![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Nov 19, 2019, 3:03 AM IST
ಹಾವೇರಿ: “ನನ್ನನ್ನು ಗೆಲ್ಲಿಸುವುದು, ಸೋಲಿಸುವುದು ಸಿದ್ದರಾಮಯ್ಯ ಅಥವಾ ಕುಮಾರಸ್ವಾಮಿ ಕೈಯಲ್ಲಿಲ್ಲ, ಕ್ಷೇತ್ರದ ಮತದಾರರ ಕೈಯಲ್ಲಿದೆ’ ಎಂದು ಹಿರೇಕೆರೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಸಿ.ಪಾಟೀಲ ಹೇಳಿದರು.
ಹಿರೇಕೆರೂರು ಪಟ್ಟಣದಲ್ಲಿ ಸೋಮವಾರ ನಾಮಪತ್ರ ಸಲ್ಲಿಕೆ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಸಿಎಂ ಆಗುವುದನ್ನು ಅವರ ರಾಜಕೀಯ ಗುರು ದೇವೇಗೌಡರಿಗೆ ತಡೆಯಲು ಆಗಿಲ್ಲ. ಅದೇ ರೀತಿ, ನನ್ನನ್ನು ತಡೆಯಲು ನನ್ನ ರಾಜಕೀಯ ಗುರು ಸಿದ್ದರಾಮಯ್ಯ ಅವರಿಗೂ ಆಗುವುದಿಲ್ಲ.
ಗುರು ಮೀರಿಸಿದ ಶಿಷ್ಯ ಆದಾಗಲೇ ಸಾರ್ಥಕ ಎಂದರು. ಕುಮಾರಸ್ವಾಮಿ ಸಿಎಂ ಆಗುವಾಗ ಎರಡು ಬಾರಿ ನಾನೇ ಸಹಿ ಹಾಕಿದ್ದೇನೆ. ಆ ಋಣ ತೀರಿಸಲು ಬಹುಶ: ಅವರು ನನ್ನನ್ನು ಸೋಲಿಸುವ ಮಾತು ಆಡಿರಬೇಕು. ಕ್ಷೇತ್ರದಲ್ಲಿ ಬಹಳ ವರ್ಷಗಳಿಂದ ನಾನು ಮತ್ತು ಯು.ಬಿ.ಬಣಕಾರ ಇಬ್ಬರೇ ಪ್ರತಿಸ್ಪಧಿಗಳಾಗಿದ್ದೆವು.
ನಾವಿಬ್ಬರೂ ಒಂದಾಗಿರುವುದರಿಂದ ಈಗ ನನಗೆ ಪ್ರತಿಸ್ಪಧಿಯೇ ಇಲ್ಲ. ಕ್ಷೇತ್ರದಲ್ಲಿ ಜನ ಬಿಜೆಪಿಗೆ ಸೇರ್ಪಡೆಯಾಗಿದ್ದಕ್ಕೆ ಸಂತಸ ವ್ಯಕ್ತಪಡಿಸುತ್ತಿದ್ದು, ಇಷ್ಟು ದಿನ ನಿಮ್ಮನ್ನು ನೋಡಿ ಮತ ಹಾಕಿದ್ದೇವೆಯೇ ವಿನಃ ಕಾಂಗ್ರೆಸ್ ನೋಡಿ ಅಲ್ಲ ಎಂದು ಹೇಳುತ್ತಿದ್ದಾರೆ ಎಂದರು.
ಅಭ್ಯರ್ಥಿಗಳ ಆಸ್ತಿ ವಿವರ
ಹುಣಸೂರು: ಎಚ್.ವಿಶ್ವನಾಥ್ -ಬಿಜೆಪಿ., ಒಟ್ಟು ಆಸ್ತಿಯ ಮೊತ್ತ -3.49 ಕೋಟಿ ರೂ. ಸಾಲ ಮಾಡಿಲ್ಲ. ಒಟ್ಟು 13.3 ಎಕರೆ ಕೃಷಿ ಭೂಮಿ ಹೊಂದಿದ್ದು, ಇದರ ಮೌಲ್ಯ 70 ಲಕ್ಷ ರೂ. ಮೈಸೂರಿನ ಕೆ.ಆರ್.ಮೊಹಲ್ಲಾದಲ್ಲಿ 2,721 ಚ.ಅಡಿಗಳ ವಾಣಿಜ್ಯ ಕಟ್ಟಡವಿದೆ, (1.5 ಕೋಟಿ ಮೌಲ್ಯ), ಕೆ.ಆರ್. ನಗರದಲ್ಲಿ 4,600 ಚ.ಅಡಿ. (60 ಲಕ್ಷ ರೂ.ಮೌಲ್ಯ )ವಿಸ್ತ್ರೀರ್ಣದ ಮನೆ ಇದೆ. ಅವರ ಮಕ್ಕಳು ಸ್ವತಂತ್ರವಾಗಿ ಉದ್ಯೋಗ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ.
ಕೆ.ಆರ್.ಪೇಟೆ
-ಬಿ.ಎಲ್.ದೇವರಾಜು – ಜೆ.ಡಿ.ಎಸ್: ಆಸ್ತಿ ಮೌಲ್ಯ ಸರಿ ಸುಮಾರು 2.92 ಕೋಟಿ ರೂ.
-ನಾರಾಯಣಗೌಡ -ಬಿಜೆಪಿ: ಆಸ್ತಿ ಮೌಲ್ಯ ಸರಿ ಸುಮಾರು 7.21 ಕೋಟಿ ರೂ.
-ಕೆ.ಬಿ.ಚಂದ್ರಶೇಖರ್ -ಕಾಂಗ್ರೆಸ್: ಸ್ವಯಾರ್ಜಿತ ಆಸ್ತಿ ಇಲ್ಲ, ಪಿತ್ರಾರ್ಜಿತ ಆಸ್ತಿ ಮೌಲ್ಯ 2.14 ಕೋಟಿ. ಪತ್ನಿ ರಮಾಮಣಿ ಹೆಸರಿನಲ್ಲಿ 1.35 ಕೋಟಿ ರೂ. ಸ್ವಯಾರ್ಜಿತ ಆಸ್ತಿ ಇದೆ.
You seem to have an Ad Blocker on.
To continue reading, please turn it off or whitelist Udayavani.