ಈಗ ಚುನಾವಣೆ ನಡೆದರೂ ಅತಂತ್ರ ಸ್ಥಿತಿ: ಎಚ್‌ಡಿಕೆ ಭವಿಷ್ಯ

ನಾನು ಸರಕಾರ ಅಥವಾ ಬಿಎಸ್‌ವೈ ಆಪ್ಪಿಕೊಂಡಿಲ್ಲ ;ಸರಕಾರದ ಪ್ರವಾಹ ನಿರ್ವಹಣೆ ನನಗೆ ಸಮಾಧಾನ ತಂದಿಲ್ಲ

Team Udayavani, Nov 2, 2019, 7:30 PM IST

021119kpn90

ಬೆಂಗಳೂರು: ರಾಜ್ಯದಲ್ಲಿ ಈಗ ಮತ್ತೆ ವಿಧಾನಸಭೆ ಚುನಾವಣೆ ನಡೆದರೂ ಅತಂತ್ರ ಫ‌ಲಿತಾಂಶವೇ ಬರುತ್ತದೆ. ಯಾವೊಂದು ಪಕ್ಷಕ್ಕೂ ಬಹುಮತ ಬರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಪ್ರಸ್‌ಕ್ಲಬ್‌ ಆಫ್ ಬೆಂಗಳೂರು ಮತ್ತು ಬೆಂಗಳೂರು ವರದಿಗಾರರ ಕೂಟದ ವತಿಯಿಂದ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಸರಕಾರ ಹೆಚ್ಚು ದಿನ ಉಳಿಯಲ್ಲ ಎಂದು ಬಿಜೆಪಿ ಸಚಿವರೇ ಹೇಳುತ್ತಿದ್ದಾರೆ. ಹುಬ್ಬಳ್ಳಿಯಲ್ಲಿ ಬಿಜೆಪಿ ಆಂತರಿಕ ಸಭೆಯಲ್ಲಿ ಯಡಿಯೂರಪ್ಪ ಅವರು ನನಗೆ ಮುಖ್ಯಮಂತ್ರಿ ಹುದ್ದೆ ಬೇಕಿರಲಿಲ್ಲ ಎಂದು ಹೇಳಿದ್ದಾರೆ. ಇದು ರಾಜ್ಯರಾಜಕೀಯದ ಸದ್ಯದ ಸ್ಥಿತಿ ಎಂದು ಹೇಳಿದರು.

ನನಗೆ ಜನರ ಹಿತ ಮುಖ್ಯ. ಹೀಗಾಗಿ ತತ್‌ಕ್ಷಣಕ್ಕೆ ಚುನಾವಣೆ ಬೇಡ ಎಂಬುದು ನನ್ನ ಅನಿಸಿಕೆ. ಆದರೆ ಬಿಜೆಪಿಯವರೇ ಡಿಸೆಂಬರ್‌, ಫೆಬ್ರವರಿ ಒಳಗೆ ಚುನಾವಣೆಗೆ ಹೋಗುವ ಮೂಡ್‌ನ‌ಲ್ಲಿದ್ದಾರೆ. ಓರ್ವ ಸಚಿವರು ಯಾವುದೇ ಅನಿರೀಕ್ಷಿತ ಘಟನೆಗಳು ನಡೆಯದೆ ಸರಕಾರ ಇದ್ದರೆ ಜನವರಿ ವೇಳೆಗೆ ಹೊಸ ನೀತಿ ಜಾರಿಗೊಳಿಸಲಾಗುವುದು ಎಂದು ತಿಳಿಸಿದ್ದಾರೆ. ಇದರ ಆರ್ಥ ಅವರಿಗೆ ಸರಕಾರ ಉಳಿವಿನ ಬಗ್ಗೆ ನಂಬಿಕೆ ಇಲ್ಲ ಎಂದು ತಾನೆ ಎಂದು ಪ್ರಶ್ನಿಸಿದರು.

ನೆರೆ ಪರಿಸ್ಥಿತಿ ನಿರ್ವಹಣೆ: ಸಮಾಧಾನ ತಂದಿಲ್ಲ
ಪ್ರವಾಹ ಪರಿಹಾರ ವಿಚಾರದಲ್ಲಿ ರಾಜ್ಯ ಸರಕಾರದ ಕ್ರಮ ನನಗೆ ಸಮಾಧಾನ ತಂದಿಲ್ಲ. ಸಂಕಷ್ಟದಲ್ಲಿರುವವರಿಗೆ ನೆರವಾಗಿ ನಾನು ನಿಮ್ಮ ಜತೆ ಇದ್ದೇನೆ ಎಂದು ಸರಕಾರ ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಹೇಳಲು ಬಯಸುತ್ತೇನೆ ಎಂದು ಹೇಳಿದರು.

