ಕನ್ನಡ ಉಳಿಸಿ ಬೆಳೆಸುವ ಕಾರ್ಯವಾಗಲಿ

ಇಂಗ್ಲೀಷ್‌ ವ್ಯಾಮೋಹದಲ್ಲಿ ಕನ್ನಡ ಶಾಲೆಗಳು ಮುಚ್ಚುವಂತಹ ದುಸ್ಥಿತಿ:ರಾಘವೇಂದ್ರ ರಾವ್‌

Team Udayavani, Nov 22, 2019, 5:53 PM IST

21-November-26

ಸಂಡೂರು: ಕನ್ನಡ ನಾಡು ಹರಿದು ಹಂಚಿಹೋಗಿತ್ತು. ಅದನ್ನು ಒಂದುಗೂಡಿಸುವಂಥ ಮಹತ್ತರ ಕಾರ್ಯಕ್ಕೆ 1905ರಲ್ಲಿ ಆಲೂರು ವೆಂಕಟರಾಯರು ಕರ್ನಾಟಕದ ಏಕೀಕರಣಕ್ಕಾಗಿ ಹೋರಾಟ ಮಾಡಿ ಜನರಲ್ಲಿ ಜಾಗೃತಿ ಮೂಡಿಸಿದರ ಫಲವೇ 1973ರಲ್ಲಿ ಕರ್ನಾಟಕ ಎಂದು ನಾಮಕರಣವಾಯಿತು ಎಂದು ಥೀಯೋಸಿಫಿಕಲ್‌ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕ ಯು. ರಾಘವೇಂದ್ರ ರಾವ್‌ ತಿಳಿಸಿದರು.

ಅವರು ಸಂಡೂರು ತಾಲೂಕಿನ ಯಶವಂತನಗರ ಗ್ರಾಮದ ಶ್ರೀಗುರು ಸಿದ್ದರಾಮೇಶ್ವರ ಸಂಸ್ಥಾನ ವಿರಕ್ತಮಠದಲ್ಲಿ ಏರ್ಪಡಿಸಿದ್ದ 42ನೇ ತ್ತೈಮಾಸಿಕ ಶಿವಾನುಭವಗೋಷ್ಠಿಯಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಕನ್ನಡನಾಡು ಹರಿದು ಹಂಚಿಹೋಗಿತ್ತು, ಕವಿಗಳು, ಸಾಹಿತಿಗಳು, ನಾಡಪ್ರೇಮಿಗಳು ಶ್ರಮಿಸಿದ ಪರಿಣಾಮ ಕರ್ನಾಟಕವಾಯಿತು. ಇಂದು ಇಂಗ್ಲೀಷ್‌ ವ್ಯಾಮೋಹದಲ್ಲಿ ಇದ್ದು ಕನ್ನಡ ಶಾಲೆಗಳು ಮುಚ್ಚುವಂತಹ ದುಸ್ಥಿತಿಗೆ ಬಂದಿದೆ. ಇಂದು ನಾವೆಲ್ಲರೂ ಸಹ ಕನ್ನಡ ಉಳಿಸುವ ಮತ್ತು ಬೆಳೆಸುವಂಥ ಕಾರ್ಯ ಮಾಡಬೇಕು ಎಂದರು.

ಸಾನ್ನಿಧ್ಯವಹಿಸಿದ ಶ್ರೀಗುರು ಸಿದ್ಧರಾಮೇಶ್ವರ ಮಠದ ಗಂಗಾಧರ ಮಹಾಸ್ವಾಮೀಜಿ ಮಾತನಾಡಿ ಸಂಸ್ಕಾರ, ಆಚಾರ, ವಿಚಾರ, ಪರಿಸರ, ಕಾಯಕ, ದಾಸೋಹ ಇವುಗಳಿಂದ ಭಾರತ ದೇಶಸಂಪತºರಿತವಾಗಿದೆ. ಸತ್ಸಂಗ, ಶಿವಾನುಭವ ಗೋಷ್ಠಿ ಮಹಾತ್ಮರ ವಾಣಿಯಿಂದ ಸಂಸ್ಕಾರ ಬೆಳೆಯಲು ಸಾಧ್ಯವೆಂದು ತಿಳಿಸಿದರು.

