![Jammu–Fire-LOC](https://www.udayavani.com/wp-content/uploads/2025/02/Jammu-Fire-LOC-415x249.jpg)
![Jammu–Fire-LOC](https://www.udayavani.com/wp-content/uploads/2025/02/Jammu-Fire-LOC-415x249.jpg)
Team Udayavani, Nov 7, 2019, 4:18 PM IST
ಗಂಗಾವತಿ: ಅಕ್ರಮ ಮರಳು ಸಾಗಿಸುವ ಟ್ರಾಕ್ಟರ್ ಗುದ್ದಿದ ಪರಿಣಾಮ ಶಾಲಾ ಬಾಲಕನೊರ್ವನ ತಲೆ ಎದೆ ಕಾಲಿಗೆ ತೀವ್ರವಾಗಿ ಗಾಯಗಳಾದ ಘಟನೆ ಢಣಾಪೂರದಲ್ಲಿ ಜರುಗಿದೆ.
ಮಾರುತಿ ತಂದೆ ನಿಂಗಪ್ಪ (11) ಎಂಬ ವಿದ್ಯಾರ್ಥಿ ಮಧ್ಯಾನ್ಹ ಊಟ ಬಿಡುವಿನ ವೇಳೆ ರಸ್ತೆಯಲ್ಲಿ ಸೈಕಲ್ ಮೇಲೆ ತೆರಳುವಾಗ ಹಿಂದಿನಿಂದ ಬಂದ ಮರಳು ತುಂಬಿದ ಟ್ರ್ಯಾಕ್ಟರ್ ಗುದ್ದಿದೆ. ಈ ಟ್ರಾಕ್ಟರ್ ಹೆಬ್ಬಾಳ ದಲ್ಲಿ ಅಕ್ರಮ ಮರಳು ಭರ್ತಿ ಮಾಡಿಕೊಂಡು ಗಂಗಾವತಿಗೆ ತೆರಳುತ್ತಿತ್ತು. ಇಲ್ಲಿ ಹಗಲು ರಾತ್ರಿ ಎನ್ನದೇ ತುಂಗಭದ್ರಾ ನದಿಯಿಂದ ಅಕ್ರಮ ಮರಳು ಸಾಗಿಸಲಾಗುತ್ತಿದೆ.ಇದರಿಂದ ಢಣಾಪೂರ, ಕಲ್ಗುಡಿ,ಹೆಬ್ಬಾಳ ಸೇರಿ ಸುತ್ತಲಿನ ಗ್ರಾಮಗಳ ಜನರಿಗೆ ತೊಂದರೆಯಾಗುತ್ತಿದೆ. ಹಲವು ಭಾರಿ ಕಂದಾಯ, ಪೊಲೀಸ್ ಇಲಾಖೆಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ.
ಸಿಂಗನಗುಂಡು ಬಳಿ ಅಕ್ರಮ ಮರಳು ಸಂಗ್ರಹ: ತಾಲೂಕಿನ ಸಿಂಗನಗುಂಡು ಬಳಿ 100ಕ್ಕೂ ಅಧಿಕ ಟ್ರಿಪ್ ಮರಳು ಅಕ್ರಮವಾಗಿ ಗುಡ್ಡದ ಹತ್ತಿರ ಸಂಗ್ರಹ ಮಾಡಲಾಗಿದ್ದು ಕಂದಾಯ,ಅರಣ್ಯ ಇಲಾಖೆ ಅಧಿಕಾರಿಗಳು ನೋಡಿಯೂ ನಿರ್ಲಕ್ಷ್ಯ ವಹಿಸಿದ್ದಾರೆಂದು ರೈತರು ಆರೋಪಿಸಿದ್ದಾರೆ.
Line of Control: ಭಾರತ, ಪಾಕ್ ಗಡಿಯಲ್ಲಿ ಗುಂಡಿನ ಚಕಮಕಿ: ಯಾವುದೇ ಅಪಾಯವಿಲ್ಲ
Inter Faith: ಅಂತರ್ಧರ್ಮೀಯ ವಿವಾಹಗಳು ತಪ್ಪಲ್ಲ: ಮಹಾರಾಷ್ಟ್ರ ಸಿಎಂ ಫಡ್ನವೀಸ್
Reprimand: ಕೆಲಸದಲ್ಲಿ ಅಧಿಕಾರಿಗಳು ಬೈದರೆ ಅದು ಕ್ರಿಮಿನಲ್ ಅಪರಾಧವಲ್ಲ: ಸುಪ್ರೀಂಕೋರ್ಟ್
Modern City: ದುಬಾೖ ಮಾದರಿ ದೇಶದಲ್ಲೂ ಫಿನ್ಟೆಕ್ ಸಿಟಿ ನಿರ್ಮಾಣ
Surathkal: ಆರು ಬಾರಿಯ ಚಾಂಪಿಯನ್, ಕಂಬಳ ವೀರ ಕಾನಡ್ಕ ದೂಜನಿಗೆ ಸಮ್ಮಾನ
You seem to have an Ad Blocker on.
To continue reading, please turn it off or whitelist Udayavani.