ಎಲ್ಲಿದ್ದಾರೋ ಅಶೋಕ್‌
ಕಂದಾಯ ಸಚಿವ ಆರ್‌.ಅಶೋಕ್‌ ಅವರು ಎಲ್ಲಿದ್ದಾರೋ ಗೊತ್ತಿಲ್ಲ. ಎಷ್ಟು ಕಡೆ ಹೋಗಿದ್ದಾರೋ ಎಲ್ಲೆಲ್ಲಿ ಅಧಿಕಾರಿಗಳ ಸಭೆ ನಡೆಸಿದ್ದಾರೋ ಅರ್ಥವೇ ಆಗುತ್ತಿಲ್ಲ. ಅವರಿಗೂ ಮುಖ್ಯಮಂತ್ರಿಯವರಿಗೂ ಸಮನ್ವಯ ಇಲ್ಲ. ಕಂದಾಯ ಸಚಿವರಾಗಿ ಅವರು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಆರೋಪಿಸಿದರು.

ಸರಕಾರದ ಬಗ್ಗೆ ಮೃದು ಧೋರಣೆ ತಳೆದಿಲ್ಲ
ಜೆಡಿಎಸ್‌ನ ಶಾಸಕರು ಬಿಜೆಪಿ ಹೋಗುವುದನ್ನು ತಡೆಯಲು ಅಥವಾ ನನ್ನ ಮೇಲೆ ಐಎಂಎ, ದೂರವಾಣಿ ಕದ್ದಾಲಿಕೆ ಪ್ರಕರಣದಲ್ಲಿ ಸಿಬಿಐ, ಐಟಿ ದಾಳಿ ಮಾಡಿಸುತ್ತಾರೆ ಎಂಬ ಭಯದಿಂದ ನಾನು ಬಿಜೆಪಿ ಸರಕಾರದ ಬಗ್ಗೆ ಮೃದು ಧೋರಣೆ ತಳೆದಿಲ್ಲ. ನಾನು ಈ ಸರಕಾರ ಅಥವಾ ಯಡಿಯೂರಪ್ಪ ಅವರನ್ನು ಅಪ್ಪಿಕೊಂಡಿಲ್ಲ. ಆದರ ಆಗತ್ಯವೂ ಇಲ್ಲ. 2008 ರಲ್ಲಿ ಇದೇ ಯಡಿಯೂರಪ್ಪ ವಿರುದ್ಧ ದಾಖಲೆ ಸಮೇತ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿದವನು ನಾನು ಎಂದರು.

ನಾನು ಮುಖ್ಯಮಂತ್ರಿಯಾಗಿದ್ದಾಗ 25 ಸಾವಿರ ಕೋಟಿ ರೂ.ಸಾಲ ಮನ್ನಾ ಮಾಡಿದ್ದೇನೆ. ರಾಜ್ಯದ ಎಲ್ಲ ತಾಲೂಕುಗಳಲ್ಲಿ ಎಷ್ಟೆಷ್ಟು ರೈತರ ಸಾಲ ಮನ್ನಾ ಆಗಿದೆ ಎಂಬುದರ ಬಗ್ಗೆ ಕ್ಷೇತ್ರಾವಾರು ಕೈಪಿಡಿ ಸಿದ್ಧ ಮಾಡುತ್ತಿದ್ದೇನೆ. ಇನ್ನೂ ಹಲವು ರೈತರ ಸಾಲ ಮನ್ನಾ ತಾಂತ್ರಿಕ ಕಾರಣಕ್ಕೆ ಆಗಿಲ್ಲ. ಅವರಿಗೆ ನೆರವಾಗಲು ವೆಬ್‌ಸೈಟ್‌ ಸಹ ಮಾಡಿ ಸಹಾಯವಾಣಿ ಪ್ರಾರಂಭಿಸಿದ್ದೇನೆ ಎಂದು ತಿಳಿಸಿದರು.