ರಮಣ ಪ್ರಶಸ್ತಿಗೆ ಭಾಜನರಾದ ಹಂಪಿ ವಿ.ವಿ. ನಿಲಯದ ಪ್ರಾಧ್ಯಾಪಕ ಡಾ|
ಕೆ.ರವೀಂದ್ರನಾಥ ಮಾತನಾಡಿ, ಸಂಡೂರು ಸಂಸ್ಥಾನವನ್ನೊಳಗೊಂಡು ಕರ್ನಾಟಕ ರಾಜ್ಯ 20 ಸಂಸ್ಥಾನಗಳಾಗಿ ಹಂಚಿಹೋಗಿ ಆಡಳಿತಾತ್ಮಕವಾಗಿ ಕುಸಿದು ಬಿದ್ದು ಅನಾಥ ಪ್ರಜ್ಞೆ ಕಾಡಿತು. ಆದರೆ ವಚನ ಸಾಹಿತ್ಯ ಅದನ್ನು ತುಂಬುವುದರ ಜೊತೆಗೆ ಕಾಯಕವೆಂದರೆ ಬರೀ ವೃತ್ತಿ ಅಲ್ಲ ಅದು ಬದುಕಾಗಿತ್ತು. ಬಸವಕಲ್ಯಾಣ, ವಿಜಯಕಲ್ಯಾಣ, ಅಮರಕಲ್ಯಾಣ, ಕೊಡೇಕಲ್‌ ಕಲ್ಯಾಣ, ಧರ್ಮ ಕಲ್ಯಾಣ ಈ ಐದು ಚರಿತ್ರೆಗಳನ್ನ ಕಟ್ಟಿದ್ದು ವಚನಕಾರರು, ಇಡೀ ಕನ್ನಡ ನಾಡಿಗೆ ನಮ್ಮತನವನ್ನು ತೋರಿಸುವಂತಹ ಸ್ಥಿತಿ ಇಲ್ಲದಂತಹ ಸಮಯದಲ್ಲಿ ಅದನ್ನು ನಾಡಿಗೆ ತಿಳಿಸಿದ ಶರಣರು ತಮ್ಮ ಬದುಕನ್ನೇ ಕನ್ನಡ ನಾಡಿಗೆ ಅರ್ಪಿಸಿದರು ಎಂದರು. ಯಾವುದೇ ಜಾಹೀರಾತುರಹಿತ ಸ್ಮರಣ ಸಂಚಿಕೆಯನ್ನು ಶ್ರೀ ಸಿದ್ಧರಾಮೇಶ್ವರ ಸಂಸ್ಥಾನ ಮಠದ ಪಟ್ಟಾಕಾರ ಮಹೋತ್ಸವದ ಸಂಚಿಕೆ ಮರೆಯಲಾರದಂತಹ ಮತ್ತು ಮಾರ್ಗಸೂಚಿಯಾದಂಥ ಕೃತಿಯಾಗಿದೆ ಎಂದರು.

ಸಂಡೂರು ವಿರಕ್ತಮಠದ ಪ್ರಭುಮಹಾಸ್ವಾಮೀಜಿ ಮಾತನಾಡಿ, ಕರ್ನಾಟಕ ಎಂದು ನಾಮಕರಣಕ್ಕೆ ದೇವರಾಜ ಅರಸರು ಕಾರಣರಲ್ಲ ದೊಡ್ಡಮೇಟಿ ಅಂದಾನಪ್ಪ ಕಾರಣ ಎಂದು ತಿಳಿಸಿದರು. ಅಕ್ಕನಬಳಗದವರು ಪ್ರಾರ್ಥಿಸಿದರು, ಟಿ. ವೆಂಕಟೇಶ ಎಚ್‌. ಕುಮಾರಸ್ವಾಮಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಎಚ್‌. ಮಲಿಯಪ್ಪ, ಎಚ್‌. ತಿಪ್ಪೇಸ್ವಾಮಿ ದಾಸೋಹ ಸೇವೆಗೈದರು. ವೀರೇಶ ನಿರೂಪಿಸಿದರು. ಸಮಾರಂಭದಲ್ಲಿ ಗಣ್ಯರಾದ ಸಿ.ಜೆ.ಕೆಂಚನಗೌಡ, ಚಿತ್ರಿಕಿ ಸತೀಶ್‌, ಚಿತ್ರೀಕಿ ವಿಶ್ವನಾಥ, ಮೇಕೆ ಈರಣ್ಣ ಇತರ ಹಲವಾರು ಗಣ್ಯರು, ಮಹಿಳೆಯರು ಉಪಸ್ಥಿತರಿದ್ದರು.

ಟಾಪ್ ನ್ಯೂಸ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Vitla: Bolanthur Narsha robbery case: Four more arrested including Kerala police

Vitla: ಬೋಳಂತೂರು ನಾರ್ಶ ದರೋಡೆ ಪ್ರಕರಣ: ಕೇರಳದ ಪೊಲೀಸ್‌ ಸೇರಿ ಮತ್ತೆ ನಾಲ್ವರ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Vitla: Bolanthur Narsha robbery case: Four more arrested including Kerala police

Vitla: ಬೋಳಂತೂರು ನಾರ್ಶ ದರೋಡೆ ಪ್ರಕರಣ: ಕೇರಳದ ಪೊಲೀಸ್‌ ಸೇರಿ ಮತ್ತೆ ನಾಲ್ವರ ಬಂಧನ

10-Thirthahalli

Thirthahalli: ಖಾಸಗಿ ಬಾರ್ ಕ್ಯಾಶಿಯರ್ ಬೈಕ್ ಅಪಘಾತದಲ್ಲಿ ನಿಧನ!

5

Kaup: ಶಿಲಾಮಯ ಗುಡಿಯ ಮೆರುಗು ಹೆಚ್ಚಿಸಿದ ಕಾರ್ಕಳ, ಸಿರಾದ ಕಲ್ಲು

4(1

Manipal: ನಮ್ಮ ಸಂತೆಯಲ್ಲಿ ಜನ ಸಾಗರ

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

16

Uv Fusion: ಪೆನ್ನಿಗೊಂದು ಕಥೆ

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

14

Uv Fusion: ಸ್ನೇಹವೆಂಬ ತಂಗಾಳಿ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.