ರಂಗಸಿರಿ ದಸರ ಯಕ್ಷ ಪಯಣ
Team Udayavani, Nov 1, 2019, 3:10 AM IST
ದಶಮಾನೋತ್ಸವದ ಸಂದರ್ಭದಲ್ಲಿರುವ ಬದಿಯಡ್ಕದ ರಂಗಸಿರಿ ಸಾಂಸ್ಕೃತಿಕ ವೇದಿಕೆಯ ವತಿಯಿಂದ ದಸರ ಯಕ್ಷ ಪಯಣವನ್ನು ಸಂಪನ್ನಗೊಂಡಿತು.ಹತ್ತು ದಿನಗಳ ಕಾಲ ನಡೆದ ಈ ಪಯಣವು ಹೊಸದೊಂದು ದಾಖಲೆಯಾಗಿದೆ. ತಿರುಗಾಟದಲ್ಲಿ ಪುರಾಣ ಕತೆ, ಸ್ವಯಂಪ್ರಭೆ, ಚಕ್ರವರ್ತಿ ದಶರಥ, ಬಬ್ರುವಾಹನ, ಶಂಖರಾಸುರ ಕಾಳಗ, ಕಾಳಿಂಗ ಮರ್ದನ, ಏಕಾದಶಿ ದೇವಿ ಮಹಾತ್ಮೆ, ಯಜ್ಞ ಸಂರಕ್ಷಣೆ, ಸುದರ್ಶನ ವಿಜಯ, ಸುಧನ್ವ ಮೋಕ್ಷ, ಗಜೇಂದ್ರ ಮೋಕ್ಷ ಮೊದಲಾದ ಪುಣ್ಯಕಥಾ ಭಾಗಕ್ಕೆ ಒತ್ತು ನೀಡಲಾಗಿತ್ತು. ಸಂಚಾಲಕ ಶ್ರೀಶ ಕುಮಾರ ಪಂಜಿತ್ತಡ್ಕ, ಯಕ್ಷಗುರು ಬಾಯಾರು ಸೂರ್ಯನಾರಾಯಣ ಪದಕಣ್ಣಾಯ ಮಾರ್ಗದರ್ಶನದಲ್ಲಿ ಕಾಸರಗೋಡು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಯಕ್ಷಗಾನದ ಸಂಪನ್ನ ಪಸರಿಸಿತು. ಭಾಷೆ ಸಂಸ್ಕೃತಿಯನ್ನು ಉಳಿಸುವ ನಿಟ್ಟಿನಲ್ಲಿ “ರಂಗಸಿರಿ ಸಾಂಸ್ಕೃತಿಕ ವೇದಿಕೆ’ ರಂಗಕ್ಕಿಳಿದೆಯೆಂದರೂ ತಪ್ಪಗಲಾರದು. ರಂಗದಲ್ಲಿ ಬಾಲ ವಿಧ್ಯಾರ್ಥಿಗಳು ಹಾಗೂ ಹಿರಿಯ ಕಲಾವಿದರು ರಂಗಕ್ಕೆ ಕಳೆಯನ್ನಿತ್ತರು. ಅಂತು ಈ 10 ದಿನಗಳ ತಿರುಗಾಟ ಕಲಾಭಿಮಾನಿಗಳಲ್ಲಿ ಯಕ್ಷಗಾನ ಕಲೆ ಇನ್ನೂ ಉಚ್ಛ್ರಾಯಸ್ಥಿತಿಯಲ್ಲಿದೆ ಎನ್ನುವುದನ್ನು ಸಾಬೀತುಪಡಿಸಿತು.
– ಪ್ರಸಾದ ಮೈರ್ಕಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.