ನೃತ್ಯದಿಂದ ವ್ಯಾಯಾಮ


Team Udayavani, Nov 26, 2019, 5:42 AM IST

DE-02

ಮನಸ್ಸು ಖುಷಿಯನ್ನು ಅನುಭವಿಸಿದಾಗ ಒಂದೆರಡು ಹೆಜ್ಜೆ ಹಾಕಿ ನೃತ್ಯ ಮಾಡಬೇಕು ಎನಿಸುವುದು. ನೃತ್ಯವನ್ನು ಮಾಡುವುದರಿಂದ ನಮ್ಮ ಮನಸ್ಸಿಗೆ ಹಾಗೂ ದೇಹಕ್ಕೆ ಹಿತವಾದ ಅನುಭವ. ದೇಹದ ಎಲ್ಲ ಅಂಗಾಂಗಗಳಿಗೂ ವ್ಯಾಯಾಮ ಆಗುವುದು. ಅವು ತನ್ನಿಂದ ತಾನೇ ಕ್ರಿಯಾಶೀಲತೆಯನ್ನು ಪಡೆದುಕೊಂಡು ಸಂತೋಷವನ್ನು ಅನುಭವಿಸುತ್ತವೆ. ಮಾನಸಿಕವಾಗಿ ಹೆಚ್ಚಿನ ಆನಂದ ದೊರೆಯುವುದು. ಕೆಲವು ಅಧ್ಯಯನಗಳ ಪ್ರಕಾರ ನೃತ್ಯ ಮಾಡುವುದರಿಂದ ಮಾನಸಿಕ ಒತ್ತಡವು ಇಳಿಮುಖವಾಗುವುದು. ಅಲ್ಲದೆ ಚೈತನ್ಯಶೀಲ ಚಟುವಟಿಕೆಗಳಿಗೆ ಉತ್ತೇಜನ ನೀಡುವುದು. ಹಾಗಾಗಿ ನೃತ್ಯ ರೂಪದ ವ್ಯಾಯಾಮ ವಿದೇಶದಲ್ಲಿ ಹೆಚ್ಚು ಜನಪ್ರಿಯ ಪಡೆದಿದ್ದು, ನಮ್ಮ ದೇಶದಲ್ಲಿ ಇನ್ನಷ್ಟೆ ಸದಭಿರುಚಿ ಮೂಡಬೇಕಾಗಿದೆ.

ಜಿಮ್‌ಗಿಂತಲೂ ಹೆಚ್ಚು ಪ್ರಭಾವಿ
ಕೆಲವು ಸಂಶೋಧನೆ ಅಧ್ಯಯನಗಳ ಪ್ರಕಾರ, ವ್ಯಾಯಾಮ ಹಾಗೂ ಜಿಮ್‌ಗಳಿಗಿಂತ ನೃತ್ಯ ಮಾಡುವುದರ ಮೂಲಕ ಬಹುಬೇಗ ಕ್ಯಾಲೊರಿಯನ್ನು ಕರಗಿಸಬಹುದು. ನೃತ್ಯವನ್ನು ಸಾಮಾನ್ಯವಾಗಿ ಮನೋರಂಜನೆ ಚಟುವಟಿಕೆ ಎಂದು ಪರಿಗಣಿಸಲಾಗುತ್ತದೆ. ಆದರೆ ವಾಸ್ತವದಲ್ಲಿ ನೃತ್ಯ ಅದ್ಭುತವಾದ ಫಿಟ್‌ನೆಸ್‌ ಚಟುವಟಿಕೆಯಾಗಿದೆ. ಮನೆಯಲ್ಲೂ ನೃತ್ಯದ ಮೂಲಕ ದೇಹದ ಕ್ಯಾಲೊರಿಯನ್ನು ಇಳಿಸಬಹುದು.

