ಬ್ರಹ್ಮಚಾರಿಯೊಂದಿಗೆ ಬರಲಿದ್ದಾಳೆ ನಾಗಕನ್ನಿಕೆ!


Team Udayavani, Nov 28, 2019, 6:31 PM IST

28-November-28

ನೀನಾಸಂ ಅಭಿನಯದ ಬ್ರಹ್ಮಚಾರಿ ಚಿತ್ರವನ್ನು ಕಣ್ತುಂಬಿಕೊಳ್ಳಲು ಕ್ಷಣಗಣನೆ ಆರಂಭವಾಗಿದೆ. ಈ ವಾರವೇ ಬಿಡುಗಡೆಗೊಳ್ಳಲಿರುವ ಬ್ರಹ್ಮಚಾರಿಯನ್ನು ಆದಷ್ಟು ಬೇಗನೆ ಕಣ್ತುಂಬಿಕೊAಡು ಹಾಸ್ಯದ ಹೊನಲಿನಲ್ಲಿ ಮಿಂದೇಳುವ ಆಸೆ ಹೊತ್ತವರೆಲ್ಲ ಆ ಕ್ಷಣಗಳಿಗಾಗಿ ತಹ ತಹಿಸುತ್ತಿದ್ದಾರೆ. ಇದು ಈ ಸಿನಿಮಾ ಇದುವರೆಗೆ ಸಾಗಿ ಬಂದಿರೋ ರೀತಿಗೆ, ಅದರೊಳಗಿರುವ ಗಟ್ಟಿಯಾದ, ರುಚಿಕಟ್ಟಾದ ಹೂರಣಕ್ಕೆ ಸಂದ ಪ್ರತಿಫಲ. ಇದೆಲ್ಲವನ್ನೂ ಗಮನಿಸಿದರೆ ಬಹ್ಮಚಾರಿ ಸಮಸ್ತ ಪ್ರೇಕ್ಷಕರ ಪಾಲಿಗೆ ಈ ವರ್ಷದ ಕಡೇಯ ಕ್ಷಣಗಳನ್ನು ಚೆಂದಗಾಣಿಸುತ್ತಲೇ ದೊಡ್ಡ ಮಟ್ಟದಲ್ಲಿ ಗೆಲುವು ಕಾಣೋ ಲಕ್ಷಣಗಳೇ ಎಲ್ಲೆಡೆ ಮಿರುಗುತ್ತಿವೆ.

ಉದಯ್ ಮೆಹ್ತಾ ನಿರ್ಮಾಣದ ಚಿತ್ರಗಳೆಂದ ಮೇಲೆ ಹೀಗೆ ಬಿಡುಗಡೆಗೂ ಮುನ್ನವೇ ಗೆಲುವಿನ ಪ್ರಭೆಯಲ್ಲಿ ಮಿಂಚುವುದು ಸಾಮಾನ್ಯ. ಸಿನಿಮಾವನ್ನು ವ್ಯವಹಾರಗಳ ಹೊರತಾಗಿ ಪ್ರೀತಿಸುವ ಮನಸ್ಥಿತಿ ಹೊಂದಿರುವ ಅವರು ಕಥೆಗಳ ಆಯ್ಕೆಯಲ್ಲಿಯೂ ಒಂದು ಅಭಿರುಚಿಯನ್ನು ರೂಢಿಸಿಕೊಂಡಿರುವವರು. ಅವರು ನಿರ್ಮಾಣ ಮಾಡಿರುವ ಚಿತ್ರಗಳೆಲ್ಲ ಗೆಲುವು ಕಂಡಿರೋದರ ಹಿಂದೆಯೂ ಅದೇ ಜಾದೂ ಅಡಗಿದೆ. ಹಾಗಿದ್ದ ಮೇಲೆ ಅವರೇ ನಿರ್ಮಾಣ ಮಾಡಿರುವ ಬ್ರಹ್ಮಚಾರಿಯತ್ತ ಬೆರಗೆಲ್ಲ ಒತ್ತರಿಸಿಕೊಳ್ಳದಿರಲು ಸಾಧ್ಯವೇ ಇಲ್ಲ. ನಿಮ್ಮಲ್ಲಿಯೂ ಅಂಥಾ ಬೆರಗೊಂದಿದ್ದರೆ ಅದನ್ನು ಸಂಪೂರ್ಣವಾಗಿ ತಣಿಸುವಂತೆ ಬ್ರಹ್ಮಚಾರಿ ಮೂಡಿ ಬಂದಿದೆ ಅನ್ನೋ ಭರವಸೆಯನ್ನು ಚಿತ್ರತಂಡವೇ ಕೊಡುತ್ತದೆ.

