![Santhe-last](https://www.udayavani.com/wp-content/uploads/2025/02/Santhe-last-415x249.jpg)
![Santhe-last](https://www.udayavani.com/wp-content/uploads/2025/02/Santhe-last-415x249.jpg)
Team Udayavani, Nov 16, 2019, 4:27 PM IST
ರಾಯಚೂರು: ಜಿಲ್ಲೆಯ ಲಿಂಗಸೂಗೂರು ಪಟ್ಟಣದಲ್ಲಿ ಹಾಡಹಗಲೇ ಸಿನಿಮೀಯ ರೀತಿಯಲ್ಲಿ ಪಿಸ್ತೂಲ್ ಚಾಕು ತೋರಿಸಿ ದುಷ್ಕರ್ಮಿಗಳು ವ್ಯಕ್ತಿಯನ್ನು ಅಪಹರಿಸಿದ್ದಾರೆ.
ಶನಿವಾರ ಮಧ್ಯಾಹ್ನ 12.30ರ ಸುಮಾರಿಗೆ ಲಿಂಗಸೂಗೂರು ಬಸ್ ಸ್ಟ್ಯಾಂಡ್ ಎದುರು ನಾಲ್ಕು ಜನ ಅಪರಿಚಿತರು MH 14 3566 ನಂಬರ್ ಕಾರಿನಲ್ಲಿ ಬಂದಿದ್ದಾರೆ. ವ್ಯಕ್ತಿಯೊಡನೆ ಸ್ನೇಹಿತರಂತೆ ಮಾತನಾಡಿ ನಂತರ ಕಾರಿನಲ್ಲಿ ಬಲವಂತವಾಗಿ ಹತ್ತಿಸಲು ಯತ್ನಿಸಿದ್ದಾರೆ.
ಯುವಕ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಸ್ಥಳೀಯರು ನೆರವಿಗೆ ಧಾವಿಸಲು ಮುಂದಾಗುತ್ತಿದ್ದಂತೆ ಚಾಕು ಮತ್ತು ಪಿಸ್ತೂಲ್ ತೋರಿಸಿ ಹೆದರಿಸಿದ್ದಾರೆ. ಬಳಿಕ ಬಲವಂತವಾಗಿ ಯುವನಕನನ್ನು ಕಾರು ಹತ್ತಿಸಿ ಕರೆದೊಯ್ದಿದ್ದಾರೆ. ಯಾವುದೋ ಹಣಕಾಸಿನ ವ್ಯವಹಾರ ಇರಬೇಕು ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.
ವಾಹನ ಮಸ್ಕಿ ಮಾರ್ಗದಲ್ಲಿ ಸಾಗಿದೆ. ಯಾರು ದೂರು ನೀಡದ ಕಾರಣ ಕಿಡ್ನಾಪ್ ಆಗಿರುವ ಯುವಕನ ಕುರಿತು ಮಾಹಿತಿ ಗೊತ್ತಾಗಿಲ್ಲ. ರಾಜ್ಯದ ಎಲ್ಲ ಚೆಕ್ ಪೋಸ್ಟ್ ಗಳಿಗೆ ಮಾಹಿತಿ ನೀಡಿದ್ದು ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿ ಡಾ.ಸಿ.ಬಿ.ವೇದಮೂರ್ತಿ ತಿಳಿಸಿದ್ದಾರೆ.
You seem to have an Ad Blocker on.
To continue reading, please turn it off or whitelist Udayavani.