![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Nov 25, 2019, 3:07 AM IST
ಬೆಂಗಳೂರು: ನಾನು ಟಗರೂ ಅಲ್ಲ, ರಾಜಾಹುಲಿಯೂ ಅಲ್ಲ. ಬಂಡೆಯೂ ಅಲ್ಲ. ಸಾಮಾನ್ಯ ರೈತನ ಮಗ ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದ್ದಾರೆ. ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ಕಮಲಾನಗರ, ವೃಷಭಾವತಿ ನಗರ ಪ್ರದೇಶಗಳಲ್ಲಿ ಪಕ್ಷದ ಅಭ್ಯರ್ಥಿ ಗಿರೀಶ್ ನಾಶಿ ಪರ ಪ್ರಚಾರ ನಡೆಸಿದ ಅವರು, ಈಗ ನನಗೆ ಕೊಡುವ ಶಕ್ತಿ ಇಲ್ಲ. ಆದರೆ, ಕೇಳುವ ಶಕ್ತಿ ಇದೆ. ನಾನು ನಿಮಗೆ ಏನು ಮಾಡಿದ್ದೇನೆಂದು ಹೇಳುವ ಶಕ್ತಿ ನನಗಿದೆ.
ಕುಮಾರಣ್ಣನಿಗೆ ಅನ್ಯಾಯ ಮಾಡಿದ್ದಾರೆ. ಅವರು ಮತ್ತೆ ಮುಖ್ಯಮಂತ್ರಿ ಯಾಗುವವರೆಗೂ ನಾನು ನಿಮ್ಮೊಂದಿಗಿದ್ದೇವೆ ಎಂದು ಯುವಕರು ಎದ್ದೇಳಬೇಕು ಎಂದು ಹೇಳಿದರು. ನನಗೆ ವಯಸ್ಸಾಯಿತು ಎಂದು ತುಮಕೂರಿನಲ್ಲಿ ಸೋಲಿಸಿದರು. ನಾನು ಯಾರಿಗೆ ದ್ರೋಹ, ಅನ್ಯಾಯ ಮಾಡಿದ್ದೇನೆ? ಈ ಹಿಂದೆ ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದ ಜನರು ನೆ.ಲ. ನರೇಂದ್ರ ಬಾಬು ಅವರನ್ನು ಗೆಲ್ಲಿಸಿದ್ದರು. ಅವರು ಒಕ್ಕಲಿಗರಲ್ಲ. ಆದರೂ ಅವರನ್ನು ಗೆಲ್ಲಿಸಿದ್ದರು.
ಈಗ ಈ ಕ್ಷೇತ್ರದಲ್ಲಿ ಒಕ್ಕಲಿಗರಿಗೆ ಟಿಕೆಟ್ ನೀಡಿಲ್ಲ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಈ ಕ್ಷೇತ್ರದ ಮಾಜಿ ಶಾಸಕರ ಹೆಂಡತಿ ಡೆಪ್ಯೂಟಿ ಮೇಯರ್ ಆಗಲು ಯಾರು ಶಕ್ತಿ ಕೊಟ್ಟಿದ್ದು. ಅವರಿಗೆ ಬಜೆಟ್ ಮಾಡಲು ಅವಕಾಶ ಕೊಟ್ಟಿದ್ದೆವು. ಆದರೆ, ಅನರ್ಹ ಶಾಸಕರು ತಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಲು ಅವಕಾಶ ಕೊಟ್ಟಿಲ್ಲ ಎಂದು ಹೇಳುತ್ತಾರೆ. ಈಗ ಬಿಜೆಪಿಯವರ ಜತೆ ಹೋದರೆ ಅಭಿವೃದ್ಧಿ ಆಗುತ್ತದೆ ಎಂದು ಹೇಳುತ್ತಿದ್ದಾರೆ.
ಬಿಜೆಪಿಯವರು 15 ಜನರನ್ನೂ ಮಂತ್ರಿ ಮಾಡುವುದಾಗಿ ಹೇಳುತ್ತಿದ್ದಾರೆ. ಅವರ ಮಾತು ಕೇಳಿ ತಲೆ ಚಚ್ಚಿಕೊಂಡೆ. ನಾನು ಯಾವತ್ತೂ ಜಾತಿ ಮೇಲೆ ಮಾತನಾಡುವುದಿಲ್ಲ. ಆದರೆ, ಈ ಪಕ್ಷವನ್ನು ಅಧಿಕಾರಕ್ಕೆ ತರುವವರೆಗೂ ನಾನು ಸುಮ್ಮನೆ ಕೂಡುವುದಿಲ್ಲ. ದೇವೇಗೌಡರಿಗೆ ಹೋರಾಟ ಮಾಡುವ ಶಕ್ತಿ ಇದೆ ಎನ್ನುವುದನ್ನು ಜನರು ಈ ಚುನಾವಣೆ ಫಲಿತಾಂಶದ ಮೂಲಕ ತೋರಿಸಬೇಕು ಎಂದು ಮನವಿ ಮಾಡಿದರು.
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್
Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.