ಕ್ಯಾಲೊರಿ ತಿಳಿವಳಿಕೆ ಅಗತ್ಯ
ಕೇವಲ ನೃತ್ಯ ಮಾಡುವುದೊಂದೇ ಗುರಿಯಾಗದೆ ಅದರೊಂದಿಗೆ ಕ್ಯಾಲೊರಿ ಬಗ್ಗೆಯೂ ಜ್ಞಾನ ಇರಬೇಕು. ಇಲ್ಲವಾದರೆ ದೇಹದಲ್ಲಿ ಕ್ಯಾಲೊರಿಯ ಕೊರತೆ ಉಂಟಾಗುವ ಸಾಧ್ಯತೆಗಳಿರುತ್ತವೆ. 1 ಕಿಲೋ ಕೊಬ್ಬನ್ನು ಕಳೆದುಕೊಳ್ಳಬೇಕು ಎಂದರೆ ವಾರದಲ್ಲಿ 3,500ರಷ್ಟು ಕಡಿಮೆ ಕ್ಯಾಲೊರಿಯನ್ನು ಹೊಂದಬೇಕು. ಹಾಗೇ ಪ್ರತಿದಿನ ಒಂದು ಗಂಟೆ ಕಾಲ ಮಧ್ಯಮ ತೀವ್ರತೆಯ ನೃತ್ಯ ಮಾಡಬೇಕು. ಆಗ 10 ರಿಂದ 11 ದಿನಗಳ ಒಳಗೆ 1 ಕಿಲೋ

ತೂಕ ಕಳೆದುಕೊಳ್ಳಬಹುದು.
ಕನಿಷ್ಠ ಒಂದು ಗಂಟೆ ಅಭ್ಯಾಸ
ನೃತ್ಯದಿಂದ ದೇಹದ ತೂಕ ಇಳಿಸಲು ಬಯಸುತ್ತೀರಿ ಎಂದಾದರೆ ಕ್ಯಾಲೊರಿ ಕೊರತೆಯನ್ನು ಸೃಷ್ಟಿಸಿಕೊಳ್ಳಲು ಸಾಕಷ್ಟು, ಕನಿಷ್ಠ ಒಂದು ಗಂಟೆ ನೃತ್ಯವನ್ನು ಮಾಡಬೇಕು. ಒಂದು ಪೌಂಡ್‌ ಕೊಬ್ಬನ್ನು ಕರಗಿಸಬೇಕಿದ್ದರೆ ಸುಮಾರು 3500 ರಷ್ಟು ಕ್ಯಾಲೊರಿ ಕೊರತೆಯನ್ನು ನೀವು ನಿರ್ವಹಿಸಬೇಕು. 125 ಪೌಂಡ್‌ ಹೊಂದಿರುವವರು ದಿನಕ್ಕೆ ಒಂದು ಗಂಟೆ ಕಾಲ ನೃತ್ಯ ಮಾಡುವುದರಿಂದ ಪ್ರತಿ 10-11 ದಿನಗಳಿಗೊಮ್ಮೆ 1 ಕೆ.ಜಿ. ತೂಕವನ್ನು ಇಳಿಸಬಹುದು. ನೃತ್ಯದ ತೀವ್ರತೆಯನ್ನು ಹೆಚ್ಚಿಸುತ್ತಾ ಹೋದಂತೆ ಹೆಚ್ಚಿನ ಶಕ್ತಿಯನ್ನು ವ್ಯಯಿಸಲು ಸಾಧ್ಯವಾಗುತ್ತದೆ. ಸಾಕಷ್ಟು ವ್ಯಾಯಾಮದಿಂದ ದೇಹದ ಕ್ಯಾಲೊರಿಯ ಮೇಲೆ ನೇರ ಪರಿಣಾಮ ಉಂಟಾಗುವುದು.

- ಕಾರ್ತಿಕ್‌ ಸಿ.

ಟಾಪ್ ನ್ಯೂಸ್

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

UV Fusion: “ಜಗವ ಪರಿಚಯಿಸಿದವರ ಜರಿದು ದೂರವಿರಿಸದಿರಿ”

UV Fusion: “ಜಗವ ಪರಿಚಯಿಸಿದವರ ಜರಿದು ದೂರವಿರಿಸದಿರಿ”

Health

ಮಳೆಗಾಲದ ಆರೋಗ್ಯ ಕಾಪಾಡಿಕೊಳ್ಳೋದು ಹೇಗೆ?

ಪ್ರಾಣಾಯಾಮದಿಂದ ಪ್ರಯೋಜನವುಂಟು…

ಪ್ರಾಣಾಯಾಮದಿಂದ ಪ್ರಯೋಜನವುಂಟು…

neck-pain

ಕತ್ತುನೋವು ನಿರ್ಲಕ್ಷಿಸಿದರೆ ಅಪಾಯ

beauty-tips

ಅಲರ್ಜಿ, ಕಲೆನಿವಾರಣೆಗೆ ಮನೆಯಲ್ಲಿಯೆ ಇದೆ ಔಷಧ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.