ಮಲೇಷ್ಯಾಕ್ಕೆ ಹೋಗುತ್ತಿಲ್ಲ
ಜೆಡಿಎಸ್‌ನ ಯಾವ ಶಾಸಕರು ಪಕ್ಷ ಬಿಡುವುದಿಲ್ಲ. ಎಲ್ಲವೂ ಊಹಾಪೋಹ. ನಾನೂ ಮಲೇಷ್ಯಾಕ್ಕೆ ಹೋಗುತ್ತಿಲ್ಲ, ಯಾವ ಶಾಸಕರನ್ನೂ ಕರೆದಿಲ್ಲ. ನಾನು ನನ್ನ ಮಗನ ಸಿನೆಮಾ ಕುರಿತು ಚರ್ಚೆಗೆ ಲಂಡನ್‌ಗೆ ಹೋಗುತ್ತಿದ್ದೇನೆ ಅಷ್ಟೇ. ಮದುವೆ ಸಮಾರಂಭದಲ್ಲಿ ಯಡಿಯೂರಪ್ಪ ಅವರಿಗೆ ಕೈ ಕುಲುಕಿದ ತತ್‌ಕ್ಷಣ ಎಲೆಕ್ಟ್ರಾನಿಕ್‌ ಮೀಡಿಯಾಗಳು ತಾವೇ ಊಹೆ ಮಾಡಿಕೊಂಡು ಸರಣಿ ಸುದ್ದಿ ಪ್ರಸಾರ ಮಾಡಿದರೆ ನಾನೇನು ಮಾಡಲಿ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ಅಮಿತ್‌ ಶಾ ಉತ್ತರಿಸಲಿ
ಬಿಜೆಪಿಯವರು ಮೊದಲು ಆಪರೇಷನ್‌ ಕಮಲ ಮಾಡಿಲ್ಲ, ಶಾಸಕರ ರಾಜೀನಾಮೆಗೂ ನಮಗೂ ಸಂಬಂಧ ಇಲ್ಲ ಎಂದು ಹೇಳಿದ್ದರು. ಸಮ್ಮಿಶ್ರ ಸರಕಾರ ಬೀಳಿಸಿ ಶ್ರಮಪಟ್ಟು ಎಂಟು ದಿನಗಳ ಕಾಲ ಕಾದು ಸರಕಾರ ರಚಿಸಿದರು. ಇದೀಗ ಹುಬ್ಬಳ್ಳಿಯ ಸಭೆಯಲ್ಲಿ ಯಡಿಯೂರಪ್ಪ ಅವರೇ ಸಮ್ಮಿಶ್ರ ಸರಕಾರವನ್ನು ಪತನಗೊಳಿಸಲು 17 ಮಂದಿ ಶಾಸಕರ ರಾಜೀನಾಮೆ ಕೊಡಿಸಿದೆವು. ಅವರನ್ನು ರಾಷ್ಟ್ರೀಯ ಅಧ್ಯಕ್ಷರೇ ಎರಡೂವರೆ ತಿಂಗಳು ಮುಂಬಯಿಯಲ್ಲಿಟ್ಟಿದ್ದರು. ನಮಗಾಗಿ ಅನರ್ಹಗೊಂಡವರು ಮನೆ ಮಕ್ಕಳು, ಮಡದಿ ಬಿಟ್ಟು ಹೋಗಿದ್ದರು ಎಂದು ಹೇಳಿದ್ದಾರೆ. ಇದಕ್ಕೆ ಅಮಿತ್‌ ಶಾ ಅವರೇ ಈಗ ಉತ್ತರಿಸಬೇಕು ಎಂದು ಆಗ್ರಹಿಸಿದ ಕುಮಾರಸ್ವಾಮಿ, ನಾವಂತೂ ಇದನ್ನೂ ಸುಪ್ರೀಂ ಕೋರ್ಟ್‌ ಗಮನಕ್ಕೆ ತರುತ್ತೇವೆ ಎಂದು ಹೇಳಿದರು.

ಟಾಪ್ ನ್ಯೂಸ್

Mokshita-Trivik

BBK11: ಬಿಗ್ ಬಾಸ್ ಮನೆಯಲ್ಲಿ ಈ ವರೆಗೆ ಸೈಲೆಂಟ್ ಆಗಿದ್ದ ‘ಪಾರು’ ವೈಲೆಂಟ್ ಆಗಿದ್ದೇಕೆ?

Puturu-Bike

Putturu: ಮುಕ್ರಂಪಾಡಿ ಸಮೀಪ ಅಪಘಾತ; ಓರ್ವ ಗಂಭೀರ

iskon-Thirupathi

Hoax Call: ತಿರುಪತಿಯಲ್ಲಿ ಹೋಟೆಲ್‌ಗಳ ಬಳಿಕ ಈಗ ಇಸ್ಕಾನ್‌ ದೇಗುಲಕ್ಕೂ ಬೆದರಿಕೆ ಸಂದೇಶ!

