![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Nov 21, 2019, 5:15 PM IST
ಗುವಾಹಟಿ: ಮದುವೆಯಾಗೋದು ಅಂದರೆ ವಧು-ವರನಿಗೆ ಖುಷಿಯೋ ಖುಷಿ. ಅಸ್ಸಾಂನಲ್ಲಿರುವ ಮದುಮಕ್ಕಳಿಗಂತೂ ಇನ್ನು ಡಬಲ್ ಖುಷಿ. ಕಾರಣ, ಮದುವೆ ವೇಳೆ ಬರೋಬ್ಬರಿ 10 ಗ್ರಾಂ ಚಿನ್ನವನ್ನು ಸರಕಾರ ಕೊಡುಗೆಯಾಗಿ ನೀಡಲಿದೆ.
ವಧುವಿಗೆ ಚಿನ್ನ ನೀಡುವ ಯೋಜನೆ “ಅರುಂಧತಿ’ಗೆ ಅಲ್ಲಿನ ಸಚಿವ ಸಂಪುಟ ಹಸಿರು ನಿಶಾನೆ ತೋರಿದೆ. ಇದು ಕರ್ನಾಟದ ಶಾದಿ ಭಾಗ್ಯದ ರೀತಿಯೇ ಇದೆ ಎನ್ನುವುದು ವಿಶೇಷ.
2020 ಜನವರಿಯಲ್ಲಿ ಈ ಯೋಜನೆ ಜಾರಿಗೊಳಿಸಲಾಗುತ್ತಿದೆ. ಯೋಜನೆ ಅನ್ವಯ ವಿವಾಹ ನೋಂದಣಿ ಕಡ್ಡಾಯವಾಗಿದೆ. ಅಂದರೆ ಮಾತ್ರ ಚಿನ್ನದ ಕೊಡುಗೆ ಪಡೆಯಬಹುದು.
ಅರುಂಧತಿ ಯೋಜನೆಗೆ ಮಂಗಳವಾರ ಸಂಪುಟ ಸಮ್ಮತಿ ದೊರಕಿದ್ದು, ಇದಕ್ಕಾಗಿ ಸರಕಾರ ವಾರ್ಷಿಕ 800 ಕೋಟಿ ರೂ.ಗಳನ್ನು ವಿನಿಯೋಗಿಸಲಿದೆ.
ಯೋಜನೆಯನ್ವಯ ಚಿನ್ನ ಪಡೆಯಬೇಕಾದರೆ ವಧುವಿಗೆ 18, ವರನಿಗೆ 21 ವರ್ಷ ಆಗಿರಬೇಕು. ಆಕೆಯ ಕುಟುಂಬದ ವಾರ್ಷಿಕ ವರಮಾನ 5 ಲಕ್ಷ ರೂ.ಗಿಂತಲೂ ಕಡಿಮೆಯಿರಬೇಕು ಎಂಬ ಷರತ್ತಿದೆ. ಅಲ್ಲದೇ ಚಿನ್ನ ಕೊಡಲು ಸಾಧ್ಯವಾಗದಿದ್ದಲ್ಲಿ, ವಧುವಿಗೆ 30 ಸಾವಿರ ರೂ.ಗಳನ್ನು ಸರಕಾರ ಪಾವತಿಸಲಿದೆ. ವಿವಾಹ ನೋಂದಣಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಯೋಜನೆ ಜಾರಿಗೆ ತರಲಾಗಿದೆ.
ವಿವಾಹ ನಂತರ ಉದ್ಭವಿಸಬಹುದಾದ ಕಾನೂನು, ಕೌಟುಂಬಿಕ ಸಮಸ್ಯೆಗಳ ತಡೆಗೆ ಹೀಗೆ ಮಾಡಲಾಗುತ್ತಿದೆ ಎಂದು ಅಲ್ಲಿನ ಸಚಿವರು ಹೇಳಿದ್ದಾರೆ. ಅಲ್ಲದೇ ಮುಂದಿನ ದಿನಗಳಲ್ಲಿ ಸಾಮಾಜಿಕ ಗುರಿಯನ್ನು ಇಟ್ಟುಕೊಂಡು ಜನಸಂಖ್ಯೆ ನೀತಿಯನ್ನು ರೂಪಿಸುವ ಉದ್ದೇಶವನ್ನು ಇದು ಹೊಂದಿದೆ ಎಂದೂ ಹೇಳಿದ್ದಾರೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.