ಮದ್ಯ ಸೇವಿಸಿದರೆ ವಾಹನ ಸ್ಟಾರ್ಟೇ ಆಗಲ್ಲ!


Team Udayavani, Nov 12, 2019, 3:07 AM IST

madya-sevisi

ಬೆಂಗಳೂರು: ನೀವು ಮದ್ಯ ಸೇವಿಸಿ ವಾಹನ ಚಾಲನೆ ಮಾಡಲು ಮುಂದಾದರೆ ಈ ಸಾಧನ ಅವಕಾಶ ನೀಡುವುದಿಲ್ಲ! ಅಷ್ಟೇ ಅಲ್ಲ, ಈ ಸಾಧನದ ಕಣ್ತಪ್ಪಿಸಿ ವಾಹನ ಚಾಲನೆ ಮಾಡುವುದು ಅಸಾಧ್ಯ. ಇಂಥದ್ದೊಂದು ಸಾಧನವನ್ನು ಆಂಧ್ರಪ್ರದೇಶದ ವಿಜಯವಾಡ ಮೂಲದ ಖಾಸಗಿ ಸಂಸ್ಥೆಯ ಸಿಇಒ ರಾಮನಾಥ್‌ ಮಂದಲಿ ಎಂಬವರು ಆವಿಷ್ಕಾರ ಮಾಡಿದ್ದಾರೆ ಇದರ ಹೆಸರು “ಆಲ್ಕೋಲಾಕ್‌’.

ರಾಮನಾಥ ಮಂದಲಿ ಎಂಬ ಸಂಶೋಧಕರು ಹದಿನೈದು ವರ್ಷಗಳ ನಿರಂತರ ಪ್ರಯತ್ನದಿಂದ ಈ ಸಾಧನ ಅಭಿವೃದ್ಧಿ ಪಡಿಸಿದ್ದಾರೆ. ಚಾಲಕರು ವಾಹನ ಚಾಲು ಮಾಡುವ ಮುನ್ನ ಆಲ್ಕೊಲಾಕ್‌ ಸಾಧನಕ್ಕೆ ಒಮ್ಮೆ ಊದಬೇಕು. ಒಂದು ವೇಳೆ ಚಾಲಕ ಮದ್ಯ ಸೇವನೆ ಮಾಡಿದ್ದರೆ, ಕೂಡಲೇ ಆ್ಯಪ್‌ ಮುಖಾಂತರ ಮಾಲೀಕ ವಾಹನ ಸ್ಟಾರ್ಟ್‌ ಆಗದಂತೆ ತಡೆಯಬಹುದು. ಒಂದು ವೇಳೆ ಚಾಲನೆ ವೇಳೆ ಚಾಲಕ ಮದ್ಯ ಸೇವಿಸಿದರೂ, ಅದು ಮಾಲೀಕನಿಗೆ ತಿಳಿಯುತ್ತದೆ.

ತಮ್ಮ ವಾಹನದ ಭದ್ರತಾ ದೃಷ್ಟಿಯಿಂದ ಈ ಸಾಧನ ಮಾಲೀಕರಿಗೆ ನೆರವಾಗಲಿದೆ. ಚಾಲಕನ ಸ್ಥಿತಿಗತಿಗಳ ಇಂಚಿಂಚೂ ಮಾಹಿತಿ ಮಾಲೀಕನ ಮೊಬೈಲ್‌ಗೆ ರವಾನೆಯಾಗುತ್ತದೆ. ಈ ಸಂಬಂಧ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಮನಾಥ್‌, ಇದು ವಾಹನಕ್ಕೆ ಭದ್ರತೆ ನೀಡುವ ಜತೆಗೆ ಚಾಲಕನ ಪ್ರಾಣವನ್ನೂ ರಕ್ಷಿಸುತ್ತದೆ. ಈ ಸಾಧನದಲ್ಲಿ ಸ್ಪೈ ಕ್ಯಾಮೆರಾ ಇದ್ದು, ಅದು ಚಾಲಕನ ಗಮನಕ್ಕೆ ಬರುವುದಿಲ್ಲ. ಚಾಲಕನ ಚಲನವಲನಗಳ ಮೇಲೂ ಇದು ನಿಗಾ ಇಡುವುದರ ಜತೆಗೆ ಮದ್ಯ ಸೇವನೆಯಿಂದ ಚಾಲಕರನ್ನು ಅಪಘಾತದಿಂದ ತಡೆಯಲಿದೆ ಎಂದರು.

ಮಾಲೀಕರು ಪಾನಮತ್ತ ಚಾಲಕರಿಂದ ತಮ್ಮ ವಾಹನವನ್ನು ರಕ್ಷಿಸಿಕೊಳ್ಳಬಹುದು. ಮೊಬೈಲ್‌ ಮೂಲಕವೇ ವಾಹನ ಸ್ಟಾರ್ಟ್‌ ಆಗದಂತೆ ತಡೆಯಬಹುದಾಗಿದೆ. ಈ ಸಾಧನದ ಬೆಲೆ 9 ಸಾವಿರ ರೂ. ನಿಗದಿ ಮಾಡಲಾಗಿದ್ದು, ಇದನ್ನು ಕಾರು, ಟ್ರಕ್‌, ಲಾರಿಗಳಲ್ಲಿ ಬಳಸಬಹುದು. ಆಂಧ್ರಪ್ರದೇಶ ಸಾರ್ವಜನಿಕ ಬಸ್‌ಗಳಲ್ಲಿ ಈಗಾಗಲೇ ಈ ಸಾಧನ ಅಳವಡಿಸಲಾಗಿದೆ. ಸರಕು ಸಾಗಣೆ ವಾಹನಗಳಿಗೂ ಈ ಸಾಧನ ಹೆಚ್ಚು ಉಪಯುಕ್ತ ಎಂದರು.

ರಾಜ್ಯದ ಖಾಸಗಿ ಬಸ್‌ಗಳಲ್ಲೂ ಆಲ್ಕೋಲಾಕ್‌ ಬಳಕೆಯಾಗುತ್ತಿದೆ. ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಬಸ್‌ಗಳಲ್ಲೂ ಈ ಸಾಧನ ಅಳವಡಿಸಲು ಉದ್ದೇಶಿಸಲಾಗಿದ್ದು, ಅಧಿಕಾರಿಗಳಿಗೆ ಪ್ರಸ್ತಾಪ ಸಲ್ಲಿಸಲಾಗುವುದು ಎಂದು ತಿಳಿಸಿದರು. ಮಾಹಿತಿಗೆ 9916686615 ಸಂಪರ್ಕಿಸಬಹುದು.

ಟಾಪ್ ನ್ಯೂಸ್

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Instagram provides clues to finding suspect who had been on the run for 9 years

Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್

21-cancer

Bengaluru: ಪ್ರತಿವರ್ಷ 500 ಮಕಳಲ್ಲಿ ಕ್ಯಾನ್ಸರ್‌ ಪತ್ತೆ !

20-metro

Metro: ಮರುಪರಿಷ್ಕರಣೆ: ತಪ್ಪದ ಮೆಟ್ರೋ ದರ ಗೊಂದಲ

19-bng

Bengaluru: 1.84 ಲಕ್ಷ ಬೀದಿ ನಾಯಿಗಳಿಗೆ ಸಂಯುಕ್ತ ಲಸಿಕೆ

18-bng

Bengaluru: ಇಂಧನ, ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.