ವಿಶೇಷವೆಂದರೆ ಈ ಚಿತ್ರದಲ್ಲಿ ಇದೇ ಮೊದಲ ಬಾರಿ ನೀನಾಸಂ ಸತೀಶ್ ಮತ್ತು ನಾಗ ಕನ್ನಿಕೆ ಖ್ಯಾತಿಯ ಅದಿತಿ ಪ್ರಭುದೇವ ಅವರ ಸಮಾಗಮವಾಗಿದೆ. ಅವರು ಈಗಾಗಲೇ ಚೆಂದದ ಜೋಡಿಯಾಗಿ ಪ್ರೇಕ್ಷಕರಿಗೆ ಹಿಡಿಸಿದ್ದಾರೆ. ಅದಿತಿ ಬಹು ಕಾಲದಿಂದ ಕಾತರಿಸುತ್ತಿದ್ದಂಥಾ ಹಾಸ್ಯದ ಶೇಡು ಹೊಂದಿರೋ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಪಾತ್ರವೂ ಕೂಡಾ ನೀನಾಸಂ ಸತೀಶ್ ಅವರ ಪಾತ್ರದಂಥಾದ್ದೇ ಹಾಸ್ಯದ ಶೇಡ್ ಹೊಂದಿದೆ. ಇವೆರಡರ ಜುಗಲ್ಬಂಧಿಯ ಸಂದರ್ಭದಲ್ಲಿ ಚಿತ್ರತಂಡವಿಡೀ ನಗೆಗಡಲಲ್ಲಿ ತೇಲಾಡಿ ಚಿತ್ರೀಕರಣಕ್ಕೇ ತಾತ್ಕಾಲಿಕ ಬ್ರೇಕ್ ಬೀಳುವ ಸನ್ನಿವೇಶಗಳೂ ಎದುರಾಗಿದ್ದಂತೆ. ಅದು ಬ್ರಹ್ಮಚಾರಿ ಅದೆಷ್ಟು ತೀವ್ರವಾದ ಹಾಸ್ಯ ಸನ್ನಿವೇಶಗಳನ್ನು ಹೊತ್ತು ತರುತ್ತಿದ್ದಾನೆಂಬುದು ಸೂಚಕವೂ ಹೌದು.

ಟಾಪ್ ನ್ಯೂಸ್

Kannada-Sahitya-Sammelana-2024

Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು

hdd

Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ

Kallabete

Udupi: ಕಳ್ಳಬೇಟೆ ನಿಗ್ರಹ ಸಿಬಂದಿಗೆ ಕತ್ತಿ ಕೋಲುಗಳೇ ಆಯುಧ!

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

BBK11: ಟಾಸ್ಕ್ ವಿಚಾರದಲ್ಲಿ ಫೈಯರ್ ಚೈತ್ರಾ ಠುಸ್.. ಮನೆಮಂದಿ ಸುಸ್ತು

BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್.. ವಿಡಿಯೋದಲ್ಲಿ ಸುಳಿವು

BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು

Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ

Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ

Adhipatra Movie: ರೂಪೇಶ್‌ ಅಧಿಪತ್ರ ಫೆ.7ಕ್ಕೆ ಬಿಡುಗಡೆ

Adhipatra Movie: ರೂಪೇಶ್‌ ಅಧಿಪತ್ರ ಫೆ.7ಕ್ಕೆ ಬಿಡುಗಡೆ

ShivaRajkumar: ಅಮೆರಿಕಾಕ್ಕೆ ತೆರಳುವ ಮುನ್ನ ಶಿವಣ್ಣನ ಮನೆಯಲ್ಲಿ ವಿಶೇಷ ಪೂಜೆ; ಕಿಚ್ಚ ಭಾಗಿ

ShivaRajkumar: ಅಮೆರಿಕಾಕ್ಕೆ ತೆರಳುವ ಮುನ್ನ ಶಿವಣ್ಣನ ಮನೆಯಲ್ಲಿ ವಿಶೇಷ ಪೂಜೆ; ಕಿಚ್ಚ ಭಾಗಿ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Kannada-Sahitya-Sammelana-2024

Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು

hdd

Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ

Kallabete

Udupi: ಕಳ್ಳಬೇಟೆ ನಿಗ್ರಹ ಸಿಬಂದಿಗೆ ಕತ್ತಿ ಕೋಲುಗಳೇ ಆಯುಧ!

Fake-Gold

Mangaluru: ನಕಲಿ ಚಿನ್ನ ಅಡವಿಟ್ಟು ವಂಚನೆ; 7ನೇ ಸಲ ಬಂದಾಗ ಸಿಕ್ಕಿಬಿದ್ದ ಮಹಿಳೆ!

Suside-Boy

PaduBidri: ಬಸ್‌ ಢಿಕ್ಕಿ: ಪಾದಚಾರಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.