಯೇಂದ್ರ
Thirthahalli: ಕಾರ್ಮಿಕರಿಗೆ ಕಿಟ್ ವಿತರಿಸಿದ ಆರಗ ಜ್ಞಾನೇಂದ್ರ
Stock Market: ಷೇರುಪೇಟೆ ಸೂಚ್ಯಂಕ ಜಿಗಿತ-83,000 ಅಂಕಗಳ ದಾಖಲೆ ಮಟ್ಟದ ಏರಿಕೆ
Upendra: ಸಿನಿರಂಗದಲ್ಲಿ ಗಂಡಸರಿಗೂ ಶೋಷಣೆ ಆಗಿದೆ- ಉಪೇಂದ್ರ
Leopard: ಎಲೆಕ್ಟ್ರಾನಿಕ್ ಸಿಟಿ ಎನ್ಟಿಟಿಎಫ್ ಆವರಣ ಬಳಿ ತಡರಾತ್ರಿ ಚಿರತೆ ಪ್ರತ್ಯಕ್ಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.