BYV-yathnal

Waqf Property: ಶಾಸಕ ಯತ್ನಾಳ್‌ ಆಕ್ರೋಶ ಬೆನ್ನಲ್ಲೇ ಬಿಜೆಪಿ ‘ವಕ್ಫ್ ತಂಡ’ ಪುನಾರಚನೆ

1-snehamayi

MUDA case;ದೂರಿಗೆ ಪೂರಕವಾಗಿ ಇ.ಡಿ.ಗೆ ‘ವಿಡಿಯೋ ಸಾಕ್ಷ್ಯ’ ನೀಡಿದ ಸ್ನೇಹಮಯಿ ಕೃಷ್ಣ

Beluru

Sagara: ಶರಾವತಿ ಮುಳುಗಡೆ ಸಂತ್ರಸ್ತರಿಗೆ ಸರ್ಕಾರದಿಂದ ಶೀಘ್ರವೇ ಪರಿಹಾರ: ಶಾಸಕ ಬೇಳೂರು

4

Panambur: ಮಾದಕ ವಸ್ತು ಸಾಗಾಟ-ಮಾರಾಟ ಪ್ರಕರಣ; ವಿದೇಶಿ ಪ್ರಜೆ ಸೇರಿ 6 ಆರೋಪಿಗಳ ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Khandre

Bidar;ವಿಮಾನಯಾನ ಪುನರಾರಂಭಕ್ಕೆ ಸಂಪುಟದ ಸಮ್ಮತಿ: ಸಚಿವ ಖಂಡ್ರೆ

BYV-yathnal

Waqf Property: ಶಾಸಕ ಯತ್ನಾಳ್‌ ಆಕ್ರೋಶ ಬೆನ್ನಲ್ಲೇ ಬಿಜೆಪಿ ‘ವಕ್ಫ್ ತಂಡ’ ಪುನಾರಚನೆ

1-snehamayi

MUDA case;ದೂರಿಗೆ ಪೂರಕವಾಗಿ ಇ.ಡಿ.ಗೆ ‘ವಿಡಿಯೋ ಸಾಕ್ಷ್ಯ’ ನೀಡಿದ ಸ್ನೇಹಮಯಿ ಕೃಷ್ಣ

1-a-ranji

Malayalam; ಪುರುಷನ ಮೇಲೆ ಲೈಂಗಿ*ಕ ದೌರ್ಜನ್ಯ!: ನಿರ್ದೇಶಕ ರಂಜಿತ್ ಮೇಲೆ ಪ್ರಕರಣ ದಾಖಲು

HK-Patil

Waqf Property: ವಿಜಯಪುರದ ರೈತರಿಗೆ ಕೊಟ್ಟಿರುವ ನೋಟಿಸ್‌ ವಾಪಸ್‌ಗೆ ಕ್ರಮ: ಸಚಿವ ಪಾಟೀಲ್

MUST WATCH

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

udayavani youtube

ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಹ*ತ್ಯೆಗೈದ ಆರೋಪಿತೆ ಸಹೋದರನೊಂದಿಗೆ ಮಾತಾಡಿದ ಆಡಿಯೋ

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

ಹೊಸ ಸೇರ್ಪಡೆ

Mokshita-Trivik

BBK11: ಬಿಗ್ ಬಾಸ್ ಮನೆಯಲ್ಲಿ ಈ ವರೆಗೆ ಸೈಲೆಂಟ್ ಆಗಿದ್ದ ‘ಪಾರು’ ವೈಲೆಂಟ್ ಆಗಿದ್ದೇಕೆ?

Puturu-Bike

Putturu: ಮುಕ್ರಂಪಾಡಿ ಸಮೀಪ ಅಪಘಾತ; ಓರ್ವ ಗಂಭೀರ

4

Belthangady: ಮನೆಯಿಂದ ನಗದು, ಚಿನ್ನಾಭರಣ ಕಳವು

3

Mangaluru: ಅಪಘಾತದ ಬಳಿಕ ಕಾರು ಚಾಲಕನಿಗೆ ಲೋಹದ ಪಂಚ್‌ ನಿಂದ ಹಲ್ಲೆ, ಪೆಪ್ಪರ್‌ ಸ್ಪ್ರೇ!

crime

Padubidri: ಪಾದಯಾತ್ರಿಗಳಿಗೆ ಮೋಟಾರು ಬೈಕ್‌ ಢಿಕ್ಕಿ; ಇಬ್ಬರಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.